Weekly Horoscope in Kannada: ವಾರ ಭವಿಷ್ಯ: ಡಿ 08 ರಿಂದ 14 ರವರೆಗೆ ವಾರ ಭವಿಷ್ಯ

ಇದು ಡಿಸೆಂಬರ್ ತಿಂಗಳ ಎರಡನೇ ವಾರವಿದಾಗಿದೆ. ೦೮-೧೨-೨೦೨೪ರಿಂದ ೧೪-೧೨-೨೦೨೪ರವರೆಗೆ ಇರಲಿದೆ. ಶುಕ್ರನು ಮಿತ್ರನ‌ ರಾಶಿಗೆ ಅದರಲ್ಲಿಯೂ ಕುಜನ ನವಾಂಶದಲ್ಲಿ ಇರುವುದು ಶುಭಾಶುಭ ವಿಚಾರಗಳನ್ನು ಚಿಂತಿಸಬೇಕಾಗುತ್ತದೆ. ಕೆಲವು ವ್ಯರ್ಥ ಅನರ್ಥಗಳು ಕೆಲವು ರಾಶಿಗೆ ಇರಲಿದೆ.

Weekly Horoscope in Kannada: ವಾರ ಭವಿಷ್ಯ: ಡಿ 08 ರಿಂದ 14 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಡಿ 08 ರಿಂದ 14 ರವರೆಗೆ ವಾರ ಭವಿಷ್ಯ
Edited By:

Updated on: Dec 08, 2024 | 1:02 AM

ಇದು ಡಿಸೆಂಬರ್ ತಿಂಗಳ ಎರಡನೇ ವಾರವಿದಾಗಿದೆ. ೦೮-೧೨-೨೦೨೪ರಿಂದ ೧೪-೧೨-೨೦೨೪ರವರೆಗೆ ಇರಲಿದೆ. ಶುಕ್ರನು ಮಿತ್ರನ‌ ರಾಶಿಗೆ ಅದರಲ್ಲಿಯೂ ಕುಜನ ನವಾಂಶದಲ್ಲಿ ಇರುವುದು ಶುಭಾಶುಭ ವಿಚಾರಗಳನ್ನು ಚಿಂತಿಸಬೇಕಾಗುತ್ತದೆ. ಕೆಲವು ವ್ಯರ್ಥ ಅನರ್ಥಗಳು ಕೆಲವು ರಾಶಿಗೆ ಇರಲಿದೆ.

ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ತಿಂಗಳ ಎರಡನೇ ವಾರ ಶುಭ. ಶುಕ್ರನು ದಶಮದಲ್ಲಿ ನಿಮ್ಮ ಉದ್ಯಮಕ್ಕೆ ಲಾಭದಾಯಕನಾಗುವನು. ಬರುವ ಅವಕಾಶವನ್ನು ಬಿಡದೇ ಬಳಸಿಕೊಳ್ಳಿ. ಸಹನೆಯನ್ನು ಬಿಟ್ಟು ಮನಸ್ಸು ಚಂಚಲವಾಗದಿರಲಿ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಸಮಾಧನದಿಂದ ಬಂದುದನ್ನು ಎದುರಿಸಿ. ನಿಮ್ಮನ್ನು ಬಂದು ಸೇರಲಿರುವ ಸಂಪತ್ತನ್ನು ಉತ್ತಮಕಾರ್ಯಕ್ಕೆಂದು ವಿನಿಯೋಗಿಸಿ. ಸ್ತ್ರೀಯರು ಸಂಗಾತಿಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಸಿಟ್ಟಿನಿಂದ ಏನನ್ನೂ ಹೇಳುವುದು ಬೇಡ. ಸತ್ಫಲವನ್ನು ಪಡಯಬಹುದಾಗಿದೆ. ನಿಮ್ಮ ಒಡನಾಟ ದುಃಖದಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ. ವ್ಯಕ್ತಿತ್ವದಿಂದ ಸಕ್ಕರೆ ಇರುವೆಗಳು ಬಂದು ಮುತ್ತುವಂತೆ ನಿಮ್ಮನ್ನು ಬಂದು ಸೇರುವರು. ಪ್ರಾಣಿಗಳಿಗೆ ಆಹಾರವನ್ನು ನೀಡಿ.

ವೃಷಭ ರಾಶಿ: ಈ ತಿಂಗಳ ಎರಡನೇ ವಾರದಲ್ಲಿ ಶುಭಾಶುಭ ಫಲ. ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಷ್ಟಗಳು ಕಣ್ಮುಂದೆ ಕಂಡರೂ ಬೆಳಗಿನ ಸೂರ್ಯನಕಿರಣಕ್ಕೆ ಮಂಜು ಕರಗುವಂತೆ ಕರಗಿಹೋಗುತ್ತದೆ‌. ಇಷ್ಟವಿಲ್ಲದಿದ್ದರೂ ಇಷ್ಟದಂತೆ ತೋರಿಸಿಕೊಳ್ಳಬೇಕಾಗುವುದು. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ಕಾರ್ಯದ ಒತ್ತಡದಿಂದ ಕಛೇರಿಯಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿಬರಬಹುದು. ಇದೇ ಕಾರಣಕ್ಕೆ ಮನೆಯಲ್ಲಿ ಉದ್ವಿಗ್ನತೆಯುಂಟಾಗುವುದು. ಮೃಷ್ಟಾನ್ನ ಭೋಜನವನ್ನು ಇಂದು ಉಂಡು ಸುಖಿಸುವಿರಿ. ಒಬ್ಬರೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಹೋಗಬೇಡಿ. ಗೋಗ್ರಾಸವನ್ನು ನೀಡಿ, ಕುಂಕುಮವನ್ನು ಧರಿಸಿ.

ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಅಶುಭ. ಗುರು ಹಾಗು ಶುಕ್ರರು ಅಶುಭ ಸ್ಥಾನದಲ್ಲಿ ಇದ್ದು ನಾನಾ ರೀತಿಯಲ್ಲಿ ತೊಂದರೆಯನ್ನು ಎದುರಿಸಬೇಕಾಗುವುದು. ಕುಟುಂಬದವರೊಂದಿಗೆ ದಿನದ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ, ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ಸಂತೋಷದ ಬೆಲೆಯನ್ನು ಅರಿತುಕೊಳ್ಳುವಿರಿ. ಅಪಾತ್ರರಿಗೆ ಗೌರವ ನೀಡುವಿರಿ. ಕಾರ್ಯಸ್ಥಾನದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಮಾಡಿ.

ಕರ್ಕಾಟಕ ರಾಶಿ: ಈ ವಾರದಲ್ಲಿ ನಿಮಗೆ ಶುಭ. ಗುರು ಹಾಗು ಶುಕ್ರರು ಉತ್ತಮ ಸ್ಥಾನದಲ್ಲಿದ್ದು ಎಲ್ಲ ಕಡೆಯಿಂದ ಸಕಾರಾತ್ಮಕ ವಿಚಾರಗಳು ಬರುವುದು. ವಿನಾಕಾರಣ ಹಣದ ವ್ಯಯದ ಸಾಧ್ಯತೆ ಇದೆ. ಮುಂಜಾಗ್ರತೆಯನ್ನು ಇರಿಸಿಕೊಳ್ಳಿ. ದಂಪತಿಗಳ ನಡುವೆ ಕಲಹವೆದ್ದು ಕೊನೆಗೆ ಪೂರ್ವಕೃತ್ಯವನ್ನು ಸ್ಮರಿಸಕೊಂಡಲ್ಲಿ ವಿನೋದದಲ್ಲಿ ಮುಕ್ತಾಯಗೊಳ್ಳುವುದು. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಕುಜನು ನೀಚನಾಗಿದ್ದು ಬೇಡದ ಕಡೆ ಮನಸ್ಸು ಚಲಿಸುವುದು.. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಈ ವಾರದ ಹೆಚ್ಚಿನ ಕಾರ್ಯವನ್ನು, ಲವಲವಿಕೆಯಿಂದ ಮಾಡುವಿರಿ.

ಸಿಂಹ ರಾಶಿ: ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ. ಶುಕ್ರನು ಷಷ್ಠದಲ್ಲಿ ಇದ್ದು ಸ್ತ್ರೀ ಸಂಬಂಧವಾದ ಅರೂಪವನ್ನು ಮಾಡಿಸುವನು. ಸ್ನೇಹದಲ್ಲಿ ಒಡಕು ಮೂಡುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ಸಿಂಹದಂತೆ ಹಿಂದೆ ಆಗಿಹೋದ ಮಹತ್ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಯಾರನ್ನಾದರೂ ಪ್ರೀತಿಸಿದ್ದರೆ ತನ್ನ ದೊಡ್ಡ ಹೆಜ್ಜೆಯನ್ನು ಇಟ್ಟು ತನ್ನ ಸರಿಯಾದ ರೂಪವನ್ನು ತೋರಿಸುವುದು. ವಿಶ್ವಾಸಃ ಫಲದಾಯಕಃ ಎನ್ನುವ ಮಾತನ್ನು ನಂಬಿ ನಡೆಯುವವರು. ಸೂರ್ಯಾಷ್ಟಕವನ್ನು ಪ್ರಾತಃಕಾಲದಲ್ಲಿ ಪಠಿಸಿ.

ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭ. ದೇಹಾಯಾಸದ ಕರ್ಮಗಳನ್ನು ಕೈಗೆತ್ತಿಕೊಳ್ಳುವುದು ಉಚಿತವಲ್ಲ. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆನಿ ಆಗಬಹುದು. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ಹರುಷಕ್ಕೆ ಹತ್ತರು ದಾರಿಗಳಿವೆ. ಚೆನ್ನಾಗಿ ಮಾತನಾಡುವುದೊಂದೇ ನಿಮಗೀಗ ಬೇಕಾಗಿದ್ದು. ಹಣದ ವಿಚಾರದಲ್ಲಿ ಹಾಸಿಗೆಯಿದ್ದಷ್ಟೆ ಕಾಲನ್ನು ಬಿಡಬೇಕು. ಲಕ್ಷ್ಮೀಕಟಾಕ್ಷಕ್ಕೆ ಅಲ್ಪ ಪ್ರಯತ್ನ ಸಾಕು.

ತುಲಾ ರಾಶಿ: ಈ ವಾರದಲ್ಲಿ ನಿಮಗೆ ಉದ್ಯೋಮದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾ ಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಶುಕ್ರನು ಚತುರ್ಥದಲ್ಲಿ ಇರುವ ಕಾರಣ ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ಪ್ರವಾಹದ ವಿರುದ್ಧ ಈಜುವುದು ಸಾಧ್ಯವೆಂದು ಅಂದುಕೊಳ್ಳಬೇಡಿ. ಅಪಮಾನವೂ ನಿಮ್ಮನ್ನು ಕೆರಳಿಸಬಹುದು.

ವೃಶ್ಚಿಕ ರಾಶಿ: ಎಂಟನೇ ರಾಶಿಯವರಿಗೆ ಈ ವಾರ ಅಶುಭ ಕಡಿಮೆ. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಅತಿಯಾದ ಕಲ್ಪನೆ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಸಹೋದರಿಯರು ನಡುವೆ ಬಾಂಧವ್ಯ ಚೆನ್ನಾಗಿರುವುದು. ಬಂಧುಗಳು ಆಡವ ಮಾತುಗಳಿಂದ ಉದ್ವೇಗಕ್ಕೆ ಒಳಗಾಗಲು ಹೋಗಬೇಡಿ. ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿ ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರೆ ನೀವು ಯಾರೆಂದು ತಿಳಿಯುತ್ತದೆ. ನಿಮ್ಮ ಕಾರ್ಯಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡಿ. ಅರ್ಧನಾರೀಶ್ವರ ಸ್ತೋತ್ರ ಮಾಡಿ.

ಧನು ರಾಶಿ: ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಮಿಶ್ರಫಲ. ಸೂರ್ಯ ಹಾಗೂ ಬುಧರು ದ್ವಾದಶದಲ್ಲಿ ಇರುವಕಾರಣ ಏನು ಮಾಡುತ್ತಿದ್ದೇನೆ ಎಂದು ಸರಿಯಾಗಿ ಗ್ರಹಿಸಿ ಮುನ್ನಡಯಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳು ಕೇಳಿಬರಬಹುದು. ಅಂತಹ ಮಾತುಗಳಿಗೆ ನಿರ್ಲಕ್ಷ್ಯವೇ ಉತ್ತರ. ಸಾರ್ವಜನಿಕವಾಗಿ ತೆಗೆದುಕೊಳ್ಳುವ ನಿಮ್ಮ ನಿರ್ಧಾರವು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಶುಕ್ರನು ದ್ವಿತೀಯದಲ್ಲಿ ಇದ್ದು ಹೇಳಿಕೊಳ್ಳುವ ಮೂಲಕ ನಿಮ್ಮ ಮನಸ್ಸು ಹಗುರ ಮಾಡುವನು. ಆಹಾರವನ್ನು ಮನಸೋ ಇಚ್ಛೆ ಸೇವಿಸಿ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮ ಆಹಾರವು ನಿಮ್ಮ ಮನಸ್ಸನ್ನೂ ಸರಿಯಾಗಿಸುವುದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಸಮಯ ಸುಮ್ಮನೇ ವ್ಯರ್ಥವಾಗುತ್ತಿದೆ. ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವುದನ್ನು ಗಮನಿಸಿಕೊಳ್ಳಿ. ಗೋಪೂಜೆಯನ್ನು ಭಕ್ತಿಯಿಂದ ಮಾಡಿ.

ಮಕರ ರಾಶಿ: ಈ ವಾರ ನಿಮಗೆ ಶುಭಾಶುಭಗಳು ಇವೆ. ಬುಧನು ಏಕಾದಶದಲ್ಲಿ ಇರುವ ಕಾರಣ ಬಂಧುಗಳ ಬೆಂಬಲ ನಿಮ್ಮ ಕಷ್ಟದ ಭಾರವನ್ನು ಕಡಿಮೆ ಮಾಡುತ್ತದೆ. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ‌. ಇದರೊಂದಿಗೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಈ ವಾರ ಬ್ಯಾಂಕ್ ಉದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ. ರಾಮಸ್ಮರಣೆ ಮಾಡಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಅಶುಭ. ಶುಕ್ರನು ದ್ವಾದಶಕ್ಕೆ ಬರುವ ಕಾರಣ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತ ಬಳಗೂ ಅದಕ್ಕೆ ಪ್ರೋತಗಸಹ ಕೊಡಬಹುದು. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ನಿಮ್ಮ ನಂಬಿಕೆ ಫಲವನ್ನು ಕೊಡುತ್ತದೆ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಈ ವಾರ ಅನಾರೋಗ್ಯವೆದುರಾದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯಿರಿ. ನಿರ್ಲಕ್ಷ್ಯ ಬೇಡ. ವಿಷ್ಣು ಸಹಸ್ರನಾಮವನ್ನು ಪಠಿಸಿ.

ಮೀನ ರಾಶಿ: ಡಿಸೆಂಬರ್ ತಿಂಗಳ ಎರಡನೇ ವಾರ ಅಧಿಕ ಶುಭ. ಸಾಮರಸ್ಯ ಕೊರತೆ ಇರುವ ಕಡೆ ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಿದೆ. ನಿಮ್ಮಷ್ಟಕ್ಕೆ ನೀವೇ ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಆರ್ಥಿಕಸ್ಥಿತಿ ಸುಧಾರಿಸಲಿದೆ. ಮಾತನಾಡುವಾಗ ಸಮಯ, ಸಂದರ್ಭ, ವ್ಯಕ್ತಿಗಳನ್ನು ಗಮನಿಸಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ಅಪರೂಪದ ಅತಿಥಿಗಳ ಆಗಮನ ನಿಮ್ಮ ಕಾರ್ಯಕ್ಕೆ ಅಡ್ಡಿಯಾಗುವುದು. ಬೇಸರಿಸದೇ ಕರ್ತವ್ಯವೆಂದು ಅವರ ಜೊತೆ ಇರಿ. ಮಹತ್ತರವಾದ ಮಾರ್ಗವೂ ತೆರೆದುಕೊಳ್ಳಬಹುದು. ಎಂದೋ ಮಾಡಿದ ಉಪಕಾರ ನಿಮಗೆ ಉಪಯೋಗಕ್ಕೆ ಬರಲಿದೆ. ಇಷ್ಟದೇವರ ಭಜಿಸಿ.

ಲೋಹಿತ ಹೆಬ್ಬಾರ್-8762924271 (what’s app only)