ಅನೇಕ ಗುಣಗಳ ಗುಚ್ಛ ಈ ನಕ್ಷತ್ರ; ಯಾವ ನಕ್ಷತ್ರ? ಏನು ಗುಣ?

ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ.‌ ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು...

ಅನೇಕ ಗುಣಗಳ ಗುಚ್ಛ ಈ ನಕ್ಷತ್ರ; ಯಾವ ನಕ್ಷತ್ರ? ಏನು ಗುಣ?
Punarvasu Nakshatra
Follow us
| Updated By: Digi Tech Desk

Updated on: Oct 20, 2024 | 9:17 PM

ಇದು ಅಂತಿಂಥ ನಕ್ಷತ್ರವಲ್ಲ. ನಕ್ಷತ್ರಗಳಲ್ಲಿ ಶ್ರೇಷ್ಠವಾದ ನಕ್ಷತ್ರವಿದು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯರಾಗಿರದವರು. ಅದೇ ಪುನರ್ವಸು ನಕ್ಷತ್ರ. ಏಳನೇ ನಕ್ಷತ್ರ ಇದು. ಇದರ ದೇವತೆ, ದೇವತೆಗಳ ತಾಯಿ ಅದಿತಿ. ಐದು ನಕ್ಷತ್ರಗಳ ಗುಚ್ಛ ಇದು, ಗಗನದಲ್ಲಿ ಧನುಸ್ಸಿನ ಆಕಾರದಲ್ಲಿ ಕಾಣಿಸುವುದು. ಹೆಸರೇ ಹೇಳುವಂತೆ ಸಂಪತ್ತು ಬರುವುದು ಎಂದರ್ಥ.

ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ.‌ ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು…

ಮಿತ್ರರು ಅಧಿಕ : ಇವರು ಹೆಚ್ಚು ಮಿತ್ರರನ್ನು ಸಂಪಾದಿಸುತ್ತಾರೆ. ಎಲ್ಲರ ಬಳಕೆಯೂ ಹೆಚ್ಚಿರುತ್ತದೆ. ಯಾವ ಸ್ನೇಹವನ್ನೂ ಕಡಿದುಕೊಳ್ಳಲು ಇಷ್ಟಪಡುವುದಿಲ್ಲ.

ವಿದ್ಯಾವಾನ್ : ಸರಿಯಾದ ಕ್ರಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿ, ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ‌ಅನೇಕ ವಿದ್ಯೆಗಳ ಪರಿಚಯ ಹಾಗೂ ವಿದ್ಯೆಯಲ್ಲಿ ಆಸಕ್ತಿ ಇರುತ್ತದೆ.

ಸಂಪತ್ತಿನ ಲಾಭ : ಇವರು ಎಲ್ಲ ಸಂಪತ್ತಿನಿಂದ ಕೂಡಿದವರಾಗಿರುತ್ತಾರೆ. ಎಲ್ಲ ರೀತಿಯ ಸಮೃದ್ಧಿಯೂ ಇರುತ್ತದೆ.

ವೇಷಭೂಷಣ : ಇವರಿಗೆ ಅಲಂಕಾರ, ವೇಷಭೂಷಣಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ನಾನಾ ಆಭರಣಗಳನ್ನು ತೊಟ್ಟುಕೊಳ್ಳಲು ಇಚ್ಛಿಸುವರು.

ದಾನ ಗುಣ : ಕೇವಲ ಸಂಪತ್ತು ಮಾತ್ರ ಇರದು. ಜೊತೆಗೆ ದಾನ ಮಾಡುವ ಸ್ವಭಾವವೂ ಇವರಲ್ಲಿ ಅಧಿಕವಾಗಿರುವುದು. ತಮ್ಮ ಬಳಿ ಇರುವ ವಸ್ತುವನ್ನು ಕೇಳಿದವರಿಗೆ, ಇಷ್ಟವಾದವರಿಗೆ ದಾನಮಾಡುವರು.

ಪರಾಕ್ರಮೀ : ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲರಲ್ಲ. ಎಂತಹ ಸಂಕಷ್ಟವನ್ನೂ ಎದುರಿಸುವರು. ಸಾಹಸದ ಪ್ರವೃತ್ತಿಯು ಇವರಲ್ಲಿ ಇರುತ್ತದೆ.

ರಾಜ ಸಮಾನ : ಇದು ಬಹಳ ವಿಶೇಷ. ತಮ್ಮ ಜೀವನದಲ್ಲಿ ಯಾವಾಗಲಾದರೂ ರಾಜನಾಗುವ ಅಥವಾ ರಾಜನಿಗೆ ಸಮಾನವಾದ ಯೋಗ್ಯತೆಯನ್ನು ಸಂಪಾದಿಸುತ್ತರೆ. ಸಂಪತ್ತು ಕೂಡ ರಾಜನಿಗೆ ಸಮಾನವಾದುದು ಬರುತ್ತದೆ.

ಹೀಗೆ ಎಲ್ಲ ನಕ್ಷತ್ರಗಳಲ್ಲಿಯೂ ಪುಣ್ಯಕರವಾದ ನಕ್ಷತ್ರಗಳಲ್ಲಿ ಇದೂ ಒಂದು.

– ಲೋಹಿತ ಹೆಬ್ಬಾರ್ – 8762924271

BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್