AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 10, 2024 | 1:02 AM

Share

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಚಪಲ: ಇವರ ಮನಸ್ಸು ಬಹಳ ಚಂಚಲ. ‌ಒಂದನ್ನೇ ಆಲೋಚಿಸುವ, ನಿರ್ಧಾರಕ್ಕೆ ಬರುವ ವಿಷಯದಲ್ಲಿ ದ್ವಂದ್ವಗಳು ಹೆಚ್ಚು ಕಾಣಿಸುವುದು.

ಚತುರ: ಯಾವ ಕಾರ್ಯವನ್ನೂ ಬಹಳ ಚಾತುರ್ಯದಿಂದ ಮಾಡಲು ಸಾಧ್ಯ. ಕ್ಲಿಷ್ಟವಾದುದನ್ನು ಇಷ್ಟವಾಗುವಂತೆ ಮಾಡಿಕೊಳ್ಳಬಲ್ಲರು.

ಅಧಿಕ ಭಯ: ಯಾವುದನ್ನೂ ತಾವೇ ಸ್ವತಃ ಮುನ್ನುಗ್ಗಿ ಮಾಡುವವರಲ್ಲ. ಏನಾದರೂ ಆದರೆ ಎಂಬ ಭಯವು ಅವರನ್ನು ಹಿಂದೆ ಕಳುಹಿಸುತ್ತದೆ.

ಉತ್ಸಾಹ: ಆಲಸ್ಯದಿಂದ ಇರುವ ಸ್ವಭಾವವನ್ನು ಇವರು ಹೊಂದಿರಲಾರರು. ಏನಾದರೂ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಉತ್ಸಾಹವು ಹೆಚ್ಚು ಕಾಣಿಸುವುದು.

ಭೋಗದಲ್ಲಿ ಆಸಕ್ತಿ: ಹೊಸ ವಿಷಯಗಳನ್ನು ತಿಳಿಯುವುದು, ವಸ್ತುಗಳನ್ನು ಖರೀದಿಸುವುದರಲ್ಲಿ ಆಸಕ್ತಿ ಇರುತ್ತದೆ. ಅಂತಹ ಭೋಗ ವಸ್ತುಗಳನ್ನು ಖರೀದಿಮಾಡುತ್ತಾರೆ.

ಆರ್ಚರಿಯಲ್ಲಿ ಆಸಕ್ತಿ: ಇವರಿಗೆ ವಿಶೇಷ ಆಸಕ್ತಿಯ ವಿಚಾರವೆಂದರೆ ಧನುರ್ವಿದ್ಯೆ ಅಥವಾ ಗುರಿಯಿಟ್ಟು ಹೊಡೆಯುವಂತಹ ವಿದ್ಯೆಗಳನ್ನು ಇಷ್ಟಪಡುತ್ತಾರೆ. ಶೂಟಿಂಗ್ ಮೊದಲಾದ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಪರಿಣತಿಯನ್ನು ಪಡೆಯುತ್ತಾರೆ.

ಬಾಗುವುದು: ಯಾರನ್ನು ಗೌರವಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆವಿರುವುದು. ವರ್ತನೆಗೆ ಇವರು ಹೆಚ್ಚು ಪ್ರಾಮುಖ್ಯ ಕೊಡುವರು. ಇದರಿಂದ ವಿಶೇಷ ಮನ್ನಣೆಯನ್ನು ಪಡೆಯುವರು.

ಒಳ್ಳೆಯವರ ಸಹವಾಸ: ಇವರು ಒಳ್ಳೆಯವರ ಸಹವಾಸವನ್ನೇ ಹೆಚ್ಚು ಮಾಡುತ್ತಾರೆ. ಗುಣಗಳ ವಿಚಾರದಲ್ಲಿ ಅತಿಯಾದ ಆಸಕ್ತಿ, ನಂಟು ಇರಲಿದೆ.

ನಂಬಿದವರಿಗೆ ಮೋಸವಿಲ್ಲ: ಇವರನ್ನು ನಂಬಿ ಬಂದರೆ ಅರ್ಧಕ್ಕೆ ಕೈಬಿಡುವ ಪ್ರಮೇಯವು ಇರದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಸಂತೋಷಪಡಿಸುತ್ತಾರೆ.

ಒಳ್ಳೆಯ ಮಾರ್ಗ: ಇವರಲ್ಲಿ ಒಳ್ಳೆ ಹಾಗು ಕೆಟ್ಟ ಮಾರ್ಗದ ವಿವೇಚನೆ ಇರಲಿದೆ. ಹಾಗಾಗಿ ಸದಾ ಒಳ್ಳೆಯ ಮಾರ್ಗದಲ್ಲಿ, ಎಲ್ಲರೂ ಇಷ್ಟಪಡುವಂತೆ ಇರುತ್ತಾರೆ.

ಈ ನಕ್ಷತ್ರದಿಂದ‌ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಸಸ್ಯಾರೋಪಣವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಚಂದ್ರನು ಓಷಧಿ ಮತ್ತು ಸಸ್ಯಗಳಿಗೆ ಅಧಿಪತಿಯಾದ ಕಾರಣ ಸಮೃದ್ಧವಾಗಿ ಬೇಳೆಯುತ್ತದೆ ಎಂಬ ಅಚಲವಾದ ನಂಬಿಕೆ, ವಿಜ್ಞಾನವೂ ಇದೆ.

ಲೋಹಿತ ಹೆಬ್ಬಾರ್ – 8762924271

Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!