11 ವರ್ಷ ಹಿಂದಿನ ರೇಪ್‌ ಆ್ಯಂಡ್ ಮರ್ಡರ್ ಪ್ರಕರಣ ಭೇದಿಸಿದ ಸಿಐಡಿ: ಮೂವರ ಬಂಧನ

2013ರ ಫೆಬ್ರವರಿ 15ರಂದು ವಿಜಯಾ ಎಂಬುವವರ ಮೇಲೆ ನಡೆದಿದ್ದ ರೇಪ್‌ ಆ್ಯಂಡ್​ ಮರ್ಡರ್ ಪ್ರಕರಣವನ್ನು ಸಿಐಡಿ ಇದೀಗ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವ ಮೂಲಕ 11 ವರ್ಷದ ಹಿಂದಿನ ಕೇಸ್​ ಅಂತ್ಯಗೊಳಿಸಿದ್ದಾರೆ. ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿ ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಹೋಗಿದ್ದರು.

11 ವರ್ಷ ಹಿಂದಿನ ರೇಪ್‌ ಆ್ಯಂಡ್ ಮರ್ಡರ್ ಪ್ರಕರಣ ಭೇದಿಸಿದ ಸಿಐಡಿ: ಮೂವರ ಬಂಧನ
11 ವರ್ಷ ಹಿಂದಿನ ರೇಪ್‌ ಆ್ಯಂಡ್ ಮರ್ಡರ್ ಪ್ರಕರಣ ಭೇದಿಸಿದ ಸಿಐಡಿ: ಮೂವರ ಬಂಧನ

Updated on: May 24, 2024 | 6:42 PM

ಬೆಂಗಳೂರು, ಮೇ 24: ಮೂವರನ್ನು ಬಂಧಿಸುವ ಮೂಲಕ 11 ವರ್ಷ ಹಿಂದಿನ ರೇಪ್‌ ಆ್ಯಂಡ್​ ಮರ್ಡರ್ (murder) ಪ್ರಕರಣವನ್ನು ಸಿಐಡಿ (CID) ಭೇದಿಸಿದೆ. ನರಸಿಂಹ ಮೂರ್ತಿ, ದೀಪಕ್ ಮತ್ತು ಹರಿಪ್ರಸಾದ್ ಬಂಧಿತ ಆರೋಪಿಗಳು. 2013ರ ಫೆಬ್ರವರಿ 15ರಂದು ವಿಜಯಾ ಎಂಬುವವರನ್ನು ಕೊಲೆಗೈದಿದ್ದರು. ವಿಜಯಾರನ್ನು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದರು. ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿ ಆಗಿದ್ದರು.

ನರಸಿಂಹಮೂರ್ತಿ ಮತ್ತು ಹರಿಪ್ರಸಾದ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್‌ನಲ್ಲಿ ವಿಜಯಾ ಪತಿ ಬಾಲಕೃಷ್ಣ ಪೈ ಕೂಡ ಕೆಲಸ ಮಾಡುತ್ತಿದ್ದರು. ಅನುಮಾನದ ಮೇಲೆ ವಿಜಯಾ ಪತಿಯನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಬಳಿಕ ಕೊಲೆಯಲ್ಲಿ ಗಂಡನ ಪಾತ್ರ ಇಲ್ಲ ಅಂತಾ ಗೊತ್ತಾಗಿತ್ತು.

ಇದನ್ನೂ ಓದಿ: ಕೆಎಎಸ್​ ಅಧಿಕಾರಿ ಪತ್ನಿ ಚೈತ್ರಾರದ್ದು ಕೊಲೆಯಲ್ಲ ಆತ್ಮಹತ್ಯೆ, ಪೊಲೀಸ್​ ತನಿಖೆಯಲ್ಲಿ ಬಯಲು

ಈ ಬಗ್ಗೆ ಚಿಕ್ಕಜಾಲ ಪೊಲೀಸರು ಕೋರ್ಟ್‌ಗೆ ಸಿ ರಿಪೋರ್ಟ್‌ ಸಲ್ಲಿಸಿದ್ದರು. ವಿಜಯಾ ಪತಿ ಬಾಲಕೃಷ್ಣ ಪೈ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಸ್ತೃತ ತನಿಖೆ ಸಲುವಾಗಿ ಹೈಕೋರ್ಟ್‌ ಸಿಐಡಿಗೆ ಆದೇಶಿಸಿತ್ತು. ತನಿಖೆ ನಡೆಸಿದ್ದ ಸಿಐಡಿಗೆ ದೀಪಕ್ ಎಂಬಾತನ ಕೈವಾಡ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಪರಮೇಶ್ವರ್ ತವರು ಕ್ಷೇತ್ರದಲ್ಲಿ ಯೋಧನ ಮೇಲೆ ಮದ್ಯದ ಬಾಟಲಿಯಿಂದ ಮಾರಣಾಂತಿಕ ಹಲ್ಲೆ

ದೀಪಕ್ ವಿಚಾರಣೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ನರಸಿಂಹಮೂರ್ತಿ, ಸಹಚರ ಹರಿಪ್ರಸಾದ್ ಕೈವಾಡ ಬೆಳಕಿಗೆ ಬಂದಿತ್ತು. ಇಬ್ಬರೂ ವಿಜಯಾರನ್ನು ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದರು. ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿ ಆಗಿದ್ದರು. ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಿ ಮೂವರನ್ನು ಸಿಐಡಿ ಬಂಧಿಸಿದೆ. ಸದ್ಯ ಮೂವರ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಹೆದ್ದಾರಿಯಲ್ಲಿ ಡಿವೈಡರ್‌ಗೆ ಬೈಕ್ ಡಿಕ್ಕಿ, ಸವಾರನ ಕಾಲು ಕಟ್‌

ದಾವಣಗೆರೆ: ಹೆದ್ದಾರಿಯಲ್ಲಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನ ಕಾಲು ಕಟ್‌ ಆಗಿರುವಂತಹ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿ ಅಪಘಾತ ಸಂಭವಿಸಿದೆ. ದಾವಣಗೆರೆಯ ಕೊಲ್ಕುಂಟೆ ನಿವಾಸಿ ಬಸವರಾಜ್ ಕಾಲು ಕಟ್‌ ಆಗಿದೆ. ಕಾಲು ಕಟ್‌ ಹಿನ್ನೆಲೆ ರಸ್ತೆಯಲ್ಲಿ ಬಿದ್ದು ಬೈಕ್ ಸವಾರ ನರಳಾಡಿದ್ದಾರೆ. ಗಾಯಾಳು ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಪ್ರದೀಪ್​

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us