
ಓದುವ ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್ ಅಥವಾ ಪೆನ್ಸಿಲ್ ಇಂಥವುಗಳನ್ನು ಕೊಡಿಸಿ. ಇದರಿಂದ ನಿರ್ಧಾರದ ವಿಚಾರದಲ್ಲಿ ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ದೂರವಾಗಲಿವೆ. ಇನ್ನು ಮನಸ್ತಾಪ ಆಗಿ ದೂರವಾಗಿರುವ ಸ್ನೇಹಿತರು ಮತ್ತೆ ಒಂದಾಗುವ ವೇದಿಕೆ ದೊರೆಯುತ್ತದೆ.
ಆರೋಗ್ಯ ವಿಚಾರದಲ್ಲಿ ನಿಮ್ಮ ನಂಬಿಕೆಗಳು ಬದಲಾಗುವಂಥ ದಿನ ಇದಾಗಿರುತ್ತದೆ. ವಿದ್ಯಾರ್ಥಿಗಳು ನಿಮ್ಮ ರಿವಿಷನ್ ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ನೀಡಿದಲ್ಲಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರ ಸಲಹೆ ನೀಡಲಿದ್ದಾರೆ, ಆದರೆ ತೀರ್ಮಾನ ನಿಮ್ಮದೇ ಇರಲಿ. ನಿಮ್ಮ ಚಾತುರ್ಯ ಮತ್ತು ಮಾತನಾಡುವ ಕಲೆ ಅನೇಕ ಅವಕಾಶಗಳನ್ನು ನಿಮಗೆ ತರಲಿದೆ. ಕೆಲಸದ ಸ್ಥಳದಲ್ಲಿ ನೀವು ನೀಡುವ ನಂಬಿಕೆ ಹಾಗೂ ತುಂಬುವ ವಿಶ್ವಾಸವು ಜೊತೆಯಲ್ಲಿ ಇರುವವರಿಗೆ ಸ್ಪಷ್ಟತೆ ನೀಡುತ್ತವೆ.
ನಿಮ್ಮ ಕೆಲಸದಲ್ಲಿ ಕೆಲವು ವಿಳಂಬಗಳು ಕಂಡರೂ ಅನುಸರಿಸುವಂಥ ಕಾರ್ಯಪದ್ಧತಿ- ವಿಧಾನದಲ್ಲಿ ನಂಬಿಕೆ ಇಟ್ಟು ಮುಂದುವರಿಯಿರಿ. ಒಂದು ವೇಳೆ ನೀವೇನಾದರೂ ಸಂಬಂಧಿಗಳು- ಸ್ನೇಹಿತರಿಂದ ಸಾಲ ಪಡೆದಿದ್ದಲ್ಲಿ ಆ ಬಾಕಿ ಪಾವತಿಯನ್ನು ಕೊಟ್ಟಿದ್ದ ಮಾತಿಗಿಂತ ಮೊದಲೇ ಮಾಡುವುದು ಉತ್ತಮ. ಕುಟುಂಬದವರ ಒತ್ತಡವು ಮನಸ್ಸಿಗೆ ತೊಂದರೆ ನೀಡಿದರೂ ಮಾತುಕತೆ ಮೂಲಕ ಎಲ್ಲವನ್ನು ಸರಿಪಡಿಸಬಹುದು. ಪ್ರೀತಿಯಲ್ಲಿ ಸಹನೆಯಿಂದ ನಡೆದುಕೊಂಡರೆ ಆತ್ಮೀಯತೆ ಹೆಚ್ಚಿಸುತ್ತದೆ.
ಪ್ರೀತಿಯಲ್ಲಿ ಇರುವವರು ಅಹಂಕಾರದಿಂದ ದೂರವಿರಿ, ಪರಸ್ಪರ ಗೌರವವೇ ಗಟ್ಟಿ ಸಂಬಂಧದ ಶಕ್ತಿ ಆಗಿರುತ್ತದೆ. ಪ್ರಾಣಾಯಾಮ- ವ್ಯಾಯಾಮ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಭಾಗವಾಗಿ ಮಾಡಿಕೊಂಡು ಕಲಿಯುವುದು ಉತ್ತಮ. ಸ್ನೇಹಿತರ ಮಾತುಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡಿ. ದೈವಸ್ಮರಣೆಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿಯಿದೆ. ಕೆಲವೊಮ್ಮೆ ನೀವು ಪಟ್ಟ ಪರಿಶ್ರಮಕ್ಕೆ ತಕ್ಷಣ ಫಲ ಸಿಗದಿದ್ದರೂ ಅದು ವ್ಯರ್ಥವಾಗುವುದಿಲ್ಲ.
ಲೇಖನ- ಸ್ವಾತಿ ಎನ್.ಕೆ.