AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಜಿಲ್ಲೆ, ಒಂದು ಉತ್ಪನ್ನ; ಕರ್ನಾಟಕದ ಯಾವ ಜಿಲ್ಲೆಗೆ ಯಾವ ಉತ್ಪನ್ನ ಎಂಬ ಪಟ್ಟಿ ಇಲ್ಲಿದೆ

One District One Focus Product: ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುಕ್ಕುಟೋದ್ಯಮ, ಮೀನು ಸಾಕಾಣಿಕೆ, ಸಮುದ್ರ ಉತ್ಪನ್ನ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳಿಗೆ ಒಂದೊಂದು ನಿರ್ದಿಷ್ಟ ಜಿಲ್ಲೆಯನ್ನು ನಿಗದಿಪಡಿಸುವ ಸಲುವಾಗಿ ದೇಶಾದ್ಯಂತ ಸುಮಾರು 728 ಜಿಲ್ಲೆಗಳನ್ನು ಆರಿಸಿಕೊಳ್ಳಲಾಗಿದೆ.

ಒಂದು ಜಿಲ್ಲೆ, ಒಂದು ಉತ್ಪನ್ನ; ಕರ್ನಾಟಕದ ಯಾವ ಜಿಲ್ಲೆಗೆ ಯಾವ ಉತ್ಪನ್ನ ಎಂಬ ಪಟ್ಟಿ ಇಲ್ಲಿದೆ
ಸಂಗ್ರಹ ಚಿತ್ರ
Skanda
| Updated By: Lakshmi Hegde|

Updated on: Feb 27, 2021 | 6:18 PM

Share

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಘೋಷಣೆ ಆತ್ಮ ನಿರ್ಭರ್ ಭಾರತ ಈಗಾಗಲೇ ವಿವಿಧ ವಲಯಗಳಲ್ಲಿ ವಿನೂತನ ಯೋಜನೆಗಳಿಗೆ ಸಾಕ್ಷಿಯಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಿಸಲ್ಪಟ್ಟ ಆತ್ಮ ನಿರ್ಭರ್ ಭಾರತ ಈಗ ಕೃಷಿ ಕ್ಷೇತ್ರದಲ್ಲೂ ವಿಶಿಷ್ಟ ಛಾಪು ಮೂಡಿಸಲು ಸನ್ನದ್ಧವಾಗಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಡಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಯೋಜನೆಯ ಅನುಷ್ಠಾನದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುಕ್ಕುಟೋದ್ಯಮ, ಮೀನು ಸಾಕಾಣಿಕೆ, ಸಮುದ್ರ ಉತ್ಪನ್ನ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳಿಗೆ ಒಂದೊಂದು ನಿರ್ದಿಷ್ಟ ಜಿಲ್ಲೆಯನ್ನು ನಿಗದಿಪಡಿಸುವ ಸಲುವಾಗಿ ದೇಶಾದ್ಯಂತ ಸುಮಾರು 728 ಜಿಲ್ಲೆಗಳನ್ನು ಆರಿಸಿಕೊಂಡಿತ್ತು. ಅಲ್ಲದೇ ಆಯಾ ಜಿಲ್ಲೆಗಳಲ್ಲಿ ಒಂದೊಂದು ಪ್ರಮುಖ ಉದ್ಯಮಕ್ಕೆ ಸಂಬಂಧಿಸಿದ ಕೇಂದ್ರ ಸ್ಥಾಪಿಸುವುದಾಗಿಯೂ ಹೇಳಿತ್ತು.

ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ಜೊತೆಗೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಘೋಷಿತವಾಗಿರುವ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಯಾವ ಜಿಲ್ಲೆಗಳಿಗೆ ಯಾವ ಉತ್ಪನ್ನಗಳನ್ನು ನಿಗದಿಪಡಿಸಲಾಗಿದೆ ಎಂಬ ಮಾಹಿತಿಯುಳ್ಳ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 31 ಜಿಲ್ಲೆಗಳಿಗೂ ಒಂದೊಂದು ಬೆಳೆ ನಿಗದಿ ಮಾಡಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.

  1. ಬಾಗಲಕೋಟೆ – ಈರುಳ್ಳಿ
  2. ಬಳ್ಳಾರಿ – ಅಂಜೂರ
  3. ಬೆಳಗಾವಿ – ಕಬ್ಬು
  4. ಬೆಂಗಳೂರು ಗ್ರಾ ಮಾಂತರ – ಕುಕ್ಕುಟೋದ್ಯಮ
  5. ಬೆಂಗಳೂರು ನಗರ – ಬೇಕರಿ ತಿಂಡಿ ತಿನಿಸು ಉತ್ಪನ್ನಗಳು
  6. ಬೀದರ್ – ಶುಂಠಿ
  7. ಚಾಮರಾಜನಗರ – ಅರಶಿನ ಉತ್ಪನ್ನ
  8. ಚಿಕ್ಕಬಳ್ಳಾಪುರ – ಟೊಮ್ಯಾಟೋ
  9. ಧಾರವಾಡ – ಮಾವು
  10. ಚಿಕ್ಕಮಗಳೂರು – ಮೆಣಸು ಮತ್ತು ಸಾಂಬಾರು ಪದಾರ್ಥ
  11. ಚಿತ್ರದುರ್ಗ – ಕಡಲೆಕಾಯಿ
  12. ದಾವಣಗೆರೆ – ಸಿರಿಧಾನ್ಯ
  13. ದಕ್ಷಿಣ ಕನ್ನಡ – ಮೀನು ಸೇರಿದಂತೆ ಸಮುದ್ರ ಉತ್ಪನ್ನ
  14. ಗದಗ – ಬ್ಯಾಡಗಿ ಮೆಣಸಿನಕಾಯಿ
  15. ಕೊಡಗು – ಕಾಫಿ
  16. ಹಾಸನ – ತೆಂಗು
  17. ತುಮಕೂರು – ಕೊಬ್ಬರಿ ಉತ್ಪನ್ನ
  18. ಹಾವೇರಿ – ಮಾವು
  19. ಕಲಬುರಗಿ – ತೊಗರಿ
  20. ಕೋಲಾರ – ಟೊಮ್ಯಾಟೋ
  21. ಕೊಪ್ಪಳ – ಸೀಬೆ ಹಣ್ಣು
  22. ಮಂಡ್ಯ – ಕಬ್ಬು,
  23. ಮೈಸೂರು – ಬಾಳೆಹಣ್ಣು
  24. ರಾಯಚೂರು – ಮೆಣಸಿನಕಾಯಿ
  25. ರಾಮನಗರ – ತೆಂಗು
  26. ಶಿವಮೊಗ್ಗ – ಪೈನಾಪಲ್
  27. ಶಿರಸಿ – ಜೇನು
  28. ಉಡುಪಿ – ಮೀನು ಸೇರಿ ಸಮುದ್ರದ ಉತ್ಪನ್ನಗಳು
  29. ಉತ್ತರ ಕನ್ನಡ – ಸಾಂಬಾರು ಪದಾರ್ಥಗಳು
  30. ವಿಜಯಪುರ – ನಿಂಬೆಹಣ್ಣು
  31. ಯಾದಗಿರಿ – ಕಡಲೆಕಾಯಿ

ಒಟ್ಟು 31 ಜಿಲ್ಲೆಗಳಿಗೆ ಘೋಷಿಸಲಾಗಿರುವ ಈ ಉತ್ಪನ್ನಗಳಿಗೆ ಆತ್ಮನಿರ್ಭರ್​ ಭಾರತ ಆಶಯದಲ್ಲಿ ಕೇಂದ್ರದಿಂದ ಉತ್ತೇಜನ ಸಿಗಲಿದ್ದು, ಒಂದು ಜಿಲ್ಲೆ ಒಂದು ಉತ್ಫನ್ನ ಯೋಜನೆಯಿಂದ ಈ ಉತ್ಪನ್ನಗಳನ್ನು ನಂಬಿಕೊಂಡವರಿಗೆ ಲಾಭವಾಗಲಿದೆ ಎಂದು ಕೇಂದ್ರ ಭರವಸೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್​

Aero India 2021: ಆಗಸದಲ್ಲಿ ಆತ್ಮನಿರ್ಭರ ಪರಿಕಲ್ಪನೆ ಮೂಡಿಸಿದ ಏರ್​ಕ್ರಾಫ್ಟ್!

Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?