ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು

ಬಾಗಲಕೋಟೆಯಲ್ಲಿ ಇಂದು ರಿಯಲ್ ಸ್ಪೋರ್ಟ್ಸ್, ಸೆಲ್ಪ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆ ವತಿಯಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಇದರಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಇಳಕಲ್ ಸೀರೆ ಧರಿಸಿಯೇ ಗೃಹಿಣಿಯರು ಮ್ಯಾರಥಾನ್​ನಲ್ಲಿ ಓಡಿದ್ದು ವಿಶೇಷವಾಗಿತ್ತು. ರಜೆ ದಿನ ನಡೆದ ಮ್ಯಾರಥಾನ್​ ಎಲ್ಲರಿಗೂ ವಿಭಿನ್ನ ಅನುಭವ ನೀಡಿದೆ.

ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು
ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 16, 2024 | 10:39 PM

ಬಾಗಲಕೋಟೆ,  ಜೂನ್​ 16: ಇಂದು‌ ರವಿವಾರ ರಜೆ ದಿನ. ನಗರದಲ್ಲಿ ಜನ ಪಾರ್ಕ್, ಟ್ರಿಪ್ ಅಂತ ಹೋಗಲಿಲ್ಲ. ಬದಲಿಗೆ ಎಲ್ಲರೂ ಕಾಲಿಗೆ ಕೆಲಸ ನೀಡಿದ್ದರು. ಏರೋಬಿಕ್ಸ್​ಗೆ ಹೆಜ್ಜೆ ಹಾಕಿ, ಕಿಮೀ ಗಟ್ಟಲೆ ಓಡಿದರು. ಅದರಲ್ಲೂ ಇಳಕಲ್ ಸೀರೆಯುಟ್ಟ (Ilkal sarees) ನೀರೆಯರು ಓಡುವುದರೊಂದಿಗೆ ಕುಣಿದು ಕುಪ್ಪಳಿಸಿ ಎಲ್ಲರ ಗಮನ ಸೆಳೆದರು. ಅಷ್ಟಕ್ಕೂ ಇದಕ್ಕೆ ಕಾರಣ ಏನು ಅಂದರೆ ಮ್ಯಾರಥಾನ್ ಓಟ (Marathon). ನಗರದಲ್ಲಿ ರಿಯಲ್ ಸ್ಪೋರ್ಟ್ಸ್, ಸೆಲ್ಪ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆ ವತಿಯಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು.

ಸಾವಿರಾರು ಜನರಿಂದ ಮ್ಯಾರಥಾನ್: ವಿಶ್ವದಾಖಲೆ ಮಾಡುವ ಗುರಿ

ವಿಶ್ವದಾಖಲೆ ಮಾಡುವ ಉದ್ದೇಶದಿಂದ ಸಾವಿರಾರು ಜನರಿಂದ ಮ್ಯಾರಥಾನ್ ​ನಡೆಸಲಾಯಿತು. ಚಿಕ್ಕಮಕ್ಕಳು, ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಇದರಲ್ಲಿ ಭಾಗಿಯಾಗಿದ್ದರು. ಸರಕಾರಿ, ಖಾಸಗಿ ನೌಕರರು ವೈದ್ಯರು, ವಿದ್ಯಾರ್ಥಿಗಳು, ಗೃಹಿಣಿಯರು‌ ಕಿಮೀ ಗಟ್ಟಲೆ ಓಡಿದರು. ರಷ್ಯಾದ ಮ್ಯಾರಥಾನ್ ಓಟಗಾರ್ತಿ ಅಲೆಕ್ಷಾಂಡ್ರಾ ಕೂಡ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು

ಬಾಗಲಕೋಟೆ ಡಿಸಿ ಕೆಎಮ್ ಜಾನಕಿ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಎಸ್ ಪಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ ಕೂಡ ಮ್ಯಾರಥಾನ್​ನಲ್ಲಿ ಓಡಿ ಗಮನ ಸೆಳೆದರು. ಇದಕ್ಕೂ‌ ಮುನ್ನ ಬೋವಿ ಪೀಠದ ಮೈದಾನದಲ್ಲಿ ಏರೋಬಿಕ್ಸ್ ನಡೆಯಿತು. ಸಂಗೀತದೊಂದಿಗೆ ಗೃಹಿಣಿಯರು ಇಳಕಲ್ ಸೀರೆಯಲ್ಲೇ ಕುಣಿದು ಸಂತಸ ಪಟ್ಟರು. ನಂತರ ಇಳಕಲ್ ಸೀರೆ ಧರಿಸಿಯೇ ಮ್ಯಾರಥಾನ್​ನಲ್ಲಿ ಓಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ

ಮೂರು ಕಿಮೀ, ಐದು ಕಿಮೀ, 10 ಕಿಮೀ ನಂತೆ ಮ್ಯಾರಥಾನ್​ ನಡೆಸಲಾಯಿತು. ರಷ್ಯಾ ಮ್ಯಾರಥಾನ್​ ಪಟು ಅಲೆಕ್ಷಾಂಡ್ರಾ ಇಳಕಲ್ ಸೀರೆಯುಟ್ಟು ಮಹಿಳೆಯರ ಜೊತೆ ಓಡಿದರು. 1500 ಜನ ಇಳಕಲ್ ಸೀರೆಯುಟ್ಟ ಮಹಿಳೆಯರು, ಇತರೆ ಜನರು ಸೇರಿ ನಾಲ್ಕು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಕೇವಲ ವಿಶ್ವದಾಖಲೆ ಅಷ್ಟೇ ಅಲ್ಲದೆ ಇಳಕಲ್ ಸೀರೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶ ಇದರಲ್ಲಿತ್ತು. ಇಳಕಲ್ ಸೀರೆಯಲ್ಲಿ ಓಡೋದು ವಿಭಿನ್ನ ಅನುಭವ. ಇದರಲ್ಲಿ ಭಾಗಿಯಾಗಿದ್ದು ಬಹಳ ಸಂತಸ ತಂದಿದೆ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ರಜೆ ದಿನ ನಡೆದ ಮ್ಯಾರಥಾನ್​ ಎಲ್ಲರಿಗೂ ವಿಭಿನ್ನ ಅನುಭವ ನೀಡಿದೆ. ಸಾವಿರಾರು ಜನರು ಭಾಗಿಯಾಗಿ ಖುಷಿ ಪಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!