ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?

ಜೂನ್ ತಿಂಗಳು ಆರಂಭವಾಗಿ 19 ದಿನ ಕಳೆದರೂ ಗಡಿನಾಡು ಬೆಳಗಾವಿಗೆ ಮುಂಗಾರಿನ ಸುಳಿವೇ ಇಲ್ಲ. ಮಳೆ ಬರಲಿ ಎಂದು ಜನ ಕತ್ತೆ ಮದುವೆ ಹಾಗೂ ದೇವರಿಗೆ ಹರಿಕೆಗಳನ್ನು ತೀರಿಸಿದರೂ ವರುಣರಾಯ ಧರಗೆ ಇಳಿದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯ ಏಳಕ್ಕೆ ಏಳೂ ನದಿಗಳು ಬತ್ತುತ್ತಿದ್ದು, ಬರಗಾಲದ ಕರಿ ಛಾಯೆ ಭೀತಿ ಎದುರಾಗಿದೆ.

ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?
ಬರಿದಾದ ಕೃಷ್ಣಾ ನದಿ
Follow us
|

Updated on: Jun 19, 2023 | 10:22 AM

ಬೆಳಗಾವಿ: ಜೂನ್ ತಿಂಗಳು ಆರಂಭವಾಗಿ 19 ದಿನ ಕಳೆದರೂ ಗಡಿನಾಡು ಬೆಳಗಾವಿಗೆ (Belagavi) ಮುಂಗಾರಿನ (Mansoon) ಸುಳಿವೇ ಇಲ್ಲ. ಮಳೆ ಬರಲಿ ಎಂದು ಜನ ಕತ್ತೆ ಮದುವೆ ಹಾಗೂ ದೇವರಿಗೆ ಹರಿಕೆಗಳನ್ನು ತೀರಿಸಿದರೂ ವರುಣರಾಯ ಧರಗೆ ಇಳಿದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯ ಏಳಕ್ಕೆ ಏಳೂ ನದಿಗಳು ಬತ್ತುತ್ತಿದ್ದು, ಬರಗಾಲದ ಕರಿ ಛಾಯೆ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ (Krishna), ಮಲಪ್ರಭಾ (Malaprabha), ಘಟಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಒಡಲು ಖಾಲಿಯಾಗುತ್ತಿದ್ದು, ಅನ್ನದಾತರು ಕಂಗೆಟ್ಟಿದ್ದಾರೆ. ಇದೀಗ ಕೃಷಿಕರು ಟ್ಯಾಂಕರ್ ಮೂಲಕ ಭತ್ತದ ಗದ್ದೆಗಳಿಗೆ ನೀರುಣಿಸುತ್ತಿದ್ದಾರೆ.

ಬೆಳಗಾವಿ ನಗರಕ್ಕೆ ನೀರು ಪೂರೈಸುತ್ತಿದ್ದ ರಕ್ಕಸಕೊಪ್ಪ, ಹಿಡಕಲ್ ಜಲಾಶಯದಲ್ಲೂ ನೀರಿನ ಮಟ್ಟ ಗಣನೀಯ ಇಳಿಕೆಯಾಗಿದ್ದು, ಹತ್ತು ದಿನಗಳಿಗೊಮ್ಮೆ ಬೆಳಗಾವಿ ನಗರ ಪ್ರದೇಶದಲ್ಲಿ ನೀರು ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಬೇಕಂದರೇ ಅಲ್ಲಿಯ ಕೋಯ್ನಾ ಡ್ಯಾಂ ಸಹ ಖಾಲಿಯಾಗಿದೆ.

ರಕ್ಕಸಕೊಪ್ಪ ಜಲಾಶಯದಲ್ಲಿ ಕೇವಲ 16 ಅಡಿ ಆಳದಷ್ಟು ನೀರು ಬಾಕಿ ಇದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದು ಬೆಳಗಾವಿ ನಗರದ ಕೆಲವು ಶಾಲಾ-ಕಾಲೇಜುಗಳ ಮೇಲೆಯೂ ಪರಿಣಾಮ ಬೀರಿದ್ದು, ಮಕ್ಕಳಿಗೆ ನೀರು ಕೊಡಲು ಆಗದೇ ಗಂಭೀರ ಸ್ಥಿತಿಗೆ ತಲುಪುತ್ತಿವೆ. ನೀರಿನ ಅಭಾವದಿಂದ ಶಾಲೆಗಳಿಗೆ ರಜೆ ನೀಡಲು ಆಡಳಿತ ಮಂಡಳಿಗಳು ನಿರ್ಧರಿಸಿವೆ.

ಇದನ್ನೂ ಓದಿ: Phone In Program: ಬೆಳಗಾವಿಯಲ್ಲಿ 13ನೇ ಫೋನ್ ಇನ್ ಕಾರ್ಯಕ್ರಮ, ಒಂದು ಕರೆ ಮೂಲಕ ಸಮಸ್ಯೆ ಪರಿಹಾರ

ಬೆಳಗಾವಿ ಕ್ಯಾಂಪ್ ಪ್ರದೇಶದ ಸೆಂಟ್ ಫಾಲ್ ಶಾಲೆ ಆಡಳಿತ ಮಂಡಳಿ ಆನ್ ಲೈನ್ ತರಗತಿ ನಡೆಸಲ ನಿರ್ಧರಿಸಿದ್ದು, ಪೋಷಕರಿಗೆ ಮೆಸೆಜ್ ಹಾಕಿದೆ. ಆದರೆ ಪೋಷಕರೇ ಎರಡು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಅವಳಿನಗರಕ್ಕೂ ತಟ್ಟಲಿದೆ ನೀರಿನ ಹಾಹಾಕಾರ

ಇನ್ನು ಬೆಳಗಾವಿ ಜಿಲ್ಲೆಯ ಮಲಪ್ರಭಾ, ಘಟಪ್ರಭಾ ಜಲಾಶಯದಿಂದ ಅವಳಿ ನಗರ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಕೆಯಾಗುತ್ತದೆ. ಇದೀಗ ಜೀವಜಲಗಳು ಬತ್ತುತ್ತಿದ್ದು, ಕೇಲವೆ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

51 ಟಿಎಂಟಿಸಿ ಸಾಮರ್ಥ್ಯವಿರುವ ಘಟಪ್ರಭಾ ಜಲಾಶಯದಲ್ಲಿ ಕೇವಲ 4.150 ಟಿಎಂಸಿ ನೀರು ಇದ್ದು, ಬಳಸಲು 2.130 ಟಿಎಂಸಿ ನೀರು ಮಾತ್ರ ಯೋಗ್ಯವಾಗಿದೆ. ಮಲಪ್ರಭಾ ಜಲಾಶಯ 37.731 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಸದ್ಯ 7.326 ಟಿಎಂಸಿ ನೀರು ಇದ್ದು, ಬಳಸಲು 3.941 ಟಿಎಂಸಿ ನೀರು ಮಾತ್ರ ಯೋಗ್ಯವಾಗಿ ಉಳಿದಿದೆ.

ಜೂನ್ 15ರವರೆಗೆ ಕಾದು‌ ನೋಡಿ, ಮಳೆ ಬಾರದಿದ್ದರೇ ಮೋಡ ಬಿತ್ತನೆ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇತ್ತೀಚೆಗೆ ಬೆಳಗಾವಿ ಭೇಟಿ ವೇಳೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ