AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Skin Care: ಚಳಿಗಾಲದಲ್ಲಿ ಚರ್ಮ ಏಕೆ ತುರಿಸುತ್ತದೆ? ತ್ವಚೆಯ ಕಾಳಜಿ ಹೇಗೆ?

ತಣ್ಣನೆಯ ಗಾಳಿ, ಕಡಿಮೆ ಆರ್ದ್ರತೆ, ಬಿಸಿನೀರಿನ ಸ್ನಾನ ಮತ್ತು ಭಾರವಾದ ಬಟ್ಟೆಯ ಘರ್ಷಣೆಗಳು ನಿಮ್ಮ ಚರ್ಮವನ್ನು ಒಣಗಲು ಮತ್ತು ತುರಿಕೆ ಉಂಟುಮಾಡಲು ಕಾರಣವಾಗುತ್ತವೆ. ಚಳಿಗಾಲದಲ್ಲಿ ನಮ್ಮ ಚರ್ಮದ ಕಿರಿಕಿರಿ ಉಂಟಾಗಲು ಕಾರಣವೇನು? ಅದನ್ನು ನಿಭಾಯಿಸುವುದು ಹೇಗೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Winter Skin Care: ಚಳಿಗಾಲದಲ್ಲಿ ಚರ್ಮ ಏಕೆ ತುರಿಸುತ್ತದೆ? ತ್ವಚೆಯ ಕಾಳಜಿ ಹೇಗೆ?
ಚರ್ಮದ ಆರೋಗ್ಯImage Credit source: iStock
ಸುಷ್ಮಾ ಚಕ್ರೆ
|

Updated on: Oct 21, 2023 | 6:30 PM

Share

ಚಳಿಗಾಲ ನಮ್ಮ ಸೌಂದರ್ಯ, ಚರ್ಮದ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ಕೊಡುವ ಋತು. ಈ ಚಳಿಗಾಲದಲ್ಲಿ ತ್ವಚೆ ಶುಷ್ಕವಾಗಿ, ಬಿರುಕುಬಿಟ್ಟಂತಾಗುತ್ತದೆ. ಕೂದಲು ಒಣಗಿ, ಕಳೆಗುಂದುತ್ತದೆ. ಚಳಿಗಾಳಿ ಸೋಕಿದಾಗ ಚರ್ಮದ ತುರಿಕೆ ಉಂಟಾಗುತ್ತದೆ. ತಣ್ಣನೆಯ ಗಾಳಿ, ಕಡಿಮೆ ಆರ್ದ್ರತೆ, ಬಿಸಿನೀರಿನ ಸ್ನಾನ ಮತ್ತು ಭಾರವಾದ ಬಟ್ಟೆಯ ಘರ್ಷಣೆಗಳು ನಿಮ್ಮ ಚರ್ಮವನ್ನು ಒಣಗಲು ಮತ್ತು ತುರಿಕೆ ಉಂಟುಮಾಡಲು ಕಾರಣವಾಗುತ್ತವೆ. ಚಳಿಗಾಲದಲ್ಲಿ ನಮ್ಮ ಚರ್ಮದ ಕಿರಿಕಿರಿ ಉಂಟಾಗಲು ಕಾರಣವೇನು? ಅದನ್ನು ನಿಭಾಯಿಸುವುದು ಹೇಗೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಚಳಿಗಾಲದಲ್ಲಿ ನಿಮ್ಮ ಚರ್ಮ ಏಕೆ ತುರಿಕೆಗೆ ಒಳಗಾಗುತ್ತದೆ?:

ಕಡಿಮೆ ಆರ್ದ್ರತೆ:

ಚಳಿಗಾಲದಲ್ಲಿ ಗಾಳಿಯು ಸಾಮಾನ್ಯವಾಗಿ ಹೆಚ್ಚು ಶುಷ್ಕವಾಗಿರುತ್ತದೆ. ಇದು ನಿಮ್ಮ ಚರ್ಮದಲ್ಲಿ ತೇವಾಂಶದ ಮಟ್ಟದ ಇಳಿಕೆಗೆ ಕಾರಣವಾಗುತ್ತದೆ. ಈ ತೇವಾಂಶದ ಕೊರತೆಯು ನಿಮ್ಮ ಚರ್ಮವನ್ನು ಒಣಗಿಸಲು ಮತ್ತು ತುರಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: Skin Care: ನಿಮ್ಮ ಚರ್ಮದ ಸೌಂದರ್ಯಕ್ಕೆ ಅತ್ಯುತ್ತಮವಾದ 12 ಆಹಾರಗಳಿವು

ಬಿಸಿನೀರಿನ ಸ್ನಾನ:

ಬಿಸಿಯಾದ ನೀರಿನ ಸ್ನಾನ ಚಳಿಗಾಲದಲ್ಲಿ ಮೈಗೆ ಆರಾಮೆನಿಸುತ್ತದೆ. ಆದರೆ, ಇದು ನಿಮ್ಮ ಚರ್ಮದ ನೈಸರ್ಗಿಕ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತವೆ ಮತ್ತು ಶುಷ್ಕತೆಯನ್ನು ಉಲ್ಬಣಗೊಳಿಸುತ್ತವೆ. ಇದರ ಪರಿಣಾಮವಾಗಿ ಆಗಾಗ ತುರಿಕೆ, ಫ್ಲಾಕಿ ಚರ್ಮ ಉಂಟಾಗುತ್ತದೆ.

ಭಾರವಾದ ಬಟ್ಟೆ:

ಚಳಿಯೆಂದು ಸ್ವೆಟರ್, ಶಾಲು, ದಪ್ಪನೆಯ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಈ ದಟ್ಟವಾದ ಬಟ್ಟೆಗಳನ್ನು ಹಾಕುವುದರಿಂದ ನಿಮ್ಮ ಚರ್ಮದ ಮೇಲೆ ಘರ್ಷಣೆ ಮತ್ತು ಕಿರಿಕಿರಿಯನ್ನು ಉಂಟಾಗಬಹುದು. ಇದು ತುರಿಕೆಗೆ ಕಾರಣವಾಗುತ್ತದೆ.

ರಾಸಾಯನಿಕವಿರುವ ತ್ವಚೆ ಉತ್ಪನ್ನಗಳು:

ರಾಸಾಯನಿಕವಿರುವ ಸಾಬೂನುಗಳು ಅಥವಾ ತ್ವಚೆ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ತ್ವಚೆಯ ನೈಸರ್ಗಿಕ ತೈಲಗಳನ್ನು ಮತ್ತಷ್ಟು ತೆಗೆದುಹಾಕಬಹುದು. ಇದು ಶುಷ್ಕತೆ ಮತ್ತು ತುರಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ತ್ವಚೆಯ ಸೌಂದರ್ಯ, ಆರೋಗ್ಯಕ್ಕೆ ಮುಲ್ತಾನಿ ಮಿಟ್ಟಿಯಿಂದ ಉಪಯೋಗವೇನು?

ಚಳಿಗಾಲದ ತುರಿಕೆಗೆ ಹೇಗೆ ಚಿಕಿತ್ಸೆ ನೀಡಬೇಕು?:

ಮಾಯಿಶ್ಚರೈಸರ್:

ಚಳಿಗಾಲದ ತುರಿಕೆ ಎದುರಿಸಲು ಪ್ರಮುಖವಾಗಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳುವುದು ಅಗತ್ಯ. ಸ್ನಾನದ ನಂತರ ಮತ್ತು ದಿನವಿಡೀ ದಪ್ಪ, ಹೈಡ್ರೇಟಿಂಗ್ ಮಾಯಿಶ್ಚರೈಸರ್ ಬಳಸಿ. ಹೈಲುರಾನಿಕ್ ಆಮ್ಲ, ಶಿಯಾ ಬೆಣ್ಣೆ ಅಥವಾ ಸೆರಾಮಿಡ್‌ಗಳಂತಹ ಪದಾರ್ಥಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸಿ.

ಉಗುರುಬೆಚ್ಚಗಿನ ನೀರಿನ ಸ್ನಾನ:

ಬಿಸಿನೀರಿನ ಸ್ನಾನದ ಬದಲಿಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದು ನಿಮ್ಮ ಚರ್ಮದ ನೈಸರ್ಗಿಕ ತೈಲಗಳನ್ನು ಉಳಿಸಿಕೊಳ್ಳಲು ಮತ್ತು ಅತಿಯಾದ ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಜೆಂಟಲ್ ಕ್ಲೆನ್ಸಿಂಗ್:

ನಿಮ್ಮ ಚರ್ಮವನ್ನು ತೊಳೆಯಲು ಸೌಮ್ಯವಾದ, ಸುಗಂಧ-ಮುಕ್ತ ಕ್ಲೆನ್ಸರ್ ಅನ್ನು ಬಳಸಿ. ನಿಮ್ಮ ಚರ್ಮವನ್ನು ಮತ್ತಷ್ಟು ತೆಗೆದುಹಾಕುವ ಕಠಿಣವಾದ, ಆಲ್ಕೋಹಾಲ್ ಆಧಾರಿತ ಉತ್ಪನ್ನಗಳನ್ನು ತಪ್ಪಿಸಿ.

ಸರಿಯಾದ ಬಟ್ಟೆಗಳನ್ನು ಆರಿಸಿ:

ಚರ್ಮದ ಮೇಲೆ ಘರ್ಷಣೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಹತ್ತಿಯಂತಹ ಮೃದುವಾದ, ಹಗುರವಾದ ಬಟ್ಟೆಗಳನ್ನು ಆಯ್ಕೆ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ