AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!

ಆರ್​ಎಸ್​ಎಸ್ ಚಟುವಟಿಕೆ ನಿಷೇಧ ಚರ್ಚೆ ಜೋರಾಗಿದ್ದು ಇದೀಗ ಆ ಬಗ್ಗೆ ಪರಿಶೀಲನೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಆರ್​​ಎಸ್​​ಎಸ್ ಜನ್ಮತಾಳಿದ ದಿನಾಂಕ, ಸಮಯಗಳನ್ನು ನೋಡಿದಾಗ ಆ ಸಂಘದ ಭವಿಷ್ಯ ಹೇಗಿದೆ? ಜ್ಯೋತಿಷ್ಯ ಪ್ರಕಾರ ಸಂಘದ ಭವಿಷ್ಯ ಏನು ಎಂಬುದು ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ಗಣಪತಿ ಶರ್ಮಾ
|

Updated on:Oct 17, 2025 | 10:48 AM

Share

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಈಗ ಕರ್ನಾಟಕದಲ್ಲಿ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಅತ್ತ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಇದೀಗ ಆರ್​ಎಸ್​​ಎಸ್ ಜನ್ಮ ತಾಳಿದ ದಿನಾಂಕ, ಸಮಯದ ಆಧಾರದಲ್ಲಿ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಆ ಬಗ್ಗೆ ವಿಶ್ಲೇಷಿಸಿದ್ದಾರೆ.

ಆರ್​​ಎಸ್​ಎಸ್ ಜನ್ಮ ಜಾತಕ ಪರಿಶೀಲಿಸಿದಾಗ, ಜಾತಕದಲ್ಲಿ ಮಹಾಗಜಕೇಸರಿ ಯೋಗವಿದೆ. ದಿನಾಂಕ 27-09-1925 ರ ಭಾನುವಾರ ಸ್ಥಾಪನೆಯಾಗಿರುವ ಮಾಹಿತಿ ಇದೆ. ಅದು ಶುಕ್ಲದಶಮಿ, ಧನಿಷ್ಟ ನಕ್ಷತ್ರ ಧನುರ್ ಲಗ್ನ, ಮಕರ ರಾಶಿ. ಶುಕ್ರ ಮಹಾದೆಶೆ ಇದ್ದು, 2042 ರ ತನಕದ ಪೂರ್ಣಾಯುಷ್ಯ ಜಾತಕ ಆರ್​​ಎಸ್​ಎಸ್​​ನದ್ದಾಗಿದೆ. ಹೀಗಾಗಿ ಇದು ಗೋಚಾರದಲ್ಲಿ ಬರುತ್ತಿರುವ ವದಂತಿಗಳಿಗೆ ಪೂರಕವಾಗಿಲ್ಲ. ಶುಭ ದಿನ ಶುಭ ಲಗ್ನ ಶುಭ ಮಹೂರ್ತದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಗೆ ಯಾವುದೇ ಹಾನಿ ಇಲ್ಲ.

ಇದನ್ನೂ ಓದಿ: ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಆರ್​​ಎಸ್​ಎಸ್ ಸಂಬಂಧಿಸಿ ಈಗಿರುವ ಗ್ರಹ ಗೋಚಾರ ಇನ್ನೂ ಬಲಿಷ್ಟ ಮಟ್ಟದಲ್ಲಿ ವೃದ್ಧಿಯಾಗಲಿದ್ದು, ಇನ್ನೂ ವಿಸ್ತರಣೆಯಾಗುವ ಸಾಧ್ಯತೆ. ನಿಷೇಧ ಎನ್ನುವ ಪದ ಇದಕ್ಕೆ ವರ್ತಿಸುವುದಿಲ್ಲ. ಕಲಿಯುಗ ಪರ್ಯಂತ ಆರ್​​ಎಸ್​​ಎಸ್ ಜೀವಂತವಾಗಿರಲಿದೆ ಎಂದೇ ಹೇಳಬಹುದು. ಇದರಿಂದ ಮಹಾ ದೇಶ ರಕ್ಷಣೆಯ ಕಾರ್ಯವಾಗಲಿದೆ. ಜಾತಕ ರೀತ್ಯಾ ಮಹಾ ನಾಯಕರ ಉದ್ಭವ ಸಾಧ್ಯತೆ ಇದೆ. ಹಾಗೆಂದು 10 ರ ಮನೆ ಬಲಿಷ್ಠವಾಗಿದೆ. ಬುಧ ಉಚ್ಚನಾಗಿದ್ದು, ಕುಜನ ಜೊತೆ ಬದ್ಧ ಶತ್ರುಗಳ ಸಮಾಗಮವನ್ನೂ ಕಾಣಬಹುದು.

ಜ್ಯೋತಿಷ್ಯ ವಿಶ್ಲೇಷಣೆ: ಡಾ. ಬಸವರಾಜ ಗುರೂಜಿ

ಜ್ಯೋತಿಷ್ಯ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Published On - 10:03 am, Fri, 17 October 25

Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು