AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Biriyani Day 2024: ಮಶ್ರೂಮ್ ಬಿರಿಯಾನಿ ಇಷ್ಟಪಡುವವರು ಈ ಕಾಯಿಲೆಗಳಿಂದ ದೂರವಿರಬಹುದು

ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುತ್ತದೆ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಮಶ್ರೂಮ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದು ಎಲ್ಲೆಡೆ ದೊರೆಯುತ್ತದೆ ಆದರೂ ಕೂಡ ಬೆಂಗಳೂರು ಮತ್ತು ಉತ್ತರಕನ್ನಡದ ಹಲವು ಭಾಗಗಳಲ್ಲಿ ಇದು ಹೆಚ್ಚು ಫೇಮಸ್ ಆಗಿದೆ. ಉತ್ತಮ ಮತ್ತು ಸ್ವಾದಿಷ್ಟಕರವಾದ ಮಶ್ರೂಮ್​ ಬಿರಿಯಾನಿ ಅನ್ನು ಸೇವಿಸಬೇಕು ಎಂದು ನೀವು ಬಯಸುತ್ತಿದ್ದರೆ ನೀವು ಈ ಸುಲಭ ಪಾಕವಿಧಾನವನ್ನು ಟ್ರೈ ಮಾಡಿ.

World Biriyani Day 2024: ಮಶ್ರೂಮ್ ಬಿರಿಯಾನಿ ಇಷ್ಟಪಡುವವರು ಈ ಕಾಯಿಲೆಗಳಿಂದ ದೂರವಿರಬಹುದು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 06, 2024 | 12:19 PM

Share

ಭಾರತದಾದ್ಯಂತ ಬಹುತೇಕರು ಇಷ್ಟಪಡುವ ಯಾವುದಾದರೊಂದು ಭಕ್ಷ್ಯವಿದ್ದರೆ, ಅದು ಬಿರಿಯಾನಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅದರಲ್ಲಿಯೂ ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುತ್ತದೆ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಮಶ್ರೂಮ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದು ಎಲ್ಲೆಡೆ ದೊರೆಯುತ್ತದೆ ಆದರೂ ಕೂಡ ಬೆಂಗಳೂರು ಮತ್ತು ಉತ್ತರಕನ್ನಡದ ಹಲವು ಭಾಗಗಳಲ್ಲಿ ಇದು ಹೆಚ್ಚು ಫೇಮಸ್ ಆಗಿದೆ. ಉತ್ತಮ ಮತ್ತು ಸ್ವಾದಿಷ್ಟಕರವಾದ ಮಶ್ರೂಮ್​ ಬಿರಿಯಾನಿ ಸೇವಿಸಬೇಕು ಎಂದು ಬಯಸುತ್ತಿದ್ದರೆ ನೀವು ಈ ಸುಲಭ ಪಾಕವಿಧಾನವನ್ನು ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು; (2 ಜನರಿಗೆ)

1 ಕಪ್ ಬಾಸ್ಮತಿ ರೈಸ್ (20 ನಿಮಿಷ ನೆನಸಿಟ್ಟುಕೊಳ್ಳಿ)

1 ಕಪ್ ಮಶ್ರೂಮ್

2 ಮಧ್ಯಮ ಗಾತ್ರದ ಈರುಳ್ಳಿ (ಕತ್ತರಿಸಿ ಇಟ್ಟುಕೊಳ್ಳಿ)

100 ಗ್ರಾಂ ಬಟಾಣಿ

1 ಮಧ್ಯಮ ಗಾತ್ರದ ಆಲೂಗಡ್ಡೆ

ರುಚಿಗೆ ತಕ್ಕಷ್ಟು ಉಪ್ಪು

2 ಟೀ ಸ್ಪೂನ್ ಬಿರಿಯಾನಿ ಮಸಾಲಾ

ಕಾಲು ಚಮಚ ಅರಿಶಿನ ಪುಡಿ

1 ಟೀ ಸ್ಪೂನ್ ಜೀರಿಗೆ

2 ಟೀ ಸ್ಪೂನ್ ಮೊಸರು

ಕಾಲು ಚಮಚ ಮೆಣಸಿನ ಪುಡಿ ಅಥವಾ ಕರಿಮೆಣಸಿನ ಹುಡಿ

1 ಟೀ ಸ್ಪೂನ್ ನಿಂಬೆ ರಸ

4 ತುಂಡು ಬೆಳ್ಳುಳ್ಳಿ

1 ತುಂಡು ದಾಲ್ಚಿನ್ನಿ

2 ಏಲಕ್ಕಿ

ಅಡುಗೆಗೆ ಎಣ್ಣೆ

ಹಂತ 1 :

ಒಂದು ಪಾತ್ರೆಯಲ್ಲಿ ಮಶ್ರೂಮ್, ಬಟಾಣಿ ಮತ್ತು ಆಲೂಗೆಡ್ಡೆ ಕತ್ತರಿಸಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರನ್ನು ಹಾಕಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಕರಿಮೆಣಸಿನ ಹುಡಿಯನ್ನು ಸೇರಿಸಿಕೊಳ್ಳಿ. 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.

ಹಂತ 2 :

ಕುಕ್ಕರ್ ನಲ್ಲಿ, ಎಣ್ಣೆ ಹಾಕಿ ಬಿಸಿಯಾದ ನಂತರ, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಹಾಕಿ.

ಹಂತ 3 :

ಚೆನ್ನಾಗಿ ಹುರಿದುಕೊಂಡ ಬಳಿಕ, ಕತ್ತರಿಸಿದ ಈರುಳ್ಳಿ ಸೇರಿಸಿ ಗುಲಾಬಿ ಬಣ್ಣ ಬರುವ ವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಹಂತ 4 :

ಬಳಿಕ ಇದಕ್ಕೆ ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ನಿಮಿಷ ಬೇಯಿಸಿಕೊಳ್ಳಿ.

ಹಂತ 5 :

ಈಗ, ಮ್ಯಾರಿನೇಟೆಡ್ ಮಾಡಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.

ಹಂತ 6 :

ಈ ಮಿಶ್ರಣಕ್ಕೆ ಬಿರಿಯಾನಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ.

ಹಂತ 7 :

ನೆನೆಸಿಟ್ಟುಕೊಂಡ ಅಕ್ಕಿಯನ್ನು ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಒಂದು ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ.

ಹಂತ 8 :

ಗ್ಯಾಸ್ ಆಫ್ ಮಾಡಿ ಪಕ್ಕಕ್ಕೆ ಇರಿಸಿ. 10 ನಿಮಿಷ ಆದ ಬಳಿಕ ಹುರಿದ ಈರುಳ್ಳಿಯಿಂದ ಅಲಂಕರಿಸಿ, ಬಿಸಿ ಬಿಸಿ ಇರುವಾಗ ಸವಿಯಿರಿ.

ಇದನ್ನೂ ಓದಿ: ಮಂಗಳೂರಿನ ಚಿಕನ್ ಬ್ಯಾರಿ ಬಿರಿಯಾನಿ ಆರೋಗ್ಯ ಹೆಚ್ಚಿಸುತ್ತೆ! ಇದನ್ನು ಮಾಡುವುದು ಹೇಗೆ ?

ಆರೋಗ್ಯ ಪ್ರಯೋಜನಗಳೇನು?

ಮಶ್ರೂಮ್ ಬರೀ ರುಚಿಗಷ್ಟೇ ಅಲ್ಲ ಆರೊಗ್ಯಕ್ಕೂ ಹಲವಾರು ಲಾಭಗಳಿವೆ. ಮಶ್ರೂಮ್‌ನಲ್ಲಿ ಬಟನ್ ಮಶ್ರೂಮ್‌ ದೇಹಕ್ಕೆ ಆರೋಗ್ಯಕಾರಿಯಾಗಿದೆ. ಅದಲ್ಲದೆ ಇದು ಹೃದಯಕ್ಕೂ ಒಳ್ಳೆಯದು, ಅಲ್ಲದೆ ಮಶ್ರೂಮ್ ನೀವು ತಿನ್ನುವ ಎಲ್ಲಾ ಆಹಾರವನ್ನು ಜೀರ್ಣವಾಗಿಸುತ್ತದೆ. ಜೊತೆಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿವಾರಿಸುತ್ತದೆ, ಇದರ ಸೇವನೆಯಿಂದ ಮೂಳೆಗಳು ಗಟ್ಟಿಯಾಗಿರುತ್ತದೆ ಹಾಗಾಗಿ ಬಿರಿಯಾನಿಯಲ್ಲಿ ಇದರ ಸೇವನೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಶ್ರೂಮ್ ಜೊತೆ ಬೇರೆ ಬೇರೆ ರೀತಿಯ ಮಸಾಲೆಗಳು ಸೇರಿಸುವುದರಿಂದ ಇನ್ನಷ್ಟು ಪ್ರಯೋಜನಗಳು ಸಿಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ