Kannada News Horoscope Daily horoscope based on numerology predictions of August 4 according to number of birth dates as per numerology in Kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 4ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 4ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 4ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಇದು ಬಹಳ ಮುಖ್ಯವಾದ ದಿನವಾಗಿರುತ್ತದೆ. ಮನೆಯಲ್ಲಿ ಮಾತುಕತೆಯಾಗಿ, ನಿಮ್ಮ ಮದುವೆಗೆ ಒಪ್ಪಿಗೆ ಸಿಕ್ಕಿಯೂ ಬಿಡಬಹುದು. ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ಪಾರ್ಕಿಂಗ್ ನಲ್ಲಿ ನಿಮ್ಮ ವಾಹನ ನಿಲ್ಲಿಸುವಾಗ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಏಕೆಂದರೆ ಇತರ ವಾಹನಗಳು ತಾಗಿ ವಾಹನದ ಪೇಂಟ್ ಹೋಗುವುದೋ ಅಥವಾ ಡೆಂಟ್ ಆಗುವುದೋ ಇಂಥ ಬೆಳವಣಿಗೆ ಆಗಲಿದೆ.
ನೀವೇ ತೆಗೆದುಕೊಂಡ ನಿರ್ಧಾರವನ್ನು ಬದಲಿಸಿಕೊಳ್ಳಲೇ ಬೇಕಾಗುತ್ತದೆ. ಹಣಕಾಸಿನ ಖರ್ಚು ಮುನ್ನೆಲೆಗೆ ಬರಲಿದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಕೈ ಚಾಚಬೇಡಿ. ಇದರಿಂದ ನಿಮ್ಮ ಸಂಸಾರದಲ್ಲಿ ಭಾರೀ ಬಿರುಗಾಳಿಯೇ ಏಳಬಹುದು. ನಿಮ್ಮ ನೆರವಿಗೆ ಬಂದೇ ಬರುತ್ತಾರೆ ಅಂದುಕೊಂಡಂಥ ವ್ಯಕ್ತಿಯೊಬ್ಬರು ಕೊನೆ ಕ್ಷಣದಲ್ಲಿ ತಮ್ಮಿಂದ ಈ ಸಮಯದಲ್ಲಿ ಯಾವ ಸಹಾಯವನ್ನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಬಿಡಬಹುದು. ಯಾವುದೇ ವ್ಯವಹಾರದಲ್ಲಿ ಪ್ಲಾನ್ ಬಿ ಎಂಬುದೊಂದನ್ನು ಇರಿಸಿಕೊಂಡಿದ್ದರೆ ಕ್ಷೇಮ.
ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬಹಳ ಸಮಯದಿಂದಲೂ ಪ್ರಯತ್ನ ಮಾಡುತ್ತಿದ್ದ ಕೆಲಸವೊಂದರ ಬಗ್ಗೆ ಶುಭ ಸುದ್ದಿ ಕೇಳಿಬರಲಿದೆ. ವಸ್ತ್ರಾಭರಣ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ಸೋದರ ಸಂಬಂಧಿಗಳಿಗಾಗಿ ನೀವು ಹಣ ಹಾಕಿ, ಕೆಲವು ವಸ್ತುಗಳನ್ನು ಕೊಡಿಸುವ ಸಾಧ್ಯತೆ ಇದೆ. ಷೇರು, ಮ್ಯೂಚುವಲ್ ಫಂಡ್ಸ್ ಗಳನ್ನು ಮಾರಾಟ ಮಾಡಬೇಕು ಎಂದು ಮುಂದಾದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ದೊರೆಯುವ ಎಲ್ಲ ಅವಕಾಶಗಳಿವೆ.
ನಿಮ್ಮ ಆತ್ಮಗೌರವಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಕೆಲಸದ ವೇಗ ಹಾಗೂ ಅದನ್ನು ನೋಡುತ್ತಿದ್ದ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ಸೈಟು ಅಥವಾ ಮನೆಯನ್ನು ಮಾರಾಟಕ್ಕಾಗಿ ಯಾರಾದರೂ ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಎಷ್ಟೇ ಕೆಲಸದ ಒತ್ತಡ ಇದ್ದರೂ ಕುಟುಂಬ ಸದಸ್ಯರಿಗಾಗಿ ಸಮಯ ಮೀಸಲಿಡುವುದಕ್ಕೆ ಪ್ರಯತ್ನಿಸಿ. ಸೂರ್ಯನಾರಾಯಣ ಸ್ವಾಮಿ ದೇವರನ್ನು ಮನಸ್ಸಲ್ಲಿ ಸ್ಮರಿಸಿ, ಮನೆಯಿಂದ ಆಚೆಗೆ ಹೊರಡಿ.
ಈ ದಿನ ಅದೃಷ್ಟ ನಿಮ್ಮ ಪಾಲಿಗೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಬಗೆಗಿನ ಅಭಿಪ್ರಾಯವೋ ಅಥವಾ ಇತರರ ಮೂಲಕ ಈ ಹಿಂದೆ ನೀವು ಕೆಲಸ ಮಾಡಿದ ಸಾಮರ್ಥ್ಯ ಬಗ್ಗೆ ಹೇಳಿಸಬೇಕು ಎಂದಿದ್ದರೆ ಯಾರಿಂದ ಈ ಕೆಲಸ ಆಗಬೇಕು ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ವ್ಯಾಲೆಟ್ ಬಳಸುವಂಥ ಪುರುಷರು ಜನಜಂಗುಳಿಯಲ್ಲಿ ಹೋಗುವಂತಹ ಸಂದರ್ಭದಲ್ಲಿ ಜಾಗ್ರತೆಯಿಂದ ಇರಬೇಕಾಗುತ್ತದೆ. ಒಂದಿಷ್ಟು ಮೈ ಮರೆತರೂ ಬೆಲೆಬಾಳುವ ವಸ್ತು, ಹಣವನ್ನು ಕಳೆದುಕೊಳ್ಳುವಂಥ ಸಾಧ್ಯತೆ ಇದೆ.
ಇತರರ ವ್ಯವಹಾರಕ್ಕೆ ಮಧ್ಯವರ್ತಿಗಳಿಗೆ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಚಿನ್ನದ ಒಡವೆಯೋ ಅಥವಾ ಗ್ಯಾಜೆಟ್ ಗಳೋ ಉಡುಗೊರೆಯಾಗಿ ಪಡೆದುಕೊಳ್ಳುವಂಥ ಯೋಗ ಸಹ ಇದೆ. ಸಾಧ್ಯವಾದಷ್ಟೂ ಆಡುವ ಮಾತಿನ ಮೇಲೆ ಒಂದಿಷ್ಟು ನಿಗಾ ಇರಿಸಿಕೊಳ್ಳಿ. ಕಡಿಮೆ ಮಾತನಾಡಿದಷ್ಟೂ ಲಾಭ ಹೆಚ್ಚಿಗೆ ದೊರೆಯಲಿದೆ. ಕಾರು ಅಥವಾ ಆಟೋ ಚಾಲಕರಿಗೆ ಇರುವವರಿಗೆ ಸ್ವಂತ ವಾಹನವನ್ನು ಖರೀದಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.
ಎದ್ದು ಹೋಗೋ ಮಾತು ಬಿದ್ದು ಹೋಗಲಿ ಎಂಬಂತೆ ನೀವು ಮಾಡುವ ಚೌಕಾಶಿ ಈ ದಿನ ಲಾಭ ತಂದುಕೊಡಲಿದೆ. ಅನಿರೀಕ್ಷಿತವಾಗಿ ಪ್ರಭಾವಿಗಳ ಸ್ನೇಹ ವಲಯದಲ್ಲಿ ಸೇರ್ಪಡೆ ಆಗುವಂಥ ಯೋಗ ನಿಮ್ಮ ಪಾಲಿಗೆ ಇದೆ. ಅನಂತ ಪದ್ಮನಾಭ ಸ್ವಾಮಿಯ ಆರಾಧನೆಯನ್ನು ಮಾಡಿ. ಒಂದು ವೇಳೆ ನಿಮ್ಮ ಧಾರ್ಮಿಕ ನಂಬಿಕೆ ಬೇರೆಯದ್ದಾಗಿದ್ದರೆ ಮನೆಯಿಂದ ಹೊರಡುವಾಗ ಬಿಳಿಯ ವಸ್ತ್ರವೊಂದನ್ನು ಬಳಿ ಇಟ್ಟುಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಹೊಸ ಪಾದರಕ್ಷೆ, ಶೂ ಇಂಥದ್ದನ್ನು ಖರೀದಿ ಮಾಡಲಿದ್ದೀರಿ.
ಹೀಗೆ ಮಾತನಾಡಿದ್ದು ನಾನೇನಾ ಎಂಬಂತೆ ಈ ದಿನ ಆಗಲಿದೆ. ಸಣ್ಣ ಮಾತಿಗೆ ಅಥವಾ ತಮಾಷೆಗೆ ಸಿಟ್ಟಿಗೆದ್ದು, ಸ್ನೇಹವನ್ನು ಕಳೆದುಕೊಳ್ಳುವಂಥ ಸಾಧ್ಯತೆಗಳಿವೆ. ಆದ್ದರಿಂದ ತಾಳ್ಮೆ, ಸಂಯಮ ಬಹಳ ಮುಖ್ಯವಾದವು. ದೂರದ ಸಂಬಂಧಿಯೊಬ್ಬರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ಪಾರ್ಟಿ ಅಥವಾ ಗೆಟ್ ಟುಗೆದರ್ ನಲ್ಲಿ ಭಾಗೀ ಆಗುತ್ತಿದ್ದೀರಿ ಎಂದಾದರೆ ಸಾಧ್ಯವಾದಷ್ಟೂ ಗಾಸಿಪ್ ಗಳಿಂದ ದೂರ ಇರಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಕೆಲವು ಬೆಳವಣಿಗೆಗಳು ಆಗಬಹುದು, ಜಾಗ್ರತೆ.
ತಂದೆ ಅಥವಾ ತಂದೆಗೆ ಸಮಾನರಾದವರಿಗೆ ನೆರವಾಗಲಿದ್ದೀರಿ. ಈ ಹಿಂದೆ ಬಹಳ ಸಮಯದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯೋಪಚಾರ ದೊರೆಯಲಿದೆ. ಕೂಡಿಟ್ಟಿದ್ದ ಹಣವನ್ನು ಸೂಕ್ತವಾದ ಕಡೆ ಹೂಡಿಕೆ ಮಾಡುವುದಕ್ಕೆ ಸ್ನೇಹಿತರು, ಪರಿಣತರ ನೆರವನ್ನು ಕೇಳುವಂಥ ಸಾಧ್ಯತೆ ಇದೆ. ಹೊಸ ರುಚಿಯ ಅಹಾರ ಪದಾರ್ಥವನ್ನೋ ಅಥವಾ ಮನೆಯಿಂದ ಹೊರಗೆ ಏನಾದರೂ ತಿನ್ನುವಂಥ ಪರಿಸ್ಥಿತಿಯಲ್ಲಿ ಗುಣಮಟ್ಟದ ಬಗ್ಗೆ ಲಕ್ಷ್ಯ ನೀಡಿ. ಒಂದು ವೇಳೆ ಬೇಡ ಎಂದೆನಿಸಿದರೂ ದಾಕ್ಷಿಣ್ಯಕ್ಕೆ ಬಿದ್ದು ಸೇವಿಸಿದರೆ ಹೊಟ್ಟೆ ಸಮಸ್ಯೆ ಆಗಬಹದು.