AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮನಿಗೋಸ್ಕರ ಜೈಲಿನಲ್ಲಿದ್ದೆ, ಆಗ ನನ್ನ ಋಣ ತೀರಿಸಲು ಆಗಲ್ಲ ಎಂದಿದ್ರು ನಾದಿನಿ ಅರುಣಾ: ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯುವೆ -ಸೋಮಶೇಖರ್​​​ ರೆಡ್ಡಿ ಘೋಷಣೆ

ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮನಿಗೋಸ್ಕರ ಜೈಲಿನಲ್ಲಿದ್ದೆ, ಆಗ ನನ್ನ ಋಣ ತೀರಿಸಲು ಆಗಲ್ಲ ಎಂದಿದ್ರು ನಾದಿನಿ ಅರುಣಾ: ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯುವೆ -ಸೋಮಶೇಖರ್​​​ ರೆಡ್ಡಿ ಘೋಷಣೆ
ಸೋಮಶೇಖರ್​​​ ರೆಡ್ಡಿ
TV9 Web
| Edited By: |

Updated on:Feb 02, 2023 | 10:54 AM

Share

ಬಳ್ಳಾರಿ: ಸ್ವತಃ ಪಕ್ಷ ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ( Janardhan Reddy) ಅವರು ತಮ್ಮ ಅಣ್ಣನ ವಿರುದ್ಧವೇ ತಮ್ಮ ಪತ್ನಿಯನ್ನು ಸ್ಪರ್ಧಿಯಾಗಿ ಇಳಿಸಿದ್ದಾರೆ. ಇದು ಬಳ್ಳಾರಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಸಂಚನ ಮೂಡಿಸಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮೀ(Aruna Lakshmi) ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ(Somashekar Reddy) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾದಿನಿ -ಭಾವನ ಮಧ್ಯೆ ಸ್ಪರ್ಧೆ ರಸವತ್ತಾಗಿರುತ್ತದೆ. ಒಳ್ಳೆಯ ಫೈಟ್ ಇದ್ದೇ ಇರುತ್ತದೆ. ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ. ಜನಾರ್ದನ ರೆಡ್ಡಿಗೆ ನನ್ನ ಹಾಗೆಯೇ ತ್ಯಾಗದ ಮನೋಭಾವ ಇಲ್ಲ. ಬಳ್ಳಾರಿಯಲ್ಲಿ ನಾನು ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸುವೆ. ಏಕೆಂದರೆ ನಗರದ ಅಭಿವೃದ್ಧಿ ನನ್ನ ಕನಸು. ಕೆಲ ಕಾರ್ಯಕರ್ತರು ಹಣದ ಆಸೆಗೆ ಹೊಸ ಪಕ್ಷಕ್ಕೆ ಹೋಗಬಹುದು. ನಮ್ಮ ಕಾರ್ಯಕರ್ತರು ನಮ್ಮ ಜೊತೆಗೆ ಇರುತ್ತಾರೆ. ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ನಮಗೆ ನಷ್ಟವಿಲ್ಲ, ಕಾಂಗ್ರೆಸ್​​​​ಗೆ ನಷ್ಟ. ಸಹೋದರನಿಗಾಗಿ 6 ತಿಂಗಳು ಜೈಲಿನಲ್ಲಿದ್ದೆ. ಆಗ ಅರುಣಾ ಲಕ್ಷ್ಮೀ ನನ್ನ ಋಣ ತೀರಿಸಲು ಆಗಲ್ಲ ಎಂದು ಹೇಳಿದ್ರು. ಅರುಣಾ ಲಕ್ಷ್ಮೀ ಸ್ಪರ್ಧೆ ತಪ್ಪು ಅನ್ನೋದು ಜನರೇ ಹೇಳುತ್ತಾರೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅನುಭವಿಸಿದ ಸಂಕಷ್ಟವನ್ನು, ಗಾಲಿ ರೆಡ್ಡಿಗಾರಿ ಅನುಭವಿಸಿದ್ದು, ಜಗನ್ ಮೋಹನ್ ವೈಎಸ್ ಆರ್ ಪಕ್ಷದಂತೆ ಇದೀಗ ಕೆಆರ್ ಪಿಪಿ ಪಕ್ಷವನ್ನು ರೆಡ್ಡಿ ಸ್ಥಾಪಿಸಿದ್ದಾರೆ. ಪ್ರಾದೇಶಿಕ ಪಕ್ಷ ಸ್ಥಾಪಿಸೋ ಮೂಲಕ ರಾಷ್ಟ್ರೀಯ ಪಕ್ಷಗಳ ವಿರುದ್ಧ ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಂದು ಜಗನ್ ಮೋಹನ್ ರೆಡ್ಡಿಗೆ ಅವರ ತಾಯಿ ಹಾಗೂ ತಂಗಿ ತುಂಬಿದ ಧೈರ್ಯವನ್ನು ಇದೀಗ ಜನಾರ್ಧನರೆಡ್ಡಿಗೆ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಮಗಳು ಬ್ರಹ್ಮಿಣಿ ಧೈರ್ಯ ತುಂಬಿದ್ದು, ಈಗಾಗಲೇ ಪತ್ನಿಯನ್ನು ಸಹೋದರ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ಕಣ್ಣಕ್ಕೀಳಿಸಿ ತೊಡೆ ತಟ್ಟಿದ್ದಾರೆ.ಅಲ್ಲಿಗೆ ರಾಜಕೀಯದಲ್ಲಿ ತಾವೆಷ್ಟು ಸಿರಿಯಸ್ ಆಗಿದ್ದಿನಿ ಎನ್ನೋದನ್ನ ಹೇಳಿದ್ದಾರೆ. ಇದೀಗ ಪುತ್ರಿ ಬ್ರಹ್ಮಿಣಿಯನ್ನು ಕಣಕ್ಕೀಳಿಸಲು ಅಖಾಡ ಸಿದ್ದಗೊಳಿಸುತ್ತಿದ್ದಾರೆ. ಈಗಾಗಲೇ ಹೊಸಪೇಟೆ, ರಾಯಚೂರು, ಗದಗ, ವಿಜಯಪುರ ಸುತ್ತಮುತ್ತಲ ಹಲವು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ಕಾರ್ಯ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಗೆಲ್ಲುವ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಗಳನ್ನು ಅಖಾಡಕ್ಕೀಳಿಸುವ ಸಾಧ್ಯತೆಗಳಿದ್ದು, ಬ್ರಹ್ಮಿಣಿ ಕೂಡ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವವುದು ರೆಡ್ಡಿ ಆಪ್ತವಲಯದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಒಟ್ಟಾರೆ 30 ರಿಂದ 40 ಸೀಟು ಗೆಲ್ಲುವ ನಿರೀಕ್ಷೆಯನ್ನು ಜನಾರ್ಧನರೆಡ್ಡಿ ಅವರು ಹೊಂದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:25 am, Thu, 2 February 23

ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌