AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ.. ಹೆಲ್ತ್ ವಾರಿಯರ್ಸ್‌ಗೆ ಬಂದ ವ್ಯಾಕ್ಸಿನ್ ಫ್ರಂಟ್‌ಲೈನ್ ವಾರಿಯರ್ಸ್‌ಗೆ

ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ ಆಗಿದೆ. ಕೈ ಮುಗಿತ್ತೀವಿ ಲಸಿಕೆ ಹಾಕಿಸಿಕೊಳ್ರಪ್ಪ ಅಂದ್ರು ಯಾರು ಕ್ಯಾರೆ ಅಂತಿಲ್ಲ. ಅದರಲ್ಲೂ ಹೆಲ್ತ್ ವಾರಿಯರ್ಸ್ ತಿರುಗಿಯೂ ಕೂಡ ನೋಡ್ತಿಲ್ಲ. ಅದಕ್ಕಾಗಿ ಬಿಬಿಎಂಪಿ ಮತ್ತೊಂದು ಪ್ಲ್ಯಾನ್ ಸಿದ್ದಮಾಡಿಟ್ಟುಕೊಂಡಿದೆ.

ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ.. ಹೆಲ್ತ್ ವಾರಿಯರ್ಸ್‌ಗೆ ಬಂದ ವ್ಯಾಕ್ಸಿನ್ ಫ್ರಂಟ್‌ಲೈನ್ ವಾರಿಯರ್ಸ್‌ಗೆ
ಆಯೇಷಾ ಬಾನು
|

Updated on: Jan 21, 2021 | 7:01 AM

Share

ಬೆಂಗಳೂರು: ಕೊರೊನಾ ವ್ಯಾಕ್ಸಿನ್.. ಇದೊಂದು ಬ್ರಹ್ಮಾಸ್ತ್ರಕ್ಕಾಗಿ ಎಲ್ಲರೂ ಎದುರು ನೋಡ್ತಾಯಿದ್ರು. ಈಗ ವ್ಯಾಕ್ಸಿನ್ ಬಂದಿದೆ. ವ್ಯಾಕ್ಸಿನ್ ಹಂಚಿಕೆ ಅತಿದೊಡ್ಡ ಅಭಿಯಾನವೂ ಆರಂಭವಾಗಿದೆ. ಕೊರೊನಾ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ ಹೆಲ್ತ್ ವಾರಿಯರ್ಸ್​ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗ್ತಿದೆ. ಆದ್ರೆ ವ್ಯಾಕ್ಸಿನ್ ಪಡೆಯೋಕೆ ಹೆಲ್ತ್ ವಾರಿಯರ್ಸ್ ಹಿಂದೇಟು ಹಾಕ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ನೊಂದಾಯಿಸಿಕೊಂಡಿದ್ದ ಹೆಲ್ತ್ ವಾರಿಯರ್ಸ್ ಯಾರೂ ಮುಂದೆ ಬರ್ತಿಲ್ಲ.

ಎಲ್ಲೋ ಒಂದೆರೆಡು ಕಡೆ ವ್ಯಾಕ್ಸಿನ್ ಅಡ್ಡಪರಿಣಾಮ ನೀಡಿದೆ ಅಂತಾ ಸುದ್ದಿ ಹಬ್ಬಿತ್ತು. ಇದನ್ನ ಕೇಳಿಯೆ ಹೆಲ್ತ್ ವಾರಿಯರ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ಹೆಲ್ತ್ ವಾರಿಯರ್ಸ್‌ಗೆ ಅಂತಾ ಮೀಸಲಿಟ್ಟ ವ್ಯಾಕ್ಸಿನ್ ಬಳಕೆ ಆಗದೇ ಕೋಲ್ಡ್ ಸ್ಟೋರೇಜ್‌ನಲ್ಲಿ ಹಾಗೇ ಬಿದ್ದಿದೆ. ಐಸಿಎಂಆರ್ ಸುದ್ದಿಗೋಷ್ಠಿ ನಡೆಸಿದ ಕೈ ಮುಗಿದ್ದು ಕೇಳಿಕೊಂಡ್ರೂ ನಮ್ಮ ಹೆಲ್ತ್ ವಾರಿಯರ್ಸ್ ವ್ಯಾಕ್ಸಿನ್ ಸಹವಾಸಕ್ಕೆ ಹೋಗ್ತಿಲ್ವಂತೆ. ಹೀಗಾಗಿ ಸರ್ಕಾರ ಹೆಲ್ತ್ ವಾರಿಯರ್ಸ್​ಗೆ ಅಂತಾ ಬಂದಿರುವ ವ್ಯಾಕ್ಸಿನ್‌ಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್‌ಗೆ ನೀಡಲು ಪ್ಲ್ಯಾನ್ ಮಾಡಿದೆ.

ನಿತ್ಯ ಕೇವಲ ನಾಲ್ಕೈದು ಸಾವಿರ ಲಸಿಕೆ ಮಾತ್ರ ಬಳಕೆ ಅಂದಹಾಗೆ ಬಿಬಿಎಂಪಿ ನಿತ್ಯ 20 ಸಾವಿರ ಹೆಲ್ತ್ ವಾರಿಯರ್ಸ್‌ಗೆ ಲಸಿಕೆ ರವಾನೆ ಮಾಡ್ತಿದೆ. ಅದರಲ್ಲಿ ಕೇವಲ ನಾಲ್ಕೈದು ಸಾವಿರ ಲಸಿಕೆ ಬಳಕೆ ಆಗಿ ಉಳಿದ ವ್ಯಾಕ್ಸಿನ್‌ಗಳು ವಾಪಸ್ ಆಗ್ತಿವೆ. ಕೆಲ ವಾರಿಯರ್ಸ್‌ಗಳು ಕಾದು ನೋಡುವ ತಂತ್ರ ಹಾಗೂ ವ್ಯಾಕ್ಸಿನ್ ಸಹವಾಸವೆ ಬೇಡ ಅಂತಾ ಸೈಲೆಂಟ್ ಆಗಿದ್ದಾರೆ. ಹೀಗಾಗಿ ಬಿಬಿಎಂಪಿ ಬಳಿ ಇರುವ ವ್ಯಾಕ್ಸಿನ್ ಗಳು ಬಳಕೆನೇ ಆಗ್ತಿಲ್ಲ.

ಜೊತೆಗೆ ವ್ಯಾಕ್ಸಿನ್ ಪಡೆಯಲು ನಿರ್ದಿಷ್ಟ ಕಾಲಾವಧಿ ನಿಗದಿಯಾಗದಿರುವ ಕಾರಣ ವ್ಯಾಕ್ಸಿನ್ ಪಡೆಯಲು ಯಾರು ಬರ್ತಿಲ್ಲ. ಆದ್ರೆ  ಬಿಬಿಎಂಪಿಗೆ 1ಲಕ್ಷದ 68 ಸಾವಿರ ಜನ ಹೆಲ್ತ್ ವಾರಿಯರ್ಸ್ ಗೆ ಲಸಿಕೆ ನೀಡಬೇಕು. ನೀಡ್ದೆ ಹೋದ್ರೆ ಕೇಂದ್ರಕ್ಕೆ ಲೆಕ್ಕ ಕೊಡ್ಬೇಕು. ಹೀಗಾಗಿ ಬಿಬಿಎಂಪಿ ಮತ್ತು ಸರ್ಕಾರ ಕೊರೊನಾ ಟೈಮ್‌ನಲ್ಲಿ ಕೆಲಸ ಮಾಡಿದ ಫ್ರೆಂಟ್ ಲೈನ್ ವಾರಿಯಗಳಾದ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ.

ಇಲ್ಲಿವರೆಗೂ ಕೇವಲ 20 ಸಾವಿರ ವ್ಯಾಕ್ಸಿನ್‌ಗಳು ಮಾತ್ರ ಬಳಕೆ ಆಗಿವೆ. ಸರ್ಕಾರಿಂದ ಒಂದು ಲಕ್ಷಕ್ಕೂ ಅಧಿಕ ವ್ಯಾಕ್ಸಿನ್ ಬಾಟೆಲ್‌ಗಳು ಬಿಬಿಎಂಪಿ ಕೈ ಸೇರಿವೆ. ಆದ್ರೆ ನಾಲ್ಕು ದಿನದಲ್ಲಿ ಕೇವಲ 20 ಸಾವಿರ ವ್ಯಾಕ್ಸಿನ್ ಬಳಕೆ ಆಗಿದೆ. ಮುಂದಿನ ಒಂದು ವಾರದೊಳಗೆ 60 ಸಾವಿರ ವ್ಯಾಕ್ಸಿನ್ ಖಾಲಿಯಾಗೋದು ಅನುಮಾನವಾಗಿದೆ. ಹೀಗಾಗಿ ಹೆಲ್ತ್ ವಾರಿಯರ್ಸ್‌ಗೆ ಎರಡನೇ ಅವಕಾಶ ನೀಡಿದ್ದು ಈಗಲೂ ಲಸಿಕೆ ಪಡೆಯಲು ಬಾರದೆ ಹೋದ್ರೆ ಬಂದ ಲಸಿಕೆಗಳನ್ನ ಫ್ರೆಂಟ್ ಲೈನ್ ವಾರಿಯರ್ಸ್ ಗೆ ಕೊಟ್ಟು, ಟಾರ್ಗೆಟ್ ರೀಚ್ ಆಗುವ ಯೋಚನೆ ನಡೆದಿದೆ. ಇನ್ನು ಹೆಲ್ತ್ ವಾರಿಯರ್ಸ್ ತಮಗೆ ನೀಡಿರುವ ಸಮಯದಲ್ಲಿ ಬಾರದೆ, ನಂತರ ಬಂದ್ರೆ, ನೋ ಸ್ಟಾಕ್ ಬೋರ್ಡ್ ಹಾಕಲು ಪ್ಲ್ಯಾನ್ ಸಿದ್ಧವಾಗ್ತಿದೆ.

ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು