ಆರ್ಥಿಕ ಸ್ಥಿರತೆ ಹೆಚ್ಚಿಸಲು ಹೊಸ ಮಾರ್ಗಗಳ ಅನ್ವೇಷಣೆ ಅಗತ್ಯ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಗುರುವಾರ ಸ್ಪಷ್ಟ ನಿಲುವು, ಪರರಿಂದ ಒಲವು, ಸ್ಪರ್ಧೆಯಲ್ಲಿ ಗೆಲವು ಇವೆಲ್ಲ ಈ ದಿನಸ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ – 06 : 08 am, ಸೂರ್ಯಾಸ್ತ – 06 : 50 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:04 – 15:40, ಯಮಘಂಡ ಕಾಲ 06:08 – 07:44, ಗುಳಿಕ ಕಾಲ 09:19 – 10:54
ಮೇಷ ರಾಶಿ: ನೀವು ನೀಡಿದ ನೆರವು ನಿಮಗೆ ಸಿಗುವುದು. ಇಂದು ಯಾರಿಗೂ ಹೇಳದ ಮರೆಯಲಾಗದ ಕೆಲವು ಘಟನೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸವಾಲುಗಳು ಬೇಡವೆಂದರೂ ಬರುತ್ತವೆ. ಅನ್ಯರ ವರ್ತನೆಯನ್ನು ಮೂದಲಿಸಿ ಏನೂ ಪ್ರಯೋಜನವಾಗದು. ವೃತ್ತಿ ಜೀವನದಲ್ಲಿ ಹೊಸ ಒತ್ತಡ ಎದುರಿಸಬಹುದು. ಆರ್ಥಿಕ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಅಗತ್ಯ. ಹೊಸ ಸಂಬಂಧಗಳನ್ನೊಳಗೊಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸ್ನೇಹಿತರ ಬೆಂಬಲದಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯಸ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳ ಬೇಡಿ.
ವೃಷಭ ರಾಶಿ: ಇನ್ನೊಬ್ಬರನ್ನು ನಿಂದಿಸುವ ಮನೋಭಾವ ಬೇಡ. ಕೂಡಲೇ ನಿಮಗೆ ವಾಪಾಸ್ ಬರಬಹುದು. ಇಂದು ನೀವು ಅಕಾರಣವಾಗಿ ಉದ್ವೇಗ ಒಳಗಾಗುವಿರಿ. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಆರ್ಥಿಕ ಸ್ಥಿರತೆ ಹೆಚ್ಚಿಸಲು ಹೊಸ ಮಾರ್ಗಗಳ ಅನ್ವೇಷಣೆ ಅಗತ್ಯ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ದೈಹಿಕ ಶ್ರಮಕ್ಕೆ ಮಾನಸಿಕ ಸಮಾಧಾನ ನೀಡುವ ಕೆಲಸದಲ್ಲಿ ತೊಡಗಿರಿ. ಮನಶ್ಶಾಂತಿಗೆ ಮನಸ್ಸನ್ನು ಸಿದ್ಧಗೊಳಿಸಬೇಕು. ಸಂಬಂಧಗಳಲ್ಲಿ ತೆರೆಮರೆಯ ಅನಗತ್ಯ. ಆಗಿಹೋದವರನ್ನು ಪುನಃ ಸ್ಮರಣೆ ಮಾಡಲಾರಿರಿ. ನಿಮ್ಮ ಹಣವನ್ನು ದುಂದುವೆಚ್ಚ ಮಾಡದೇ ಸತ್ಕಾರ್ಯಕ್ಕೆ ಕೊಡಿ. ಮಾತನಾಡುವಾಗ ಎಚ್ಚರವಿರಲಿ. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವ್ಯವಹಾರದಲ್ಲಿ ವಂಚನೆಯಾಗುವುದು ಗೊತ್ತಾಗಿ ಸರಿ ಮಾಡಿಕೊಳ್ಳುವಿರಿ. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.
ಮಿಥುನ ರಾಶಿ: ಮಹತ್ತ್ವದ ಕಾರ್ಯಕ್ಕೆ ನೀವು ಆಯ್ಕೆಯಾಗದೇ ಇರುವುದು ನಿಮಗೆ ಸಂಕಟವಾದೀತು. ಇಂದು ಆಹಾರದ ಸಮಯದಲ್ಲಿ ವ್ಯತ್ಯಾಸವಾಗಿ ತೊಂದರೆ ಅನುಭವಿಸುವಿರಿ. ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ವೃತ್ತಿ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳು ಬರುವುದು. ಕೊಟ್ಟಿದ್ದನ್ನು ಹಿಂದಿರುಗಿಸಲು ಕಾಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಆತ್ಮವಿಶ್ವಾಸದಿಂದ ಕಾರ್ಯ ನಡೆಸಿ. ಸಂಬಂಧಗಳಲ್ಲಿ ಸ್ವಚ್ಚತೆ ಬೇಡಿಕೆಯಾಗಿದೆ. ಶಾಂತ ಮನಃಸ್ಥಿತಿಯಿಂದ ಸಮಸ್ಯೆ ಪರಿಹರಿಸಿ. ಸ್ತ್ರೀಮೂಲದಿಂದ ಧನಸಹಾಯವು ಸಿಗಲಿದೆ. ಅಲ್ಪ ಭೋಜನವನ್ನು ಮಾಡುವ ಸಂದರ್ಭ ಬದಲಿದೆ. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ಇನ್ನೊಬ್ಬರ ಮೇಲಿನ ಆರೋಪವನ್ನು ಸತ್ಯ ಮಾಡಲು ನೀವು ಸುಳ್ಳು ಹೇಳುವಿರಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು.
ಕರ್ಕಾಟಕ ರಾಶಿ: ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಸಂಬಂಧವನ್ನು ದೂರವಿಡಬೇಕಾಗುವುದು. ನಿಮ್ಮ ಆಸೆಗಳು ಕೈಗೂಡುವ ಹಂತದಲ್ಲಿ ಇದ್ದು ಇನ್ನಷ್ಟು ಪ್ರಯತ್ನದಿಂದ ಗುರಿಯನ್ನು ಮುಟ್ಟಬಹುದು. ಅತಿಯಾದ ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ತರ್ಕಬದ್ಧವಾದ ವಾದಕ್ಕೆ ಪ್ರಶಂಸೆ. ಅನುಭವದಿಂದ ಹೊಸ ಅವಕಾಶಗಳು ಲಭ್ಯ. ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಹಣಕಾಸಿನ ವಿಷಯದಲ್ಲಿ ಹೆಚ್ಚು ವೆಚ್ಚ ತಪ್ಪಿಸಿ. ವೃತ್ತಿ ಜೀವನದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಮನೋಬಲ ಉಳಿಸಿಕೊಳ್ಳಿ. ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಆರೋಗ್ಯ ಉತ್ತಮವಾಗಿರಲಿದೆ. ದುಂದುವೆಚ್ಚದ ಕಡೆ ಗಮನವಿರಲಿ. ಇಷ್ಟವಸದ ಸಂಗತಿಯ ಕಡೆ ತೆರಕಳಿದರೆ ಅಹಿತಕರ ಸಂಗತಿಯನ್ನು ಮರೆಯಬಹುದು. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು.
ಸಿಂಹ ರಾಶಿ: ಮುಟ್ಟಿದ ಕೆಲಸವೆಲ್ಲ ಅರ್ಧಕ್ಕೆ ನಿಂತಿರುವುದರಿಂದ ಬೇಸರ. ನಿಮ್ಮ ವಸ್ತುವೇ ಆಗಿದ್ದರೂ ನೀವು ಅದನ್ನು ಪಡೆಯಲು ಮುಜುಗರ ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವರು. ಆತ್ಮವಿಶ್ವಾಸ ಕಡಿಮೆಯಾಗುವ ಸಂದರ್ಭ ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಪ್ರೀತಿಯ ಸಂಬಂಧಗಳಲ್ಲಿ ಚರ್ಚೆಯಿಂದ ಸಮಸ್ಯೆ ನಿವಾರಣೆ. ಸಂಗಾತಿಯಿಂದ ಪೂರ್ಣ ತೃಪ್ತಿ ಸಿಗದು. ಹಳೆಯ ಸಂಬಂಧಗಳಲ್ಲಿ ಸಮನ್ವಯ ಅಗತ್ಯವಿದೆ. ಅಪರಿಚಿತರು ನಿಮ್ಮ ಹಾದಿ ತಪ್ಪಿಸಬಹುದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಆರ್ಥಿಕ ವಿಚಾರಕ್ಮೆ ದಾಂಪತ್ಯದಲ್ಲಿ ಮನಸ್ತಾಪಬರಬಹುದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು. ಪ್ರಸಿದ್ಧ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾಗುವುದು.
ಕನ್ಯಾ ರಾಶಿ: ಅಪರಿಚಿತರಿಗೆ ನಿಮ್ಮಿಂದ ಉಪಕಾರವಾಗಲಿದೆ. ಒತ್ತಡಗಳಿಂದ ದೂರವಾಗಲು ಕಷ್ಡವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ವೃತ್ತಿಯಲ್ಲಿ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ದುಡುಕಿನಿಂದ ಮುನ್ನಡೆ ಬೇಡ. ಮನೆಗೆ ಬಂದ ಅತಿಥಿಗಳಿಂದ ಭವಿಷ್ಯಕ್ಕೆ ಸಹಾಯ ಸಿಗುವುದು. ಪ್ರೀತಿಪಾತ್ರರೊಂದಿಗೆ ಮನಸ್ತಾಪ ಪರಿಹರಿಸಿ. ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಲು ಯತ್ನಿಸಿ. ಯಾವುದೇ ಅಹಿತಕರ ಭಾವವನ್ನು ತೋರಿಸಬೇಡಿ. ಇನ್ನೊಬ್ಬರ ಸಮಸ್ಯೆಯನ್ನು ಪರಿಹರಿಸಲು ಹೋಗಿ ನೀವೇ ಸಿಕ್ಕಿಕೊಳ್ಳಬೇಕಾಗುವುದು. ಬೇಕಾದಷ್ಟು ಅನುಕೂಲತೆಗಳಿದ್ದರೂ ಬೇಕೆಂಬ ಆಸೆಯು ನಿಮ್ಮನ್ನು ಬಿಡದು. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.