ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು

ಬಾಗಲಕೋಟೆಯಲ್ಲಿ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ, ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಈಗ ಮಳೆ ಸಮೃದ್ದವಾಗಿ ಸುರಿದಿದ್ದು, ಮುಂದೆ ತರಕಾರಿ ದರ ಕಡಿಮೆ ಆಗುವ ಸಾಧ್ಯತೆ ಇದೆ. ಯಾವ ಯಾವ ತರಕಾರಿಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ.

ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು
ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 15, 2024 | 5:21 PM

ಬಾಗಲಕೋಟೆ, ಜೂನ್​ 15: ಕಳೆದ ವರ್ಷದ ಬರ ಈಗಲೂ ಕಾಡುತ್ತಲೇ ಇದೆ. ಇದರಿಂದ ತರಕಾರಿ (Vegetable), ಸೊಪ್ಪು, ಹಣ್ಣುಹಂಪಲು ಬೆಲೆ (prices hike) ಗಗನಕ್ಕೆ ಏರಿದೆ. ತರಕಾರಿ ದರ ತೀರಾ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.  ನಗರದ ತರಕಾರಿ ವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಶುದ್ದ ಸಿಗುತ್ತದೆ ಎಂದು ಹೆಚ್ಚು ಗ್ರಾಹಕರು ಬರುತ್ತಾರೆ. ಪ್ರತಿ ಶನಿವಾರ ತರಕಾರಿ ಸಂತೆ ನಡೆಯುತ್ತದೆ. ಆದರೆ ಈಗ ತರಕಾರಿ ದರ ಕೇಳಿದರೆ ಇಷ್ಟಕ್ಕೆ ಅಷ್ಟೊಂದಾ ಎನ್ನುವಂತ್ತಾಗಿದೆ. ಕೆಂಪು‌ ಸುಂದರಿ ಟೊಮ್ಯಾಟೊ ಬೆಲೆ‌ ನೂರಕ್ಕೆ ಏರಿದೆ. ಕೇವಲ ಹತ್ತು ರೂಗೆ ಸಿಗುತ್ತಿದ್ದ ಕೋತಂಬರಿ ಸೊಪ್ಪು ಒಂದು ಕಟ್ ಈಗ 50 ರಿಂದ 60 ರೂ ಆಗಿದ್ದು ಅಚ್ಚರಿ ಮೂಡಿಸಿದೆ.

ಯಾವ ತರಕಾರಿಗೆ ಎಷ್ಟು ಬೆಲೆ?

ಇನ್ನು ಬದನೆಕಾಯಿ, ಚವಳಿಕಾಯಿ, ಸೌತೆಕಾಯಿ, ಹಸಿಮೆಣಸಿನಕಾಯಿ ಎಲ್ಲವೂ ಕೆಜಿಗೆ 80 ರಿಂದ 90 ರೂ ಗೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ವೈದ್ಯರು ಉತ್ತಮ ಆರೋಗ್ಯಕ್ಕೆ ತರಕಾರಿ ಹಣ್ಣು ತಿನ್ನಿ ಅಂತಾರೆ ಆದರೆ ಇಷ್ಟೊಂದು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡೋದು ಹೇಗೆ ಎಲ್ಲ ತುಟ್ಟಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿದ ದಿನಸಿ, ತರಕಾರಿ ಬೆಲೆ: ಟೊಮೆಟೋ ಬೆಲೆ 50 ರೂ.ಗೆ ಏರಿಕೆ, 200 ರ ಗಡಿದಾಟಿದ ತೊಗರಿ ಬೇಳೆ

ಬಹುತೇಕ ಎಲ್ಲ ತರಕಾರಿ 80 ರಿಂದ 90ರ ಗಡಿಯಲ್ಲಿವೆ. ಸೇಬು ಸೇರಿದಂತೆ ಇತರೆ ಹಣ್ಣುಗಳ ದರ ಕೂಡ ಕೆಜಿಗೆ 200 ರಿಂದ 300 ರೂ. ಆಗಿದೆ. ನಿತ್ಯ ಅಡುಗೆಗೆ ತರಕಾರಿ ಬೇಕೆ ಬೇಕು. ಆದರೆ ಖರೀದಿ ಮಾಡುವಾಗ ಬೆಲೆ ಕೇಳಿ ಬೆದರುವಂತಾಗಿದೆ. 500 ರಿಂದ 600 ರೂ. ಖರ್ಚಾದರೂ ಒಂದು ಕೈಚೀಲ ತುಂಬೋದಿಲ್ಲ. ಇದು ತರಕಾರಿ ಬೆಲೆ ಎಷ್ಟು ಏರಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆದರೆ ನಿತ್ಯ ಅಡುಗೆ ಮಾಡಲೇಬೇಕು, ತರಕಾರಿ ಇಲ್ಲದೆ ಊಟ ಮಾಡೋದು ಕಷ್ಟಸಾಧ್ಯ. ಇದರಿಂದ ಎಷ್ಟೇ ಬೆಲೆ ಏರಿಕೆಯಾದರೂ ಖರೀದಿ ‌ಮಾಡುವುದು ಅನಿವಾರ್ಯವಾಗಿದೆ.

ಆದರೆ ಎರಡು ಮೂರು ಕೆಜಿ ಖರೀದಿ ಮಾಡಲು ಬಂದವರು ‌ಒಂದು ಕೆಜಿಗೆ ತೃಪ್ತಿ ಪಡಬೇಕಾಗಿದೆ. ಒಂದು ಕೆಜಿ ಖರೀದಿಗೆ ಬಂದವರು ಅರ್ಧ ಕೆಜಿ ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಕಳೆದ ಬಾರಿಯ ಬರ ಹಾಗೂ ಹೊರಗಡೆಯಿಂದ ದಾಸ್ತಾನು ಬರದೆ ಇರೋದು ಪ್ರಮುಖ ಕಾರಣವಾಗಿದೆ. ತರಕಾರಿ ವ್ಯಾಪಾರಿಗಳಿಗೂ ಹೆಚ್ಚು ಲಾಭ ಸಿಗ್ತಿಲ್ಲ. ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರಿಂದ ವ್ಯಾಪಾರಿಗಳಿಗೂ ಲಾಭ ಇಲ್ಲದಂತಾಗಿದೆ.

ಇದನ್ನೂ ಓದಿ: ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!

ಒಟ್ಟಿನಲ್ಲಿ ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಈಗ ಮಳೆ ಸಮೃದ್ದವಾಗಿ ಸುರಿದಿದ್ದು, ಮುಂದೆ ತರಕಾರಿ ದರ ಒಂದು ಹಂತಕ್ಕೆ ಬರುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!