AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯನ ಸುತ್ತಲೂ ಕಾಮನಬಿಲ್ಲು; ಯುಗಾದಿ ದಿನ ಪ್ರಕೃತಿ ಸೊಬಗಿನ ಅನಾವರಣ

ಇಂದಿನ ದಿನದ ಪ್ರಕೃತಿ ಸೊಬಗಿನ ಅನಾವಣ ಕಂಡ ಜನರ ಮುಖದಲ್ಲಿ ಖುಷಿ ಮನೆಮಾಡಿದೆ. ಬೆಂಗಳೂರು ನಗರದ ಜನರ ಹಬ್ಬದ ಮೆರುಗು ಇನ್ನೂ ಹೆಚ್ಚಾಗಿದೆ.

ಸೂರ್ಯನ ಸುತ್ತಲೂ ಕಾಮನಬಿಲ್ಲು; ಯುಗಾದಿ ದಿನ ಪ್ರಕೃತಿ ಸೊಬಗಿನ ಅನಾವರಣ
ಕಾಮನಬಿಲ್ಲಿ
shruti hegde
|

Updated on: Apr 13, 2021 | 1:08 PM

Share

ಬೆಂಗಳೂರು: ನಗರದಲ್ಲಿ ಹೊಸ ವರುಷದ ಯುಗಾದಿ ಹಬ್ಬ ನಡೆಯುತ್ತಿದೆ. ಮನೆಗಳಲ್ಲಿ ಹೊಸ ಉಡುಗೆ ತೊಟ್ಟು ಜನರು ಸಂತೋಷದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುಳಕಗೊಳಿಸುವ ದೃಶ್ಯವೊಂದು ನಗರದ ಜನರಿಗೆ ಕಂಡಿದೆ. ಯುಗಾದಿ ದಿನದ ಪ್ರಕೃತಿ ಸೊಬಗಿನ ಅನಾವರಣ ಕಂಡ ಜನರ ಮುಖದಲ್ಲಿ ಖುಷಿ ಮನೆಮಾಡಿದೆ. ಹಬ್ಬದ ಮೆರಗು ಇನ್ನೂ ಹೆಚ್ಚಾಗಿದೆ.

ಹಬ್ಬಕ್ಕೆ ಬೆಳಿಗ್ಗೆಯೇ ಇದ್ದು, ಎಣ್ಣೆ ಸ್ನಾನ ಮಾಡಿ. ಮನೆಯನ್ನು ಹೂವುಗಳಿಂದ ಅಲಂಕರಿಸಿ ಪೂಜೆಗೆ ಸಿದ್ಧತೆ ಮಾಡಲಾಗಿದೆ. ಬೇವು-ಬೆಲ್ಲವನ್ನು ಸಿದ್ಧಪಡಿಸಿ ಮನೆಯವರೆಲ್ಲ ಪ್ರಸಾದ ಸ್ವೀಕರಿಸಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಂಡಿದ್ದಾರೆ. ಸಕಲ ಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮದಾಗಲೀ, ವರ್ಷವಿಡೀ ಈ ದಿನದಂತೆ ಸಂತೋಷ, ನೆಮ್ಮದಿಂದ ಜೀವನ ಸಾಗಲಿ ಎಂಬ ಪ್ರಾರ್ಥನೆಯಲ್ಲಿ ನಗರದ ಜನರಿದ್ದಾಗಲೇ ಸೂರ್ಯ ದೇವನು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದ ದೃಶ್ಯ ಭಕ್ತರಿಗೆ ಖುಷಿ ನೀಡಿದೆ.

ಪ್ರಕೃತಿಯ ನಡುವೆ ಸೂರ್ಯ ಕಂಗೊಳಿಸುತ್ತಿದ್ದಾನೆ. ವಿವಿಧ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲು ಸೂರ್ಯನ ಸುತ್ತ ಆವರಿಸಿದೆ. ಜನರೆಲ್ಲಾ ಬಾಗಿಲಿನತ್ತ ಬಂದು ಮೈನವಿರೇಳಿಸುವ ದೃಶ್ಯ ಕಂಡು ಖುಷಿ ಪಟ್ಟಿದ್ದಾರೆ. ಅದರಲ್ಲೂ ಯುಗಾದಿ ಹಬ್ಬದಂದು ಕಾಮನಬಿಲ್ಲು ಕಂಡ ಜನರ ಖುಷಿ ಮುಗಿಲು ಮುಟ್ಟಿದೆ.

ಯುಗಾದಿ ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ. ಹೋಳಿಗೆಯ ಘಮಲು ಇರುತ್ತೆ. ಹಿಂದೂ ಧರ್ಮದ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ದಿನ ಕೆಲ ಆಚರಣೆಗಳನ್ನ ತಪ್ಪದೇ ಪಾಲಿಸಬೇಕು. ಆ ಆಚರಣೆಗಳನ್ನ ಪಾಲಿಸುವುದರಿಂದ ವರ್ಷವಿಡೀ ಶುಭ ಫಲಗಳನ್ನ ಕಾಣಬಹುದೆಂಬ ನಂಬಿಕೆ ಆದಿಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ಧರ್ಮಸಿಂಧು ಎಂಬ ಗ್ರಂಥದಲ್ಲಿ ಯುಗಾದಿ ಹಬ್ಬಕ್ಕೆ ಐದು ವಿಧಿಗಳನ್ನ ಸೂಚಿಸಲಾಗಿದೆ.

ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರುವ ಪ್ರಕೃತಿಯಲ್ಲಿ, ಜೀವ ಸಂಕುಲದಲ್ಲಿ ಬದಲಾವಣೆ ತರುವ ಯುಗಾದಿ ಹಬ್ಬದ ಆಚರಣೆಯನ್ನ ಯಾವ ರೀತಿ ಮಾಡಬೇಕು. ಆದಿಕಾಲದಿಂದಲೂ ಪಾಲಿಸಕೊಂಡು ಬರುತ್ತಿರುವ ನಿಯಮಗಳೇನು, ಆಚರಣೆಗಳೇನು, ಅವುಗಳನ್ನು ಹೇಗೆ ಆಚರಿಸಬೇಕೆಂಬುದರ ಬಗ್ಗೆ ಧರ್ಮಗ್ರಂಥಗಳಲ್ಲಿ , ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Happy Ugadi 2021: ಯುಗಾದಿ ಹಬ್ಬದ ಹಿಂದಿದೆ ಯುಗದ ಪ್ರಾರಂಭದ ಕಥೆ; ಹಬ್ಬದ ವಿಶೇಷ ತಿಳಿದುಕೊಳ್ಳಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?