AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲೆಗೆ ತ್ರೀಡಿ ಪೇಂಟಿಂಗ್ : ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ

ಔರಾದ್ ತಾಲೂಕಿನಲ್ಲಿ ಅತಿಹೆಚ್ಚು ಶಾಲೆಗಳಲ್ಲಿ ವಂಡಗಾಂವ್, ಮುರ್ಕಿ, ವಾಗನಕೇರಾ, ಏಕನಾಂಥ್ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯಲ್ಲಿ 26 ಶಾಲೆಗಳಿಗೆ ರೈಲು ಬಂದು ನಿಂತಿರುವ ರೀತಿಯಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಲ್ದಾಣವೇ ತಲೆಯೆತ್ತಿದೆ ಎನ್ನುವ ಮಟ್ಟಿಗೆ ಕಲಾವಿದರು ಕೈಚಳಕ ತೋರಿದ್ದಾರೆ.

ಸರ್ಕಾರಿ ಶಾಲೆಗೆ ತ್ರೀಡಿ ಪೇಂಟಿಂಗ್ : ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ
ರೈಲಿನಂತೆ ಸರ್ಕಾರಿ ಶಾಲೆಗೆ ಪೇಂಟಿಂಗ್
preethi shettigar
|

Updated on: Mar 12, 2021 | 11:09 AM

Share

ಬೀದರ್: ಶಾಲೆ ಮಕ್ಕಳನ್ನ ಆಕರ್ಷಣೆ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಯೋಜನೆಯೊಂದನ್ನ ಮಾಡಿದೆ. ಶಾಲೆಯ ಗೋಡೆಗಳ ಮೇಲೆ ರೈಲು ಚಿತ್ರಗಳನ್ನ ಬಿಡಿಸುವುದರ ಮೂಲಕ ಮಕ್ಕಳನ್ನ ಸರ್ಕಾರಿ ಶಾಲೆಗಳ ಕಡೆಗೆ ಸೆಳೆಯುವಂತೆ ಮಾಡಲಾಗುತ್ತಿದೆ. ಶಾಲೆಯ ಗೋಡೆಗಳ ಮೇಲೆ ರೈಲು ಹೋಗುವ ದೃಶ್ಯ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಜನರು ಶಾಲೆಗಳಿಗೆ ಬಂದು ಇಲ್ಲಿನ ಚಿತ್ರಗಳನ್ನ ನೋಡಿ ಖುಷಿ ಪಡುವಂತಹ ವಾತಾವರಣ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಯಾಣಿಕರ ಗಮನಕ್ಕೆ, ಕೆಲವೇ ನಿಮಿಷಗಳಲ್ಲಿ ಪ್ಲಾಟ್‌ಫಾರಂಗೆ ರೈಲು ಬರಲಿದೆ. ಈ ರೀತಿಯಾಗಿ ರೈಲು ನಿಲ್ದಾಣದಲ್ಲಿ ರೈಲಿನ ಹಾದಿ ಕಾಯುತ್ತಿರುವಾಗ ಆಗಾಗ್ಗೆ ಮೈಕ್‌ನಿಂದ ಕೇಳಿಸುವ ಈ ಧ್ವನಿಯೇ ಪ್ರಯಾಣದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ. ಇಲ್ಲೂ ಕೂಡ ರೈಲು ಗಾಡಿ ಹೊರಟಿದೆ. ಮಕ್ಕಳು ಕೂಡ ಖುಷಿಯಿಂದ ರೈಲು ಹತ್ತಿದ್ದಾರೆ. ಶಿಕ್ಷಕರೂ ಜತೆಗಿದ್ದಾರೆ. ಕಿಟಕಿ ಪಕ್ಕದಲ್ಲಿ ಕುಳಿತ ಮಕ್ಕಳ ಮುಖದಲ್ಲಿ ಸಂತೋಷ, ಬೆರಗಿನ ಮಿಶ್ರ ಭಾವ ಮೂಡಿದೆ.

ಗಡಿ ಜಿಲ್ಲೆ ಬೀದರ್​ನಲ್ಲಿ ಸರಕಾರಿ ಶಾಲೆಗೆ ಮಕ್ಕಳನ್ನ ಕರೆ ತರುವ ಉದ್ದೇಶದಿಂದ ಜಿಲ್ಲೆಯ ಹತ್ತಾರು ಗ್ರಾಮದ ಶಾಲೆಗಳ ಗೋಡೆ ಮೇಲೆ ರೈಲು ಚಿತ್ರಗಳನ್ನ ಬಿಡಿಸುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳನ್ನ ಸೇಳೆಯುವ ಪ್ರಯತ್ನವನ್ನ ಇಲ್ಲಿ ಮಾಡಲಾಗುತ್ತಿದೆ. ಶಾಲೆಯ ಹೊರ ಗೋಡೆಗೆ ರೈಲಿನ ಎಂಜಿನ್‌ ಚಿತ್ರ ಬಿಡಿಸಲಾಗಿದ್ದು, ತರಗತಿ ಕೊಠಡಿಗಳನ್ನು ಬೋಗಿಗಳಂತೆ ಚಿತ್ರಿಸಲಾಗಿದೆ.

train school

ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ವಿನೂತನ ಪ್ರಯತ್ನ

ಕೊಠಡಿ ಬಾಗಿಲಿಗೆ ಬೋಗಿಗಳ ಬಾಗಿಲಿನ ಬಣ್ಣ ಬಳಿಯಲಾಗಿದೆ. ಮಕ್ಕಳು ಬಾಗಿಲು ತೆರೆದು ಕೊಠಡಿಯೊಳಕ್ಕೆ ಹೋದಾಗ ರೈಲಿನ ಒಳಗಡೆ ಹೋದ ಅನುಭವ ಬರುವಂತೆ ಮಾಡಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನ ಮಾಡಲಾಗಿದೆ. ಮಕ್ಕಳ ಕಲಿಕೆಯ ಖುಷಿಯನ್ನು ಹೆಚ್ಚಿಸುವ ಜೊತೆಗೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಕಂಡುಕೊಂಡಿರುವ ವಿನೂತನ ಉಪಾಯವಿದು.

train school

ಬೀದರ್​ನ ಸರ್ಕಾರಿ ಶಾಲೆ

ಔರಾದ್ ತಾಲೂಕಿನಲ್ಲಿ ಅತಿಹೆಚ್ಚು ಶಾಲೆಗಳಲ್ಲಿ ವಂಡಗಾಂವ್, ಮುರ್ಕಿ, ವಾಗನಕೇರಾ, ಏಕನಾಂಥ್ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ 26 ಶಾಲೆಗಳಿಗೆ ರೈಲು ಬಂದು ನಿಂತಿರುವ ರೀತಿಯಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಲ್ದಾಣವೇ ತಲೆಯೆತ್ತಿದೆ ಎನ್ನುವ ಮಟ್ಟಿಗೆ ಕಲಾವಿದರು ಕೈಚಳಕ ತೋರಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಶಾಲೆಗೆ ಮಕ್ಕಳು ಬರುವುದನ್ನ ಕಡಿಮೆ ಮಾಡಿದ್ದಾರೆ. ಹೀಗಾಗಿ ಮಕ್ಕಳನ್ನ ಶಾಲೆಯತ್ತ ಸೇಳೆಯುವ ಉದ್ದೇಶದಿಂದ ಜಿಲ್ಲೆಯ 10 ಕ್ಕೂ ಹೆಚ್ಚು ಶಾಲೆಯ ಗೋಡೆಗಳ ಮೇಲೆ ರೈಲು ಚಲಿಸುವ ಚಿತ್ರವನ್ನ ಕೆತ್ತಲಾಗಿದೆ. ಇನ್ನೂ ಕೆಲವು‌ ಶಾಲೆಗಳ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆಯಯನ್ನ ಬಿಡಿಸಲಾಗಿದೆ. ಇದರಿಂದ ಮಕ್ಕಳಿಗೆ ಹೊಸ ವಾತಾವರಣ ಸೃಷ್ಟಿಯಾದಂತಾಗುತ್ತದೆ, ಜೊತೆಗೆ ಮಕ್ಕಳ ಕಲಿಕೆಗೂ ಕೂಡ ಇದು ಪೂರಕವಾದ ವಾತಾವರಣ ಕಲ್ಪಿಸಿದಂತಾಗುತ್ತದೆ ಹೀಗಾಗಿ ಆಯ್ದ ಕೆಲ ಶಾಲೆಗಳಿಗೆ ರೈಲು ಹಾಗೂ ಪುರಾತನ ವರ್ಲಿ ಚಿತ್ರ ಬಿಡಿಸಲಾಗಿದೆ ಎಂದು ಬೀದರ್​ನ ಡಿಡಿಪಿಐ ಗಂಗಣ್ಣ ಸ್ವಾಮಿ ಹೇಳಿದ್ದಾರೆ.

train school

ರೈಲಿನಂತೆ ಕಾಣಲು ತ್ರೀಡಿ ಪೇಂಟಿಂಗ್

ತ್ರೀಡಿ ಪೇಂಟಿಂಗ್‌ ಬಳಸಿ ಶಾಲಾ ಕೊಠಡಿಗಳನ್ನೇ ರೈಲು ಬೋಗಿಗಳಾಗಿ ಅಲಂಕರಿಸಲಾಗಿದೆ. ಖಾಸಗಿ ಶಾಲೆಯ ಕಲರ್​​ಫುಲ್​ ಶಿಕ್ಷಣದಲ್ಲಿ ನಮ್ಮ ಸರಕಾರಿ ಶಾಲೆಗೆ ಮಕ್ಕಳು ಬರುವುದು ಬಹಳ ವಿರಳವಾಗಿದೆ. ಹೀಗಾಗಿ ಖಾಸಗಿ ಶಾಲೆಗಳಿಂದ ಮಕ್ಕಳನ್ನ ಸರಕಾರಿ ಶಾಲೆಗಳ ಕಡೆಗೆ ಮುಖಮಾಡುವಂತೆ ಮಾಡಲು ಶಿಕ್ಷಣ ಇಲಾಖೆ ಹೊಸ ಪ್ರಯೋಗವನ್ನ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

train school

ಮಕ್ಕಳನ್ನು ಆಕರ್ಷಿಸುತ್ತಿರುವ ಸರ್ಕಾರಿ ಶಾಲೆ

ಇದನ್ನೂ ಓದಿ: ರೈಲಿನಲ್ಲಿ ಶಾಲೆಯೋ? ಶಾಲೆಯಲ್ಲಿ ರೈಲೋ..?

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?