AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ

ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದನ್ನು ನೋಡಣ.

ಕುಜ-ಶುಕ್ರರ ಯೋಗದಿಂದ ಈ ರಾಶಿಯವರಿಗೆ ವಿವಾಹ,ಪರಸ್ಪರ ಪ್ರೀತಿ
ಕುಜ ಹಾಗೂ ಶುಕ್ರರ ಯೋಗದಿಂದ ಯಾರಿಗೆ ಏನಾಗಲಿದೆ?
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 24, 2023 | 10:06 PM

Share

ಕುಜ ಹಾಗೂ ಶುಕ್ರರು ಜಾತಕದಲ್ಲಿ ವಿಶೇಷ ಗ್ರಹಗಳಾಗಿರುತ್ತವೆ. ಈ ಎರಡು ಗ್ರಹಗಳಿಂದ ವಿವಾಹ ಹಾಗೂ ಪ್ರೀತಿಯ ವಿಚಾರವನ್ನು ಹೆಚ್ಚಾಗಿ ಚಿಂತಿಸುತ್ತಾರೆ. ನಾಳೆಯಿಂದ ಈ ಎರಡೂ ಗ್ರಹಗಳ ಯೋಗವು ಆಗಲಿದೆ. ಕುಜನು ಸ್ವಕ್ಷೇತ್ರವಾದ ವೃಶ್ಚಿಕ ರಾಶಿಯಲ್ಲಿ ಇರುವನು ಹಾಗೂ ಶುಕ್ರನು ಸ್ವಕ್ಷೇತ್ರವಾದ ತುಲಾದಲ್ಲಿ ಇರುವನು. ನಾಳೆಯಿಂದ ಶುಕ್ರನು ಕುಜನ ಸ್ವಕ್ಷೇತ್ರವಾದ ವೃಶ್ಚಿಕರಾಶಿಯನ್ನು ಪ್ರವೇಶಿಸುವನು. ಯಾವ ರಾಶಿಯವರಿಗೆ ವಿವಾಹ ಹಾಗೂ ಪರಸ್ಪರ ಪ್ರೀತಿ ಉಂಟಾಗಬಹುದು ಎನ್ನುವುದುದನ್ನು ನೋಡಣ.

ವೃಶ್ಚಿಕ ರಾಶಿ: ಈ ರಾಶಿಯಲ್ಲಿಯೇ ಗ್ರಹಗಳ ಯೋಗವು ಆಗುವ ಕಾರಣ ಈ ರಾಶಿಯವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಆದರೆ ಯಾರನ್ನೇ ಇಷ್ಟಪಡುವುದಾದರೂ ಸುಮ್ಮನೇ ಕುರುಡಾಗಿ ಇಷ್ಟಪಡುವುದು ಬೇಡ. ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಸೂಕ್ತ.

ಮಕರ ರಾಶಿ : ಈ ರಾಶಿಯವರ ಪ್ರತಿಭೆಯ ಹಾಗೂ ಸಾಮರ್ಥ್ಯವನ್ನು ಕಂಡು ಪ್ರೀತಿ ಉಂಟಾಗುವುದು. ಸ್ನೇಹವೇ ಪ್ರೀತಿಯಾಗಿ ಬದಲಾಗುವುದು.

ಇದನ್ನೂ ಓದಿ:Astrology: 2024 ರಲ್ಲಿ, ಈ ನಾಲ್ಕು ರಾಶಿಯವರ ಭವಿಷ್ಯ ಬದಲಾಗಲಿದೆ, ಇದು ಆರ್ಥಿಕ ಲಾಭದ ಸಂಕೇತ

ಕುಂಭ ರಾಶಿ : ಈ ರಾಶಿಯವರಿಗೂ ಯಾರದ್ದಾದರೂ ಮೇಲೆ ಪ್ರೀತಿ ಉಂಟಾಗಬಹುದು. ಆದರೆ ಒಂದೇ ಕಡೆಯ ಪ್ರೀತಿಯು ಇರಲಿದೆ. ಇನ್ನೊಂದು ಕಡೆಯಿಂದ ನಿಮಗೆ ಯಾವುದೇ ಸೂಚನೆಯೂ ಸಿಗದು ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಭಾವವಿದೆ ಎನ್ನುವುದನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಆಗದು. ಆತಂಕವೂ ಒಂದುಕಡೆ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ವೃಷಭ ರಾಶಿ :ಈ ರಾಶಿಯು ಶುಕ್ರನ ರಾಶಿಯಾದ ಕಾರಣ ವೃಶ್ಚಿಕ ಹಾಗೂ ವೃಷಭ ರಾಶಿಯವರ ಮೇಲೆ ಪರಸ್ಪರ ಪ್ರೀತಿಯು ಉಂಟಾಗಬಹುದು. ಪ್ರೇಮಿಗಳ ವಿವಾಹವು ನಿಶ್ಚಯವಾಗುವುದು.

ಮಿಥುನ ರಾಶಿ : ಈ ರಾಶಿಯವರಿಗೆ ಪ್ರೀತಿಯು ಉಂಟಾದರೂ ಪೂರ್ಣವಾದ ಒಪ್ಪಿಗೆಯು ಇರಲಾರದು. ಬಹಳ ಜಿಜ್ಞಾಸೆಗಳು ಇವರ ಮನಸ್ಸಿನಲ್ಲಿ ಇರುವುದು. ಬಂಧುಗಳ ನಡುವೆಯೇ ಪ್ರೀತಿಯು ಅಂಕುರಿಸಬಹುದು.

– ಲೋಹಿತ ಹೆಬ್ಬಾರ್, ಇಡುವಾಣಿ

Published On - 10:00 pm, Sun, 24 December 23

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ