Viral Video: ಬೇಗ ಮದುವೆ ಮಾಡಿ ಎಂದು ಟವರ್ ಏರಿ ಕುಳಿತ ಯುವಕ

ಈಗಾಗಲೇ ಮದುವೆಗೆಂದು ಚಿರಂಜೀವಿಗೆ ವಧುವನ್ನು ಬಹುತೇಕ ನಿಶ್ಚಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿರುವ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಅಂತ ಮನೆಯಲ್ಲಿ ಪೋಷಕರು ನಿಲುವು ತಳೆದಿದ್ದಾರೆ.

Viral Video: ಬೇಗ ಮದುವೆ ಮಾಡಿ ಎಂದು ಟವರ್ ಏರಿ ಕುಳಿತ ಯುವಕ
Follow us
TV9 Web
| Updated By: Digi Tech Desk

Updated on:Jun 15, 2021 | 2:19 PM

ಬಳ್ಳಾರಿ: ಮದುವೆ ಆಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗಲ್ಲ ಅಂತ ಗಾದೆಯೇ ಇದೆ. ಕೆಲವರಿಗೆ ಮದುವೆ ಬಗ್ಗೆ ಎಷ್ಟೊದು ಹುಚ್ಚಿರುತ್ತೆ ಅಂದ್ರೆ ಅದನ್ನು ಹೇಳೋಕಾಗಲ್ಲ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ 23 ವರ್ಷದ ಚಿರಂಜೀವಿ ಎಂಬ ಯುವಕನೋರ್ವ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿಬಿಟ್ಟಿದ್ದ. ತನಗೆ ಮದುವೆ ಮಾಡಿದರೆ ಮಾತ್ರ ಟವರ್​ನಿಂದ ಕೆಳಗಿಳಿಯುವುದಾಗಿ ಹಠ ಹಿಡಿದುಕುಳಿತಿದ್ದ.

ಈಗಾಗಲೇ ಮದುವೆಗೆಂದು ಚಿರಂಜೀವಿಗೆ ವಧುವನ್ನು ಬಹುತೇಕ ನಿಶ್ಚಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿರುವ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಅಂತ ಮನೆಯಲ್ಲಿ ಪೋಷಕರು ನಿಲುವು ತಳೆದಿದ್ದಾರೆ. ಆದರೆ, ಚಿರಂಜೀವಿ ನನಗೆ ಹುಡುಗಿಯನ್ನು ನಿಶ್ಚಯಿಸಿದ್ದೀರಿ, ಆದರೆ, ಯಾಕೆ ಮದುವೆ ತಡ ಮಾಡುತ್ತಿದ್ದೀರಿ? ಎಂದು ಹಠ ಹಿಡಿದು ಟವರ್ ಏರಿ ಕುಳಿತಿದ್ದಾನೆ.

ಪೊಲೀಸರು ಮತ್ತು ಸ್ಥಳೀಯರು ಕೊನೆಗೂ ಹರಸಾಹಸ ನಡೆಸಿ, ಮನವೊಲಿಸಿ ಟವರ್​ನಿಂದ ಕೆಳಗಿಳಿಸಿದ್ದಾರೆ. ಇಳಿಯುವಾಗಲೂ ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಟವರ್ ಇಳಿದಿದ್ದಾನೆ. ಹೀಗೆ ಮದುವೆ ಆಗುವ ಹುಚ್ಚಿಗೆ ಬಿದ್ದು ಟವರ್ ಏರಿದ ಘಟನೆ ಪೊಲೀಸರು ಮತ್ತು ಸ್ಥಳಿಯರ ಮಧ್ಯ ಪ್ರವೇಶದಿಂದ ಅಂತೂ ಇಂತೂ ಸುಖಾಂತ್ಯವಾಗಿದೆ.

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್

Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ​ ಸನ್ನಿ ಲಿಯೋನ್​; ವೈರಲ್​ ಆಯ್ತು ನಟಿಯ ಹೊಸ ಫೋಟೋ 

(Viral Video young man sitting in a tower wants to will soon marry in Ballari )

Published On - 7:17 pm, Mon, 14 June 21

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ