AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ

ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದನ್ನು ನೋಡಣ.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ
ಕುಜ ಹಾಗೂ ಶುಕ್ರರ ಯೋಗದಿಂದ ಯಾರಿಗೆ ಏನಾಗಲಿದೆ?
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 24, 2023 | 10:06 PM

Share

ಕುಜ ಹಾಗೂ ಶುಕ್ರರು ಜಾತಕದಲ್ಲಿ ವಿಶೇಷ ಗ್ರಹಗಳಾಗಿರುತ್ತವೆ. ಈ ಎರಡು ಗ್ರಹಗಳಿಂದ ವಿವಾಹ ಹಾಗೂ ಪ್ರೀತಿಯ ವಿಚಾರವನ್ನು ಹೆಚ್ಚಾಗಿ ಚಿಂತಿಸುತ್ತಾರೆ. ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದುದನ್ನು ನೋಡಣ.

ವೃಶ್ಚಿಕ ರಾಶಿ: ಈ ರಾಶಿಯಲ್ಲಿಯೇ ಗ್ರಹಗಳ ಯೋಗವು ಆಗುವ ಕಾರಣ ಈ ರಾಶಿಯವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಆದರೆ ಯಾರನ್ನೇ ಇಷ್ಟಪಡುವುದಾದರೂ ಸುಮ್ಮನೇ ಕುರುಡಾಗಿ ಇಷ್ಟಪಡುವುದು ಬೇಡ. ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಸೂಕ್ತ.

ಮಕರ ರಾಶಿ : ಈ ರಾಶಿಯವರ ಪ್ರತಿಭೆಯ ಹಾಗೂ ಸಾಮರ್ಥ್ಯವನ್ನು ಕಂಡು ಪ್ರೀತಿ ಉಂಟಾಗುವುದು. ಸ್ನೇಹವೇ ಪ್ರೀತಿಯಾಗಿ ಬದಲಾಗುವುದು.

ಇದನ್ನೂ ಓದಿ:Astrology: 2024 ರಲ್ಲಿ, ಈ ನಾಲ್ಕು ರಾಶಿಯವರ ಭವಿಷ್ಯ ಬದಲಾಗಲಿದೆ, ಇದು ಆರ್ಥಿಕ ಲಾಭದ ಸಂಕೇತ

ಕುಂಭ ರಾಶಿ : ಈ ರಾಶಿಯವರಿಗೂ ಯಾರದ್ದಾದರೂ ಮೇಲೆ ಪ್ರೀತಿ ಉಂಟಾಗಬಹುದು. ಆದರೆ ಒಂದೇ ಕಡೆಯ ಪ್ರೀತಿಯು ಇರಲಿದೆ. ಇನ್ನೊಂದು ಕಡೆಯಿಂದ ನಿಮಗೆ ಯಾವುದೇ ಸೂಚನೆಯೂ ಸಿಗದು ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಭಾವವಿದೆ ಎನ್ನುವುದನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಆಗದು. ಆತಂಕವೂ ಒಂದುಕಡೆ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ವೃಷಭ ರಾಶಿ :ಈ ರಾಶಿಯು ಶುಕ್ರನ ರಾಶಿಯಾದ ಕಾರಣ ವೃಶ್ಚಿಕ ಹಾಗೂ ವೃಷಭ ರಾಶಿಯವರ ಮೇಲೆ ಪರಸ್ಪರ ಪ್ರೀತಿಯು ಉಂಟಾಗಬಹುದು. ಪ್ರೇಮಿಗಳ ವಿವಾಹವು ನಿಶ್ಚಯವಾಗುವುದು.

ಮಿಥುನ ರಾಶಿ : ಈ ರಾಶಿಯವರಿಗೆ ಪ್ರೀತಿಯು ಉಂಟಾದರೂ ಪೂರ್ಣವಾದ ಒಪ್ಪಿಗೆಯು ಇರಲಾರದು. ಬಹಳ ಜಿಜ್ಞಾಸೆಗಳು ಇವರ ಮನಸ್ಸಿನಲ್ಲಿ ಇರುವುದು. ಬಂಧುಗಳ ನಡುವೆಯೇ ಪ್ರೀತಿಯು ಅಂಕುರಿಸಬಹುದು.

– ಲೋಹಿತ ಹೆಬ್ಬಾರ್, ಇಡುವಾಣಿ

Published On - 10:00 pm, Sun, 24 December 23

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ