AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ

ಯೋಗ ದಿನದ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಮೈಸೂರು ಭಾರತದ ಸಂಸ್ಕೃತಿಯ ಕೇಂದ್ರ. ವಿಶ್ವ ಸ್ವಾಸ್ಥ್ಯಕ್ಕೆ ಮೈಸೂರು ಯೋಗದ ಮೂಲಕ ಕೊಡುಗೆ ನೀಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ಮಾಡುವಂತಾಗಿದೆ. ಮಾನವತೆಗಾಗಿ ಯೋಗ ಧ್ಯೇಯ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದ.

PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ
ಪ್ರಧಾನಿ ನರೇಂದ್ರ ಮೋದಿ
TV9 Web
| Updated By: ಆಯೇಷಾ ಬಾನು|

Updated on:Jun 21, 2022 | 8:03 AM

Share

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ(Mysuru) ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ(International Yoga Day 2022) ಅದ್ಧೂರಿಯಾಗಿ ನೆರವೇರಿದೆ. ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ(PM Narendra Modi) ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಸಾವಿರಾರು ಯೋಗಪಟುಗಳು, ರಾಜ್ಯಪಾಲ, ಸಿಎಂ ಬೊಮ್ಮಾಯಿ, ರಾಜವಂಶಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೋವಾಲ್, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ಜೊತೆ ಮೋದಿ ಯೋಗ ಮಾಡಿದ್ರು. ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ ಎಂದರು.

ಯೋಗ ದಿನದ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಮೈಸೂರು ಭಾರತದ ಸಂಸ್ಕೃತಿಯ ಕೇಂದ್ರ. ವಿಶ್ವ ಸ್ವಾಸ್ಥ್ಯಕ್ಕೆ ಮೈಸೂರು ಯೋಗದ ಮೂಲಕ ಕೊಡುಗೆ ನೀಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ಮಾಡುವಂತಾಗಿದೆ. ಮಾನವತೆಗಾಗಿ ಯೋಗ ಧ್ಯೇಯ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದ. ನಮ್ಮ ಋಷಿ, ಮಹರ್ಷಿಗಳು, ಆಚಾರ್ಯರು ಯೋಗ ಶಾಂತಿ ತಂದುಕೊಡುತ್ತದೆ ಎಂದು ಹೇಳಿದ್ದಾರೆ. ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ. ಜಾಗತಿಕ ತಾಪಮಾನ, ಅಂತಾರಾಷ್ಟ್ರೀಯ ಸಮಸ್ಯೆಗಳಿಂದ ಜಗತ್ತಿಗೆ ಆತಂಕ ಶುರುವಾಗಿದೆ. ಸಮಸ್ಯೆ ನಿವಾರಕನಾಗಿ ಯೋಗ ಕೆಲಸ ಮಾಡಲಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ 75 ಪಾರಂಪರಿಕ ತಾಣಗಳಲ್ಲಿ ಯೋಗ ಆಚರಣೆ ಮಾಡಲಾಗುತ್ತಿದೆ. ಮೈಸೂರು ಅರಮನೆಗೆ ಐತಿಹಾಸಿಕ ಹಿನ್ನೆಲೆ ಇದೆ ಎಂದು ಹೊಗಳಿದರು. ಇದನ್ನೂ ಓದಿ: ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ

ಸೂರ್ಯೋದಯ ಸಮಯದಲ್ಲಿ ಇಡೀ ವಿಶ್ವದಲ್ಲಿ ಯೋಗ ಮಾಡಲಾಗುತ್ತಿದೆ. ಇಂದು ಯೂನಿವರ್ಸಲ್ ಯೋಗ ಚೈನ್ ಸೃಷ್ಟಿಯಾಗಲಿದೆ. ಒಂದೆರಡು ನಿಮಿಷದ ಧಾನ್ಯ ನಮ್ಮ ಮನಸ್ಸಿಗೆ ಶಕ್ತಿ ತುಂಬುತ್ತೆ. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗವನ್ನು ಪೋಷಿಸಿಕೊಂಡು ಬಂದಿದ್ದಾರೆ. ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ. ಯೋಗ ದಿನಾಚರಣೆಯ ಸುದಿನ ಮೈಸೂರಿಗೆ ಪ್ರಣಾಮ. ನಮ್ಮೆಲ್ಲರ ಜೀವನಕ್ಕೆ ವಿಶ್ವಾಸ ನೀಡುತ್ತಿರುವುದೇ ಯೋಗ. ಇಡೀ ವಿಶ್ವಕ್ಕೇ ಪಸರಿಸಿರುವ ಯೋಗದಿಂದಲೇ ವಿಶ್ವಾಸ ಬೆಳೆದಿದೆ. ಯೋಗ ದಿನದ ವಿಶ್ವಾಸವೇ ನಮ್ಮ ಬದುಕಿಗೂ ಪ್ರೇರಣೆ. ಯೋಗದಿಂದ ಎಲ್ಲರಿಗೂ ಶಾಂತಿ. ಸಮಾಜದಲ್ಲಿ ಶಾಂತಿ, ವಿಶ್ವ, ದೇಶದ ಶಾಂತಿಗಾಗಿ ಯೋಗ ಮಾಡಬೇಕು. ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಯೋಗಾಭ್ಯಾಸ ಮಾಡಬೇಕು ಎಂದು ಮೈಸೂರು ಯೋಗ ವೇದಿಕೆಯಲ್ಲಿ ಮೋದಿ ಯೋಗದ ಅನುಕೂಲಗಳ ಬಗ್ಗೆ ಮಾತನಾಡಿದ್ದಾರೆ.

ನಮ್ಮೆಲ್ಲರ ಆತ್ಮಸಾಕ್ಷಿ ಎಚ್ಚರಿಸುತ್ತಿರುವುದೂ ಇದೇ ಯೋಗ. ಜನತೆಯನ್ನೂ, ದೇಶ ದೇಶದ ಸಂಪರ್ಕಕ್ಕೆ ಯೋಗ ಮೂಲ. ದೇಶದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇದು ಸುದಿನ. ದೇಶದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ಯೋಗೋತ್ಸವ ನಡೆದಿದೆ ಎಂದು ಮೈಸೂರಿನ ಸಾಂಸ್ಕೃತಿಕ, ಐತಿಹಾಸಿಕತೆಯನ್ನು ಮೋದಿ ವರ್ಣಿಸಿದ್ರು.

ವಿಶ್ವದಲ್ಲಿ ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರ. ನಮ್ಮೆಲ್ಲರ ಆರೋಗ್ಯ ಸುಧಾರಣೆಗೆ ಯೋಗ ಪ್ರಯೋಗ ಅನಿವಾರ್ಯ. ನಮ್ಮೆಲ್ಲರಿಗೂ ಈಗ ಯೋಗ ಜೀವನ ಮಾತ್ರವೇ ಅಲ್ಲ. ಎಲ್ಲರಿಗೂ ಯೋಗವೇ ಜೀವನ ಎಂದರು. ಯೋಗ ದಿನ ಅಂದ್ರೆ ಬರೀ ಯೋಗ ಮಾಡುವುದೇ ಅಲ್ಲ. ನಮ್ಮೆಲ್ಲರ ಜೀವ, ಜೀವನದ ಉಸಿರು ಯೋಗವೇ ಆಗಿದೆ. ನಮ್ಮೆಲ್ಲರ ಅನಂತ ಭವಿಷ್ಯಕ್ಕೆ ಯೋಗಾಭ್ಯಾಸವೇ ಆಧಾರ. ಆರೋಗ್ಯ ಹಾಗೂ ಶಾಂತಿಪೂರ್ಣ ವಿಶ್ವಕ್ಕೆ ಯೋಗ ಬೇಕು. ಸರ್ವರಿಗೂ ಯೋಗ ದಿನಾಚರಣೆಗೆ ಶುಭಾಶಯ. ಯೋಗದಿಂದ ಏಕತೆ ಮತ್ತು ಯೋಗದಿಂದಲೇ ಏಕಾಗ್ರತೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:59 am, Tue, 21 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ