ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪ್ರೊ ಮಲ್ಲಿಕಾರ್ಜುನ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ

ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಎಚ್ಓಡಿ ಪ್ರೋ ಮಲ್ಲಿಕಾರ್ಜುನ ಎನ್​​ಎಲ್​​ ಅದೇ ವಿಭಾಗದಲ್ಲಿ ಪಿಎಚ್​ಡಿ ಮಾಡುತ್ತಿರು ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಕುಲಪತಿ ಪ್ರೋ ತುಳಸಿಮಾಲಾ ಅವರಿಗೆ ಲೈಂಗಿಕ ಕಿರುಕುಳಕ್ಕೆ ಒಳಾಗಿರುವ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಘಟನೆ ಖಂಡಿಸಿ ಇಂದು ಮಹಿಳಾ ವಿವಿ ಎದುರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾರ್ಯಕರ್ತರು ಹೋರಾಟ ಮಾಡಿದರು.

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪ್ರೊ ಮಲ್ಲಿಕಾರ್ಜುನ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ
ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
Edited By:

Updated on: Mar 10, 2024 | 4:46 PM

ವಿಜಯಪುರ, ಮಾರ್ಚ್​​ 10: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ (Akkamahadevi Women’s University)ದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಎಚ್ಓಡಿ ಪ್ರೋ ಮಲ್ಲಿಕಾರ್ಜುನ ಎನ್​​ಎಲ್​​ ಅದೇ ವಿಭಾಗದಲ್ಲಿ ಪಿಎಚ್​ಡಿ ಮಾಡುತ್ತಿರು ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಕುಲಪತಿ ಪ್ರೋ ತುಳಸಿಮಾಲಾ ಅವರಿಗೆ ಲೈಂಗಿಕ ಕಿರುಕುಳಕ್ಕೆ ಒಳಾಗಿರುವ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಈ ದೂರು ಕುರಿತು ತನಿಖೆ ನಡೆಸಲು ಆಂತರಿಕ ದೂರು ಸಮೀತಿಗೆ ವಿಸಿ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಹಾಗೂ ಘಟನೆ ಖಂಡಿಸಿ ಇಂದು ಮಹಿಳಾ ವಿವಿ ಎದುರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾರ್ಯಕರ್ತರು ಹೋರಾಟ ಮಾಡಿದರು.

ಮಹಿಳಾ ವಿವಿಯ ಮ್ಯಾನೇನ್ಮೆಂಟ್ ವಿಭಾಗದ ಪ್ರೋ ಮಲ್ಲಿಕಾರ್ಜುನ ಎನ್​​ಎಚ್ ವಿರುದ್ದ ಧಿಕ್ಕಾರ ಕೂಗಿದರು. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರೋ ಮಲ್ಲಿಕಾರ್ಜುನರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ಆಂತರಿಕ ದೂರು ಸಮಿತಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾರದರ್ಶಕವಾಗಿ ತನಿಖೆ ಮಾಡಬೇಕೆಂದು ಒತ್ತಾಯ ಮಾಡಿದರು.

ಇದನ್ನೂ ಓದಿ: ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪಿಹೆಚ್​​ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ

ಪ್ರತಿಭಟನೆ ಕಾರಣ ಸ್ಥಳದಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಬಿಗಿ ಭದ್ರತೆ ನೀಡಿದ್ದರು. ನಾಳೆ ವಿವಿಯ ಘಟಿಕೋತ್ಸವ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸಂಘಟನೆಯವರು ಪ್ರತಿಭಟನೆ ನಡೆರುವ ಸಾಧ್ಯತೆಯಿದೆ.

ಮಹಿಳೆಗೆ ಪೊಲೀಸ್ಪನಿಂದಲೇ ಲೈಂಗಿಕ ಕಿರುಕುಳ‌

ಕಲಬುರಗಿ: ಜಿಲ್ಲೆಯಲ್ಲೊಬ್ಬ ಪೊಲೀಸಪ್ಪ, ಠಾಣೆಗೆ ದೂರು ಕೊಡಲು ಬಂದ ಮಹಿಳೆಗೆ ಪೇದೆಯೇ ಲೈಂಗಿಕ ಕಿರುಕುಳ ನೀಡಿದಂತಹ ಅರೋಪ ಕೇಳಿಬಂದಿತ್ತು. ಕಮಲಾಪುರ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಬಸವರಾಜ್ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಕಮಲಾಪುರ ತಾಲೂಕಿನ ಡೊಂಗರಗಾಂವ್ ಗ್ರಾಮದ ಮಹಿಳೆ ತನ್ನ ಗಂಡನ ಕಿರುಕುಳಕ್ಕೆ ಬೇಸತ್ತು ಕಮಲಾಪುರ ಠಾಣೆಗೆ ದೂರು ಕೊಡಲು ಬಂದಿದ್ದರು.

ಇದನ್ನೂ ಓದಿ: ಬ್ರ್ಯಾಂಡೆಡ್​ ಡಿಟರ್ಜೆಂಟ್​ ಪೌಡರ್​ ನಕಲು: 20 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್, ಓರ್ವ ವಶಕ್ಕೆ

ಈ ವೇಳೆ ಕಾನ್ಸ್ಟೆಬಲ್ ಬಸವರಾಜ್, ಆಕೆಯೊಂದಿಗೆ ಸ್ನೇಹ ಬೆಳೆಸಿ ಮೊಬೈಲ್ ನಂಬರ್ ಪಡೆದಿದ್ದಾನೆ. ನಂತರ ಆಕೆಗೆ ಕಾಲ್ ಮಾಡಿ ನಾನು ನಿನ್ನ ಪ್ರೀತಿಸುತ್ತೇನೆ, ನಿನ್ನನ್ನೆ ಮದ್ವೆಯಾಗುತ್ತೇನೆ ಎಂದು ಪೀಡಿಸಲು ಶುರು ಮಾಡಿದ್ದಾನೆ. ಅದಕ್ಕೆ ಆಕೆ ಒಪ್ಪದೇ ಇದ್ದಾಗ, ನೀನು ಸಹಕರಿಸದಿದ್ದರೆ ಮನೆಗೆ ಬಂದು ನಿನ್ನನ್ನ ಎತ್ತಾಕ್ಕೊಂಡು ಹೋಗುತ್ತೆನೆಂದು ಆವಾಜ್ ಹಾಕಿದ್ದಾನೆ. ನೊಂದ ಮಹಿಳೆ ಪೇದೆ ಬಸವರಾಜ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಳು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us