AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

August Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಆಗಸ್ಟ್ ತಿಂಗಳ ಈ ವಾರದಲ್ಲಿ ಸೂರ್ಯ, ಗುರು, ಶನಿ, ಮಂಗಳ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಬದಲಾವಣೆಯು 12 ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಸಮಗ್ರ ವಿಶ್ಲೇಷಣೆ ಇಲ್ಲಿದೆ. ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿ ಚಿಹ್ನೆಯು ಧನಲಾಭ, ಉದ್ಯೋಗ ಪ್ರಗತಿ, ಆರೋಗ್ಯ ಮತ್ತು ಮಾನಸಿಕ ಸ್ಥಿತಿಗಳಲ್ಲಿ ಹೇಗೆ ಬದಲಾವಣೆಗಳನ್ನು ಅನುಭವಿಸಲಿದೆ ಎಂಬುದನ್ನು ತಿಳಿದುಕೊಳ್ಳಿ. ಈ ವಾರದ ನಿಮ್ಮ ಭವಿಷ್ಯವನ್ನು ಇಲ್ಲಿ ನೋಡಿ.

August Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
ವಾರ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 16, 2026 | 9:23 AM

Share

ಆಗಷ್ಟ್ ನ ಈ ವಾರದಲ್ಲಿ ​ಸಿಂಹ ರಾಶಿಯಲ್ಲಿ ಸೂರ್ಯ, ಮೌಢ್ಯ ಬುಧ, ಕೇತು, ​ಕನ್ಯಾದಲ್ಲಿ ನೀಚ ಶುಕ್ರ,​ಮಿಥುನದಲ್ಲಿ ಮಂಗಳ, ​ಕರ್ಕಾಟಕದಲ್ಲಿ ಉಚ್ಚ ಗುರು, ಮೀನದಲ್ಲಿ ವಕ್ರ ಶನಿ, ​ಕುಂಭದಲ್ಲಿ ವಕ್ರ ರಾಹು ಇದ್ದು ಅನೇಕ ಶುಭಫಲಗಳನ್ನು ಅನುಭವಿಸಬಹುದು. ಎಲ್ಲರಿಗೂ ಶುಭವಾಗಲಿ…

​ಮೇಷ ರಾಶಿ:

ಐದನೇ ಮನೆಯಲ್ಲಿ ಸೂರ್ಯ, ಬುಧ, ಕೇತು ಹಾಗೂ ೩ನೇ ಮನೆಯಲ್ಲಿ ಮಂಗಳ ಇರುವ ಕಾರಣ ಧೈರ್ಯ ಮತ್ತು ಪ್ರಭಾವ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಆದರೆ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ ತುಸು ಗೊಂದಲವಿರಬಹುದು.

​ವೃಷಭ ರಾಶಿ:

ಎರಡನೇ ಮನೆಯಲ್ಲಿ ಮಂಗಳ ಮತ್ತು ೩ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಆರ್ಥಿಕವಾಗಿ ಲಾಭದಾಯಕ ದಿನಗಳು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ೫ನೇ ಮನೆಯ ಶುಕ್ರನಿಂದ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ಮತ್ತು ಆತುರದ ನಿರ್ಧಾರಗಳನ್ನು ತಡೆಯುವುದು ಒಳಿತು. ೨ನೇ ಮನೆಯ ಉಚ್ಚ ಗುರು ಧನಲಾಭ ತರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ಅತ್ಯಂತ ಶುಭ ಫಲ. ಆಲೋಚನೆಗಳಲ್ಲಿ ಸ್ಪಷ್ಟತೆ, ಸಮಾಜದಲ್ಲಿ ಗೌರವ ಮತ್ತು ಆರೋಗ್ಯ ಸುಧಾರಿಸಲಿದೆ. ೧೨ನೇ ಮನೆಯಲ್ಲಿರುವ ಸೂರ್ಯ-ಕೇತು ವೆಚ್ಚಗಳನ್ನು ಹೆಚ್ಚಿಸಬಹುದು, ಜಾಗರೂಕರಾಗಿರಿ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ (ಅಸ್ತಂಗತ) ಮತ್ತು ಕೇತು ಸೇರಿರುವುದರಿಂದ ತಲೆನೋವು, ಮಾನಸಿಕ ಒತ್ತಡ ಉಂಟಾಗಬಹುದು. ೧೧ನೇ ಮನೆಯ ಮಂಗಳ ಹಾಗೂ ೧೨ನೇ ಮನೆಯ ಉಚ್ಚ ಗುರು ಲಾಭ ಮತ್ತು ಧಾರ್ಮಿಕ ಕಾರ್ಯಗಳಿಗೆ ಹಾದಿ ಮಾಡಿಕೊಡಲಿದ್ದಾರೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧ ೧೨ನೇ ಮನೆಯಲ್ಲಿರುವುದರಿಂದ ಆಲಸ್ಯ ಕಾಡಬಹುದು. ಆದರೆ ನಿಮ್ಮ ರಾಶಿಯಲ್ಲೇ ಇರುವ ಶುಕ್ರ ಮತ್ತು ೧೧ನೇ ಮನೆಯ ಗುರು ಆರ್ಥಿಕ ಸಂಕಟಗಳನ್ನು ದೂರ ಮಾಡಿ ವೃತ್ತಿಯಲ್ಲಿ ಯಶಸ್ಸು ನೀಡಲಿದ್ದಾರೆ.

​ತುಲಾ ರಾಶಿ:

ಹತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೯ನೇ ಮನೆಯಲ್ಲಿ ಮಂಗಳನಿರುವುದರಿಂದ ವೃತ್ತಿಜೀವನದಲ್ಲಿ ಅತ್ಯುತ್ತಮ ಬೆಳವಣಿಗೆ ಇರಲಿದೆ. ೧೧ನೇ ಮನೆಯಲ್ಲಿ ಸೂರ್ಯ-ಕೇತು ಇರುವುದರಿಂದ ಹಠಾತ್ ಧನಲಾಭ ಮತ್ತು ಕಾರ್ಯಸಿದ್ಧಿ ಸಾಧ್ಯ.

​ವೃಶ್ಚಿಕ ರಾಶಿ:

ಒಂಭತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೫ನೇ ಮನೆಯಲ್ಲಿ ವಕ್ರ ಶನಿ ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಯಾಣದಿಂದ ಅನುಕೂಲವಾಗಲಿದೆ.

​ಧನು ರಾಶಿ:

ನಿಮ್ಮ ರಾಶಿಯಲ್ಲಿ ಚಂದ್ರ ಹಾಗೂ ೮ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಸತ್ಫಲಗಳು ದೊರೆಯಲಿವೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ ಧನಾಗಮನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​ಮಕರ ರಾಶಿ :

೭ನೇ ಮನೆಯಲ್ಲಿ ಉಚ್ಚ ಗುರು ಮತ್ತು ೬ನೇ ಮನೆಯಲ್ಲಿ ಮಂಗಳನಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ವೃತ್ತಿಯಲ್ಲಿ ಬಡ್ತಿ ಸಾಧ್ಯತೆ ಇದೆ.

​ಕುಂಭ ರಾಶಿ :

ರಾಶಿಯಲ್ಲಿ ರಾಹು ಮತ್ತು ೬ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ೫ನೇ ಮನೆಯ ಮಂಗಳ ಬುದ್ಧಿಶಕ್ತಿಯನ್ನು ಹೆಚ್ಚಿಸಲಿದ್ದು, ಸಾಲದ ಬಾಧೆಯಿಂದ ಮುಕ್ತಿ ಸಿಗಲಿದೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಲಗ್ನ ಮತ್ತು ವಕ್ರ ಶನಿ ಇರುವುದರಿಂದ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದರೆ ೫ನೇ ಮನೆಯಲ್ಲಿರುವ ಉಚ್ಚ ಗುರು ಬುದ್ಧಿಮತ್ತೆ, ಸಂತಾನ ಸೌಖ್ಯ ಮತ್ತು ಉತ್ತಮ ಆದಾಯವನ್ನು ತಂದುಕೊಡಲಿದ್ದಾನೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ