ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2024 | 1:02 AM

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಚಪಲ: ಇವರ ಮನಸ್ಸು ಬಹಳ ಚಂಚಲ. ‌ಒಂದನ್ನೇ ಆಲೋಚಿಸುವ, ನಿರ್ಧಾರಕ್ಕೆ ಬರುವ ವಿಷಯದಲ್ಲಿ ದ್ವಂದ್ವಗಳು ಹೆಚ್ಚು ಕಾಣಿಸುವುದು.

ಚತುರ: ಯಾವ ಕಾರ್ಯವನ್ನೂ ಬಹಳ ಚಾತುರ್ಯದಿಂದ ಮಾಡಲು ಸಾಧ್ಯ. ಕ್ಲಿಷ್ಟವಾದುದನ್ನು ಇಷ್ಟವಾಗುವಂತೆ ಮಾಡಿಕೊಳ್ಳಬಲ್ಲರು.

ಅಧಿಕ ಭಯ: ಯಾವುದನ್ನೂ ತಾವೇ ಸ್ವತಃ ಮುನ್ನುಗ್ಗಿ ಮಾಡುವವರಲ್ಲ. ಏನಾದರೂ ಆದರೆ ಎಂಬ ಭಯವು ಅವರನ್ನು ಹಿಂದೆ ಕಳುಹಿಸುತ್ತದೆ.

ಉತ್ಸಾಹ: ಆಲಸ್ಯದಿಂದ ಇರುವ ಸ್ವಭಾವವನ್ನು ಇವರು ಹೊಂದಿರಲಾರರು. ಏನಾದರೂ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಉತ್ಸಾಹವು ಹೆಚ್ಚು ಕಾಣಿಸುವುದು.

ಭೋಗದಲ್ಲಿ ಆಸಕ್ತಿ: ಹೊಸ ವಿಷಯಗಳನ್ನು ತಿಳಿಯುವುದು, ವಸ್ತುಗಳನ್ನು ಖರೀದಿಸುವುದರಲ್ಲಿ ಆಸಕ್ತಿ ಇರುತ್ತದೆ. ಅಂತಹ ಭೋಗ ವಸ್ತುಗಳನ್ನು ಖರೀದಿಮಾಡುತ್ತಾರೆ.

ಆರ್ಚರಿಯಲ್ಲಿ ಆಸಕ್ತಿ: ಇವರಿಗೆ ವಿಶೇಷ ಆಸಕ್ತಿಯ ವಿಚಾರವೆಂದರೆ ಧನುರ್ವಿದ್ಯೆ ಅಥವಾ ಗುರಿಯಿಟ್ಟು ಹೊಡೆಯುವಂತಹ ವಿದ್ಯೆಗಳನ್ನು ಇಷ್ಟಪಡುತ್ತಾರೆ. ಶೂಟಿಂಗ್ ಮೊದಲಾದ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಪರಿಣತಿಯನ್ನು ಪಡೆಯುತ್ತಾರೆ.

ಬಾಗುವುದು: ಯಾರನ್ನು ಗೌರವಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆವಿರುವುದು. ವರ್ತನೆಗೆ ಇವರು ಹೆಚ್ಚು ಪ್ರಾಮುಖ್ಯ ಕೊಡುವರು. ಇದರಿಂದ ವಿಶೇಷ ಮನ್ನಣೆಯನ್ನು ಪಡೆಯುವರು.

ಒಳ್ಳೆಯವರ ಸಹವಾಸ: ಇವರು ಒಳ್ಳೆಯವರ ಸಹವಾಸವನ್ನೇ ಹೆಚ್ಚು ಮಾಡುತ್ತಾರೆ. ಗುಣಗಳ ವಿಚಾರದಲ್ಲಿ ಅತಿಯಾದ ಆಸಕ್ತಿ, ನಂಟು ಇರಲಿದೆ.

ನಂಬಿದವರಿಗೆ ಮೋಸವಿಲ್ಲ: ಇವರನ್ನು ನಂಬಿ ಬಂದರೆ ಅರ್ಧಕ್ಕೆ ಕೈಬಿಡುವ ಪ್ರಮೇಯವು ಇರದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಸಂತೋಷಪಡಿಸುತ್ತಾರೆ.

ಒಳ್ಳೆಯ ಮಾರ್ಗ: ಇವರಲ್ಲಿ ಒಳ್ಳೆ ಹಾಗು ಕೆಟ್ಟ ಮಾರ್ಗದ ವಿವೇಚನೆ ಇರಲಿದೆ. ಹಾಗಾಗಿ ಸದಾ ಒಳ್ಳೆಯ ಮಾರ್ಗದಲ್ಲಿ, ಎಲ್ಲರೂ ಇಷ್ಟಪಡುವಂತೆ ಇರುತ್ತಾರೆ.

ಈ ನಕ್ಷತ್ರದಿಂದ‌ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಸಸ್ಯಾರೋಪಣವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಚಂದ್ರನು ಓಷಧಿ ಮತ್ತು ಸಸ್ಯಗಳಿಗೆ ಅಧಿಪತಿಯಾದ ಕಾರಣ ಸಮೃದ್ಧವಾಗಿ ಬೇಳೆಯುತ್ತದೆ ಎಂಬ ಅಚಲವಾದ ನಂಬಿಕೆ, ವಿಜ್ಞಾನವೂ ಇದೆ.

ಲೋಹಿತ ಹೆಬ್ಬಾರ್ – 8762924271

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್