AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ ಕಪ್ಪು ಸೇಬು! ಇದನ್ನು ಎಲ್ಲಿ ಬೆಳೆಯುತ್ತಾರೆ, ಆರೋಗ್ಯ ಪ್ರಯೋಜನಗಳು ಏನು?

Black Apples: ಕಪ್ಪು ಸೇಬುಗಳೂ ಸಿಗುತ್ತವೆ ಎಂದರೆ ನಮಗೆ ಆಶ್ಚರ್ಯವಾಗುವುದು ಸಹಜ. ಆದರೆ ಇವುಗಳಲ್ಲಿ ಪೌಷ್ಠಿಕಾಂಶದ ಮೌಲ್ಯಗಳು ಹೆಚ್ಚು. ಸೇಬಿನ ಪ್ರಭೇದಗಳಲ್ಲಿ, ಕಪ್ಪು ಡೈಮಂಡ್ ಸೇಬು ಬಹಳ ವಿಶೇಷವಾಗಿದೆ. ಅವುಗಳನ್ನು ಅಬ್ಸಿಡಿಯನ್ ಸೇಬುಗಳು ಎಂದೂ ಕರೆಯುತ್ತಾರೆ.

ಅಪರೂಪದ ಕಪ್ಪು ಸೇಬು! ಇದನ್ನು ಎಲ್ಲಿ ಬೆಳೆಯುತ್ತಾರೆ, ಆರೋಗ್ಯ ಪ್ರಯೋಜನಗಳು ಏನು?
ಅಪರೂಪದ ಕಪ್ಪು ಸೇಬು! ಇವುಗಳನ್ನು ಎಲ್ಲಿ ಬೆಳೆಯುತ್ತಾರೆ, ಆರೋಗ್ಯ ಪ್ರಯೋಜನಗಳು ಏನು?
Follow us
ಸಾಧು ಶ್ರೀನಾಥ್​
|

Updated on: Nov 19, 2023 | 6:06 AM

ಪ್ರಪಂಚದಲ್ಲಿ ಬಹಳಷ್ಟು ಜನರು ಸೇವಿಸುವ ಹಣ್ಣುಗಳಲ್ಲಿ ಸೇಬು (Apple) ಅಗ್ರಸ್ಥಾನ ಪಡೆಯುತ್ತದೆ. ಸೇಬಿನಲ್ಲಿ ಪೋಷಕಾಂಶಗಳು ಹೇರಳವಾಗಿರುವುದೇ ಇದಕ್ಕೆ ಕಾರಣ. ಅದಕ್ಕಾಗಿಯೇ ವೈದ್ಯರು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಸೇಬು ತಿನ್ನಲು ಸಲಹೆ ನೀಡುತ್ತಾರೆ. ಸ್ವಾಭಾವಿಕವಾಗಿ ನಾವು ಸೇಬುಗಳನ್ನು 3-4 ಬಣ್ಣಗಳಲ್ಲಿ ನೋಡುತ್ತೇವೆ.. ಅವು ಕೆಂಪು, ಹಸಿರು, ಗೋಲ್ಡನ್/ಹಳದಿ ಬಣ್ಣಗಳ ಸೇಬುಗಳಾಗಿವೆ. ಮಕ್ಕಳು ಮತ್ತು ದೊಡ್ಡವರು ಸೇಬನ್ನು ತಿನ್ನಲು ಇಷ್ಟಪಡುತ್ತಾರೆ, ಇದು ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು (health). ಆದರೆ ಸೇಬುಗಳು ನಮಗೆ ತಿಳಿದಿಲ್ಲದ ಮತ್ತು ಹಿಂದೆಂದೂ ನೋಡಿರದ ಇತರ ಬಣ್ಣಗಳಲ್ಲಿಯೂ ಬರುತ್ತವೆ. ನಮ್ಮಲ್ಲಿ ಅಲ್ಲದಿದ್ದರೂ ಬೇರೆ ದೇಶಗಳಲ್ಲಿ ಇಂತಹವು ಸಿಗುತ್ತವೆ. ಅವುಗಳನ್ನು ಆಮದು ಮಾಡಿಕೊಳ್ಳುತ್ತವೆಯೇ ಹೊರತು ನಮ್ಮ ದೇಶದಲ್ಲಿ ಕಂಡುಬರುವುದಿಲ್ಲ.

ಕಪ್ಪು ಸೇಬುಗಳೂ (Black Diamond Apple) ಸಿಗುತ್ತವೆ ಎಂದರೆ ನಮಗೆ ಆಶ್ಚರ್ಯವಾಗುವುದು ಸಹಜ. ಆದರೆ ಇವುಗಳಲ್ಲಿ ಪೌಷ್ಠಿಕಾಂಶದ ಮೌಲ್ಯಗಳು ಹೆಚ್ಚು. ಸೇಬಿನ ಪ್ರಭೇದಗಳಲ್ಲಿ, ಕಪ್ಪು ಡೈಮಂಡ್ ಸೇಬು ಬಹಳ ವಿಶೇಷವಾಗಿದೆ. ಅವುಗಳನ್ನು ಅಬ್ಸಿಡಿಯನ್ ಸೇಬುಗಳು (obsidian apple) ಎಂದೂ ಕರೆಯುತ್ತಾರೆ. ಅವು ತುಂಬಾ ದುಬಾರಿಯೂ ಹೌದು. ಟಿಬೆಟ್‌ನ ಪರ್ವತ ಪ್ರದೇಶಗಳಲ್ಲಿ ಅವುಗಳನ್ನು ಬೆಳೆಸಲಾಗುತ್ತದೆ. ಮೇಲೆ ಕಪ್ಪು ಬಣ್ಣವಿದ್ದರೂ ಒಳಭಾಗ ಸಾಮಾನ್ಯ ಸೇಬಿನಂತೆ ಬಿಳಿಯಾಗಿರುತ್ತದೆ.

ಇದನ್ನೂ ಓದಿ: ನೀವು ಹೆಚ್ಚು ಉಪ್ಪು ಸೇವಿಸುತ್ತೀರಾ?; ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ

ಆಕರ್ಷಕ ನೋಟವನ್ನು ಹೊಂದಿರುವ ಈ ಕಪ್ಪು ವಜ್ರದ ಸೇಬು ಅನೇಕ ರೀತಿಯ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದು ಫೈಬರ್​​ ಅಂಶದಲ್ಲಿ ಸಮೃದ್ಧವಾಗಿದೆ. ಜೀರ್ಣಕ್ರಿಯೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅವು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಜೀವಸತ್ವಗಳಲ್ಲಿ ಸಮೃದ್ಧವಾಗಿವೆ.

ಈ ಅಪರೂಪ ವಿಧದ ಸೇಬು ಹಣ್ಣುಗಳನ್ನು ಬೆಳೆಸುವುದು ತುಂಬಾ ದುಬಾರಿಯಾಗಿದೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಅವುಗಳ ಬೆಲೆಯೂ ಹೆಚ್ಚು. ಇವುಗಳ ಬೆಲೆ ತಲಾ 500 ರೂ.ವರೆಗೆ ಇದೆ. ಅದಕ್ಕಾಗಿಯೇ ಹೊಸ ವಿಶೇಷ ತಳಿಯ ಹಣ್ಣುಗಳಿಗಾಗಿ ತಹತಹಿಸುವ ಶ್ರೀಮಂತರು ಮತ್ತು ಹಣ್ಣು ಪ್ರಿಯರು ಮಾತ್ರ ಅವುಗಳನ್ನು ಖರೀದಿಸಲು ಇಚ್ಛಿಸುತ್ತಾರೆ.

ವಿಶಿಷ್ಟ ಬಣ್ಣದ ಸೇಬಿನ ಹೊರತಾಗಿ, ಈ ಹಣ್ಣು ತನ್ನ ಹೊಳೆಯುವ ನೋಟದಿಂದ ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ. ವಿಶೇಷ ಹವಾಮಾನ ಪರಿಸ್ಥಿತಿಗಳಲ್ಲಿ ಅವುಗಳನ್ನು ಬೆಳೆಸುವ ವೆಚ್ಚವು ಇತರೆ ಸೇಬು ತಳಿಗೆ ಹೋಲಿಸಿದರೆ ತುಂಬಾ ಹೆಚ್ಚು. ಗುಣಮಟ್ಟದ ವಿಷಯದಲ್ಲಿ, ಅದರ ಕೃಷಿಗೆ ವಿಶೇಷ ಗಮನ ನೀಡಬೇಕಾಗುತ್ತದೆ. ನೈಸರ್ಗಿಕವಾಗಿ, ಇತರ ಸೇಬು ಪ್ರಭೇದಗಳು ಎರಡು ಅಥವಾ ಮೂರು ವರ್ಷಗಳಲ್ಲಿ ಹಣ್ಣು ಬಿಡುತ್ತವೆ. ಆದರೆ ಕಪ್ಪು ವಜ್ರದ ಸೇಬುಗಳು ಫಲ ನೀಡಲು 8 ವರ್ಷ ಕಾಯಬೇಕು. ಅಲ್ಲಿಯವರೆಗೆ ಅದರ ಪೋಷಣೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೆಜಿ 500 ರೂ.ಗೆ ಮಾರಾಟ ಮಾಡಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ