AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

ಸ್ನಾನ ಮಾಡಿದ ನಂತರ ತಕ್ಷಣವೇ ನಿಮ್ಮ ಮೈಯನ್ನು ಟವೆಲ್​ನಿಂದ ಒರೆಸಿಕೊಳ್ಳುವುದರಿಂದ ಬೆವರುವಿಕೆಯನ್ನು ತಪ್ಪಿಸಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ಹಾಗಾದರೆ, ಸ್ನಾನವಾದ ತಕ್ಷಣ ಬೆವರುವುದನ್ನು ತಡೆಯಲು ಏನು ಮಾಡಬೇಕು?

ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?
ಸ್ನಾನImage Credit source: iStock
ಸುಷ್ಮಾ ಚಕ್ರೆ
|

Updated on: Oct 11, 2023 | 7:12 PM

Share

ಆರಾಮಾಗಿ ಸ್ನಾನ ಮಾಡಿಕೊಂಡು, ರಿಫ್ರೆಶ್ ಆಗಬೇಕೆಂದು ಬಾತ್​ರೂಮಿಗೆ ಹೋಗಿ ಮನಸಿಗೆ ನೆಮ್ಮದಿಯಾಗುವಷ್ಟು ಹೊತ್ತು ಸ್ನಾನ ಮಾಡಿಕೊಂಡು ಬರುತ್ತೀರಿ. ಆದರೆ, ಅಷ್ಟರಲ್ಲಾಗಲೆ ನಿಮ್ಮ ಮೈ ಬೆವರಲು ಶುರುವಾಗುತ್ತದೆ. ಸ್ನಾನ ಮಾಡಿದ ಕೆಲವೇ ಹೊತ್ತಿನಲ್ಲಿ ಮತ್ತೆ ದೇಹದಿಂದ ಬೆವರಿನ ವಾಸನೆ ಬರಲಾರಂಭಿಸಿ, ನಿಮಗೇ ಕಿರಿಕಿರಿಯಾಗತೊಡಗುತ್ತದೆ. ಈ ರೀತಿಯಾದಾಗ ಏನು ಮಾಡಬೇಕು? ಸ್ನಾನ ಮಾಡಿದ ಕೂಡಲೆ ಮೈ ಬೆವರಲು ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ನೀವು ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನಿಂದ ಬೆಚ್ಚಗಿನ ಆವಿಗಳು ಬಾತ್​ರೂಮಿನಲ್ಲಿ ತಾಪಮಾನ ಮತ್ತು ತೇವಾಂಶದ ಏರಿಕೆಗೆ ಕಾರಣವಾಗುತ್ತವೆ. ಇದು ನಿಮ್ಮ ದೇಹದ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮೈ ಬೆವರತೊಡಗುತ್ತದೆ.

ಇದನ್ನೂ ಓದಿ: Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ

ಸ್ನಾನ ಮಾಡಿದ ನಂತರ ತಕ್ಷಣವೇ ನಿಮ್ಮ ಮೈಯನ್ನು ಟವೆಲ್​ನಿಂದ ಒರೆಸಿಕೊಳ್ಳುವುದರಿಂದ ಬೆವರುವಿಕೆಯನ್ನು ತಪ್ಪಿಸಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ನಿಮ್ಮ ಚರ್ಮದ ಮೇಲೆ ಟವೆಲ್​ ಅನ್ನು ಉಜ್ಜಿದಾಗ ಉಂಟಾಗುವ ಘರ್ಷಣೆಯ ಶಾಖವು ನಿಮಗೆ ಇನ್ನಷ್ಟು ಬಿಸಿ ಉಂಟುಮಾಡಬಹುದು. ಇದು ಹೆಚ್ಚು ಬೆವರುವಿಕೆಯನ್ನು ಉಂಟುಮಾಡುತ್ತದೆ.

ಸ್ನಾನದ ನಂತರ ಬೆವರುವುದನ್ನು ತಡೆಯಲು ಏನು ಮಾಡಬೇಕು?:

ಸ್ನಾನದ ನಂತರ ಬೆವರುವಿಕೆಯನ್ನು ತಡೆಯಲು ನೀವು ಮೊದಲು ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡಿದರೂ ಕೊನೆಯಲ್ಲಿ ಸ್ವಲ್ಪ ತಣ್ಣಗಿನ ನೀರನ್ನು ಬಿಡಬೇಕು. ಇದರಿಂದ ಬಾತ್​ರೂಂನ ತಾಪಮಾನಕ್ಕೆ ನಿಮ್ಮ ದೇಹ ಹೊಂದಿಕೊಳ್ಳುತ್ತದೆ. ಬಾತ್​ರೂಂನಲ್ಲಿ ತುಂಬಿದ್ದ ಬಿಸಿ ತಾಪಮಾನ ಕೂಡ ಕಡಿಮೆಯಾಗುತ್ತದೆ. ಹಾಗೇ, ತಲೆಸ್ನಾನ ಮಾಡುವಾಗ ಕೊನೆಯಲ್ಲಿ ನಿಮ್ಮ ನೆತ್ತಿಯ ಮೇಲೆ ಸ್ವಲ್ಪ ತಣ್ಣೀರನ್ನು ಹಾಕಿಕೊಳ್ಳಿ. ಇದು ನಿಮ್ಮ ದೇಹವನ್ನು ಬೆವರು ಮಾಡುವುದನ್ನು ತಡೆಯುವುದು ಮಾತ್ರವಲ್ಲದೆ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಹಾಗೇ, ನಿಮ್ಮ ಬಾತ್​ರೂಂನಲ್ಲಿ ಎಕ್ಸಾಸ್ಟರ್ ಫ್ಯಾನ್ ಹಾಕಲು ಮರೆಯಬೇಡಿ. ಇದರಿಂದ ಬಾತ್​ರೂಂನೊಳಗಿನ ಬಿಸಿ ಗಾಳಿ ಹೊರಗೆ ಹೋಗಿ, ಮೈ ಬೆವರುವಿಕೆ ಕೂಡ ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್