AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?

Effect of Mars Transit 2023; ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ. ಆ ಕುರಿತಾದ ವಿವರ ಮತ್ತು ಕೈಗೊಳ್ಳಬೇಕಾದ ಪರಿಹಾರದ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.

Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 18, 2023 | 8:55 PM

Share

ಸುಮಾರು ಒಂದುವರೆ ತಿಂಗಳುಗಳ ಅನಂತರ ಕುಜನು ಸ್ಥಾನವನ್ನು ಬದಲಿಸುತ್ತಿದ್ದಾನೆ. ಇಷ್ಟು ದಿನ ಸಿಂಹ ರಾಶಿಯಲ್ಲಿ ಬುಧನ ಜೊತೆ ಹೆಚ್ಚು ಕಾಲ ಹಾಗೂ ಶುಕ್ರನ ಜೊತೆ ಕೆಲವು ದಿನ ಹಾಗೂ ಸೂರ್ಯನ ಜೊತೆ ಒಂದೆರಡು ದಿನ ಇದ್ದು ಅನಂತರ ಕನ್ಯಾರಾಶಿಯನ್ನು ಪ್ರವೇಶಿಸುವನು. ಮಿತ್ರನ ಗೃಹದಲ್ಲಿ ಇದ್ದ ಕುಜನು ಇನ್ನು ಶತ್ರುವಿನ ಮನೆಯನ್ನು ಪ್ರವೇಶ ಮಾಡುವನು. ಹಾಗಾಗಿ ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ.

ಕನ್ಯಾ ರಾಶಿ

ಈ ರಾಶಿಯನ್ನೇ ಪ್ರವೇಶಿಸುವುದರಿಂದ ಬಲದ ವಿಚಾರವು ಬಂದಾಗ ನೀವು ಹಿಂದೇಟು ಹಾಕುವಿರಿ. ಯಂತ್ರಕ್ಕೆ ಸಂಬಂಧಿಸಿದ ವ್ಯಾಪಾರಗಳಿಂದ ನಷ್ಟವಾಗಬಹುದು. ಶರೀರಕ್ಕೆ ನಾನಾ ಪ್ರಕಾರದ ತೊಂದರೆಗಳು, ನೋವುಗಳು ಆಗಬಹುದು.

ತುಲಾ ರಾಶಿ

ದ್ವಾದಶಕ್ಕೆ ಬರುವ ಕುಜನಿಂದ ಭೂಮಿಯ ವ್ಯವಹಾರವು ಲಾಭದಾಯಕವಾಗದು. ಹಾಗೂ ಭೂಮಿಯಿಂದ ಉತ್ಪನ್ನವಾಗುವ ವಸ್ತುಗಳ ವ್ಯಾಪಾರದಲ್ಲಿಯೂ ಹಿನ್ನಡೆ ಅಥವಾ ನಷ್ಟವಾದೀತು. ಅಗ್ನಿಭಯವು ಉಂಟಾಗುವುದು.

ಧನು ರಾಶಿ

ಇದು ಕುಜನ‌ ದೃಷ್ಟಿಯು ಬೀಳುವ ರಾಶಿಯಾಗಿದ್ದು ವೃತ್ತಿಗೆ ಸಂಬಂಧಿಸಿದಂತೆ ತೊಂದರೆಗಳು ಬರಬಹುದು. ಕಛೇರಿಯಲ್ಲಿ ಮಾನಸಿಕ ನೆಮ್ಮದಿಯ ಕೊರತೆಯು ಎದ್ದು ತೋರುವುದು. ಉದ್ಯೋಗವನ್ನು ಬದಲಿಸಲೂ ಆಲೋಚನೆಯು ಬರಬಹುದು.

ಮೀನ ರಾಶಿ

ಇದು ಸಪ್ತಮರಾಶಿಯಾಗಲಿದ್ದು ವಿವಾಹಕ್ಕೆ ಅಡ್ಡಿಗಳು ಬರಬಹುದು. ಮಾತುಕತೆಯಾದ ವಿವಾಹವು ಮುರಿದು ಹೋಗಬಹುದು. ಮನಸ್ಸು ಬೇಡದ ನಕಾರಾತ್ಮಕ ಆಲೋಚನೆಗಳನ್ನೇ ಹೆಚ್ಚು ಮಾಡುವುದು.

ಮೇಷ ರಾಶಿ

ಕುಜನ ಕ್ಷೇತ್ರವೂ ಆಗಿದ್ದಾರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಸಂಪೂರ್ಣ ಶುಭಫಲವನ್ನು ಕೊಡಲಾರನು. ಶತ್ರುಗಳ ಸಂಹಾರಕನಾಗಿರವವನು ತನ್ನ ಬಲವನ್ನು ಕಳೆದುಕೊಳ್ಳುವನು. ಸಾಲಬಾಧೆಯು ನಿಮ್ಮನ್ನು ಕಾಡುವುದು.

ಮಿಥುನ ರಾಶಿ

ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಕಷ್ಟವಾದೀತು. ಸಹೋದರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ಬರಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು.

ಈ ಎಲ್ಲ ರಾಶಿಯವರೂ ದೇವಸೇನಾನೀ ಎನಿಸಿಕೊಂಡ ಕಾರ್ತಿಕೇಯನನ್ನು ನಿತ್ಯವೂ ಪ್ರಾರ್ಥಿಸಿ, ಸ್ತೋತ್ರವನ್ನು ಪಠಿಸುವುದರಿಂದ ಆತನಿಂದ ಬರಬಹುದಾದ ತೊಂದರೆಗಳು ಕಡಿಮೆ ಆಗಬಹುದು, ಇಲ್ಲವಾಗಲೂಬಹುದು.

ಸುಬ್ರಹ್ಮಣ್ಯನ ಪಠಣಶ್ಲೋಕ

ಷಡಾನನಂ ಕುಂಕುಮರಕ್ತವರ್ಣಂ ಮಹಾಮತಿಂ ದಿವ್ಯಮಯೂರವಾಹನಮ್ | ರುದ್ರಸ್ಯ ಸೂನುಂ ಸುರಸೈನ್ಯನಾಥಂ ಗುಹಂ ಸದಾ ಶರಣಮಹಂ ಪ್ರಪದ್ಯೇ ||

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು