AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 10, 2024 | 1:02 AM

Share

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಚಪಲ: ಇವರ ಮನಸ್ಸು ಬಹಳ ಚಂಚಲ. ‌ಒಂದನ್ನೇ ಆಲೋಚಿಸುವ, ನಿರ್ಧಾರಕ್ಕೆ ಬರುವ ವಿಷಯದಲ್ಲಿ ದ್ವಂದ್ವಗಳು ಹೆಚ್ಚು ಕಾಣಿಸುವುದು.

ಚತುರ: ಯಾವ ಕಾರ್ಯವನ್ನೂ ಬಹಳ ಚಾತುರ್ಯದಿಂದ ಮಾಡಲು ಸಾಧ್ಯ. ಕ್ಲಿಷ್ಟವಾದುದನ್ನು ಇಷ್ಟವಾಗುವಂತೆ ಮಾಡಿಕೊಳ್ಳಬಲ್ಲರು.

ಅಧಿಕ ಭಯ: ಯಾವುದನ್ನೂ ತಾವೇ ಸ್ವತಃ ಮುನ್ನುಗ್ಗಿ ಮಾಡುವವರಲ್ಲ. ಏನಾದರೂ ಆದರೆ ಎಂಬ ಭಯವು ಅವರನ್ನು ಹಿಂದೆ ಕಳುಹಿಸುತ್ತದೆ.

ಉತ್ಸಾಹ: ಆಲಸ್ಯದಿಂದ ಇರುವ ಸ್ವಭಾವವನ್ನು ಇವರು ಹೊಂದಿರಲಾರರು. ಏನಾದರೂ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಉತ್ಸಾಹವು ಹೆಚ್ಚು ಕಾಣಿಸುವುದು.

ಭೋಗದಲ್ಲಿ ಆಸಕ್ತಿ: ಹೊಸ ವಿಷಯಗಳನ್ನು ತಿಳಿಯುವುದು, ವಸ್ತುಗಳನ್ನು ಖರೀದಿಸುವುದರಲ್ಲಿ ಆಸಕ್ತಿ ಇರುತ್ತದೆ. ಅಂತಹ ಭೋಗ ವಸ್ತುಗಳನ್ನು ಖರೀದಿಮಾಡುತ್ತಾರೆ.

ಆರ್ಚರಿಯಲ್ಲಿ ಆಸಕ್ತಿ: ಇವರಿಗೆ ವಿಶೇಷ ಆಸಕ್ತಿಯ ವಿಚಾರವೆಂದರೆ ಧನುರ್ವಿದ್ಯೆ ಅಥವಾ ಗುರಿಯಿಟ್ಟು ಹೊಡೆಯುವಂತಹ ವಿದ್ಯೆಗಳನ್ನು ಇಷ್ಟಪಡುತ್ತಾರೆ. ಶೂಟಿಂಗ್ ಮೊದಲಾದ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಪರಿಣತಿಯನ್ನು ಪಡೆಯುತ್ತಾರೆ.

ಬಾಗುವುದು: ಯಾರನ್ನು ಗೌರವಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆವಿರುವುದು. ವರ್ತನೆಗೆ ಇವರು ಹೆಚ್ಚು ಪ್ರಾಮುಖ್ಯ ಕೊಡುವರು. ಇದರಿಂದ ವಿಶೇಷ ಮನ್ನಣೆಯನ್ನು ಪಡೆಯುವರು.

ಒಳ್ಳೆಯವರ ಸಹವಾಸ: ಇವರು ಒಳ್ಳೆಯವರ ಸಹವಾಸವನ್ನೇ ಹೆಚ್ಚು ಮಾಡುತ್ತಾರೆ. ಗುಣಗಳ ವಿಚಾರದಲ್ಲಿ ಅತಿಯಾದ ಆಸಕ್ತಿ, ನಂಟು ಇರಲಿದೆ.

ನಂಬಿದವರಿಗೆ ಮೋಸವಿಲ್ಲ: ಇವರನ್ನು ನಂಬಿ ಬಂದರೆ ಅರ್ಧಕ್ಕೆ ಕೈಬಿಡುವ ಪ್ರಮೇಯವು ಇರದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಸಂತೋಷಪಡಿಸುತ್ತಾರೆ.

ಒಳ್ಳೆಯ ಮಾರ್ಗ: ಇವರಲ್ಲಿ ಒಳ್ಳೆ ಹಾಗು ಕೆಟ್ಟ ಮಾರ್ಗದ ವಿವೇಚನೆ ಇರಲಿದೆ. ಹಾಗಾಗಿ ಸದಾ ಒಳ್ಳೆಯ ಮಾರ್ಗದಲ್ಲಿ, ಎಲ್ಲರೂ ಇಷ್ಟಪಡುವಂತೆ ಇರುತ್ತಾರೆ.

ಈ ನಕ್ಷತ್ರದಿಂದ‌ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಸಸ್ಯಾರೋಪಣವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಚಂದ್ರನು ಓಷಧಿ ಮತ್ತು ಸಸ್ಯಗಳಿಗೆ ಅಧಿಪತಿಯಾದ ಕಾರಣ ಸಮೃದ್ಧವಾಗಿ ಬೇಳೆಯುತ್ತದೆ ಎಂಬ ಅಚಲವಾದ ನಂಬಿಕೆ, ವಿಜ್ಞಾನವೂ ಇದೆ.

ಲೋಹಿತ ಹೆಬ್ಬಾರ್ – 8762924271

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ