AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Scorpio Yearly Horoscope 2024: ವೃಶ್ಚಿಕ ರಾಶಿ ವರ್ಷ ಭವಿಷ್ಯ; ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು ವಾರ್ಷಿಕ ಭವಿಷ್ಯ ಇಲ್ಲಿದೆ

ವೃಶ್ಚಿಕ ರಾಶಿ ವರ್ಷ ಭವಿಷ್ಯ 2024: ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮನ್ನು ನೀವು ಬಹಳ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯ.‌ ದುಡುಕುವ ಸಂದರ್ಭಗಳು ಹೆಚ್ಚು ಕಾಣಿಸುವುದು. ಸಾವಧಾನತೆಯನ್ನು ಇಟ್ಟುಕೊಳ್ಳುವುದು ನಿಮಗೆ ಸವಾಲಾಗಬಹುದು. ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು, ಅಧಿಕಾರದಲ್ಲಿ ಒತ್ತಡ, ಉದ್ಯೋಗದಲ್ಲಿ ಹಿನ್ನಡೆಗಳನ್ನು ಕಾಣುವಿರಿ.

Scorpio Yearly Horoscope 2024: ವೃಶ್ಚಿಕ ರಾಶಿ ವರ್ಷ ಭವಿಷ್ಯ; ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 15, 2023 | 6:54 PM

Share

ರಾಶಿಚಕ್ರದ ಎಂಟನೇ ರಾಶಿ ಇದಾಗಿದೆ. ರಾಶಿ ಅಧಿಪತಿಯು ಕುಜನು. ಗುರುವು ವರ್ಷಾರಂಭದಲ್ಲಿ ಷಷ್ಠದಲ್ಲಿ ಇರುವುದರಿಂದ ಗುರುಬಲವಿಲ್ಲ. ದೈವಾನುಗ್ರಹವೂ ಇಲ್ಲ.‌ ನಿಮ್ಮ ಆಗಬೇಕಾದ ಕಾರ್ಯಗಳೂ ಆಗದೇ ತೊಂದರೆಗೆ ಸಿಕ್ಕಿಕೊಳ್ಳುವಿರಿ. ಶನಿಯು ಚತುರ್ಥದಲ್ಲಿ ಇದ್ದು ಕುಟುಂಬ, ಮಿತ್ರರನ್ನು ಕಳೆದುಕೊಳ್ಳುವ ಅಥವಾ ವಿಯೋಗವನ್ನೂ ಕೊಡಿಸುವನು.

2024ರ ವೃಶ್ಚಿಕ ರಾಶಿಯ ಭವಿಷ್ಯ

ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮನ್ನು ನೀವು ಬಹಳ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯ.‌ ದುಡುಕುವ ಸಂದರ್ಭಗಳು ಹೆಚ್ಚು ಕಾಣಿಸುವುದು. ಸಾವಧಾನತೆಯನ್ನು ಇಟ್ಟುಕೊಳ್ಳುವುದು ನಿಮಗೆ ಸವಾಲಾಗಬಹುದು. ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು, ಅಧಿಕಾರದಲ್ಲಿ ಒತ್ತಡ, ಉದ್ಯೋಗದಲ್ಲಿ ಹಿನ್ನಡೆಗಳನ್ನು ಕಾಣುವಿರಿ.

ಧನಾಗಮನ :

ಸಂಪತ್ತನ್ನು ಕಳೆದುಕೊಂಡಿದ್ದ ನಿಮಗೆ ಮತ್ತೆ ಸಂಪತ್ತುಗಳು ಬಂದು ಸೇರಲಿವೆ. ಗುರುವು ಸಪ್ತಮಸ್ಥಾನಕ್ಕೆ ಬಂದ ಅನಂತರ ಆದಾಯವನ್ನು ಹೆಚ್ವಿಸಿ ನಿಮಗೆ ಸಂತೋಷವನ್ನು ಕೊಡುವನು.

ಪ್ರೀತಿ ಮತ್ತು ವಿವಾಹ :

ವಿವಾಹವನ್ನು ಮಾಡಿಕೊಳ್ಳಬೇಕು ಎನ್ನುವ ಮನಸ್ಸು ಇರುವವರಿಗೆ ಅವಕಾಶಗಳು ತಾನಾಗಿಯೇ ಕೂಡಿಬರುವುದು. ಉತ್ತಮ‌ಕುಲದ ಸ್ತ್ರೀಯ ಜೊತೆ ವಿವಾಹವು ಆಗಲಿದೆ. ಏಪ್ರಿಲ್ ನ ಅನಂತರ ನಿಮ್ಮ ಪ್ರೇಮವು ಇನ್ನಷ್ಟು ಗಟ್ಟಿಯಾಗುವುದು. ಮನೆಯಿಂದ ಅನುಮತಿಯೂ ಸಿಗುವುದು.

ವೃತ್ತಿ :

ವೃತ್ತಿಯು ಸಾಧಾರಣವಾಗಿ ಸಾಗುತ್ತಿದ್ದರೂ ಆಗಷ್ಟ್ ಮಾಸದ ಸಂದರ್ಭದಲ್ಲಿ ನಿಮ್ಮ ವೃತ್ತಿಯಲ್ಲಿ ಬದಲಾವಣೆ ಇರುವುದು.‌ ಸರ್ಕಾರೀ ಕಛೇರಿಯಲ್ಲಿ ಕೆಲಸ ಮಾಡುವವರಿಗೆ ಅಂದುಕೊಂಡಂತೆ ವರ್ಗಾವಣೆ, ಭಡ್ತಿ ಸಿಕ್ಕಿ ಸಂತೋಷಪಡುವಿರಿ.

ಆರೋಗ್ಯ ಸ್ಥಿತಿ :

ಮಾರ್ಚ್ ತಿಂಗಳ ಸಮಯದಲ್ಲಿ ನಿಮ್ಮ ಆರೋಗ್ಯ ಅಥವಾ ಮಕ್ಕಳ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸಗಳು ಆಗುವ ಸಾಧ್ಯತೆ ಇದೆ. ಹಣವನ್ನು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ವರ್ಷದ ಕೊನೆಯಲ್ಲೂ ನೀವು ಆರೋಗ್ಯವು ಕೆಡಬಹುದು.

ಸುಬ್ರಹ್ಮಣ್ಯನ‌ ಆರಾಧನೆಯನ್ನು ಮಾಡಿ.‌ ಬರುವ ಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ಕೊಡುವನು. ಕಷ್ಟದ ನಿವಾರಣೆಯ ಮಾರ್ಗವನ್ನೂ ತೋರಿಸುವನು.

ಲೋಹಿತ ಹೆಬ್ಬಾರ್, ಇಡುವಾಣಿ

Published On - 6:52 pm, Fri, 15 December 23

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್