AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೇಕ ಗುಣಗಳ ಗುಚ್ಛ ಈ ನಕ್ಷತ್ರ; ಯಾವ ನಕ್ಷತ್ರ? ಏನು ಗುಣ?

ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ.‌ ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು...

ಅನೇಕ ಗುಣಗಳ ಗುಚ್ಛ ಈ ನಕ್ಷತ್ರ; ಯಾವ ನಕ್ಷತ್ರ? ಏನು ಗುಣ?
Punarvasu Nakshatra
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 20, 2024 | 9:17 PM

Share

ಇದು ಅಂತಿಂಥ ನಕ್ಷತ್ರವಲ್ಲ. ನಕ್ಷತ್ರಗಳಲ್ಲಿ ಶ್ರೇಷ್ಠವಾದ ನಕ್ಷತ್ರವಿದು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯರಾಗಿರದವರು. ಅದೇ ಪುನರ್ವಸು ನಕ್ಷತ್ರ. ಏಳನೇ ನಕ್ಷತ್ರ ಇದು. ಇದರ ದೇವತೆ, ದೇವತೆಗಳ ತಾಯಿ ಅದಿತಿ. ಐದು ನಕ್ಷತ್ರಗಳ ಗುಚ್ಛ ಇದು, ಗಗನದಲ್ಲಿ ಧನುಸ್ಸಿನ ಆಕಾರದಲ್ಲಿ ಕಾಣಿಸುವುದು. ಹೆಸರೇ ಹೇಳುವಂತೆ ಸಂಪತ್ತು ಬರುವುದು ಎಂದರ್ಥ.

ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ.‌ ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು…

ಮಿತ್ರರು ಅಧಿಕ : ಇವರು ಹೆಚ್ಚು ಮಿತ್ರರನ್ನು ಸಂಪಾದಿಸುತ್ತಾರೆ. ಎಲ್ಲರ ಬಳಕೆಯೂ ಹೆಚ್ಚಿರುತ್ತದೆ. ಯಾವ ಸ್ನೇಹವನ್ನೂ ಕಡಿದುಕೊಳ್ಳಲು ಇಷ್ಟಪಡುವುದಿಲ್ಲ.

ವಿದ್ಯಾವಾನ್ : ಸರಿಯಾದ ಕ್ರಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿ, ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ‌ಅನೇಕ ವಿದ್ಯೆಗಳ ಪರಿಚಯ ಹಾಗೂ ವಿದ್ಯೆಯಲ್ಲಿ ಆಸಕ್ತಿ ಇರುತ್ತದೆ.

ಸಂಪತ್ತಿನ ಲಾಭ : ಇವರು ಎಲ್ಲ ಸಂಪತ್ತಿನಿಂದ ಕೂಡಿದವರಾಗಿರುತ್ತಾರೆ. ಎಲ್ಲ ರೀತಿಯ ಸಮೃದ್ಧಿಯೂ ಇರುತ್ತದೆ.

ವೇಷಭೂಷಣ : ಇವರಿಗೆ ಅಲಂಕಾರ, ವೇಷಭೂಷಣಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ನಾನಾ ಆಭರಣಗಳನ್ನು ತೊಟ್ಟುಕೊಳ್ಳಲು ಇಚ್ಛಿಸುವರು.

ದಾನ ಗುಣ : ಕೇವಲ ಸಂಪತ್ತು ಮಾತ್ರ ಇರದು. ಜೊತೆಗೆ ದಾನ ಮಾಡುವ ಸ್ವಭಾವವೂ ಇವರಲ್ಲಿ ಅಧಿಕವಾಗಿರುವುದು. ತಮ್ಮ ಬಳಿ ಇರುವ ವಸ್ತುವನ್ನು ಕೇಳಿದವರಿಗೆ, ಇಷ್ಟವಾದವರಿಗೆ ದಾನಮಾಡುವರು.

ಪರಾಕ್ರಮೀ : ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲರಲ್ಲ. ಎಂತಹ ಸಂಕಷ್ಟವನ್ನೂ ಎದುರಿಸುವರು. ಸಾಹಸದ ಪ್ರವೃತ್ತಿಯು ಇವರಲ್ಲಿ ಇರುತ್ತದೆ.

ರಾಜ ಸಮಾನ : ಇದು ಬಹಳ ವಿಶೇಷ. ತಮ್ಮ ಜೀವನದಲ್ಲಿ ಯಾವಾಗಲಾದರೂ ರಾಜನಾಗುವ ಅಥವಾ ರಾಜನಿಗೆ ಸಮಾನವಾದ ಯೋಗ್ಯತೆಯನ್ನು ಸಂಪಾದಿಸುತ್ತರೆ. ಸಂಪತ್ತು ಕೂಡ ರಾಜನಿಗೆ ಸಮಾನವಾದುದು ಬರುತ್ತದೆ.

ಹೀಗೆ ಎಲ್ಲ ನಕ್ಷತ್ರಗಳಲ್ಲಿಯೂ ಪುಣ್ಯಕರವಾದ ನಕ್ಷತ್ರಗಳಲ್ಲಿ ಇದೂ ಒಂದು.

– ಲೋಹಿತ ಹೆಬ್ಬಾರ್ – 8762924271

Follow Us
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ