AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ -ಅಸಾದುದ್ದೀನ್ ಒವೈಸಿ

ಇಂದು ಗಾಂಧೀಜಿ ಹತ್ಯೆಯಾದ ದಿನ. ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಎಂದು ನಗರದಲ್ಲಿ AIMIM ಸಂಸದ ಅಸಾದುದ್ದೀನ್​ ಒವೈಸಿ ಹೇಳಿದ್ದಾರೆ.

ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ -ಅಸಾದುದ್ದೀನ್ ಒವೈಸಿ
‘ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ’
KUSHAL V
|

Updated on: Jan 30, 2021 | 11:37 PM

Share

ಕಲಬುರಗಿ: ಇಂದು ಗಾಂಧೀಜಿ ಹತ್ಯೆಯಾದ ದಿನ. ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಎಂದು ನಗರದಲ್ಲಿ AIMIM ಸಂಸದ ಅಸಾದುದ್ದೀನ್​ ಒವೈಸಿ ಹೇಳಿದ್ದಾರೆ.

ಮುಸ್ಲಿಮರ ಪರ ಇದ್ದಾರೆಂದು ಗಾಂಧೀಜಿಯನ್ನು ಹತ್ಯೆಗೈದರು. ಅನೇಕರು ಸೇರಿ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದರು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ನಾಥೂರಾಮ್​ ಗೋಡ್ಸೆಗೂ ನಮಗೂ ಸಂಬಂಧವಿಲ್ಲ ಅಂತಾರೆ. ಬೆಕ್ಕು ಕದ್ದು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲವೆಂದು ತಿಳಿದಿದ್ದಾರೆ. ನಾಥೂರಾಮ್​ ಗೋಡ್ಸೆ ಸಂಘ ಪರಿವಾರಕ್ಕೆ ಸೇರಿದ ಮನುಷ್ಯ ಎಂದು ಒವೈಸಿ ಹೇಳಿದರು.

ಗಾಂಧಿ ಸಮಾಧಿಗೆ ತೆರಳಿ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ಆದರೆ ಗಾಂಧಿ ಕೊಂದ ಸಾವರ್ಕರ್​ರನ್ನು ಮೋದಿ ಆರಾಧಿಸ್ತಾರೆ. ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ಗಲಾಟೆ ಆಗಬಾರದಿತ್ತು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

‘ಕಾಂಗ್ರೆಸ್​ ಜೊತೆ ಹೋಗದಂತೆ H.D.ಕುಮಾರಸ್ವಾಮಿಗೆ ಹೇಳಿದ್ದೆ’ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಕಾಂಗ್ರೆಸ್​ ಜೊತೆ ಹೋಗದಂತೆ H.D.ಕುಮಾರಸ್ವಾಮಿಗೆ ಹೇಳಿದ್ದೆ. ಆದ್ರೂ ಕುಮಾರಸ್ವಾಮಿ ಕಾಂಗ್ರೆಸ್​ ಜೊತೆ ಮೈತ್ರಿಮಾಡಿಕೊಂಡರು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ನಂತರ ಕುಮಾರಸ್ವಾಮಿ ಅದರ ದುಷ್ಪರಿಣಾಮ ಅನುಭವಿಸಿದರು. ಮುಂದಿನ ಚುನಾವಣೆಗಳಲ್ಲಿ ರಾಜ್ಯದಲ್ಲಿ AIMIM ಸ್ಪರ್ಧಿಸಲಿದೆ. ಕಾಂಗ್ರೆಸ್​ ಪಕ್ಷದಲ್ಲಿ ಇವಾಗ ಯಾವುದೇ ಧಮ್​ ಇಲ್ಲ. ಸೋಲಿಗೆ ಹೆದರಬೇಕಿಲ್ಲ, ಪ್ರತಿ ಸೋಲು ಗೆಲುವಿನ ಮೆಟ್ಟಿಲಾಗುತ್ತೆ ಎಂದು ಒವೈಸಿ ಹೇಳಿದರು.

‘ಕ್ರಿಕೆಟ್​ ಚೆಂಡನ್ನು ದನದ ಚರ್ಮದಿಂದ ತಯಾರಿಸ್ತಾರೆ.. ಆದ್ರೆ ದನದ ಮಾಂಸ ಮಾತ್ರ ತಿನ್ನಬೇಡಿ ಎಂದು ಹೇಳ್ತಾರೆ’ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಇದರಿಂದ ಅನೇಕರ ಉದ್ಯೋಗ ಹಾಳಾಗಿ ಹೋಗುತ್ತದೆ ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು. ಉದ್ಯೋಗ ಕಳೆದುಕೊಂಡವರು ಮುಂದೇನು ಮಾಡ್ಬೇಕೆಂದು ರಾಜ್ಯ ಸರ್ಕಾರಕ್ಕೆ ಒವೈಸಿ ಪ್ರಶ್ನೆ ಮಾಡಿದರು.

ಕ್ರಿಕೆಟ್​ ಚೆಂಡನ್ನು ದನದ ಚರ್ಮದಿಂದ ತಯಾರಿಸುತ್ತಾರೆ. ಆದರೆ ದನದ ಮಾಂಸ ಮಾತ್ರ ತಿನ್ನಬೇಡಿ ಎಂದು ಹೇಳುತ್ತಾರೆ. ಅಮಿತ್ ಶಾ ಸಬ್​ಕಾ ಸಾಥ್ ಸಬ್​ಕಾ ವಿಕಾಸ್ ಅಂತಾರೆ. ಅವರು ಸಬ್​ಕಾ ಸಾಥ್​ ಇಲ್ಲ, ಬದಲಾಗಿ ದನಗಳ ಜೊತೆಗಿದ್ದಾರೆ ಎಂದು ಹೇಳಿದರು.

ದನದ ಮಾಂಸ ಸೇವನೆಯಿಂದ ಆನೇಕರು ಆರೋಗ್ಯವಂತರಾಗ್ತಾರೆ. ಪ್ರಧಾನಿ ಮೋದಿ, ಸಿಎಂ ಬಿಎಸ್​ವೈಗೆ ಬಡವರ ಹಿತ ಬೇಡವಾಗಿದೆ. ಬಡವರು ಮನೆಯಲ್ಲೇನು ತಿನ್ನುತ್ತಾರೆಂದು ಇಣುಕುವುದನ್ನು ಬಿಡಿ. ನಾನು ಮನೆಯಲ್ಲಿ ಏನು ತಿನ್ನಬೇಕೆನ್ನುವುದು ಅವರಿಗ್ಯಾಕೆ ಬೇಕು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ಗಾಂಧಿ ಪುಣ್ಯಸ್ಮರಣೆಯಂದು ಟ್ವಿಟರ್​ನಲ್ಲಿ ಟ್ರೆಂಡ್​ ಆದ ನಾಥೂರಾಮ್​ ಗೋಡ್ಸೆ; ದೇಶವನ್ನು ಉಳಿಸಿದ್ದಕ್ಕೆ ಧನ್ಯವಾದವೆಂದ ಟ್ವಿಟಿಗರು

Follow Us
KUSHAL V
KUSHAL V
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ