AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?

Effect of Mars Transit 2023; ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ. ಆ ಕುರಿತಾದ ವಿವರ ಮತ್ತು ಕೈಗೊಳ್ಳಬೇಕಾದ ಪರಿಹಾರದ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.

Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Ganapathi Sharma|

Updated on: Aug 18, 2023 | 8:55 PM

Share

ಸುಮಾರು ಒಂದುವರೆ ತಿಂಗಳುಗಳ ಅನಂತರ ಕುಜನು ಸ್ಥಾನವನ್ನು ಬದಲಿಸುತ್ತಿದ್ದಾನೆ. ಇಷ್ಟು ದಿನ ಸಿಂಹ ರಾಶಿಯಲ್ಲಿ ಬುಧನ ಜೊತೆ ಹೆಚ್ಚು ಕಾಲ ಹಾಗೂ ಶುಕ್ರನ ಜೊತೆ ಕೆಲವು ದಿನ ಹಾಗೂ ಸೂರ್ಯನ ಜೊತೆ ಒಂದೆರಡು ದಿನ ಇದ್ದು ಅನಂತರ ಕನ್ಯಾರಾಶಿಯನ್ನು ಪ್ರವೇಶಿಸುವನು. ಮಿತ್ರನ ಗೃಹದಲ್ಲಿ ಇದ್ದ ಕುಜನು ಇನ್ನು ಶತ್ರುವಿನ ಮನೆಯನ್ನು ಪ್ರವೇಶ ಮಾಡುವನು. ಹಾಗಾಗಿ ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ.

ಕನ್ಯಾ ರಾಶಿ

ಈ ರಾಶಿಯನ್ನೇ ಪ್ರವೇಶಿಸುವುದರಿಂದ ಬಲದ ವಿಚಾರವು ಬಂದಾಗ ನೀವು ಹಿಂದೇಟು ಹಾಕುವಿರಿ. ಯಂತ್ರಕ್ಕೆ ಸಂಬಂಧಿಸಿದ ವ್ಯಾಪಾರಗಳಿಂದ ನಷ್ಟವಾಗಬಹುದು. ಶರೀರಕ್ಕೆ ನಾನಾ ಪ್ರಕಾರದ ತೊಂದರೆಗಳು, ನೋವುಗಳು ಆಗಬಹುದು.

ತುಲಾ ರಾಶಿ

ದ್ವಾದಶಕ್ಕೆ ಬರುವ ಕುಜನಿಂದ ಭೂಮಿಯ ವ್ಯವಹಾರವು ಲಾಭದಾಯಕವಾಗದು. ಹಾಗೂ ಭೂಮಿಯಿಂದ ಉತ್ಪನ್ನವಾಗುವ ವಸ್ತುಗಳ ವ್ಯಾಪಾರದಲ್ಲಿಯೂ ಹಿನ್ನಡೆ ಅಥವಾ ನಷ್ಟವಾದೀತು. ಅಗ್ನಿಭಯವು ಉಂಟಾಗುವುದು.

ಧನು ರಾಶಿ

ಇದು ಕುಜನ‌ ದೃಷ್ಟಿಯು ಬೀಳುವ ರಾಶಿಯಾಗಿದ್ದು ವೃತ್ತಿಗೆ ಸಂಬಂಧಿಸಿದಂತೆ ತೊಂದರೆಗಳು ಬರಬಹುದು. ಕಛೇರಿಯಲ್ಲಿ ಮಾನಸಿಕ ನೆಮ್ಮದಿಯ ಕೊರತೆಯು ಎದ್ದು ತೋರುವುದು. ಉದ್ಯೋಗವನ್ನು ಬದಲಿಸಲೂ ಆಲೋಚನೆಯು ಬರಬಹುದು.

ಮೀನ ರಾಶಿ

ಇದು ಸಪ್ತಮರಾಶಿಯಾಗಲಿದ್ದು ವಿವಾಹಕ್ಕೆ ಅಡ್ಡಿಗಳು ಬರಬಹುದು. ಮಾತುಕತೆಯಾದ ವಿವಾಹವು ಮುರಿದು ಹೋಗಬಹುದು. ಮನಸ್ಸು ಬೇಡದ ನಕಾರಾತ್ಮಕ ಆಲೋಚನೆಗಳನ್ನೇ ಹೆಚ್ಚು ಮಾಡುವುದು.

ಮೇಷ ರಾಶಿ

ಕುಜನ ಕ್ಷೇತ್ರವೂ ಆಗಿದ್ದಾರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಸಂಪೂರ್ಣ ಶುಭಫಲವನ್ನು ಕೊಡಲಾರನು. ಶತ್ರುಗಳ ಸಂಹಾರಕನಾಗಿರವವನು ತನ್ನ ಬಲವನ್ನು ಕಳೆದುಕೊಳ್ಳುವನು. ಸಾಲಬಾಧೆಯು ನಿಮ್ಮನ್ನು ಕಾಡುವುದು.

ಮಿಥುನ ರಾಶಿ

ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಕಷ್ಟವಾದೀತು. ಸಹೋದರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ಬರಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು.

ಈ ಎಲ್ಲ ರಾಶಿಯವರೂ ದೇವಸೇನಾನೀ ಎನಿಸಿಕೊಂಡ ಕಾರ್ತಿಕೇಯನನ್ನು ನಿತ್ಯವೂ ಪ್ರಾರ್ಥಿಸಿ, ಸ್ತೋತ್ರವನ್ನು ಪಠಿಸುವುದರಿಂದ ಆತನಿಂದ ಬರಬಹುದಾದ ತೊಂದರೆಗಳು ಕಡಿಮೆ ಆಗಬಹುದು, ಇಲ್ಲವಾಗಲೂಬಹುದು.

ಸುಬ್ರಹ್ಮಣ್ಯನ ಪಠಣಶ್ಲೋಕ

ಷಡಾನನಂ ಕುಂಕುಮರಕ್ತವರ್ಣಂ ಮಹಾಮತಿಂ ದಿವ್ಯಮಯೂರವಾಹನಮ್ | ರುದ್ರಸ್ಯ ಸೂನುಂ ಸುರಸೈನ್ಯನಾಥಂ ಗುಹಂ ಸದಾ ಶರಣಮಹಂ ಪ್ರಪದ್ಯೇ ||

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!