
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನ ಭವಿಷ್ಯವನ್ನು ನೀಡಲಾಗಿದೆ. ಜನ್ಮ ಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 14ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನೀವು ಪಡೆದ ಸಾಲವನ್ನು ಹಿಂತಿರುಗಿಸುವಂತೆ ಕೆಲವರು ಒತ್ತಡ ಹಾಕಬಹುದು. ಅಥವಾ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ತಾವು ಪಡೆಯುವ ಸಾಲಕ್ಕೆ ಜಾಮೀನಾಗಿ ನಿಲ್ಲುವಂತೆ ಕೇಳಿಕೊಳ್ಳಬಹುದು. ಯಾವುದೇ ವಿಚಾರವಾಗಲೀ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಿ. ಸೋದರ- ಸೋದರಿಯರು ಇದ್ದಲ್ಲಿ ಅವರ ಕೌಟುಂಬಿಕ ವಿಚಾರದಲ್ಲಿ ನೀವು ಸಹಾಯ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನಿಧಾನವಾಗಿ ಆಲೋಚಿಸಬಹುದು ಅಂದುಕೊಂಡಿದ್ದ ಕೆಲವು ಹಣಕಾಸಿನ ನಿರ್ಧಾರವನ್ನು ಈಗಿಂದ ಈಗಲೇ ತೆಗೆದುಕೊಳ್ಳಬೇಕು ಎಂಬಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಪೊಲೀಸ್ ಠಾಣೆಗಾಗಿ ಇತರರ ಸಲುವಾಗಿಯಾದರೂ ಹೋಗಿಬರಬೇಕು ಎಂಬಂಥ ಸನ್ನಿವೇಶ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಒಂದೇ ವಿಚಾರಕ್ಕೆ ತುಂಬ ಪ್ರಾಶಸ್ತ್ಯ ನೀಡಿದ್ದರಿಂದ ಕೆಲವು ಡೆಡ್ ಲೈನ್ ಗಳನ್ನು ತಪ್ಪಿಸಿದಂತಾಗಲಿದ್ದು, ಅದಕ್ಕಾಗಿ ದಂಡವನ್ನು ಪಾವತಿಸಬೇಕಾದ ಸ್ಥಿತಿ ನಿರ್ಮಾನ ಆಗಲಿದೆ.
ಕೆಲವು ಕೆಲಸ, ವಿಷಯ, ವಿಚಾರಗಳನ್ನು ನೀವು ಪ್ರತಿಷ್ಠೆ ಎಂಬಂತೆ ತೆಗೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಶತಾಯಗತಾಯ ಮುಗಿಸುವುದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಯಾಕಾದರೂ ಹಣ ಹಾಕಿದೆನೋ ಅಂದುಕೊಂಡಂಥ ಹೂಡಿಕೆಯೊಂದು ಲಾಭದಾಯಕವಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಮನಸ್ಸಿಗೆ ಒಪ್ಪುವಂಥ ಕೆಲವು ಸ್ಥಳಗಳಿಗೆ ತೆರಳಿ, ಅಲ್ಲಿಯೇ ಕೆಲವು ಸಮಯವನ್ನು ಕಳೆಯುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ. ನಿವೃತ್ತಿಯ ಸಮೀಪದಲ್ಲಿ ಇರುವಂಥ ಉದ್ಯೋಗಸ್ಥರ ಪೈಕಿ ಕೆಲವರು ತಮಗೆ ಬರುವಂಥ ನಿವೃತ್ತಿ ನಂತರದ ಹಣದ ಮೊತ್ತವನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕಾದಂಥ ಸನ್ನಿವೇಶ ಸೃಷ್ಟಿ ಅಗಲಿದೆ. ಸೈಟು- ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಇಷ್ಟಪಟ್ಟಂಥ ಸ್ಥಳ ದೊರೆಯುವ ಅವಕಾಶಗಳು ಹೆಚ್ಚಿವೆ, ಕೆಲವರು ಅಡ್ವಾನ್ಸ್ ಕೂಡ ಪಾವತಿಸಬಹುದು.
ಷೇರು- ಮ್ಯೂಚುವಲ್ ಫಂಡ್, ಪಿಪಿಎಫ್ ಮೊದಲಾದ ಹೂಡಿಕೆ ಸಾಧನಗಳಿಗೆ ಹಣಕಾಸು ಹಾಕುವ ಬಗ್ಗೆ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನು ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿ, ಬಹುತೇಕ ಮರೆತೇ ಹೋಗಿದ್ದ ಹಣ ಮತ್ತೆ ಬರುವಂಥ ಮಾರ್ಗಗಳು ಗೋಚರ ಆಗಲಿವೆ. ನಿಮ್ಮ ಜೊತೆಗೆ ಇರುವಂಥ ಗೆಳೆಯರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ಅದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ ಎಂಬ ಖಾತ್ರಿ ಆಗುತ್ತಿದ್ದಂತೆ ಸಲಹೆ- ಸೂಚನೆಗಳನ್ನು ಅಳವಡಿಸಿಕೊಳ್ಳಿ. ವಿದೇಶಕ್ಕೆ ತೆರಳುವುದಕ್ಕೆ ವೀಸಾಗಾಗಿ ಪ್ರಯತ್ನಿಸುತ್ತಿರುವವರಿಗೆ ಪ್ರಭಾವಿಗಳು ನೆರವಿಗೆ ಬರಲಿದ್ದಾರೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಸುಲಭವಾಗಿ ಆ ಕೆಲಸ ಮುಗಿಯಬಹುದು ಎಂದೆನಿಸುವುದಕ್ಕೆ ಶುರು ಆಗುತ್ತದೆ. ಬ್ಯಾಂಕ್ ಗಳಿಗೆ ಶೈಕ್ಷಣಿಕ ಸಾಲ ಪಡೆದಂಥವರು ಅದನ್ನು ಭಾಗಶಃ ಹಿಂತಿರುಗಿಸುವುದಕ್ಕೆ ಅಥವಾ ಪೂರ್ತಿಯಾಗಿ ಚುಕ್ತಾ ಮಾಡುವುದಕ್ಕೆ ಹಣ ಹೊಂದಾಣಿಕೆ ಆಗಲಿದೆ.
ಮನೆಯಲ್ಲಿನ ಲಿಫ್ಟ್, ಸೋಲಾರ್ ವಾಟರ್ ಹೀಟರ್ ಅಥವಾ ಲೈಟಿಂಗ್ ಹೀಗೆ ಒಂದಲ್ಲ ಒಂದರ ರಿಪೇರಿಗಾಗಿ ಹೆಚ್ಚಿನ ಖರ್ಚು ಆಗಲಿದೆ. ನಿಮ್ಮ ಬಳಿ ಇರುವಂಥ ಹಣಕ್ಕೆ ಮೀರಿದಂಥ ಬಜೆಟ್ ಹಾಕಿಕೊಳ್ಳುವುದರಿಂದ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸ್ನೇಹಿತರು ಅಥವಾ ಸಂಬಂಧಿಕರ ಬಳಿ ಹಣಕಾಸಿನ ಸಾಲ ಕೇಳಿದಲ್ಲಿ ಬುದ್ಧಿ ಮಾತನ್ನು ಕೇಳಿಸಿಕೊಳ್ಳುವಂತಾಗುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಮಾತಿನಂತೆ ಕೈ ಮೀರಿದ ಸಾಲಗಳನ್ನು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರಿಗೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಥವಾ ಕೆಲವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲೇಬೇಕು ಎಂಬಂಥ ಸ್ಥಿತಿ ನಿರ್ಮಾಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಹೆಚ್ಚುವರಿಯಾಗಿ ಕೆಲಸಗಳು ಬಂದಲ್ಲಿ ಶ್ರದ್ಧೆಯಿಂದ ಪೂರ್ತಿಗೊಳಿಸುವುದಕ್ಕೆ ಪ್ರಯತ್ನಿಸಿ. ಇತರರಿಗೆ ಅದನ್ನು ವಹಿಸಿದಲ್ಲಿ ನಿಮ್ಮ ಹೆಸರು ಹಾಳಾಗಬಹುದು.
ತುಂಬ ಸಂಭಾವಿತರಂತೆ ನಿಮ್ಮೆದುರು ಸೋಗು ಹಾಕುತ್ತಿದ್ದವರ ಬಣ್ಣ ಕಳಚಲಿದೆ. ಒಂದು ವೇಳೆ ಯಾವುದಾದರೂ ಕೆಲಸ ಪೂರ್ಣವಾಗಬೇಕು ಎಂಬ ಕಾರಣಕ್ಕೆ ನೀಡಿದ್ದ ಹಣ ಇದ್ದಲ್ಲಿ ಅದನ್ನು ವಾಪಸ್ ಪಡೆಯುವುದಕ್ಕೆ ಇಂದು ಸೂಕ್ತವಾದ ದಿನವಾಗಿರುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನೀವು ಹಾಕಿದ್ದ ಪ್ರಯತ್ನ, ಮಾಡಿದ್ದ ತ್ಯಾಗ ಫಲ ನೀಡುತ್ತಿರುವುದು ಈ ದಿನ ಗಮನಕ್ಕೆ ಬರಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬೇರೆ ಕಡೆಗಳಿಂದ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಕೆಲವು ಕಡೆ ನೀವು ಈಗಾಗಲೇ ಪ್ರಯತ್ನ ಮಾಡಿದ್ದಲ್ಲಿ ಅಲ್ಲಿಂದ ಬರಲಿದೆ ಮತ್ತು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರು- ಸಂಬಂಧಿಗಳ ರೆಫರೆನ್ಸ್ ಮೂಲಕ ಕೂಡ ಅವಕಾಶಗಳು ಹುಡುಕಿಕೊಂಡ ಬರಲಿವೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಪಾರ್ಟನರ್ ಷಿಪ್ ಗಾಗಿ ಹುಡುಕಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತವಾದ ವ್ಯಕ್ತಿಯೊಬ್ಬರು ತಾವಾಗಿಯೇ ಆ ಬಗ್ಗೆ ಪ್ರಸ್ತಾವವನ್ನು ಮಾಡಲಿದ್ದಾರೆ.
ಎನ್ ಜಿಒಗಳನ್ನು ನಡೆಸುತ್ತಿರುವವರು ಅಥವಾ ಅಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ದೊಡ್ಡ ಮೊತ್ತದ ಅನುದಾನ ದೊರೆಯುವ ಸೂಚನೆ ಅಥವಾ ಭರವಸೆ ದೊರೆಯಲಿದೆ. ಇನ್ನು ಒಪ್ಪಂದ ಮುಗಿದುಹೋಯಿತು ಎಂದು ಭಾವಿಸಿದ್ದಲ್ಲಿ ಅಂಥವು ಮತ್ತೆ ಆರಂಭ ಆಗುವ ಅಥವಾ ನವೀಕರಣವಾಗುವ ಸಾಧ್ಯತೆಗಳು ಹೆಚ್ಚಿವೆ. ನೀವಾಗಿಯೇ ಕೇಳಿ, ಗಡುವು ಪಡೆದುಕೊಂಡಿದ್ದ ವಿಷಯ- ವಿಚಾರ- ಕೆಲಸಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ನಿಗದಿತ ಅವಧಿಯೊಳಗೆ ಮುಗಿಯದು ಎಂದೆನಿಸಿದಲ್ಲಿ ಸಂಬಂಧಪಟ್ಟವರಿಗೆ ಅದನ್ನು ತಿಳಿಸುವುದು ಉತ್ತಮ. ಅದನ್ನು ಬಿಟ್ಟು, ಹಾಗೇ ಮಾಡಿಕೊಟ್ಟರಾಯಿತು ಎಂದೇನಾದರೂ ಅಂದುಕೊಂಡಲ್ಲಿ ನಿಮ್ಮ ಹೆಸರು ಕೆಡುತ್ತದೆ, ಜಾಗ್ರತೆ. ಚಿನ್ನಾಭರಣ ವ್ಯಾಪಾರಿಗಳಿಗೆ ಒತ್ತಡದ ದಿನವಾಗಿರುತ್ತದೆ. ಕೆಲವು ಮುಖ್ಯವಸ್ತುಗಳು ಇಟ್ಟಲ್ಲಿ ಇರದೆ ಆತಂಕಕ್ಕೆ ಕಾರಣವಾಗಲಿದೆ.
ನಿಮ್ಮ ಕೆಲವು ಸಾಲಗಳನ್ನು ತೀರಿಸಿಕೊಳ್ಳಲಿಕ್ಕೆ ಬೇಕಾದ ಅನುಕೂಲಗಳು ಒದಗಿ ಬರುವ ಸಾಧ್ಯತೆ ಇದೆ. ದೂರ ಪ್ರಯಾಣ ಮಾಡುವುದಕ್ಕೆ ಈಗಾಗಲೇ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಿದವರು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ರದ್ದು ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಮಕ್ಕಳ ಶಿಕ್ಷಣ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳಲಿದೆ. ಹೊಸ ವಸ್ತ್ರಾಭರಣ ಖರೀದಿಗಾಗಿ ಖರ್ಚುಗಳನ್ನು ನಿಮ್ಮಲ್ಲಿ ಕೆಲವರು ಮಾಡಲಿದ್ದೀರಿ. ಆಪತ್ಕಾಲಕ್ಕೆ ಇರಲಿ ಎಂದು ಆಲೋಚಿಸಿ, ಎತ್ತಿಟ್ಟಂಥ ಹಣವು ಎಲ್ಲಿ ಇಟ್ಟಿದ್ದದ್ದು ಎಂಬುದು ಮರೆತು ಹೋಗಬಹುದು ಅಥವಾ ಆ ಸ್ಥಳದಿಂದ ಕಾಣೆಯಾಗಿ ಆತಂಕ ಸೃಷ್ಟಿ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳನ್ನು ಕೊಡಬಹುದು ಅಥವಾ ಈಗಿರುವುದರ ಜೊತೆಗೆ ಹೆಚ್ಚುವರಿಯಾಗಿ ಕೆಲವು ಕೆಲಸಗಳನ್ನು ಒಪ್ಪಿಸಬಹುದು.
ಮನೆ ನಿರ್ಮಾಣ ಮಾಡಬೇಕು ಎಂದು ಆಲೋಚನೆ ಇದ್ದಲ್ಲಿ ಅದರಲ್ಲಿ ಪ್ರಗತಿ ಕಾಣಲಿದೆ. ಒಂದು ವೇಳೆ ಸೈಟು ಖರೀದಿ ಮಾಡಬೇಕು ಎಂದು ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ದೂರದ ಊರಿನಲ್ಲಿ ಇರುವಂಥ ಸಂಬಂಧಿಗಳು ಶುಭ ವಾರ್ತೆಗಳನ್ನು ನೀಡುತ್ತಾರೆ. ಆದಾಯ ತೆರಿಗೆ, ಜಿಎಸ್ ಟಿಗೆ ಸಂಬಂಧಿಸಿದಂತೆ ಇರುವಂಥ ಗೊಂದಲಗಳು ಬಗೆಹರಿಯುವ ಯೋಗವಿದೆ. ಇದೇ ಮೊದಲ ಬಾರಿಗೆ ಎಂಬಂತೆ ಈ ದಿನ ನೀವು ತೆರಳಿದ ಸ್ಥಳದ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡು ಬಿಡುತ್ತೀರಿ. ನಿಮ್ಮ ಆಹಾರ ಅಭ್ಯಾಸದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಬೇಕಾಗುತ್ತದೆ. ಮನೆಯ ಒಳಗೇ ಇರಬೇಕು ಎಂದುಕೊಂಡ ಸಂಗತಿಗಳು ಕೆಲವು ಹೊರಕ್ಕೆ ಬಂದು, ಕಸಿವಿಸಿಗೆ ಕಾರಣ ಆಗಲಿದೆ. ಯಾವುದಾದರೂ ವಿಷಯದ ಬಗ್ಗೆ ಗಟ್ಟಿಯಾಗಿ ವಾದ ಮಂಡಿಸುವ ಮುಂಚಿತವಾಗಿ ಆ ವಿಚಾರವನ್ನು ಖಚಿತಪಡಿಸಿಕೊಳ್ಳಿ.
ತಾಯಿಯ ಜೊತೆಗೆ ಅಥವಾ ಮಾತೃ ಸಮಾನರಾದವರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಸಂಗಾತಿಯ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಅದು ನಿವಾರಣೆ ಆಗುವ ಅಥವಾ ಚೇತರಿಕೆ ಕಾಣುವುದರಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ಈ ಹಿಂದೆ ನೀವು ಭೇಟಿ ನೀಡಿ, ಪ್ರಚಾರ ಮಾಡಿ ಬಂದಿದ್ದ ಸೇವೆ- ವಸ್ತುಗಳಿಗೆ ಈಗ ಬೇಡಿಕೆಯು ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಇನ್ನೂ ಕೆಲವರು ಒಡವೆ- ವಸ್ತುಗಳನ್ನು ಹಾಗೂ ಮುಖ್ಯ ದಾಖಲೆ ಪತ್ರಗಳನ್ನು ಇಡುವುದಕ್ಕೆ ಅಂತ ಬ್ಯಾಂಕ್ ನಲ್ಲಿ ಲಾಕರ್ ಬಾಡಿಗೆಗೆ ಪಡೆಯುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಅದೇ ರೀತಿ ಮನೆಗೇ ತಿಜೋರಿ ಮೊದಲಾದ ಭದ್ರತಾ ಕಪಾಟುಗಳನ್ನು ಖರೀದಿಸಿ ತರಬಹುದು. ಇನ್ನು ಯಾರು ತಾತ್ಕಾಲಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೀರಿ ಅಂಥವರಿಗೆ ಸೇವೆ ಕಾಯಂ ಆಗುವ ಬಗ್ಗೆ ಸೂಚನೆ ದೊರೆಯಲಿದೆ. ಸೋದರ- ಸೋದರಿಯರ ಹಣಕಾಸಿನ ಅಗತ್ಯಕ್ಕೆ ಸ್ಪಂದಿಸಬೇಕಾಗುತ್ತದೆ.