Horoscope Today 12 August: ಇಂದು ಈ ರಾಶಿಯವರಿಗೆ ಉದ್ಯಮದಲ್ಲಿ ಮತ್ತೊಂದು ಮೈಲಿಗಲ್ಲು ಸಾಧ್ಯ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ ಮಂಗಳವಾರ ಅಸಾಧ್ಯದ ಸಾಧ್ಯತೆ, ಸಾಮಾಜಿಕ ಹೊಣೆಗಾರಿಕೆ, ಸಹನೆ ಕಳೆಯುವುದು, ಅಂತಃಪ್ರಜ್ಞೆಯಿಂದ ತಪ್ಪು ಹಾದಿ ಇವೆಲ್ಲ ಈ ದಿನದ ಭವಿಷ್ಯ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 : 19 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:47 – 17:21 ಗುಳಿಕ ಕಾಲ 12:38 – 12:38 ಯಮಗಂಡ ಕಾಲ 09:29 – 11:03
ಮಂಗಳವಾರ ಬರುವ ಸಂಕಷ್ಟಹರ ಚತುರ್ಥಿಗೆ ಅಂಗಾರಕಸಂಕಷ್ಟ ಎಂದು. ಇದು ವಿಶೇಷ ದಿನ. ಅಂಗಾರಕದೋಷದಿಂದ ಪೀಡಯಾಗುತ್ತಿದ್ದರೆ ವ್ರತಾಚರಣೆಯಿಂದ ದೋಷದ ಪ್ರಭಾವ ನ್ಯೂನವಾಗಲಿದೆ.
ಮೇಷ ರಾಶಿ: ನಿಮ್ಮ ವರ್ತನೆಯಿಂದೆ ನೀವೇ ಮುಖ್ಯವಾಗಿ ಕಾಣಿಸುವಿರಿ. ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ನಿಮ್ಮ ಮನೆಯವರು ಊಹಿಸಿದ್ದಕ್ಕಿಂತ ಹೆಚ್ಚನ್ನು ನೀವು ಸಾಧಿಸುವಿರಿ. ನೀವು ಲೆಕ್ಕಾಚಾರದ ವ್ಯಕ್ತಿಯಾದರೂ ರಿಸ್ಕ್ ತೆಗೆದುಕೊಳ್ಳಲು ತಯಾರಾಗುವಿರಿ. ಅಧ್ಯಯನಕ್ಕೆ ಹೆಚ್ಚು ಮಹತ್ತ್ವಕೊಡುವಿರಿ. ಚಂಚಲವಾದ ಮನಸ್ಸಿನಿಂದ ನೀವು ಗುರಿಯನ್ನು ಸಾಧಿಸಲು ಕಷ್ಟಪಡುವಿರಿ. ನಿಮ್ಮಂತಹ ಮಾನಸಿಕವಾಗಿ ಬಲವುಳ್ಳವರು ಹೃದಯಶೂನ್ಯ ಆಗಬಾರದು. ಇಡೀ ಕುಟುಂಬದ ಹೊರೆ ನಿಮ್ಮ ಮೇಲೆ ಇಂದು ಬರಬಹುದು. ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಗಳು ಸುಳಿದಾಡಬಹುದು. ಸಾಹಿತ್ಯದಲ್ಲಿ ಹೊಸ ಮೈಲುಗಲ್ಲಿನ ಕಡೆ ನಡೆಯುವಿರಿ. ಹಳೆಯ ಯೋಜನೆಯೊಂದನ್ನು ಕಾರ್ಯಗತಗೊಳಿಸಲು ನೀವು ಉತ್ಸಾಹದಿಂದ ಸಿದ್ಧರಾಗಿರುವಿರಿ. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು.
ವೃಷಭ ರಾಶಿ: ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗುವುದು. ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ಸೃಜನಶೀಲ ಪ್ರತಿಕ್ರಿಯೆಯು ಇಷ್ಟವಾಗುವುದು. ನಿಮ್ಮ ಪ್ರೀತಿಪಾತ್ರರು ಸುತ್ತುವರಿದಿದ್ದು, ನಿಮ್ಮ ದಿನವೂ ಉತ್ಸಾಹದಿಂದ ಮುಗಿಯುತ್ತದೆ. ಕಾರ್ಯದ ಒತ್ತಡವಿರುವ ಕಾರಣ ಮನೆಗೆ ವಿಳಂಬವಾಗಿ ಬರುವಿರಿ. ಮನಸ್ಸನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಹಳೆಯ ಮನಸ್ತಾಪಗಳನ್ನು ಬಿಟ್ಟು ಸಂಬಂಧವನ್ನು ಮಧುರವಾಗಿಸಿ. ದಾಂಪತ್ಯದ ಸುಖವು ಇಂದು ಸ್ವಲ್ಪ ಮಾತ್ರ ಸಿಗಬಹುದು. ಆತುರದ ಕಾರ್ಯಗಳಿಂದ ನಷ್ಟವಾಗುವ ಸಾಧ್ಯತೆ. ರಾಜಕಾರಣಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಯ ವರ್ತನೆಯಿಂದ ತೊಂದರೆ ಉಂಟಾಗಬಹುದು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.
ಮಿಥುನ ರಾಶಿ: ಕಾರ್ಯದಕ್ಷತೆಯ ಕಾರಣ ಪುನಃ ನಿಯೋಜನೆಹಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ಉತ್ಪಾದನೆ ಹೆಚ್ಚಿಸಲು ನಿಮ್ಮ ಕೆಲಸದ ವಿಧಾನವನ್ನು ಬದಲಾಯಿಸುವುದು ಸೂಕ್ತ. ಹೆಚ್ಚಾದ ವಿಶ್ವಾಸದಿಂದ ಮತ್ತು ಅನುಕೂಲಕರ ಫಲಿತಾಂಶಗಳಿಂದ ಭರವಸೆ ಹೆಚ್ಚಾಗುವುದು. ನಿಮ್ಮ ಇಂದಿನ ಕರ್ತವ್ಯಗಳನ್ನು ನಿರ್ಲಕ್ಷಿಸದೇ ಮಾಡಿ. ವಿದೇಶಕ್ಕೆ ತೆರಳಿದ ನೀವು ಅನಾಥಭಾವದಿಂದ ಇರುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಒಳ್ಳೆಯ ಭಾವನೆಗಳು ಕಾರ್ಯದಲ್ಲಿ ಯಶಸ್ಸನ್ನು ತರುತ್ತವೆ. ಪ್ರಮುಖ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕೆಟ್ಟ ಮತ್ತು ಎದುರು ಹೊಗಳುವ ಸ್ವಭಾವದ ಜನರ ಸಹವಾಸದಿಂದ ನಿಮಗೆ ತೊಂದರೆ ಆಗಲಿದೆ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.
ಕರ್ಕಾಟಕ ರಾಶಿ: ಗುರಿಗಳ ಸಮೀಪಕ್ಕೆ ಹೋದ ಅನಂತರ ನಿರ್ಮೋಹವುಂಟಾಗುವುದು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ಕೆಲವು ನಿಮಗೆ ಅನ್ವಯವಾಗುವಂತಹವು ಇರಬಹುದು. ಪ್ರಶ್ನೆ ಮತ್ತು ತರ್ಕ ಎಂದು ನೀವು ಆಲೋಚಿಸುತ್ತೀರಿ ಮತ್ತು ಎಲ್ಲ ಅಂಶಗಳನ್ನು ಪರಿಗಣಿಸಿಯೇ ಸೂಕ್ತ ಆಯ್ಕೆ ಮಾಡಿ. ಅಂತಿಮ ತೀರ್ಮಾನ ನಿಮ್ಮದೇ ಆಗಿರಲಿ. ಹಳೆಯ ಘಟನೆಗಳ ನೆನಪಿನಿಂದ ಮನಸ್ಸು ಭಾರವಾಗಬಹುದು. ಕುಟುಂಬದಲ್ಲಿ ಘನತೆಯನ್ನು ಕಾಪಾಡಿಕೊಳ್ಳಲು ನೀವು ತಾಳ್ಮೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಪರರ ಸ್ನೇಹದಲ್ಲಿ ಅಸೂಯಯನ್ನು ವ್ಯಕ್ತಪಡಿಸುವಿರಿ. ಯಾವ ಬಂಧಗಳನ್ನೂ ಬಯಸದೇ ಮನಸ್ಸಿಗೆ ಒಂಟಿತನ ಬೇಕು ಎನಿಸಬಹುದು. ಕ್ರಿಯಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿರಲಿದೆ. ಆಕಸ್ಮಿಕವಾದ ಕೆಲವು ಸಂತೋಷಕರ ಸುದ್ದಿಗಳಿಂದ ಮನಸ್ಸು ಅರಳುವುದು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.
ಸಿಂಹ ರಾಶಿ: ನೀವಾಗಿಯೇ ತಂದುಕೊಂಡಿದ್ದನ್ನು ನೀವೇ ದೂರವಿಟ್ಟುಕೊಳ್ಳುವಿರಿ. ನೀವು ಪುರಸ್ಕಾರಗಳ ಕುರಿತು ಆಲೋಚನೆ ಮಾಡದೇ ಸತತವಾಗಿ ಕಠಿಣ ಪರಿಶ್ರಮಪಡುವಿರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರುವಿರಿ. ನೀವು ಯಾರದ್ದಾದರೂ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು. ಅನ್ಯರಿಂದ ಸಣ್ಣ ತಪ್ಪು ಭಾವನೆಯೂ ನಿಮ್ಮ ಮೇಲೆ ಆಗಬಾರದು. ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು. ನೀವು ಚಾತುರ್ಯದಿಂದ ಸಂಬಂಧದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ವಾಕ್ಚಾತುರ್ಯದಿಂದ ಲಾಭವನ್ನು ನೀವು ಪಡೆದುಕೊಳ್ಳುವಿರಿ. ಮನಸ್ತಾಪವನ್ನು ತಣಿಸಲು ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅನನುಕೂಲದ ಸ್ಥಿತಿಯಲ್ಲಿಯೂ ಲಾಭವನ್ನು ಪಡೆಯವ ಕಲೆಯನ್ನು ನೀವು ತಿಳಿದಿರುವಿರಿ. ಕೆಲಸಗಳ ನಡೆವೆಯೂ ನೀವು ನಿಮ್ಮ ಸಂಗಾತಿಯ ಕುರಿತು ಆಲೋಚನೆ ಮಾಡುವಿರಿ. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ.
ಕನ್ಯಾ ರಾಶಿ: ಅಂತಃಪ್ರಜ್ಞೆ ಇಂದು ನಿಮ್ಮ ದಾರಿ ತಪ್ಪಿಸಿದ ಅನುಭವವಾಗಬಹುದು. ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳಿಗೆ ಪ್ರಶಂಸಿಸುವರು. ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವನ್ನು ಕಂಡುಕೊಳ್ಳುವಿರಿ. ನೀವು ಹಣಕಾಸಿನ ವಿಷಯದಲ್ಲಿ ಸ್ವಾವಲಂಬಿಯಾಗಿ ಗುರಿಯನ್ನು ಸಾಧಿಸುವಿರಿ. ಹುಡುಕಾಡಕ್ಕೆ ಒಂದು ಅಂತ್ಯವನ್ನು ತಂದುಕೊಳ್ಳುವುದು ಉತ್ತಮ. ಯೋಜಿತ ಕೆಲಸಗಳು ಫಲಪ್ರದವಾಗಲಿವೆ. ನೈತಿಕ ಮತ್ತು ಅನೈತಿಕತೆಯ ಬಗ್ಗೆ ಯೋಚಿಸುವ ಮನಸ್ಸು ಭೌತಿಕ ಪರಿಸರದೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗುವುದಿಲ್ಲ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಹೊಸ ವ್ಯಾಪಾರ ಸಂಬಂಧಗಳು ತೀವ್ರಗೊಳ್ಳಬಹುದು. ಇಂದು ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಕೆಲಸದ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.
ತುಲಾ ರಾಶಿ: ಏನೂ ಆಲೋಚನೆ ಇಲ್ಲದೇ ಸುಮ್ಮನೆ ಇರಲು ಆಗದು. ನಿಮ್ಮ ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಇಂದು, ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ. ಪರಿಹಾರವಾಗದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ನೀವು ಆವಿಷ್ಕಾರಕ ವಿಧಾನಗಳನ್ನು ಆಲೋಚಿಸುವ ಸಾಧ್ಯತೆ ಇದೆ. ಅಗತ್ಯವಿರುವ ಮಾತುಗಳನ್ನಾಡಿ ಸುಮ್ಮನಾಗುವಿರಿ. ಕೆಲಸದ ಸ್ಥಳದಲ್ಲಿ ಅನೂಹ್ಯ ಸನ್ನಿವೇಶಗಳು ಅಡ್ಡಿಯಾಗಬಹುದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ನಿಷ್ಕಾಳಜಿಯಿಂದ ಇರಬಾರದು. ಧಾರ್ಮಿಕ ನಾಯಕರಿಗೆ ಹೆಚ್ಚು ಲಾಭ ಹಾಗೂ ಯಶಸ್ಸು ಸಿಗಬಹುದು. ಪುಣ್ಯಸ್ಥಳಕ್ಕೆ ನೀವು ಹೋಗಲಿದ್ದೀರಿ. ಮಕ್ಕಳ ವಿಚಾರದಲ್ಲಿ ಮನಸ್ಸು ವ್ಯಾಕುಲತೆಯಿಂದ ಇರಲಿದೆ. ಇಂದು ಆಧ್ಯಾತ್ಮಿಕ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.
ವೃಶ್ಚಿಕ ರಾಶಿ: ನಿಮಗೆ ಉತ್ಸಾಹ ತುಂಬುವವರು ಬೇಕು. ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ನಿಮ್ಮ ಗುರಿಗಳಿಗೆ ನೀವು ಬದ್ಧರಾಗಿರುವ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಅವರ ಕರ್ತವ್ಯಗಳಲ್ಲಿ ಕೊರತೆಯಾಗಲು ಅವಕಾಶ ನೀಡಬೇಡಿ. ಪ್ರಯಾಣದಲ್ಲಿ ವ್ಯತ್ಯಾಸ ಹಾಗೂ ಹೋಗಬೇಕಾದ ಸ್ಥಳಕ್ಕೆ ವಿಳಂಬವಾಗಿ ಹೋಗುವಿರಿ. ನಿಮ್ಮ ಮೇಲಧಿಕಾರಿಗಳ ನಿಮಗೆ ನೆರವು ಸಿಗುತ್ತದೆ. ಉದ್ಯೋಗದಲ್ಲಿ ನಿಮಗೆ ಉಂಟಾದ ಗೊಂದಲವನ್ನು ಮೇಲಧಿಕಾರಿಗಳಿಗೆ ತಿಳಿಸಿ. ಪರಿಹಾರವನ್ನು ಕಂಡುಕೊಳ್ಳಿ. ತಿಳಿಸದೇ ಇರಬೇಡಿ. ನೀವು ಇತರರನ್ನು ಟೀಕಿಸುವುದನ್ನು ನಿಲ್ಲಿಸಿದರೆ, ಸಂಬಂಧಗಳಿಂದ ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ. ಎಲ್ಲವೂ ಸಾಮಾನ್ಯವಾಗಿದ್ದರೂ ಮನಸ್ಸು ನಿರಾಸಕ್ತಿಯಿಂದ ಬಳಲುತ್ತದೆ. ನಿಮ್ಮ ಕಡಿಮೆಯಾಗುವ ಭಯವು ಕಾಡಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು. ಅದು ನಿಮ್ಮನ್ನು ಹೈರಾಣ ಮಾಡುವುದು. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು.
ಧನು ರಾಶಿ: ನಿಮ್ಮ ಕ್ರಿಯಾತ್ಮಕತೆಗೆ ಹೊಸ ರೂಪ ಸಿಗಲಿದೆ. ಇಂದು ನಿಮಗೆ ಯಾರಿಂದಲಾದರೂ ಹಿರಿಯರಿಂದ ದಿವ್ಯಾಶೀರ್ವಾದ ಪ್ರಾಒ್ತವಾಗಲಿದೆ. ಇಂದು, ನಿಮ್ಮ ಸೃಜನಶೀಲ ವ್ಯಕ್ತಿತ್ವವು ಗೊತ್ತಾಗಲಿದೆ. ವಿವಾಹದ ಚಿಂತೆಯು ನಿಮ್ಮನ್ನು ಕಾಡಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವಿರಿ. ಆಸ್ತಿಯನ್ನು ಭಾಗ ಮಾಡಿಕೊಳ್ಳಲು ನೀವು ಇಂದು ಮುಂದಾಗುವಿರಿ. ಆರ್ಥಿಕತೆ ಉತ್ತಮವಾಗಿ ಉದ್ವೇಗದಲ್ಲಿ ಸಿಕ್ಕಿಬೀಳುವಿರಿ. ಮನೆಯರ ಸಣ್ಣ ಮಾತಿಗೆ ಬೇಸರಿಸಬೇಡಿ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಖರ್ಚು ಸಾಧ್ಯ. ನೀವು ಭೌತಿಕ ಸೌಕರ್ಯಗಳನ್ನು ಸಂಗ್ರಹಿಸುವ ಬಗ್ಗೆ ಚಿಂತಿಸುತ್ತೀರಿ. ಸರ್ಕಾರಿ ನೌಕರರು ಇಂದು ಹೆಚ್ಚಿನ ಕೆಲಸದಲ್ಲಿ ತೊಡಗುವರು. ಮನೆಯಲ್ಲಿ ಹಿರಿಯರ ಅನಾರೋಗ್ಯದಿಂದ ಮನಸ್ಸು ವಿಚಲಿತಗೊಳ್ಳುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ.
ಮಕರ ರಾಶಿ: ಕೆಲವು ಕಾರ್ಯಗಳು ವಿಳಂಬವಾಗಲು ಕಾರಣವಿದ್ದು ಅದನ್ನು ಒಪ್ಪಿಕೊಳ್ಳಲೇಬೇಕು. ಆದರೆ ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಉಂಟುಮಾಡುವುದು ಬೇಡ. ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ನೀವು ಇಡೀ ದಿನ ನಿಮ್ಮನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ. ದಾಂಪತ್ಯ ನಡುವಿನ ಅಂತರವು ದೂರಾಗಬಹುದು. ವ್ಯಾಪಾರದಲ್ಲಿ ನೀವು ಹೆಚ್ವು ಲಾಭವನ್ನು ಗಳಿಸಿಸುವಿರಿ. ನಿಮ್ಮ ಮತ್ತು ಸಹೋದರರ ನಡುವೆ ಸಣ್ಣ ವಿರಸು ಏರ್ಪಡಬಹುದು. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಖಾಸಗಿ ಉದ್ಯೋಗಿಗಳನ್ನು ಕೈ ಬಿಡಲು ಸಂಸ್ಥೆ ನಿರ್ಧರಿಸಬಹುದು. ಕಳೆದ ದಿನಗಳನ್ನು ನೀವು ಮೆಲುಕು ಹಾಕಿ ಸಂತೋಷಗೊಳ್ಳುವಿರಿ. ಮಕ್ಕಳಿಂದ ಶುಭವಾರ್ತೆ ಇರಲಿದೆ.
ಕುಂಭ ರಾಶಿ: ನೀವು ಸಕಾರಾತ್ಮಕವಾಗಿ ಇದ್ದರೆ ಏನಾದರೂ ಮಿರಾಕಲ್ ನಿಮಗೆ ಆಗುವುದು. ಇಂದು ನೀವು ಅತಿಯಾದ ಒತ್ತಡ ತಂದುಕೊಳ್ಳುವ ಅಗತ್ಯ ಇಲ್ಲ. ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನಿಮ್ಮ ಮಾತಿನ ದಾಟಿ ಎದುರಿನವರಿಗೆ ಹಿಂಸೆ ಕೊಡುವಂತೆ ಇರುವುದು. ಕೆಲಸದ ಸ್ಥಳದಲ್ಲಿ ನಿಷ್ಠೆಯಿಂದ ಕೆಲಸ ಮಾಡುವಿರಿ. ಕುಟುಂಬದ ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸಲು ಗಮನ ಕೊಡಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ಹೂಡಿಕೆಯೂ ಉಳಿತಾಯದ ಒಂದು ಭಾಗವೇ ಆಗಿದೆ. ಹೊಸ ಸೌಲಭ್ಯಗಳನ್ನು ಪಡೆಯಲು ಖರ್ಚು ಮಾಡುವಿರಿ. ಬರವಣಿಗೆಯ ವಿಚಾರದಲ್ಲಿ ಹೆಚ್ಚು ಮನಸ್ಸನ್ನು ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ.
ಮೀನ ರಾಶಿ: ಶಕ್ತಿಯನ್ನು ಸರಿಯಾಗಿ ಬಳಸಿದರೆ ಅಸಾಧ್ಯವನ್ನೂ ಸಾಧಿಸಬಹುದು. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲ ಆದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ ಏಕೆಂದರೆ ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ. ಇಂದಿನ ಕಠಿಣತೆಯು ನಾಳೆಗೆ ಸುಲಭದ ದಾರಿಯನ್ನು ಮಾಡಿಕೊಡಲಿದೆ. ಸರ್ಕಾರಿ ನೌಕರರಿಗೆ ಅನೇಕ ಕಡೆಗಳಿಂದ ಒತ್ತಡ ಬರಲಿದೆ. ಕೆಲವು ಕೆಲಸಕ್ಕೆ ಕಠಿಣಶ್ರಮದ ಅವಶ್ಯಕತೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಗೆ ಹೆಚ್ಚಿನ ಸ್ಥಾನ ಸಿಗಬಹುದು. ಪ್ರಯತ್ನಿಸಿದ ಕ್ಷೇತ್ರಗಳಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯದ ಕಾರಣ ಅಸಮಾಧಾನ ಇರಲಿದೆ. ವಾಹನದಿಂದ ಅಪಘಾತವಾಗುವ ಸಾಧ್ಯತೆ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)
Published On - 1:43 am, Tue, 12 August 25




