ಗೃಹ ಸಚಿವ ಬೊಮ್ಮಾಯಿಗೆ ರಕ್ತದಲ್ಲಿ ಯುವಕನ ಪತ್ರ, ಜೊತೆಗೆ ಡ್ರಿಪ್​ ಕೇಬಲ್​ ಸೆಟ್​ ಸಹ ಪೋಸ್ಟ್​

ಬೆಂಗಳೂರು: ಪೊಲೀಸ್​ ಕಾನ್​ಸ್ಟೆಬಲ್​ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಲು ಕೋರಿ ಯುವಕರೊಬ್ಬರು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ವಿಜಯಪುರದ ವಿದ್ಯಾಧರ ಬಿ.ಬಡಿಗೇರ ಎಂಬ ಯುವಕ ರಕ್ತದಲ್ಲಿ ಪತ್ರ ಬರೆದಿದ್ದು, ಈ ಬಾರಿಯಿಂದ ಪೊಲೀಸ್​ ಕಾನ್​ಸ್ಟೆಬಲ್​ ಹುದ್ದೆಗಳ ನೇಮಕಕ್ಕೆ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ರಕ್ತದಿಂದ ಪತ್ರ ಬರೆದಿರುವ ಯುವಕ ಅದರೊಟ್ಟಿಗೆ, ಪತ್ರ ಬರೆಯಲು ಬಳಸಿದ ಡ್ರಿಪ್​ ಕೇಬಲ್​ ಸೆಟ್​ ಕೂಡಾ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರ ಇನ್​ಫ್ಯಾಂಟ್ರಿ ರಸ್ತೆಯ ಕಮಿಷನರ್​ ಆಫ್​ ಪೊಲೀಸ್​ […]

ಗೃಹ ಸಚಿವ ಬೊಮ್ಮಾಯಿಗೆ ರಕ್ತದಲ್ಲಿ ಯುವಕನ ಪತ್ರ, ಜೊತೆಗೆ ಡ್ರಿಪ್​ ಕೇಬಲ್​ ಸೆಟ್​ ಸಹ ಪೋಸ್ಟ್​
ರಕ್ತದಲ್ಲಿ ಬರೆದ ಪತ್ರ

Updated on: Jan 30, 2021 | 6:52 PM

ಬೆಂಗಳೂರು: ಪೊಲೀಸ್​ ಕಾನ್​ಸ್ಟೆಬಲ್​ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಲು ಕೋರಿ ಯುವಕರೊಬ್ಬರು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ವಿಜಯಪುರದ ವಿದ್ಯಾಧರ ಬಿ.ಬಡಿಗೇರ ಎಂಬ ಯುವಕ ರಕ್ತದಲ್ಲಿ ಪತ್ರ ಬರೆದಿದ್ದು, ಈ ಬಾರಿಯಿಂದ ಪೊಲೀಸ್​ ಕಾನ್​ಸ್ಟೆಬಲ್​ ಹುದ್ದೆಗಳ ನೇಮಕಕ್ಕೆ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.

ರಕ್ತದಿಂದ ಪತ್ರ ಬರೆದಿರುವ ಯುವಕ ಅದರೊಟ್ಟಿಗೆ, ಪತ್ರ ಬರೆಯಲು ಬಳಸಿದ ಡ್ರಿಪ್​ ಕೇಬಲ್​ ಸೆಟ್​ ಕೂಡಾ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರ ಇನ್​ಫ್ಯಾಂಟ್ರಿ ರಸ್ತೆಯ ಕಮಿಷನರ್​ ಆಫ್​ ಪೊಲೀಸ್​ ಕಚೇರಿಗೆ ತಲುಪಿದೆ.

ಕೃಷಿ ಕಾಯ್ದೆ ಹಿಂಪಡೆಯುವಂತೆ ರಕ್ತದಲ್ಲಿ ಮನವಿ ಪತ್ರ ಬರೆದ ರೈತರು

Published On - 6:48 pm, Sat, 30 January 21