AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashwagandha Benefits: ಮನೆಮದ್ದಾಗಿ ಅಶ್ವಗಂಧ; ಕಾಯಿಲೆಗಳಿಂದ ದೂರವಿರಲು ಹಿತ್ತಲಲ್ಲಿ ಒಂದು ಗಿಡ ನೆಡಲೇಬೇಕು

ಅಶ್ವಗಂಧದಲ್ಲಿ ಒತ್ತಡ, ಆತಂಕ, ಖಿನ್ನತೆ, ಆಯಾಸ ಮತ್ತು ನಿದ್ರಾಹೀನತೆಯಿಂದ ಚೇತರಿಸಿಕೊಳ್ಳಲು ದೇಹಕ್ಕೆ ಸಹಾಯ ಮಾಡುವ ಶಕ್ತಿ ಇದೆ. ಜತೆಗೆ ಜೀವಿತಾವಧಿಯ ಗುಣಲಕ್ಷಣಗಳನ್ನು ಹೊಂದಿರುವ ವಿಥನೊಲೈಡ್ಸ್​ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವುದರಿಂದ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

Ashwagandha Benefits: ಮನೆಮದ್ದಾಗಿ ಅಶ್ವಗಂಧ; ಕಾಯಿಲೆಗಳಿಂದ ದೂರವಿರಲು ಹಿತ್ತಲಲ್ಲಿ ಒಂದು ಗಿಡ ನೆಡಲೇಬೇಕು
ಅಶ್ವಗಂಧ
TV9 Web
| Edited By: |

Updated on: Jun 25, 2021 | 8:53 AM

Share

ಪ್ರಾಚೀನ ಆಯುರ್ವೇದ ವಿಥಾನಿಯಾ ಸೋಮ್ನಿಫೆರಾದಲ್ಲಿ ಅಶ್ವಗಂಧ ಅಥವಾ ಇಂಡಿಯನ್ ಜಿನ್‌ಸೆಂಗ್ ಎಂದು ಕರೆಯಲ್ಪಡುವ ಈ ಮೂಲಿಕೆಯು, ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಅಶ್ವಗಂಧವನ್ನು ಭಾರತ, ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಕುದುರೆಯ ಮೂತ್ರದ ವಾಸನೆ ಬರುವುದರಿಂದ ಇದಕ್ಕೆ ಅಶ್ವಗಂಧ ಎನ್ನುವ ಹೆಸರು ಬಂತು ಎಂದು ಮೂಲಗಳು ತಿಳಿಸಿವೆ. ಅಶ್ವಗಂಧದಲ್ಲಿ ಒತ್ತಡ, ಆತಂಕ, ಖಿನ್ನತೆ, ಆಯಾಸ ಮತ್ತು ನಿದ್ರಾಹೀನತೆಯಿಂದ ಚೇತರಿಸಿಕೊಳ್ಳಲು ದೇಹಕ್ಕೆ ಸಹಾಯ ಮಾಡುವ ಶಕ್ತಿ ಇದೆ. ಜತೆಗೆ ಜೀವಿತಾವಧಿಯ ಗುಣಲಕ್ಷಣಗಳನ್ನು ಹೊಂದಿರುವ ವಿಥನೊಲೈಡ್ಸ್​ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವುದರಿಂದ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಶ್ವಗಂಧ ರೋಗನಿರೋಧಕ ವರ್ಧಕವಾಗಿದ್ದು, ದೈಹಿಕ ಸಹಿಷ್ಣುತೆಯನ್ನು ಸಹ ಬೆಂಬಲಿಸುತ್ತದೆ. ಅಶ್ವಗಂಧದ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ.

1. ನಿದ್ರಾಹೀನತೆಯನ್ನು ದೂರ ಮಾಡುತ್ತದೆ ಅಶ್ವಗಂಧ ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮ ಮದ್ದಾಗಿದೆ. ಅಶ್ವಗಂಧದ ಗಿಡಮೂಲಿಕೆಯನ್ನು ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ನಿದ್ರೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ದೂರವಾಗುತ್ತದೆ. ಇದು ನರಗಳನ್ನು ಸಡಿಲಿಸುವ ಮೂಲಕ ನಿದ್ರೆ ಬಾರದೆ ಒದ್ದಾಡುವವರಿಗೆ ನೆರವು ನೀಡುತ್ತದೆ. ಜತೆಗೆ ಸುಖಕರವಾದ ನಿದ್ರೆಗಾಗಿ ಮತ್ತು ಪುನಶ್ಚೈತನ್ಯಕಾರಿ ನಿದ್ರೆಯನ್ನು ಸುಧಾರಿಸುವ ಅದ್ಭುತ ಸಾಮರ್ಥ್ಯವನ್ನು ಅಶ್ವಗಂಧ ಹೊಂದಿದೆ.

2. ಮೆದುಳಿಗೆ ಹೆಚ್ಚು ಶಕ್ತಿ ನೀಡುತ್ತದೆ ವಯಸ್ಸಾದಂತೆ ನೆನಪಿನ ಶಕ್ತಿ ದೂರವಾಗುವ ಸಾಧ್ಯತೆ ಇರುತ್ತದೆ ಅಥವಾ ಕೆಲವರಲ್ಲಿ ನೆನಪಿನ ಶಕ್ತಿ ಮೊದಲಿನಿಂದಲೂ ಕಡಿಮೆ ಇರುತ್ತದೆ. ಅಂತವರು ಅಶ್ವಗಂಧ ಸೇವಿಸುವುದು ಉತ್ತಮ ಅಭ್ಯಾಸ. ಅಶ್ವಗಂಧವು ಮೆದುಳಿನಲ್ಲಿ ಅಸೆಟೈಲ್ಕೋಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಆ ಮೂಲಕ ಇದು ಸುಧಾರಿತ ನೆನಪಿನ ಶಕ್ತಿ, ಮೆದುಳಿನ ಕಾರ್ಯ ಮತ್ತು ಬುದ್ಧಿವಂತಿಕೆಗೆ ಪುಷ್ಠಿ ನೀಡುತ್ತದೆ.

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಶ್ವಗಂಧದ ಸಸ್ಯ, ನರಮಂಡಲ, ಅಂತಃಸ್ರಾವಕ ಗ್ರಂಥಿಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ದೇಹ ಮತ್ತು ಮನಸ್ಸಿನ ಮೇಲೆ ಆಗುವ ದೀರ್ಘಕಾಲದ ಒತ್ತಡ ಕಡಿಮೆಯಾಗುತ್ತದೆ. ಅಶ್ವಗಂಧದ ಪುಡಿ ಅಮೂಲಾಗ್ರ ಸ್ಕ್ಯಾವೆಂಜಿಂಗ್ ಚಟುವಟಿಕೆಯನ್ನು ಹೊಂದಿದೆ.

4. ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ ಅಶ್ವಗಂಧ ದೇಹದ ಕಾರ್ಟಿಸೋಲ್ ಮಟ್ಟವನ್ನು ಸಾಮಾನ್ಯೀಕರಿಸುವ ಮೂಲಕ ಮೂತ್ರಜನಕಾಂಗದ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ದೈಹಿಕ ಚಟುವಟಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಸುಧಾರಿಸುತ್ತದೆ. ಆ ಮೂಲಕ ಅಶ್ವಗಂಧ ಮಾಸಿಕ ಒತ್ತಡ, ಖಿನ್ನತೆ, ಲೈಂಗಿಕ ಸಮಸ್ಯೆಯಿಂದಲೂ ನಮ್ಮನ್ನು ದೂರವಿಡುತ್ತದೆ.

ಇದನ್ನೂ ಓದಿ:

Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು

ಹಸಿ ಟೊಮೇಟೊ ಸೇವಿಸುವ ಅಭ್ಯಾಸ ಇದೆಯೇ? ಹಾಗಿದ್ದರೆ ಆರೋಗ್ಯದಲ್ಲಾಗುವ ಈ ಬದಲಾವಣೆಗಳ ಬಗ್ಗೆ ತಿಳಿಯಿರಿ

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ