ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರ ಸಿಗುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಗುರುವಾರ ಅವಿವೇಕಿತನ, ಭಯ ದೂರ, ಲೋಪದಿಂದ ಕೋಪ, ಮಹತ್ಕಾರ್ಯಕ್ಕೆ ಧನ ಸಂಗ್ರಹ, ಉತ್ತಮವಸ್ತುವಿಗೆ ಅತಿಮೌಲ್ಯ, ಸಂಗಾತಿಯ ಜೊತೆ ಸುತ್ತಾಟ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸುಕರ್ಮ, ಕರಣ: ಕೌಲವ, ಸೂರ್ಯೋದಯ – 06 : 19 am, ಸೂರ್ಯಾಸ್ತ – 06 : 54 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:12 – 15:46 ಗುಳಿಕ ಕಾಲ 09:29 – 11:03 ಯಮಗಂಡ ಕಾಲ 06:20 – 07:54
ತುಲಾ ರಾಶಿ: ಮಹತ್ಕಾರ್ಯಕ್ಕೆ ಸಾರ್ವಜನಿಕವಾಗಿ ಧನ ಸಂಗ್ರಹ ಮಾಡುವಿರಿ. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಲಾವಿದರಿಗೆ ಪ್ರೋತ್ಸಾಹ ಸಿಗದೇ ಬೇಸರ ಮಾಡಿಕೊಳ್ಳಬೇಕಾಗಬಹುದು. ಸುಪ್ತಪ್ರಜ್ಞೆ ನಿಮ್ಮನ್ನು ಒಳಿತಿನ ಕಡೆಗೆ ಒಯ್ಯುವುದು. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಕೆಲವು ಸ್ವಭಾವವನ್ನು ಸಂಗಾತಿಯು ತಿದ್ದಲು ಬಯಸಬಹುದು. ಅಕಾರಣವಾಗಿ ನಿಮ್ಮವರನ್ನು ನೀವು ತೆಗಳುವಿರಿ. ದೈವದಲ್ಲಿ ನಂಬಿಕೆ ಕಡಿಮೆಯಾದೀತು. ಮಿತ್ರರಿಗೋಸ್ಕರ ತಿರುಗಾಟ ಮಾಡಬೇಕಾದೀತು. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಆಪ್ತರ ಭೇಟಿಯು ಬಹಳ ದಿನಗಳ ಅನಂತರ ಆಗಬಹುದು.
ವೃಶ್ಚಿಕ ರಾಶಿ: ಬೇಕಾದ ವಸ್ತುಗಳ ಖರೀದಿಗೆ ಅಲೆದಾಟ ಮಾಡುವಿರಿ. ಜವಾಬ್ದಾರಿಗಳು ನಿಮಗೆ ಭಾರವೆನಿಸಬಹುದು. ನಿಮ್ಮಿಂದಾಗದು ಎಂಬ ವಿಚಾರವನ್ನು ನೀವು ಹಠವಾಗಿ ತೆಗೆದುಕೊಳ್ಳುವಿರಿ. ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಮನ ಬಂದಂತೆ ಮಾತನಾಡುವುದಕ್ಕೆ ಕಡಿವಾಣ ಬೀಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ಪ್ರೀತಿಯಿಂದ ನಿಮಗೆ ಸಂತೋಷವು ಸಿಗುವುದು. ಇದ್ದಕ್ಕಿದ್ದಂತೆ ಏನ್ನಾದರೂ ಹೊಸತನ್ನು ಮಾಡಲು ಉತ್ಸಾಹ ಬರಲಿದೆ. ಇಂದು ನಿಮ್ಮದೇ ಜಗತ್ತಿನಲ್ಲಿ ಇರುವಿರಿ. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ತಂದೆಯ ಮಾತನ್ನು ಗೌರವಿಸುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಭೂ ವ್ಯವಹಾರದಲ್ಲಿ ಯಶಸ್ಸು ಸಿಗುವುದು.
ಧನು ರಾಶಿ: ಗುಣಮಟ್ಟದ ವಸ್ತುವನ್ನು ಪಡೆಯಬೇಕಾದರೆ ಹಣವನ್ನು ವ್ಯಯಿಸುವರು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಪರರ ಸುಖದಿಂದ ಅಸೂಯೆಯಾಗಲಿದೆ. ಸ್ತ್ರೀಯರು ನೋವನ್ನು ಅನುಭವಿಸಬೇಕಾದೀತು. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ಅದೃಷ್ಟವು ಕೈಕೊಡುವುದು. ಆಕಸ್ಮಿಕ ಧನಲಾಭವು ಆಗುವುದು. ಹಿರಿಯರು ನಿಮಗೆ ಲಾಭದಾಯಕವಾದ ಕೆಲಸವೊಂದನ್ನು ಮಾಡುವರು. ಅಶಿಸ್ತಿನಿಂದ ಇಂದು ನೀವು ವರ್ತಿಸುವಿರಿ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರಣ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ವಿದ್ಯಾಭ್ಯಾಸದಲ್ಲಾದ ಪ್ರಗತಿಯು ಖುಷಿ ಕೊಡುವುದು.
ಮಕರ ರಾಶಿ: ದೂರದಲ್ಲಿದ್ದ ಮಕ್ಕಳ ಆಗಮನದಿಂದ ಹಬ್ಬದ ವಾತಾವರಣ ಇರಲಿದೆ. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಬೇಡದ ಕಡೆ ಹಣವನ್ನು ವ್ಯಯಿಸುವುದು ಮನೆಯವರಿಗೆ ಇಷ್ಟವಾಗದು. ದಿನದಿಂದ ದಿನಕ್ಕೆ ಸಾಮರ್ಥ್ಯ ಬೆಳೆಯುವತ್ತ ಗಮನವಿರಲಿ. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಅಧಿಕೃತವಾಗಿ ನಿಮಗೆ ಆಧಿಕಾರವು ನಿಮಗೆ ದೊರೆಯಬಹುದು. ಸಂತಾನವಿಲ್ಲ ಎಂಬ ಚಿಂತೆ ನಿಮ್ಮನ್ನು ಅಧಿಕವಾಗಿ ಕಾಡಲಿದೆ. ನೆಮ್ಮದಿಗೆಂದು ವಾಯುವಿಹಾರಕ್ಕೆ ಹೋಗಲು ಇಚ್ಛಿಸುವಿರಿ. ಧೈರ್ಯದಿಂದ ನೀವು ಕಾರ್ಯಗಳನ್ನು ಮಾಡಲು ಹಿಂಜರಿಯುವಿರಿ. ಏನನ್ನಾದರೂ ಮಾತನಾಡಿ ಸಿಕ್ಕಿಬೀಳುವಿರಿ. ತಪ್ಪನ್ನು ನೀವೇ ತಿದ್ದಿಕೊಂಡರೆ ಒಳ್ಳೆಯದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ.
ಕುಂಭ ರಾಶಿ: ಕುಟುಂಬದ ಮುಂದೆ ಬೇರೆಲ್ಲ ನಗಣ್ಯವಾಗಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೃತ್ತಿಯು ಸಾಕೆನಿಸಬಹುದು. ಅಸಧುನಿಕ ಉಪಕರಣಗಳ ಬಳಕೆ ಹೆಚ್ಚಾಗುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ವ್ಯವಹಾರವನ್ನು ಮಾಡುವಾಗ ನೀವು ಗ್ರಾಹಕರ ಬಗ್ಗೆ ಗಮನವಿಡುವುದು ಮುಖ್ಯವಾಗಲಿದೆ. ಯಂತ್ರಗಳ ಮಾರಾಟವು ನಿಮಗೆ ಅಧಿಕಲಾಭವನ್ನು ಕೊಟ್ಟೀತು. ಮನಶ್ಚಾಂಚಲ್ಯಕ್ಕೆ ಉಪಶಮನ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ನಿರ್ಧಾರವನ್ನು ನೀವು ಇಂದು ಸಡಿಲಮಾಡುವಿರಿ. ಒಂದೇ ಕೆಲಸದಿಂದ ಎರಡು ಫಲವನ್ನು ಪಡೆಯುವ ಸಾಧ್ಯತೆ ಇದೆ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ಹೂಡಿಕೆಯಿಂದ ಇಂದು ದೂರವಿರುವಿರಿ. ಕುಟುಂಬದ ಮೇಲಿರುವ ಅಭಿಪ್ರಾಯವು ಬದಲಾಗುವುದು.
ಮೀನ ರಾಶಿ: ನೇರ ಮಾತುಗಳನ್ನು ಸಂದರ್ಭ ನೋಡಿ ಆಡುವಿರಿ. ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಉದ್ಯಮವನ್ನು ವಿಸ್ತರಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡುವಿರಿ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ. ಇಂದು ನಿಮಗೆ ಹಿತಕರವಾದ ವಾರ್ತೆತೊಂದು ಬರಲಿದ್ದು ಮನಸ್ಸು ಉಲ್ಲಾಸದಿಂದ ಕೂಡಿರಲಿದೆ. ಕುಟುಂಬದ ಜೊತೆ ಸಂತೋಷದಿಂದ ಕಾಲಕಳೆಯುವಿರಿ. ನಿಮ್ಮಿಷ್ಟವರ ಜೊತೆ ಸಮಯವನ್ನು ಕಳೆಯುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ಅತ್ತ ಕಡೆ ಗಮನವಿರುವುದು. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.




