ಸರ್ಕಾರ ಬದಲಾಗಿದೆ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಪುಣ್ಯ ಸ್ಮರಣೆಗೆ ಜೈಲು ಅಧಿಕಾರಿಗಳ ನಿರಾಕರಣೆ

ಇಂದು ವೀರ ಸಾವರ್ಕರ್ ಅವರ ಪುಣ್ಯಸ್ಮರಣೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಸಾವರ್ಕರ್ ಪೋಟೋಗೆ ಪೂಜೆ ಮಾಡಲು ಶ್ರೀರಾಮಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಜೈಲಿಗೆ ಹೋದಾಗ ಸಾವರ್ಕರ್ ಪುಣ್ಯಸ್ಮರಣೆಗೆ ನಿರಾಕರಿಸಲಾಗಿದೆ. ಸರ್ಕಾರ ಬದಲಾಗಿದೆ, ನಡಿರಿ ಇಲ್ಲಿಂದ ಎಂದು ಜೈಲು ಅಧಿಕಾರಿಗಳು ಹೇಳಿದ್ದು, ಇದನ್ನು ಖಂಡಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರ ಬದಲಾಗಿದೆ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಪುಣ್ಯ ಸ್ಮರಣೆಗೆ ಜೈಲು ಅಧಿಕಾರಿಗಳ ನಿರಾಕರಣೆ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಪುಣ್ಯ ಸ್ಮರಣೆಗೆ ಜೈಲು ಅಧಿಕಾರಿಗಳ ನಿರಾಕರಣೆ; ಬಿಜೆಪಿ, ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
Follow us
| Updated By: Rakesh Nayak Manchi

Updated on: Feb 26, 2024 | 5:51 PM

ಬೆಳಗಾವಿ, ಫೆ.26: ಇಂದು ವೀರ ಸಾವರ್ಕರ್ (Veer Savarkar) ಅವರ ಪುಣ್ಯಸ್ಮರಣೆ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪೂಜೆ ಮಾಡಲು ಶ್ರೀರಾಮಸೇನೆ ಮತ್ತು ಬಿಜೆಪಿ (BJP) ಕಾರ್ಯಕರ್ತರು ಬೆಳಗಾವಿ ಹಿಂಡಲಗಾ ಜೈಲಿಗೆ ಹೋದಾಗ ಜೈಲು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ, ಸರ್ಕಾರ ಬದಲಾಗಿದೆ, ನೀವು ಇಲ್ಲಿಂದ ನಡಿರೀ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಹಿಂಡಲಗಾ ಜೈಲಿನ ಬಳಿಯ ರಸ್ತೆ ಬದಿಯಲ್ಲಿ ಸಾವರ್ಕರ್ ಪೋಟೋ ಇಟ್ಟು ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಬಿಜೆಪಿ ಮುಖಂಡ ಧನಂಜಯ ಜಾಧವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಾವರ್ಕರ್ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ಸೆರೆವಾಸವಿದ್ದರು. ಇದೇ ಕಾರಣಕ್ಕೆ ಸಾವರ್ಕರ್ ಪೋಟೋ ಸಹ ಹಾಕಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೈಲಿನಲ್ಲಿ ಸಾವರ್ಕರ್ ಫೋಟೋಗೆ ಪೂಜೆ ಸಲ್ಲಿಸಲಾಗಿತ್ತು. ಆದರೆ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಹಿಂಡಲಗಾ ಜೈಲಿನಲ್ಲಿರುವ ಸಾವರ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಇದನ್ನೂ ಓದಿ: ‘ಸಾವರ್ಕರ್’ ಸಿನಿಮಾ ಪ್ರೋಮೋ ಬಿಡುಗಡೆ, ನಾಯಕಿ ಬಿಗ್​ಬಾಸ್ ಚೆಲುವೆ

ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಬರಹಗಾರ, ನಾಟಕಕಾರ, ಕವಿ, ಇತಿಹಾಸಕಾರ, ರಾಜಕೀಯ ನಾಯಕ ಮತ್ತು ತತ್ವಜ್ಞಾನಿಯಾಗಿರುವ ವೀರ ಸಾವರ್ಕರ್ ಎಂದೇ ಖ್ಯಾತರಾಗಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು 1950 ರ ಏಪ್ರಿಲ್ 4 ರಂದು ಬಂಧಿಸಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು. ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ದೆಹಲಿಗೆ ಆಗಮಿಸುವ ಮುನ್ನಾದಿನದಂದು ಬಂಧಿಸಲಾಗಿತ್ತು. ಅದೇ ವರ್ಷ ಜುಲೈ 13 ರಂದು ಬಿಡುಗಡೆ ಮಾಡಲಾಗಿತ್ತು.

ಸಾವರ್ಕರ್ ಅವರ ಪುತ್ರ ಬಾಂಬೆ ಹೈಕೋರ್ಟ್​ಗೆ ಜುಲೈ 12 ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಕೋರ್ಟ್, ಒಂದು ವರ್ಷ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆಸಿ ಜೈಲಿನಿಂದ ಬಿಡುಗಡೆಗೊಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಆಯಸ್ಸು ಜಾಸ್ತಿ ಆದಷ್ಟು ಹೆಚ್ಚು ಸಾವುಗಳನ್ನು ನೋಡಬೇಕು’; ಶ್ರೀನಾಥ್ ಬೇಸರ
‘ಆಯಸ್ಸು ಜಾಸ್ತಿ ಆದಷ್ಟು ಹೆಚ್ಚು ಸಾವುಗಳನ್ನು ನೋಡಬೇಕು’; ಶ್ರೀನಾಥ್ ಬೇಸರ
ಅಪರ್ಣಾ ಪಾರ್ಥಿವ ಶರೀರದ ಮುಂದೆ ಮಜಾ ತಂಡ ಕಣ್ಣೀರು
ಅಪರ್ಣಾ ಪಾರ್ಥಿವ ಶರೀರದ ಮುಂದೆ ಮಜಾ ತಂಡ ಕಣ್ಣೀರು
ಅಂಬಾನಿ ಕುಟುಂಬದಲ್ಲಿ ಮದುವೆ ಮುನ್ನ ಸಂಪನ್ನಗೊಂಡ ಶಿವ ಶಕ್ತಿ ಪೂಜೆ
ಅಂಬಾನಿ ಕುಟುಂಬದಲ್ಲಿ ಮದುವೆ ಮುನ್ನ ಸಂಪನ್ನಗೊಂಡ ಶಿವ ಶಕ್ತಿ ಪೂಜೆ
ಅಪರ್ಣಾ ಸರಳ ಜೀವಿ, ವೃತ್ತಿಪರ ಅಸೂಯೆ ಅವರಲ್ಲಿರಲಿಲ್ಲ: ಅರ್ಚನಾ ಉಡುಪ
ಅಪರ್ಣಾ ಸರಳ ಜೀವಿ, ವೃತ್ತಿಪರ ಅಸೂಯೆ ಅವರಲ್ಲಿರಲಿಲ್ಲ: ಅರ್ಚನಾ ಉಡುಪ
ಅಪರ್ಣಾ ಪಾರ್ಥಿವ ಶರೀರದ ಮುಂದೆನಿಂತು ಭಾವುಕರಾದ ಪತಿ; ಅಂತಿಮ ಸಂಸ್ಕಾರ ಎಲ್ಲಿ
ಅಪರ್ಣಾ ಪಾರ್ಥಿವ ಶರೀರದ ಮುಂದೆನಿಂತು ಭಾವುಕರಾದ ಪತಿ; ಅಂತಿಮ ಸಂಸ್ಕಾರ ಎಲ್ಲಿ
ಹೇಗಿತ್ತು ನೋಡಿ ಅಪರ್ಣಾ ಕೊನೆ ದಿನ; ಕ್ಯಾನ್ಸರ್​ನಲ್ಲೂ ನಗು ನಗುತ್ತಲೇ ಇದ್ರು
ಹೇಗಿತ್ತು ನೋಡಿ ಅಪರ್ಣಾ ಕೊನೆ ದಿನ; ಕ್ಯಾನ್ಸರ್​ನಲ್ಲೂ ನಗು ನಗುತ್ತಲೇ ಇದ್ರು
Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು
Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು
ಲಕ್ಷ್ಮೀ ದೇವಿ ಆರಾಧನೆಗೆ ಸೂಕ್ತವಾದ ದಿನ ಶುಕ್ರವಾರದ ದಿನ ಭವಿಷ್ಯ ತಿಳಿದುಕೊಳ
ಲಕ್ಷ್ಮೀ ದೇವಿ ಆರಾಧನೆಗೆ ಸೂಕ್ತವಾದ ದಿನ ಶುಕ್ರವಾರದ ದಿನ ಭವಿಷ್ಯ ತಿಳಿದುಕೊಳ
‘ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್ ಕೇಸ್ ಬಗ್ಗೆ ವಿಜಯ್ ರಾಘವೇಂದ್ರ ಮಾತು
‘ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್ ಕೇಸ್ ಬಗ್ಗೆ ವಿಜಯ್ ರಾಘವೇಂದ್ರ ಮಾತು
10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಕಾಲ್ತುಳಿತದ ವಿಡಿಯೋ ವೈರಲ್
10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಕಾಲ್ತುಳಿತದ ವಿಡಿಯೋ ವೈರಲ್