
ಅತಿ ಹೆಚ್ಚಿನ ಶತ್ರು ಬಾಧೆ ಇದ್ದಲ್ಲಿ ಈ ದಿನ ‘ನಾರಾಯಣ ಕವಚ’ ಅಥವಾ ‘ದೇವಿ ಕವಚ’ ಪಾರಾಯಣ ಮಾಡಿ.
ನಿಮ್ಮಲ್ಲಿ ಉದ್ಯೋಗ ಬದಲಾವಣೆಯ ಆಸಕ್ತಿ ಕೆರಳಲಿದೆ. ಒಂದು ವೇಳೆ ಕೆಲ ತಿಂಗಳ ಹಿಂದೆ ಪ್ರಯತ್ನ ಪಟ್ಟು, ಆ ನಂತರದಲ್ಲಿ ಬೇಡ ಎಂದುಕೊಂಡು ಸುಮ್ಮನಾಗಿದ್ದವರು ಸಹ ಈ ದಿನ ಜಾಬ್ ಕನ್ಸಲ್ಟೆನ್ಸಿಗಳ ಮೂಲಕವಾಗಿ ಕೆಲಸಕ್ಕೆ ಪ್ರಯತ್ನಿಸಲಿದ್ದೀರಿ. ನೀವು ಯಾರಿಗಾದರೂ ಸಾಲ ಕೊಟ್ಟು, ಬಹಳ ಸಮಯದಿಂದ ಅದು ವಾಪಸ್ ಬಂದಿಲ್ಲ ಎಂದಾಗಿದ್ದಲ್ಲಿ ಈ ದಿನ ಪ್ರಯತ್ನಿಸಿದಲ್ಲಿ ವಸೂಲಾಗುವ ಸಾಧ್ಯತೆ ಇದೆ.
ಹೆಣ್ಣುಮಕ್ಕಳು ಪ್ರೀತಿ- ಪ್ರೇಮದಲ್ಲಿ ಇದ್ದಲ್ಲಿ ಅಂಥವರಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಇಷ್ಟು ಸಮಯ ಯಾವುದನ್ನು ಒಪ್ಪಿಸುವುದಕ್ಕೆ ಹಾಗೂ ಯಾವ ಬಗ್ಗೆ ತೀರ್ಮಾನಿಸುವುದಕ್ಕೆ ಭಾವನಾತ್ಮಕವಾಗಿ ಬಹಳ ಕಷ್ಟ ಎಂದೆನಿಸಿರುತ್ತದೋ ಅದು ಈ ದಿನ ಸಲೀಸಾಗಿ ಮುಗಿಯಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೋರ್ಸ್ ವೊಂದಕ್ಕೆ ಸೇರುವುದಕ್ಕೆ ತೀರ್ಮಾನ ಮಾಡುವ ಸಾಧ್ಯತೆಗಳಿವೆ.
ಕೆಲವು ಕೆಲಸಗಳನ್ನು ಮಾಡುವುದಕ್ಕೆ ಮೇಲು ನೋಟಕ್ಕೆ ನಿಮಗೆ “ಇಷ್ಟೇ ಅಲ್ಲವಾ” ಎಂದು ಅನಿಸಬಹುದು. ಆದರೆ ಅದನ್ನು ನಿಮ್ಮಿಂದ ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಬೇಕಾದಷ್ಟು ಸಮಯ ಹಾಗೂ ಉತ್ಸಾಹ ಇದೆಯೇ ಎಂಬುದನ್ನು ಆಲೋಚಿಸಿ, ಆ ನಂತರ ಉತ್ತರವನ್ನು ನೀಡಿ. ವಜ್ರ- ಪ್ಲಾಟಿನಂ, ಚಿನ್ನ- ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳ ಖರೀದಿಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿ.
ಲೇಖನ- ಸ್ವಾತಿ ಎನ್.ಕೆ.