AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ವೃತ್ತಿ ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ

ಇಂದಿನ (2023 ಮೇ​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nitya Bhavishya: ವೃತ್ತಿ ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ
ಇಂದಿನ ರಾಶಿ ಭವಿಷ್ಯ
ಗಂಗಾಧರ​ ಬ. ಸಾಬೋಜಿ
|

Updated on: May 28, 2023 | 12:02 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ 05:17 ರಿಂದ 6:58ರ ವರೆಗೆ, ಯಮಘಂಡ ಕಾಲ 12:30 ರಿಂದ 02:06ರ ವರೆಗೆ, ಗುಳಿಕ ಕಾಲ 03:43 ರಿಂದ 05:19ರ ವರೆಗೆ.

ಮೇಷ: ನೀವು ಇಂದು ನಿಯಮಕ್ಕೆ ಬದ್ಧರಾಗಿ ಕಾರ್ಯವನ್ನು ಮಾಡುವಿರಿ. ಸ್ವತಂತ್ರ ಆಲೋಚನೆಗಳು ನಿಮಗೆ ಖುಷಿ ಕೊಟ್ಟೀತು. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹಿರಿಯರ ಚಿಂತನೆ ನಡೆಸುವಿರಿ. ಬಂಧುಗಳ ಸಹಯೋಗದಿಂದ‌ ವಾಹನವನ್ನು ಪಡೆಯುವಿರಿ. ಸಂಗಾತಿಯನ್ನು ಪ್ರೀತಿಸುವ ಮನಸ್ಸು ಇದ್ದರೂ ಅನಿರೀಕ್ಷಿತ ಕಾರ್ಯಗಳು ಅದನ್ನು ಬಿಟ್ಟುಕೊಡುವುದಿಲ್ಲ. ಕಲಹದ ಸನ್ನಿವೇಶಗಳು ಬಂದಾಗ ಅದನ್ನು ತಪ್ಪಿಸಿ ಶಾಂತಗೊಳಿಸುವಿರಿ. ನಿಮ್ಮ ಜೊತೆ ಮಾತನಾಡಲು ಮನೆಯಲ್ಲಿ ಭಯಪಟ್ಟಾರು. ತಾಳ್ಮೆಯಿಂದ ಕುಟುಂಬವನ್ನು ನಡೆಸುವ ಕಲೆ ಒಲಿದಿದೆ.

ವೃಷಭ: ನಿಮಗೆ ನಿಮ್ಮ ದಿನ ನಿತ್ಯದ ಕೆಲಸಗಳೇ ಮುಖ್ಯವಾಗಿ ಉಳಿದವು ನಗಣ್ಯವೆನಿಸೀತು. ಮೋಜಿನಲ್ಲಿ ಹಣವನ್ನು ಕಳೆದುಕೊಳ್ಳುವಿರಿ. ವೃತ್ತಿಯನ್ನು ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ.‌ ಸಹೋದರನಿಂದ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಸಹಾಯವಾಗಲಿದೆ. ಹಣದ ಉಳಿತಾಯದ ಬಗ್ಗೆ ಗಮನವಿರಲಿ. ಅನಿವಾರ್ಯವಾಗಿ ಖರ್ಚಿಗೆ ದಾರಿಗಳು ತೆರೆದುಕೊಳ್ಳುವುದು. ನಿಮಗೆ ಸಿಗುವ ಸೂಚನೆಗಳನ್ನು ಅರಿತು ಮುನ್ನಡೆಯಿರಿ. ಬಂದಿದ್ದನ್ನು ನೀವು ಸ್ವೀಕರಿಸುವುದು ಸ್ವಭಾವವಾಗಿಸಿಕೊಂಡಿರುವಿರಿ.

ಮಿಥುನ: ಹಣದಿಂದ ಎಲ್ಲವೂ ಅಸಾಧ್ಯ ಎಂದು ತಿಳಿದು ಹಣದ ಮೋಹವು ಕಡಿಮೆ ಆದೀತು. ಉದ್ವೇಗದಲ್ಲಿ ಏನ್ನಾದರೂ ಹೇಳಿ ಬಿಡುವಿರಿ. ಅನ್ಯರನ್ನು ಹಾಸ್ಯ ಮಾಡಬಹುದು. ನಿಮ್ಮ ಕುಂದುಕೊರೆತಗಳ ಬಗ್ಗೆ ಲಕ್ಷ್ಯ ವಹಿಸಿ. ನೀರಿನ ವಿಚಾರದಲ್ಲಿ ಹುಡುಗಾಟ ಬೇಡ. ಅವಸರ ವಾಹನ ಸಂಚಾರದಿಂದ ಹೊರಬರುವದು ಒಳ್ಳೆಯದು. ಅಲ್ಪ ಕಾಲದ ಶ್ರದ್ಧೆಯು ನಿಮಗೆ ಏನನ್ನೂ ತಂದುಕೊಡದು. ಪ್ರೀತಿಯಿಂದ ಮನೆಯ ಕೆಲಸವನ್ನು ಮಾಡಿ. ನಿಮ್ಮ ವ್ಯಕ್ತಿತ್ವವನ್ನು ಇಂದು ನೋಡಿಕೊಳ್ಳುವ ಮನಸ್ಸಾದೀತು.

ಕಟಕ: ವಾತಕ್ಕೆ ಸಂಬಂಧಿಸಿದ ರೋಗವು ಹೆಚ್ಚಾಗಲಿದ್ದು ನಿರ್ಲಕ್ಷ್ಯ ಮಾಡದೇ ಔಷಧವನ್ನು ಮಾಡಿ. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಮಕ್ಕಳ ಒತ್ತಾಯಕ್ಕೆ ಅವರ ಜೊತೆ ವಿದೇಶಕ್ಕೆ ಹೋಗಲಿದ್ದೀರಿ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮ್ಮ ವಿದ್ಯಾಭ್ಯಾಸದ ಕುರಿತು ಅಚ್ಚರಿ ಪಡಬಹುದು. ಆಲಸ್ಯದಿಂದ ನಿಮಗೆ ಅವಕಾಶಗಳು ಸಿಗದಾದೀತು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿಯನ್ನು ಹೊಂದುವರು. ಸಂಗಾತಿಯನ್ನು ಪ್ರೀತಿಸುವಿರಿ.

ಸಿಂಹ: ವ್ಯವಹಾರದಲ್ಲಿ ನಿಮಗೆ ತಿಳಿವಳಿಕೆ ಕೊರತೆ ಎಂದು ಗೊತ್ತಾಗಬಹುದು. ವಿವಾಹಜೀವನದ ಚಿಂತೆ ನಿಮ್ಮನ್ನು ಕಾಡಬಹುದು. ತಾಯಿಯಿಂದ ನಿಮಗೆ ಸಾಂತ್ವನ‌ ಸಿಕ್ಕೀತು. ಪತಿಯ ವರ್ತನೆಯನ್ನು ಸರಿಯಾಗಿ ಗಮನಿಸದೇ ಮಾತನಾಡುವಿರಿ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅಧಿಕಾರಿಗಳು ಹಿಂಪಡೆಯುವ ಯೋಚನೆ ಮಾಡುವರು. ಕಷ್ಟವಾದರೂ ನಿಮ್ಮ ಮಾರ್ಗವನ್ನು ಬದಲಿಸಬೇಡಿ. ಉಳಿದವರು ಅಪಹಾಸ್ಯ ಮಾಡಿಯಾರು. ಗೊಂದಲಗಳ ನಿವಾರಣೆಗೆ ತಜ್ಞರನ್ನು ಭೇಟಿಯಾಗಿ. ಸಕಾಲದಲ್ಲಿ ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಿ.

ಕನ್ಯಾ: ನಿಮ್ಮ ಯೋಚನೆಗಳಿಗೆ ಸಂಗಾತಿಯಿಂದ ಬೆಂಬಲ ಸಿಗಬಹುದು. ಅದರ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನವೇ ಆಗಬೇಕಾದೀತು. ಉದ್ಯೋಗದಲ್ಲಿ ಭಡ್ತಿ ಸಿಗುವ ವಿಚಾರವು ನಿಮಗೆ ಸ್ನೇಹಿತರಿಂದ ತಿಳಿಯಲಿದೆ. ಮನೆಯಲ್ಲಿ ಇಂದು ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಯಂತ್ರೋಪಕರಣದಿಂದ ಲಾಭವಾಗಲಿದೆ. ಬೇಕಾದ ಎಲ್ಲ ವಸ್ತುಗಳನ್ನು ಇಂದೇ ತೆಗೆದುಕೊಳ್ಳುವ ಅಗತ್ಯವಿಲ್ಲ. ಬೇಕಾದ್ದಷ್ಟನ್ನೇ ಪಡೆಯಿರಿ. ನಿಮ್ಮ ನೇರ ಮಾತು ಕಸಿವಿಸಿಯನ್ನು ಉಂಟುಮಾಡೀತು. ಸುಳ್ಳನ್ನು ಹೇಳುವುದು ಗೊತ್ತಾದೀತು.

ತುಲಾ: ನಿಮ್ಮ ಉದ್ಯಮದ ಪೂರ್ವಾವಲೋಕನ ಮಾಡಿದರೆ ನಿಮಗೆ ಸಂತೋಷವಾಗುವುದು.‌ ಸಂಬಂದಗಳಲ್ಲಿ ಮಿತಿಯನ್ನು ಇಟ್ಟುಕೊಳ್ಳುವುದು ಲೇಸು ಎನಿಸೀತು. ಅನುಭವಿಗಳಿಂದ ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳುವಿರಿ. ಇನ್ನೊಬ್ಬರ ಹಣವನ್ನು ತೀರಿಸಿ ಋಣಮುಕ್ತರಾಗುವಿರಿ. ಇದರಿಂದ ನಿಮಗೆ ಹೆಚ್ಚು ಸಮಾಧಾನ ಸಿಗಲಿದೆ. ನಿಮ್ಮವರು ಹಣವನ್ನು ಹೂಡಲು ಒತ್ತಾಯಿಸಬಹುದು. ಎತ್ತರದ ಪ್ರದೇಶಕ್ಕೆ ಸುತ್ತಾಡಲು ಸ್ನೇಹಿತ ಜೊತೆ ಹೋಗಲಿದ್ದೀರಿ. ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಲು ಬಹಳ ಪ್ರಯತ್ನಪಡುವಿರಿ.

ವೃಶ್ಚಿಕ: ನಿಮ್ಮ ವೃತ್ತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳವುದು ಬೇಡ. ನಿಮ್ಮ ವೇತನವನ್ನು ತಿಳಿದು ಆಡಿಕೊಳ್ಳಬಹುದು. ಸಾರ್ವಜನಿಕ ಸಮಾರಂಭಗಳಿಗೆ ಭಾಗವಹಿಸಲು ನೀವು ಹಿಂದೇಟು ಹಾಕಬಹುದು. ಉದ್ಯೋಗದಲ್ಲಿ ಕೆಲವು ನಿಯಮಗಳು ಬದಲಾಗಿದ್ದು ಅದನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುವಿರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲವು ಲಭ್ಯವಾಗುವುದು.‌ ಎಂದೋ ಕಲಿತ ವಿದ್ಯೆಯು ಉಪಯೋಗಕ್ಕೆ ಬರುವುದು‌. ಅನಿಯಮಿತ ಕಾಲದಲ್ಲಿ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಕಾರ್ಯದ ನಿಮಿತ್ತ ಓಡಾಟದಿಂದ ಆಯಾಸವಾಗಬಹುದು.

ಧನಸ್ಸು: ಹೊಸ ಉದ್ಯೋಗವನ್ನು ಹುಡುಕುವ ಭರದಲ್ಲಿ ಮೋಸಕ್ಕೆ ಸಿಲುಕಿಕೊಳ್ಳಬಹುದು. ಅತಿಯಾದ ಆಸೆಯಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳಬಹುದು. ಕುಟುಂಬವು ನಿಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು ನಿಮಗೆ ಬೇಸರ ತರಿಸುವುದು. ಆಸ್ತಿಯಲ್ಲಿ ಪಾಲನ್ನು ಪಡೆಯಲು ಸ್ನೇಹಿತರು ಕುಮ್ಮಕ್ಕು ಕೊಟ್ಟಾರು. ಇಂದಿನ‌ ಸಮಾರಂಭದಲ್ಲಿ ಪರಿಚಿತರ ಭೇಟಿಯು ಸಮಾಧಾನವನ್ನು ನೀಡುವುದು. ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಸ್ವಲ್ಪ ಉತ್ಸಾಹವನ್ನು ತೋರಿಸುವರು. ಅದು ಹಾಗೆಯೇ ಇರುವಂತೆ ಪೋಷಕರು ನೋಡಿಕೊಳ್ಳಬೇಕು.

ಮಕರ: ಉದ್ಯಮಿಗಳಾಗಿರುವ ನಿಮಗೆ ಉದ್ಯಮದಲ್ಲಿ ಉಂಟಾದ ಸಣ್ಣ ಬದಲಾವಣೆಯಿಂದ ಕೆಲವು ಕೆಲಸಗಾರರು ಬಿಟ್ಟು ಹೋಗಬಹುದು.‌ ಇಷ್ಟು ದಿನದ ಮಿತ್ರತ್ವವು ನಿಮಗೆ ಸಾಕೆನಿಸಬಹುದು. ವರ್ತನೆಗಳು ನಿಮಗೆ ಮಾನಸಿಕ ಅಸಮತೋಲನವನ್ನು ಉಂಟುಮಾಡೀತು. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಗೊಂದಲ ಬೇಡ. ಒಪ್ಪಿಕೊಂಡ ಮಾತ್ರಕ್ಕೆ ಸೋಲು ಎಂದುಕೊಳ್ಳುವುದು ಬೇಡ. ದಾಂಪತ್ಯದಲ್ಲಿ ಅಹಂಕಾರದಿಂದ ಸಂಬಂಧಗಳ‌ ನಡುವೆ ಬಿರುಕುಬರಬಹುದು. ಹಣಕಾಸಿನ‌ ವಿಚಾರವನ್ನು ಸಹೋದರರ ಜೊತೆ ಕುಳಿತು‌ ಮಾತನಾಡಿ.

ಕುಂಭ: ಕುಟುಂಬದ ಸದಸ್ಯರ ಜೊತೆ ಕುಳಿತು ಅನೌಪಚಾರಿಕ ಮಾತುಗಳನ್ನು ಆಡಿ ಸಂಬಂಧವನ್ನು ಹೊಸತು ಮಾಡುವಿರಿ. ಹಣದ ಬಗ್ಗೆ ಬಹಳ ಚಿಂತಾಕ್ರಾಂತರಾಗಿದ್ದು ಅದನ್ನು ಸ್ನೇಹಿತರು ಮನಗಂಡು ಸಹಾಯ ಮಾಡುವರು. ನಿಮ್ಮ ತಂದೆಯ ಮಾತು ನಿಮಗೆ ಅಸಹ್ಯವಾದರೂ ಅದನ್ನು ತಮಾಷೆಯಾಗಿ ತೆಗೆದುಕೊಂಡು ಸುಮ್ಮನಾಗುವಿರಿ. ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾದೀತು. ಸಂಗಾತಿಯ ಜೊತೆಗಿನ ವ್ಯವಹಾರವು ನಿಮಗೆ ಎಂದಿಗಿಂತ ಹಿತ ಎನಿಸಬಹುದು.

ಮೀನ: ಇಂದು ನಿಮ್ಮ ಕೆಲಸದ ಮೇಲೆ ಪೂರ್ಣವಾಗಿ ಗಮನಹರಿಸಿ. ಅನ್ಯರ ಚಿಂತೆ ನಿಮಗೆ ಬೇಡ. ಬಾಕಿ ಇರುವ ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ. ದಿನವನ್ನು ಮುಂದೆ ಹಾಕುವುದು ಬೇಡ. ಇಂದು ನಿಮ್ಮ ಕಡೆಯಿಂದ ದೊಡ್ಡ ತಪ್ಪು ಆಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯನ್ನು ಹೊಸ ರೀತಿಯಲ್ಲಿ ಪ್ರೀತಿಸಲು ಇಷ್ಟಪಡುವಿರಿ. ಹಣವು ನಿಮಗೆ ಸರಿಯಾದ ಸಮಯಕ್ಕೆ ಸಿಗದೇ ಗಲಿಬಿಲಿಗೊಳ್ಳುವಿರಿ. ಗಂಭೀರವಾದ ಚಿಂತನೆಗೆ ಮನಸ್ಸು ತೊಡಗಿಕೊಳ್ಳದೇ ಬೇರೆ ವಿಚಾರದ ಬಗ್ಗೆಯೇ ಹೆಚ್ಚು ಆಲೋಚಿಸೀತು.

ಲೋಹಿತಶರ್ಮಾ – 8762924271 (what’s app only)

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ