AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virgo Yearly Horoscope 2024: ಕನ್ಯಾ ರಾಶಿ ವರ್ಷ ಭವಿಷ್ಯ; ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ ವಾರ್ಷಿಕ ಭವಿಷ್ಯ ಇಲ್ಲಿದೆ

ಕನ್ಯಾ ರಾಶಿ ವರ್ಷ ಭವಿಷ್ಯ 2024: ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ, ಡೋಲಾಯಮಾನವಾಗಿ ಒಂದು ಸರಿಯಾದ ದಿಕ್ಕಿನತ್ತ ಸಾಗುವುದಿಲ್ಲ. ಒತ್ತಡಗಳು ನಿಮ್ಮ ಮನಸ್ಸನ್ನು ಒಂದೆಡೆ ನಿಲ್ಲಿಸಲು ಬಿಡದು. ಅನಂತರ ನಿಮ್ಮ ಪ್ರಯಾಣ ಒಂದೊಂದೇ ಸೋಪಾನವನ್ನು ಏರಿ ಉನ್ನತ ಮಟ್ಟಕ್ಕೆ ಏರುವುದು.

Virgo Yearly Horoscope 2024: ಕನ್ಯಾ ರಾಶಿ ವರ್ಷ ಭವಿಷ್ಯ; ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 15, 2023 | 6:53 PM

Share

ರಾಶಿಚಕ್ರದ ಆರನೆ ರಾಶಿ ಕನ್ಯಾ. ವರ್ಷಾರಂಭದಲ್ಲಿ ಗುರುಬಲವು ನಿಮಗೆ ಇರದು. ಹಾಗಾಗಿ ಮುಂದೆ ಹೆಜ್ಜೆ ಹಾಕಲು, ಹಾಕಿದ ಹೆಜ್ಜೆಯನ್ನು ದೃಢ ಮಾಡಿಕೊಳ್ಳಲು, ಸಮಯ ಬೇಕಾಗುವುದು. ಸಪ್ತಮದಲ್ಲಿ ರಾಹು, ಸ್ವಸ್ಥಾನದಲ್ಲಿ ಕೇತು, ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಬುಧನು ಚತುರ್ಥದಲ್ಲಿ ಗುರುವಿನ ಮನೆಯಲ್ಲಿ ಸೂರ್ಯನ ಜೊತೆ ಇರುವನು.

2024ರ ಕನ್ಯಾ ರಾಶಿಯ ಭವಿಷ್ಯ

ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ, ಡೋಲಾಯಮಾನವಾಗಿ ಒಂದು ಸರಿಯಾದ ದಿಕ್ಕಿನತ್ತ ಸಾಗುವುದಿಲ್ಲ. ಒತ್ತಡಗಳು ನಿಮ್ಮ ಮನಸ್ಸನ್ನು ಒಂದೆಡೆ ನಿಲ್ಲಿಸಲು ಬಿಡದು. ಅನಂತರ ನಿಮ್ಮ ಪ್ರಯಾಣ ಒಂದೊಂದೇ ಸೋಪಾನವನ್ನು ಏರಿ ಉನ್ನತ ಮಟ್ಟಕ್ಕೆ ಏರುವುದು.

ಧನಾಗಮನ :

ಧನಾಧಿಪತಿಯಾದಿ ಶುಕ್ರನು ವರ್ಷಾರಂಭ ತೃತೀಯಸ್ಥಾನದಲ್ಲಿದ್ದು ಸಹೋದರನಿಂದ ನಿಮ್ಮ ಕೆಲಸಗಳಿಗೆ ಧನಸಹಾಯವನ್ನು ಪಡೆಯಬಹುದು. ಏಪ್ರಿಲ್ ತಿಂಗಳ ಸಮಯಕ್ಕೆ ದ್ವಿತೀಯದ ಅಧಿಪತಿಯು ಉಚ್ಚ ಸ್ಥಾನ ಎಂದರೆ ಮೀನರಾಶಿಗೆ ಹೋಗುವುದರಿಂದ ನಿಮ್ಮ ಕಾಮನೆಗಳನ್ನು ಪೂರೈಸಿಕೊಳ್ಳುವಿರಿ.

ಪ್ರೀತಿ ಮತ್ತು ವಿವಾಹ

ಜನವರಿಯಲ್ಲಿ ಶುಕ್ರನು ಕುಜನ ಸ್ಥಾನದಲ್ಲಿ ಇರಲಿದ್ದು ಪ್ರೀತಿಯು ಉಂಟಾಗುವುದು. ಮಾರ್ಚ್ ನಲ್ಲಿ ನಿಮ್ಮ ವಿವಾಹವು ನಿಶ್ಚಿತವಾಗಿ ಗುರುಬಲವು ಬಂದಾಗ ವಿವಾಹವೂ ಆಗಲಿದೆ. ವಿವಾಹಕ್ಕೆ ಮೊದಲು ಸರಿಯಾದ ಪರೀಕ್ಷೆಯನ್ನು ಮಾಡಿಕೊಳ್ಳುವುದು ಉತ್ತಮ.

ವೃತ್ತಿ :

ವೃತ್ತಿಯ ಅಧಿಪತಿ ವರ್ಷಾರಂಭದಲ್ಲಿ ತೃತೀಯದಲ್ಲಿ ಇರುವನು. ತಂತ್ರಜ್ಞರಿಗೆ ಹೆಚ್ಚು, ಶಿಕ್ಷಣ ವೃತ್ತಿಯಲ್ಲಿ ಕಾರ್ಯವನ್ನು ಮಾಡುವವರಿಗೆ ಮಾಧ್ಯಮದಲ್ಲಿ ಕಾರ್ಯವನ್ನು ಮಾಡುವವರಿಗೆ ಪ್ರಶಂಸೆ ಹಾಗೂ ಉನ್ನತ ಸ್ಥಾನ ಮಾಪನಗಳನ್ನು ಪಡೆಯುವಿರಿ. ಏಪ್ರಿಲ್‌ ನಲ್ಲಿ ನಿಮ್ಮ‌ ಬುದ್ಧಿಯನ್ನು ಸ್ತಿಮಿತದಲ್ಲಿ ಇರಿಕೊಳ್ಳಿ. ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಮುಗ್ಗರಿಸಿಬೇಕಾದೀತು.

ಆರೋಗ್ಯ ಸ್ಥಿತಿ :

ಆರೋಗ್ಯದ ಸ್ಥಾನದಲ್ಲಿ ಶನಿಯು ಇದ್ದು ನಿಮ್ಮ ಆರೋಗ್ಯವನ್ನು ಸ್ಥಿರಗೊಳಿಸುವನು. ಆದರೆ ಅಷ್ಟಮಸ್ಥಾನವು ಕುಜನದ್ದಾಗಿರುವ ಕಾರಣ ಆಯುಧ, ವಾಹನ, ವಿದ್ಯುತ್ ಉಪಕರಣಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅವಶ್ಯಕ. ಹುಂಬುತನದಿಂದ ತೊಂದರೆಯನ್ನು ತಂದುಕೊಳ್ಳುವಿರಿ.

ಮಹಾವಿಷ್ಣುವಿನ ಆರಾಧನೆಯನ್ನು ಸಾಧ್ಯವಾದಷ್ಟು ಮಾಡಿ.

ಲೋಹಿತ ಹೆಬ್ಬಾರ್, ಇಡುವಾಣಿ

Published On - 6:35 pm, Fri, 15 December 23

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ