
2026ರ ಮೇ 31ರಿಂದ ಜೂನ್ 06ರವರೆಗೆ ಮೊದಲ ವಾರವಾಗಿದ್ದು ಗ್ರಹಗತಿಗಳ ಆಧಾರ ಮೇಲೆ ಬಾಂಧವ್ಯದಲ್ಲಿ ಸುಧಾರಣೆ, ಆರ್ಥಿಕತೆಯಲ್ಲಿ ಅಸ್ತವ್ಯಸ್ತ, ನಿಷ್ಠುರಗಳು ಇವೆಲ್ಲ ಈ ವಾರದಲ್ಲಿ ಇರಲಿದೆ.
ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಧೈರ್ಯ, ಉತ್ಸಾಹ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ ಆತುರದ ನಿರ್ಧಾರಗಳು ಬೇಡ. ಆಸ್ತಿ ಮತ್ತು ವಾಹನ ಖರೀದಿಯ ಯೋಗವಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನವಿರಲಿ, ಕೋಪವನ್ನು ನಿಯಂತ್ರಿಸಿ.
ರಾಶಿಯಲ್ಲಿ ಸೂರ್ಯನಿರುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕೌಟುಂಬಿಕವಾಗಿ ತಂದೆಯ ಬೆಂಬಲ ಸಿಗಲಿದೆ. ಆದರೆ ಅಹಂಕಾರದ ಮಾತುಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದ್ದು, ಹೂಡಿಕೆಗೆ ಸಕಾಲ.
ಬುಧ ಮತ್ತು ಶುಕ್ರರ ಯುತಿಯಿಂದ ಬುದ್ಧಿಶಕ್ತಿ ಹಾಗೂ ಸೌಂದರ್ಯ ವೃದ್ಧಿಸಲಿದೆ. ವ್ಯಾಪಾರಿಗಳಿಗೆ ಭರಪೂರ ಲಾಭ ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ ಮತ್ತು ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಕಮ್ಯುನಿಕೇಶನ್ ವಲಯದವರಿಗೆ ಅತ್ಯಂತ ಶುಭ ವಾರವಿದು.
ಗುರು ಉಚ್ಛಸ್ಥಿತಿಯಲ್ಲಿರುವುದರಿಂದ ಭಾಗ್ಯೋದಯವಾಗಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಗುರು-ಹಿರಿಯರ ಆಶೀರ್ವಾದ ಸಿಗಲಿದೆ. ಆರ್ಥಿಕವಾಗಿ ದೊಡ್ಡ ಲಾಭ ಹಾಗೂ ಉದ್ಯೋಗದಲ್ಲಿ ಉನ್ನತಿ ಇರಲಿದೆ. ಕೀರ್ತಿ ಮತ್ತು ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಕೇತುವಿನ ಪ್ರಭಾವದಿಂದ ಮನಸ್ಸಿನಲ್ಲಿ ಅಸ್ಥಿರತೆ ಅಥವಾ ಗೊಂದಲ ಮೂಡಬಹುದು. ಯಾರಿಗೂ ಸಾಲ ನೀಡಲು ಹೋಗಬೇಡಿ. ಅನಗತ್ಯ ಪ್ರಯಾಣದಿಂದ ಆಯಾಸವಾಗಬಹುದು. ವಾರಾಂತ್ಯದಲ್ಲಿ ಧಾರ್ಮಿಕ ಚಿಂತನೆ ಹಾಗೂ ಈಶ್ವರ ಆರಾಧನೆಯಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗಲಿದೆ.
ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿಶೇಷವಾಗಿ ಸಾಲದ ವ್ಯವಹಾರಗಳಿಂದ ದೂರವಿರಿ. ಸಹೋದರರೊಂದಿಗೆ ಸೌಹಾರ್ದತೆಯಿಂದ ವರ್ತಿಸಿದರೆ ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ.
ಭಾಗ್ಯಸ್ಥಾನದ ಬಲದಿಂದ ದೀರ್ಘಾವಧಿ ಯೋಜನೆಗಳು ಯಶಸ್ವಿಯಾಗಲಿವೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ ಹಾಗೂ ಪ್ರವಾಸದ ಯೋಗವಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿವೆ. ನೆಮ್ಮದಿಯ ವಾರವಿದು.
ಕೆಲಸದ ಒತ್ತಡವಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಠಾತ್ ಧನಲಾಭದ ಸಾಧ್ಯತೆಯಿದ್ದು, ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.
ಲಗ್ನಸ್ಥ ನಕ್ಷತ್ರದ ಬಲದಿಂದ ಆತ್ಮವಿಶ್ವಾಸ ಹೆಚ್ಚಿರಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಂಡುಬರಲಿದ್ದು, ಉನ್ನತ ಶಿಕ್ಷಣಕ್ಕೆ ದಾರಿ ಸುಗಮವಾಗಲಿದೆ. ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ. ಹೊಸ ಕಾರ್ಯವನ್ನು ಆರಂಭಿಸಲು ಅತ್ಯಂತ ಯೋಗ್ಯವಾದ ಸಮಯವಿದು.
ಮಾನಸಿಕವಾಗಿ ಸ್ವಲ್ಪ ಆತಂಕ ಮೂಡಬಹುದು. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ಭೂಮಿ ಅಥವಾ ವಾಹನದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಸಾರ್ವಜನಿಕವಾಗಿ ಮಾತನಾಡುವಾಗ ಜಾಗ್ರತೆ ವಹಿಸಿ. ತಾಳ್ಮೆಯಿಂದ ವರ್ತಿಸಿದರೆ ವಾರಾಂತ್ಯಕ್ಕೆ ಎಲ್ಲಾ ಸವಾಲುಗಳು ದೂರವಾಗಲಿವೆ.
ರಾಶಿಯಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಅತಿಯಾದ ಯೋಚನೆಗಳು ಮೂಡಬಹುದು. ಧೈರ್ಯದಿಂದ ಕೆಲಸ ಮಾಡಿ, ಸಹೋದರರ ಬೆಂಬಲ ಸಿಗಲಿದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ. ಭ್ರಮೆಯಿಂದ ಹೊರಬಂದು ವಾಸ್ತವದಲ್ಲಿ ಬದುಕಿದರೆ ನೆಮ್ಮದಿ ಹಾಗೂ ಪ್ರಗತಿ ನಿಶ್ಚಿತ.
ರಾಶಿಯಲ್ಲಿ ಶನಿ ಇರುವುದರಿಂದ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ಆರ್ಥಿಕವಾಗಿ ಧನ ಹರಿವು ಚೆನ್ನಾಗಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕಣ್ಣು ಅಥವಾ ಹಲ್ಲಿನ ಸಮಸ್ಯೆ ಕಾಡಬಹುದು. ತಾಳ್ಮೆಯ ಮಾತುಗಳು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಲಿವೆ.
– ಲೋಹಿತ ಹೆಬ್ಬಾರ್