Horoscope Today 19 August: ಇಂದು ಈ ರಾಶಿಯವರಿಗೆ ಸ್ತ್ರೀಯರಿಂದ ಅಪಮಾನವಾಗಿ ಸುಮ್ಮನಿರುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ ಮಂಗಳವಾರ ದಾಖಲೆಗಳ ಪರಿಶೀಲನೆ, ರೋಗಬಾಧೆ, ವ್ಯಾಪಾರ ಸುಗಮ, ಪ್ರೇಮಿಗಳ ಭೇಟಿ, ಗುರಿಯ ಕಡೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:44 – 17:18, ಗುಳಿಕ ಕಾಲ 12:36 – 14:10 ಯಮಗಂಡ ಕಾಲ 09:28 – 11:02
ಮೇಷ ರಾಶಿ: ಹಿಂದೆ ಕೊಟ್ಟ ಮಾತನ ಅವಧಿ ಮುಕ್ತಾಯವಾಗಿದ್ದು, ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಕಠಿಣ ಸಂದರ್ಭದಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರಲಿದೆ. ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು. ದಾನದಲ್ಲಿ ಇಂದು ಹೆಚ್ಚಿನ ಖುಷಿಯನ್ನು ಕಾಣುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬೇರೆಯವರ ಮೇಲೆ ಒತ್ತಡ ತರುವುದು ಬೇಡ. ನಿಮ್ಮ ಲಾಭದ ಚಿಂತನೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಆರ್ಥಿಕವಾಗಿ ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ಕ್ಷಣ. ಸ್ನೇಹಿತರ ಬೆಂಬಲ ಲಭಿಸುತ್ತದೆ. ಅಧಿಕಾರಿಗಳ ವಿಚಾರದಲ್ಲಿ ನೀವು ಭಯ ಪಡುವುದು ಬೇಡ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಿ. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮುಗಿಸಿ ನಿಶ್ಚಿಂತರಾಗುವಿರಿ. ಮನೆಗೆ ಬಂದ ಬಂಧುಗಳನ್ನು ಸರಿಯಾಗಿ ಮಾತನಾಡಿಸಿ. ನಿಮ್ಮ ಲಘುವಾದ ಮಾತುಗಳು ಬೇಸರ ತರಿಸೀತು. ವಿವಾಹದ ಮಾತುಕತೆ ನಡೆಯಬಹುದು.
ವೃಷಭ ರಾಶಿ: ಇಂದು ನಿಮ್ಮ ಭೂಮಿಯ ಖರೀದಿಗೆ ಯಾರಾದರೂ ಬರಬಹುದು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕ ಇರುವಿರಿ. ನಿಮಗೆ ಬೇಕಾದುದನ್ನು ನೀವು ಪಡೆಯುವಿರಿ. ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು. ಪತ್ನಿಯೊಂದಿಗೆ ಭಾವನಾತ್ಮಕ ಸಂಬಂಧ ಗಾಢವಾಗುತ್ತದೆ. ಸ್ನೇಹಿತರೊಂದಿಗೆ ಸಂತೋಷದ ಕ್ಷಣ. ಹೊಸ ಸಂಪರ್ಕಗಳಿಂದ ಲಾಭ. ಪ್ರವಾಸಕ್ಕೆ ಅವಕಾಶ. ದಿನದ ಕೊನೆಯಲ್ಲಿ ಯಶಸ್ಸು. ಆತ್ಮೀಯರು ನಿಮ್ಮನ್ನು ಭೇಟಿ ಮಾಡುವರು. ಬಂದಿರುವ ಅವಕಾಶವನ್ನು ಬಿಟ್ಟು ದುಃಖಪಡುವ ಅವಶ್ಯಕತೆ ಇಲ್ಲ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವಿರಿ. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ನಿಮಗೇ ಸರಿ ಎನಿಸದು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವಾದೀತು. ಅವ್ಯವಹಾರದ ಬಗ್ಗೆ ಗಮನ ಬೇಡ. ಅನಾರೋಗ್ಯದ ನಿವಾರಣೆಗೆ ದೈವದ ಮೊರೆಹೋಗುವುದು ಉಚಿತ.
ಮಿಥುನ ರಾಶಿ: ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ಅತಿಥಿಗಳಿಗೆ ನಿಮ್ಮಿಂದ ಅನಾದರ ಸಿಗುವ ಸಾಧ್ಯತೆ ಇದೆ. ಒಂದು ಗುಣದಿಂದ ಅವರ ಸ್ವಭಾವವನ್ನು ಅಳೆಯುವುದು ಸರಿಯಲ್ಲ. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು. ಆತುರದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಬಹುದು. ಆರ್ಥಿಕ ಲಾಭದ ಸಾಧ್ಯತೆ ಇದೆ. ಆತ್ಮೀಯರಿಂದ ನಿಮಗೆ ಇಷ್ಟವಾದುದು ಸಿಗಬಹುದು. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದ ಸಂದರ್ಭವು ಬರಬಹುದು. ಮುಖಕ್ಕೆ ಸಂಬಂಧಿಸಿದ ರೋಗವು ಬರಬಹುದು. ಉತ್ತಮ ಚಿಕಿತ್ಸೆ ಪಡೆದು ಸರಿ ಮಾಡಿಕೊಳ್ಳಿ. ಯಾವುದಕ್ಕೂ ಅಳುಕುವ ಅವಶ್ಯಕತೆ ಇಲ್ಲ. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಇಂದಿನ ಒತ್ತಡವನ್ನು ಸಹಿಸಿಕೊಂಡು ಇರುವುದು ಕಷ್ಟವಾದೀತು. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.
ಕರ್ಕಾಟಕ ರಾಶಿ: ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ನಿಮಗೂ ಆತ್ಮತೃಪ್ತಿ. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಮನಸ್ತಾಪಗಳನ್ನು ಹೊರಹಾಕುವಲ್ಲಿ ಹಾಕಿ ಮತ್ತು ಅದಕ್ಕೆ ರೀತಿಯೂ ಇರಲಿ. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು. ಕುಟುಂಬದಲ್ಲಿ ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹಿತರ ಬೆಂಬಲ ಲಭಿಸುತ್ತದೆ. ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ. ದಿನದ ಕೊನೆಯಲ್ಲಿ ಮನಸ್ಸು ತೃಪ್ತಿಯಾಗುತ್ತದೆ. ಅಲ್ಲಿನ ವಾತಾವರಣ ನಿಮಗೆ ಅನುಕೂಲವಾಗದೆಯೂ ಇರಬಹುದು. ನಿಮ್ಮವರೇ ಕಣ್ಮರೆಯಾಗಿ ಆತಂಕ ಸೃಷ್ಟಿಯಾಗುವುದು. ಸಮಯವನ್ನು ವ್ಯರ್ಥಮಾಡದೇ ಸದ್ವಿನಿಯೋಗ ಮಾಡಿಕೊಳ್ಳುವುದು ಉತ್ತಮ. ಕೃಷಿಯನ್ನು ನಂಬಿದವರಿಗೆ ಸ್ವಲ್ಪ ಕಷ್ಟವಾಗಲಿದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಕಣ್ತಪ್ಪಿನಿಂದ ಆದ ಸಣ್ಣ ಅನಾಹುತವೂ ದೊಡ್ಡ ರೂಪವನ್ನು ಪಡೆಯಬಹುದು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.
ಸಿಂಹ ರಾಶಿ: ಅಧಿಕಾರದ ಹಿಡಿತ ತಪ್ಪಿಹೋಗಲಿದ್ದು, ಯಾರದೋ ಮೂಲಕ ಪ್ರಯತ್ನಿಸುವಿರಿ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಸಂದರ್ಭಕ್ಕೆ ತಕ್ಕಹಾಗೆ ನಿಮ್ಮನ್ನು ಪರಿವರ್ತನೆ ಮಾಡಿಕೊಂಡರೆ ಯಾವುದೂ ಕಷ್ಟವಾಗದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ಎದುರಾಗಬಹುದು. ಆರೋಗ್ಯದಲ್ಲಿ ದಣಿವು ಮತ್ತು ಒತ್ತಡ ಕಾಡಬಹುದು. ಮನೆಯಲ್ಲಿ ಸಣ್ಣ ಗೊಂದಲ ಮೂಡುವ ಸಾಧ್ಯತೆ. ಹಿರಿಯರ ಸಲಹೆ ಪಾಲಿಸಿದರೆ ಲಾಭ. ಇಂದು ನಿಮ್ಮ ಮಾತಿನ ಹರಿತ ಮುಂದಿನವರನ್ನು ಘಾಸಿ ಮಾಡೀತು. ಬಾಲಿಶ ಆಲೋಚನೆಯನ್ನು ಬಿಡುವುದು ಉತ್ತಮ. ಬೆಂಕಿಯಿಂದ ಸುಡಲೂಬಹುದು, ದೀಪವನ್ನೂ ಬೆಳಗಬಹುದು. ನಿರ್ಧಾರಗಳು ನಿಮ್ಮ ಕೈಯಲ್ಲಿ ಇರುವುದು. ನಿಮ್ಮ ದೃಷ್ಟಿ ವಿಶಾಲವಾಗಿ ಇರಲಿ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು. ಅದಕ್ಕೆ ಏನನ್ನಾದರೂ ಹೇಳಬೇಡಿ. ಗೆಲುವಿಗಾಗಿ ಅಧಿಕ ಶ್ರಮದ ಅವಶ್ಯಕತೆ ಇರಲಿದೆ.
ಕನ್ಯಾ ರಾಶಿ: ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ವ್ಯಾಮೋಹದಿಂದ ಕೆಲವನ್ನು ನೀವು ಬಿಡುವುದು ಕಷ್ಟವಾದೀತು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರಾದರೂ ಅವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ಸಾಲವನ್ನು ತೀರಿಸಲು ಕೆಲವು ದಿನದ ಸಮಯಾವಕಾಶ ಕೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆರೋಗ್ಯದಲ್ಲಿ ಸಾಮಾನ್ಯ ಚುರುಕುತನ ಕಂಡುಬರುತ್ತದೆ. ಸಂಗಾತಿಯೊಂದಿಗೆ ಸಿಹಿ ಕ್ಷಣ ಕಳೆಯುವಿರಿ. ಸ್ನೇಹಿತರೊಂದಿಗೆ ಸುಖಕರ ಮಾತುಕತೆ. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ತಂದೆಯಿಂದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿಮ್ಮ ಬಳಿ ಬಂದವರಿಗೆ ಸಾಂತ್ವನದ ಸುಖವು ಬೇಕಾಗಿರಬಹುದು.
ತುಲಾ ರಾಶಿ: ಇಂದು ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಗುಣಾತ್ಮಕತೆಯಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ. ಕರ್ತವ್ಯದ ವಿಚಾರದಲ್ಲಿ ನೀವು ಸೋಲುವಿರಿ. ಯಾವುದನ್ನೂ ಮೇಲ್ನೋಟದಿಂದ ತೀರ್ಮಾನಿಸುವುದು ಬೇಡ. ಹಳೆಯ ಸಂಪರ್ಕಗಳು ಉದ್ಯೋಗ ಕ್ಷೇತ್ರದಲ್ಲಿ ಸಹಕಾರ ನೀಡಬಹುದು. ದೂರದ ಪ್ರಯಾಣ ಸಾಧ್ಯತೆ ಇದೆ. ಹಿರಿಯರಿಂದ ಪ್ರೋತ್ಸಾಹ ಸಿಗುತ್ತದೆ. ದಿನಾಂತ್ಯದಲ್ಲಿ ನಿಮ್ಮ ಶ್ರಮ ಫಲ ನೀಡುವುದರಿಂದ ತೃಪ್ತಿ ಅನುಭವಿಸುತ್ತೀರಿ. ಎಲ್ಲ ಮೋಡಗಳೂ ಮಳೆಯನ್ನು ಸುರಿಸುವುದಿಲ್ಲ. ಹಣದ ಅನಿವಾರ್ಯತೆ ಇದ್ದರೂ ಸಿಕ್ಕುವುದು ಕಷ್ಟವಾದೀತು. ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮಗಿರುವ ಹೊಣೆಗಾರಿಕೆ ತಪ್ಪಬಹುದು. ಪ್ರಯಾಣದಲ್ಲಿ ಜಾಗರೂಕತೆ ಅವಶ್ಯಕ. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳನ್ನು ನೀವು ಕೇಳುವಿರಿ
ವೃಶ್ಚಿಕ ರಾಶಿ: ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಸ್ವಾರ್ಥವನ್ನು ಬಿಟ್ಟು ಆಚೆಗೆ ಬಂದಾಗ ನಿಮ್ಮ ಬುದ್ಧಿಯೂ ವಿಕಾಸವಾಗುತ್ತದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ಸ್ನೇಹಿತರೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಹರ್ಷಭರಿತ ವಾತಾವರಣ ಸಿಗಲಿದೆ. ಇಂದು ನಿಮ್ಮ ನಾಯಕತ್ವ ಗುಣ ಹೊರಹೊಮ್ಮುತ್ತದೆ. ಸಂಗಾತಿಯ ಕೆಲವು ವರ್ತನೆಗಳು ನಿಮಗೆ ವಿಚಿತ್ರ ಎನಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ಕ್ರೀಡೆಗೆ ಸಂಬಂಧಿಸಿದ ವಸ್ತುಗಳಿಂದ ಲಾಭವು ಸಿಗುವುದು. ನೀವು ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು. ಭಕ್ತಿ ಇದ್ದರೂ ಅದನ್ನು ಸದ್ವಿನಿಯೋಗಮಾಡಲು ಸಮಯ ಸಾಕಾಗದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು. ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ಕೆಲವನ್ನು ನೀವು ಸಣ್ಣವರಿಂದ ಕಲಿಯಬೇಕಾಗುವುದು. ನಿಮ್ಮ ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು.
ಧನು ರಾಶಿ: ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ ನಿಮಗೆ ಖುಷಿಯನ್ನು ಕೊಡದು. ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು. ಸಂಗಾತಿಯ ತಪ್ಪನ್ನು ಹೇಳುವ ರೀತಿಯಲ್ಲಿ ಹೇಳಿ. ಇಲ್ಲವಾದರೆ ಸುಮ್ಮನೇ ವೈಮನಸ್ಯ ಉಂಟಾಗಬಹುದು. ಆರೋಗ್ಯದಲ್ಲಿ ಚುರುಕುತನ ಮತ್ತು ಶಕ್ತಿ ಕಂಡುಬರುತ್ತದೆ. ನಿರ್ಣಾಯಕ ನಿರ್ಧಾರಗಳಿಗೆ ಇದು ಉತ್ತಮ ಕಾಲ. ಪ್ರವಾಸಕ್ಕೆ ಅನುಕೂಲಕರ ದಿನ. ಆಪ್ತರ ಬೆಂಬಲದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮರಳಿ ಯತ್ನ ಮಾಡುವುದೇ ಸೋಲಿನಿಂದ ಕಲಿಯುವ ಪಾಠ. ಎಲ್ಲ ಸಮಯದಲ್ಲಿಯೂ ನಿಮ್ಮ ಮಾತು ಸರಿಯಲ್ಲ. ಹಿರಿಯರಿಗೆ ಎದುರಾಡುವುದು ನಿಮಗೆ ಶೋಭೆಯಾಗದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಖರ್ಚಿನ ಬಗ್ಗೆ ಅಂದಾಜು ಇಲ್ಲದೇ ಕಾರ್ಯವನ್ನು ಒಪ್ಪಿಕೊಳ್ಳುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ.
ಮಕರ ರಾಶಿ: ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಯುವಕರಲ್ಲಿ ಅಧಿಕ ಉತ್ಸಾಹ ಕಾಣಿಸುವುದು. ದಾಂಪತ್ಯದಲ್ಲಿ ಸಾಮರಸ್ಯವು ಸ್ವಲ್ಪವೇ ಬರಲಿದೆ. ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ ಮಾತನ್ನು ಮಾತ್ರ ನಂಬಿ. ಅನ್ಯರ ಮಾತನ್ನು ಕೇಳಿಸಿಕೊಳ್ಳುವುದು ಬೇಡ. ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಅವಶ್ಯ. ಹಿರಿಯರ ಮಾತುಗಳನ್ನು ಗೌರವಿಸುವುದು ಒಳಿತು. ದಿನಾಂತ್ಯದಲ್ಲಿ ಮನಸ್ಸು ಶಾಂತಿಯಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಶ್ರದ್ಧೆಯ ಕೊರೆತೆಯು ಕಾಣಿಸುವುದು. ಕಛೇರಿಯಲ್ಲಿ ಕೆಲವರ ಕೆಲಸವು ನಿಮ್ಮ ಮೇಲೆ ಬರಬಹುದು. ಸಾಧ್ಯವಾದಷ್ಟು ಮಾಡಿ. ನಕಾರಾತ್ಮಕ ಪ್ರತಿಕ್ರಿಯೆ ಬೇಡ. ಮಕ್ಕಳ ವಿಚಾರದಲ್ಲಿ ಸಕಾರಾತ್ಕ ಬೆಂಬಲವನ್ನು ನೀಡಿ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಮಾತುಗಳನ್ನು ಬೇಕಾದಲ್ಲಿ ಮಾತ್ರ ಬಳಸಿ.
ಕುಂಭ ರಾಶಿ: ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ಬದಲಾವಣೆಗಾಗಿ ದಿನವನ್ನೋ ವ್ಯಕ್ತಿಗಳನ್ನೋ ಕಾಯುವುದು ಬೇಡ. ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಎದುರಾಗಬಹುದು. ಆದರೆ ತಾಳ್ಮೆ ಕಾಪಾಡಿದರೆ ಉತ್ತಮ ಫಲ. ಕುಟುಂಬದಲ್ಲಿ ಸಣ್ಣ ಅಸಮಾಧಾನಗಳಿದ್ದರೂ ಸಂಜೆ ವೇಳೆಗೆ ಶಾಂತಿ ಸ್ಥಾಪನೆ ಆಗಬಹುದು. ನೆರೆ ಹೊರೆಯ ಕಾರಣದಿಂದ ಮನೆಯಲ್ಲಿ ಮನಸ್ತಾಪ ಬರಬಹುದು. ದೇವತಾರಾಧನೆಗೆ ಹೆಚ್ಚು ಮನಸ್ಸು ತೊಡಗುವುದು. ನಿಮ್ಮ ಇಚ್ಛೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆತುರದ ನಿರ್ಧಾರವನ್ನು ಬಿಟ್ಟು ವಾಸ್ತವವಾಗಿ ಯೋಚಿಸಿ. ಏಕಮುಖಗಮನವು ತೊಂದರೆ ಕೊಟ್ಟೀತು. ಗುರಿಯೆಡೆಗೆ ಪ್ರಯತ್ನವು ನಿರಂತರವಾಗಿರಲಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಪ್ರಯಾಣದ ಉದ್ದೇಶವೇ ಬದಲಾಗಿ ಕೆಲಸವೂ ಕೈಗೂಡದು.
ಮೀನ ರಾಶಿ: ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. ನಿಮ್ಮ ಮಂತ್ರಕ್ಕೆ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು. ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಸಹೋದ್ಯೋಗಿಗಳ ಸಹಕಾರದಿಂದ ಕೆಲವು ನಿರೀಕ್ಷಿತ ಫಲಗಳು ದೊರೆಯಬಹುದು. ಹಣಕಾಸಿನಲ್ಲಿ ಸಣ್ಣ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ. ಮನೆಯ ವಿಷಯದಲ್ಲಿ ಸಂತೋಷದ ಸುದ್ದಿ ಕೇಳಬಹುದು. ಸರ್ಕಾರದಿಂದ ನಿಮಗೆ ಸವಲತ್ತು ಸಿಗಲಿದೆ. ರಾಜಕೀಯದವರ ಒಡನಾಟ ಬೆಳೆಯಬಹುದು. ಸ್ತ್ರೀಯರ ಸಹವಾಸ ಮತ್ತೊಬ್ಬರ ಬಾಯಿಗೆ ಸಿಗಲಿದೆ. ಸಂಗಾತಿಯ ಮೇಲೆ ಅನುಮಾನದ ಅಧಿಕವಾಗುವುದು. ಮಾತನ್ನು ಕಡಿಮೆ ಮಾಡಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ.
– ಲೋಹಿತ ಹೆಬ್ಬಾರ್ – 8762924271 (what’s app only)




