AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ JDS ಅಭ್ಯರ್ಥಿ ಗೆಲ್ಲೋದು ಪಕ್ಕಾ, ಬರೆದಿಟ್ಟುಕೊಳ್ಳಿ ಎಂದ H.D.ಕುಮಾರಸ್ವಾಮಿ

ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕೋಲಾರ ಜನರು ತೀರ್ಮಾನಿಸಿದ್ದಾರೆ. JDS ಅಭ್ಯರ್ಥಿ ಗೆಲ್ತಾರೆ, ಯಾವುದೇ ಸಂಶಯವಿಲ್ಲ ಬರೆದಿಟ್ಟುಕೊಳ್ಳಿ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಕೋಲಾರದಲ್ಲಿ JDS ಅಭ್ಯರ್ಥಿ ಗೆಲ್ಲೋದು ಪಕ್ಕಾ, ಬರೆದಿಟ್ಟುಕೊಳ್ಳಿ ಎಂದ H.D.ಕುಮಾರಸ್ವಾಮಿ
ಹೆಚ್​ಡಿಕೆImage Credit source: vijaykarnataka.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 23, 2023 | 3:29 PM

ಬಾಗಲಕೋಟೆ: ವಿಧಾನಸಭಾ ಚುನಾವಣೆಯ (election) ಕಾವು ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ ಪಕ್ಷಗಳು ತಮ್ಮದೆ ಶೈಲಿಯಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಯಾವ ಕ್ಷೇತ್ರದಿಂದ ಚುನಾವಣೆಗೆ ನಿಂತುಕೊಳ್ಳುತ್ತಾರೆ ಎಂಬ ಹಲವು ಗೊಂದಲಗಳಿದ್ದವು. ಅದಕ್ಕೆಲ್ಲ ತೆರೆ ಎಳೆದಿರುವ ಸಿದ್ಧರಾಮಯ್ಯ ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಈ ವಿಚಾರವಾಗಿ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕೋಲಾರ ಜನರು ತೀರ್ಮಾನಿಸಿದ್ದಾರೆ. JDS ಅಭ್ಯರ್ಥಿ ಗೆಲ್ತಾರೆ, ಯಾವುದೇ ಸಂಶಯವಿಲ್ಲ ಬರೆದಿಟ್ಟುಕೊಳ್ಳಿ. ಕೋಲಾರ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಪ್ರಶ್ನೆ ಇಲ್ಲ. ಕೋಲಾರದಲ್ಲಿ ಜೆಡಿಎಸ್​ ವಿಜಯವನ್ನು ಜನ ಈಗಾಗಲೇ ಬರೆದಿದ್ದಾರೆ ಎಂದು ಹೇಳಿದರು.

ಜೆ.ಸಿ.ಮಾಧುಸ್ವಾಮಿ ಬಹುಶಃ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ

ಮಾಧುಸ್ವಾಮಿ ವಿರುದ್ಧ ಕಿಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಜೆ.ಸಿ.ಮಾಧುಸ್ವಾಮಿ ಬಹುಶಃ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಾನು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿ ಒಂದು ತಿಂಗಳಾಗಿದೆ. ಒಂದು ತಿಂಗಳ ಬಳಿಕ ಅವರು ಈ ರೀತಿ ಮಾತಾಡ್ತಿದ್ದಾರೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು ದೋಚಿದ್ದಾರೆ ಎಂಬ ಪದ ಬಳಸಿದ್ದಾರೆ. ಯಾರು ದೋಚುತ್ತಿದ್ದಾರೆ, ಲೂಟಿ ಮಾಡ್ತಿದ್ದಾರೆಂದು ಜನ ನೋಡ್ತಿದ್ದಾರೆ. ರೈತರು ಹಣ ಕಟ್ಟದಿದ್ದರೆ ನೋಟಿಸ್ ಕೊಟ್ರೆ ತಪ್ಪಿಲ್ಲ ಅಂತಾ ಹೇಳಿದ್ದಾರೆ. ಇವರೆಲ್ಲ ವಿಕೃತ ಮನಸ್ಸಿನವರು, ಅವರ ಸರ್ಟಿಫಿಕೆಟ್​​ ನನಗೆ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಉಡುಪಿ: ಕರಾವಳಿ ಹಿಂದೂ ಧರ್ಮದ ಪ್ರಯೋಗಶಾಲೆ ಎಂದ ಸಿದ್ದರಾಮಯ್ಯ

ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ಹೆಚ್​.ಡಿ.ಕುಮಾರಸ್ವಾಮಿ

ಇನ್ನು ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ‘ಕೈ’ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಂದು ರಾಜ್ಯದಲ್ಲಿ ಈ ಸರ್ಕಾರ ಬರುವುದಕ್ಕೆ ಕಾರಣ ಯಾರು? ಈ ಬಗ್ಗೆ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿಲ್ವಾ ಎಂದು ಪ್ರಶ್ನಿಸಿದರು. ನಮ್ಮ ದೇಶದ ಸಂಪತ್ತು ಕೇವಲ 166 ಜನರ ಕೈಯಲ್ಲಿದೆ. ಕೊವಿಡ್​ಗೂ ಮುನ್ನ 106 ಜನರಿದ್ದರು, ಈಗ 166ಕ್ಕೆ ಏರಿಕೆಯಾಗಿದೆ. ಬಡವರ ಆದಾಯ ಹೆಚ್ಚಿಸುವುದೇ ಪಂಚರತ್ನ ಯಾತ್ರೆ ಮೂಲ ಉದ್ದೇಶ ಎಂದರು.

ಇದನ್ನೂ ಓದಿ: ಕನಕಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಕೆಶಿಗೆ ಆಫರ್, ನಿಜ ಎಂದ ಡಿಕೆ ಶಿವಕುಮಾರ್

ಮಿತಿ ಮೀರಿದ ಮಾತಿನ ದಾಟಿ

ರಾಜಕೀಯ ಮುಖಂಡರ ಎಲ್ಲೆ ಮೀರಿದ ಮಾತಿನ ದಾಟಿ ವಿಚಾರಕ್ಕೆ ಹೇಳಿಕೆ ನೀಡಿದ್ದು, ಬಿಜೆಪಿ, ಕಾಂಗ್ರೆಸ್​ನಲ್ಲಿ ಪರಸ್ಪರ ಕಿತ್ತಾಟ ಇದೆಯಲ್ಲ. ಅದು ಅವರನ್ನೆ ಆಪೋಶನ ತೆಗೆದುಕೊಳ್ಳುತ್ತೆ. ನಾನು ವೈಯಕ್ತಿಕವಾಗಿ ಚರ್ಚೆಗೆ ಹೋಗಿಲ್ಲ. ನನ್ನ ಪಂಚರತ್ನ ಯೋಜನೆಗೆ ಬೆಂಬಲ ಕೋರುತ್ತಿದ್ದೇನೆ. ಯಾವ ಪಕ್ಷದಲ್ಲಿ ಯಾರು ಟೀಕೆ ಮಾಡ್ತಾರೆ ಅವರಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.