AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!

ಆರ್​ಎಸ್​ಎಸ್ ಚಟುವಟಿಕೆ ನಿಷೇಧ ಚರ್ಚೆ ಜೋರಾಗಿದ್ದು ಇದೀಗ ಆ ಬಗ್ಗೆ ಪರಿಶೀಲನೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಆರ್​​ಎಸ್​​ಎಸ್ ಜನ್ಮತಾಳಿದ ದಿನಾಂಕ, ಸಮಯಗಳನ್ನು ನೋಡಿದಾಗ ಆ ಸಂಘದ ಭವಿಷ್ಯ ಹೇಗಿದೆ? ಜ್ಯೋತಿಷ್ಯ ಪ್ರಕಾರ ಸಂಘದ ಭವಿಷ್ಯ ಏನು ಎಂಬುದು ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ಗಣಪತಿ ಶರ್ಮಾ
|

Updated on:Oct 17, 2025 | 10:48 AM

Share

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಈಗ ಕರ್ನಾಟಕದಲ್ಲಿ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಅತ್ತ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಇದೀಗ ಆರ್​ಎಸ್​​ಎಸ್ ಜನ್ಮ ತಾಳಿದ ದಿನಾಂಕ, ಸಮಯದ ಆಧಾರದಲ್ಲಿ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಆ ಬಗ್ಗೆ ವಿಶ್ಲೇಷಿಸಿದ್ದಾರೆ.

ಆರ್​​ಎಸ್​ಎಸ್ ಜನ್ಮ ಜಾತಕ ಪರಿಶೀಲಿಸಿದಾಗ, ಜಾತಕದಲ್ಲಿ ಮಹಾಗಜಕೇಸರಿ ಯೋಗವಿದೆ. ದಿನಾಂಕ 27-09-1925 ರ ಭಾನುವಾರ ಸ್ಥಾಪನೆಯಾಗಿರುವ ಮಾಹಿತಿ ಇದೆ. ಅದು ಶುಕ್ಲದಶಮಿ, ಧನಿಷ್ಟ ನಕ್ಷತ್ರ ಧನುರ್ ಲಗ್ನ, ಮಕರ ರಾಶಿ. ಶುಕ್ರ ಮಹಾದೆಶೆ ಇದ್ದು, 2042 ರ ತನಕದ ಪೂರ್ಣಾಯುಷ್ಯ ಜಾತಕ ಆರ್​​ಎಸ್​ಎಸ್​​ನದ್ದಾಗಿದೆ. ಹೀಗಾಗಿ ಇದು ಗೋಚಾರದಲ್ಲಿ ಬರುತ್ತಿರುವ ವದಂತಿಗಳಿಗೆ ಪೂರಕವಾಗಿಲ್ಲ. ಶುಭ ದಿನ ಶುಭ ಲಗ್ನ ಶುಭ ಮಹೂರ್ತದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಗೆ ಯಾವುದೇ ಹಾನಿ ಇಲ್ಲ.

ಇದನ್ನೂ ಓದಿ: ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಆರ್​​ಎಸ್​ಎಸ್ ಸಂಬಂಧಿಸಿ ಈಗಿರುವ ಗ್ರಹ ಗೋಚಾರ ಇನ್ನೂ ಬಲಿಷ್ಟ ಮಟ್ಟದಲ್ಲಿ ವೃದ್ಧಿಯಾಗಲಿದ್ದು, ಇನ್ನೂ ವಿಸ್ತರಣೆಯಾಗುವ ಸಾಧ್ಯತೆ. ನಿಷೇಧ ಎನ್ನುವ ಪದ ಇದಕ್ಕೆ ವರ್ತಿಸುವುದಿಲ್ಲ. ಕಲಿಯುಗ ಪರ್ಯಂತ ಆರ್​​ಎಸ್​​ಎಸ್ ಜೀವಂತವಾಗಿರಲಿದೆ ಎಂದೇ ಹೇಳಬಹುದು. ಇದರಿಂದ ಮಹಾ ದೇಶ ರಕ್ಷಣೆಯ ಕಾರ್ಯವಾಗಲಿದೆ. ಜಾತಕ ರೀತ್ಯಾ ಮಹಾ ನಾಯಕರ ಉದ್ಭವ ಸಾಧ್ಯತೆ ಇದೆ. ಹಾಗೆಂದು 10 ರ ಮನೆ ಬಲಿಷ್ಠವಾಗಿದೆ. ಬುಧ ಉಚ್ಚನಾಗಿದ್ದು, ಕುಜನ ಜೊತೆ ಬದ್ಧ ಶತ್ರುಗಳ ಸಮಾಗಮವನ್ನೂ ಕಾಣಬಹುದು.

ಜ್ಯೋತಿಷ್ಯ ವಿಶ್ಲೇಷಣೆ: ಡಾ. ಬಸವರಾಜ ಗುರೂಜಿ

ಜ್ಯೋತಿಷ್ಯ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Published On - 10:03 am, Fri, 17 October 25

Follow Us
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ