AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 10, 2024 | 1:02 AM

Share

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಚಪಲ: ಇವರ ಮನಸ್ಸು ಬಹಳ ಚಂಚಲ. ‌ಒಂದನ್ನೇ ಆಲೋಚಿಸುವ, ನಿರ್ಧಾರಕ್ಕೆ ಬರುವ ವಿಷಯದಲ್ಲಿ ದ್ವಂದ್ವಗಳು ಹೆಚ್ಚು ಕಾಣಿಸುವುದು.

ಚತುರ: ಯಾವ ಕಾರ್ಯವನ್ನೂ ಬಹಳ ಚಾತುರ್ಯದಿಂದ ಮಾಡಲು ಸಾಧ್ಯ. ಕ್ಲಿಷ್ಟವಾದುದನ್ನು ಇಷ್ಟವಾಗುವಂತೆ ಮಾಡಿಕೊಳ್ಳಬಲ್ಲರು.

ಅಧಿಕ ಭಯ: ಯಾವುದನ್ನೂ ತಾವೇ ಸ್ವತಃ ಮುನ್ನುಗ್ಗಿ ಮಾಡುವವರಲ್ಲ. ಏನಾದರೂ ಆದರೆ ಎಂಬ ಭಯವು ಅವರನ್ನು ಹಿಂದೆ ಕಳುಹಿಸುತ್ತದೆ.

ಉತ್ಸಾಹ: ಆಲಸ್ಯದಿಂದ ಇರುವ ಸ್ವಭಾವವನ್ನು ಇವರು ಹೊಂದಿರಲಾರರು. ಏನಾದರೂ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಉತ್ಸಾಹವು ಹೆಚ್ಚು ಕಾಣಿಸುವುದು.

ಭೋಗದಲ್ಲಿ ಆಸಕ್ತಿ: ಹೊಸ ವಿಷಯಗಳನ್ನು ತಿಳಿಯುವುದು, ವಸ್ತುಗಳನ್ನು ಖರೀದಿಸುವುದರಲ್ಲಿ ಆಸಕ್ತಿ ಇರುತ್ತದೆ. ಅಂತಹ ಭೋಗ ವಸ್ತುಗಳನ್ನು ಖರೀದಿಮಾಡುತ್ತಾರೆ.

ಆರ್ಚರಿಯಲ್ಲಿ ಆಸಕ್ತಿ: ಇವರಿಗೆ ವಿಶೇಷ ಆಸಕ್ತಿಯ ವಿಚಾರವೆಂದರೆ ಧನುರ್ವಿದ್ಯೆ ಅಥವಾ ಗುರಿಯಿಟ್ಟು ಹೊಡೆಯುವಂತಹ ವಿದ್ಯೆಗಳನ್ನು ಇಷ್ಟಪಡುತ್ತಾರೆ. ಶೂಟಿಂಗ್ ಮೊದಲಾದ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಪರಿಣತಿಯನ್ನು ಪಡೆಯುತ್ತಾರೆ.

ಬಾಗುವುದು: ಯಾರನ್ನು ಗೌರವಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆವಿರುವುದು. ವರ್ತನೆಗೆ ಇವರು ಹೆಚ್ಚು ಪ್ರಾಮುಖ್ಯ ಕೊಡುವರು. ಇದರಿಂದ ವಿಶೇಷ ಮನ್ನಣೆಯನ್ನು ಪಡೆಯುವರು.

ಒಳ್ಳೆಯವರ ಸಹವಾಸ: ಇವರು ಒಳ್ಳೆಯವರ ಸಹವಾಸವನ್ನೇ ಹೆಚ್ಚು ಮಾಡುತ್ತಾರೆ. ಗುಣಗಳ ವಿಚಾರದಲ್ಲಿ ಅತಿಯಾದ ಆಸಕ್ತಿ, ನಂಟು ಇರಲಿದೆ.

ನಂಬಿದವರಿಗೆ ಮೋಸವಿಲ್ಲ: ಇವರನ್ನು ನಂಬಿ ಬಂದರೆ ಅರ್ಧಕ್ಕೆ ಕೈಬಿಡುವ ಪ್ರಮೇಯವು ಇರದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಸಂತೋಷಪಡಿಸುತ್ತಾರೆ.

ಒಳ್ಳೆಯ ಮಾರ್ಗ: ಇವರಲ್ಲಿ ಒಳ್ಳೆ ಹಾಗು ಕೆಟ್ಟ ಮಾರ್ಗದ ವಿವೇಚನೆ ಇರಲಿದೆ. ಹಾಗಾಗಿ ಸದಾ ಒಳ್ಳೆಯ ಮಾರ್ಗದಲ್ಲಿ, ಎಲ್ಲರೂ ಇಷ್ಟಪಡುವಂತೆ ಇರುತ್ತಾರೆ.

ಈ ನಕ್ಷತ್ರದಿಂದ‌ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಸಸ್ಯಾರೋಪಣವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಚಂದ್ರನು ಓಷಧಿ ಮತ್ತು ಸಸ್ಯಗಳಿಗೆ ಅಧಿಪತಿಯಾದ ಕಾರಣ ಸಮೃದ್ಧವಾಗಿ ಬೇಳೆಯುತ್ತದೆ ಎಂಬ ಅಚಲವಾದ ನಂಬಿಕೆ, ವಿಜ್ಞಾನವೂ ಇದೆ.

ಲೋಹಿತ ಹೆಬ್ಬಾರ್ – 8762924271

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು