ವಿಜೃಂಭಣೆಯಿಂದ ನಡೆದ ಆನೇಕಲ್ ಕರಗ ಮಹೋತ್ಸವ; ನಾದಸ್ವರದ ವಾದ್ಯಕ್ಕೆ ತಕ್ಕ ಹೆಜ್ಜೆ ಹಾಕಿದ ಕರಗ ಹೊತ್ತ ಪೂಜಾರಿ

ಅದು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ದೇವಾಲಯ. ಇಲ್ಲಿ ನಡೆದ ಕರಗ ಮಹತ್ಸೋವವನ್ನ ಸಹಸ್ರಾರು ಭಕ್ತರು ಕಣ್ತುಂಬಿಕೊಂಡು ವೈಭವದ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು. ನಾದಸ್ವರ ವಾದ್ಯದ ತಾಳಕ್ಕೆ ತಕ್ಕಂತೆ ಕರಗ ಹೊತ್ತ ಪೂಜಾರಿ ಹೆಜ್ಜೆ ಹಾಕಿದ್ದು, ನೆರೆದಿದ್ದ ಸಹಸ್ರಾರು ಭಕ್ತರನ್ನ ಮಂತ್ರ ಮುಗ್ಧರನ್ನಾಗಿಸಿತ್ತು‌‌.

ವಿಜೃಂಭಣೆಯಿಂದ ನಡೆದ ಆನೇಕಲ್ ಕರಗ ಮಹೋತ್ಸವ; ನಾದಸ್ವರದ ವಾದ್ಯಕ್ಕೆ ತಕ್ಕ ಹೆಜ್ಜೆ ಹಾಕಿದ ಕರಗ ಹೊತ್ತ ಪೂಜಾರಿ
ಆನೇಕಲ್​ ಕರಗ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 24, 2024 | 9:08 PM

ಬೆಂಗಳೂರು ಗ್ರಾಮಾಂತರ, ಮೇ.22: ಆನೇಕಲ್(Anekal)  ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ ಕರಗ(Karaga) ಮಹೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದೆ ಭಕ್ತಿಯಿಂದ ನೆರವೇರಿತು. ಕಳೆದ ನಾಲ್ಕೈದು ಬಾರಿಯಿಂದ ಕರಗ ಹೊತ್ತಿದ್ದ ಚಂದ್ರಪ್ಪ ಅವರು ಈ ಬಾರಿಯೂ ಕರಗವನ್ನ ಹೊತ್ತರು. ವೀರಕುಮಾರರು ಢಿಕ್‌ ಡೀ ಗೋವಿಂದ..ಗೋವಿಂದ.. ಎಂದು ಜಯಘೋಷ ಕೂಗುತ್ತಾ ಬೆಳಿಗ್ಗೆ 3.30 ರ ಸುಮಾರಿಗೆ ಕರಗವನ್ನ ಬರಮಾಡಿಕೊಂಡರು.

ಮೊಣಕಾಲಿನಲ್ಲಿ ದೇವಾಲಯದಿಂದ ಕರಗ ಹೊರ ಬರುತ್ತಿದ್ದಂತೆ ವಹ್ನಿಕುಲದ ಕುಲಸ್ಥರು ಡಮರುಗದ ನಾದ ಹಾಗೂ ಗೆಜ್ಜೆ ಸಪ್ಪಳದ ಜೊತೆಗೆ ಭಕ್ತರು ಜಯಘೋಷ ಮೂಲಕ ಕರಗವನ್ನು ಸ್ವಾಗತಿಸಿದರು. ಕರಗ ಹೊರಬರುತ್ತಿದ್ದಂತೆ ಅಲ್ಲಿದ್ದ ನೂರಾರು ಮಂದಿ ವೀರಕುಮಾರರು ಗೋವಿಂದ ಎನ್ನುತ್ತಾ ಕತ್ತಿಯಲ್ಲಿ ಎದೆಗೆ ಬಡಿದುಕೊಂಡು ಹಲಗು ಸೇವೆಯನ್ನ ಸಲ್ಲಿಸಿದರು. ದೇವಾಲಯದ ಪ್ರಾಂಗಣವನ್ನು ಪ್ರದಕ್ಷಿಣೆ ಮಾಡಿ ಕರಗವು ಹೊರ ಬರುತ್ತಿದ್ದಂತೆ ಶಂಕರಮಠದಲ್ಲಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ:ಗತವೈಭವ ಮರುಕಳಿಸುವ ಆನೇಕಲ್ ಕರಗಕ್ಕೆ ಆದ್ದೂರಿ ಸಿದ್ದತೆ; 9 ದಿನಗಳ ಕಾಲ ಶಾಸ್ತೋಕ್ತವಾಗಿ ನಡೆಯಲಿದೆ ಕರಗ ಉತ್ಸವ

ನಂತರ ವೀರವಸಂತರಾಯನ (ಬಲರಾಮನ) ಮೂರ್ತಿಯ ಬಳಿಗೆ ಬಂದು ಪಟ್ಟಣದ ತಿಲಕ್ ವೃತ್ತ, ಚರ್ಚ್ ರೋಡ್, ದೇವರಕೊಂಡಪ್ಪ ವೃತ್ತ, ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಬೀದಿಗಳಲ್ಲಿ ಸಾಗಿ ಬಂದ ಕರಗ ಉತ್ಸವವನ್ನ ಭಕ್ತರು ಕಣ್ತುಂಬಿಕೊಂಡರು. ಇನ್ನು ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಉತ್ಸವದ ಹಿನ್ನೆಲೆಯಲ್ಲಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಲಂಕಾರ ಮಾಡಲಾಗಿತ್ತು. ಕರಗೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಕರಗವು ಪಟ್ಟಣದ ವಿವಿಧ ದೇವಾಲಯಗಳ ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗುವಾಗ ಜನರು ಆರತಿ ಬೆಳಗಿ ಕರಗದ ಮೇಲೆ ಮಲ್ಲಿಗೆ ಹೂವು ಎರಚಿ ಜನರು ಭಕ್ತಿ ಸಮರ್ಪಿಸಿದರು.

ಕರಗ ಹೋದ ಕಡೆಯಲ್ಲೆಲ್ಲ ನಾದಸ್ವರ ವಾದ್ಯ ತಂಡಗಳನ್ನ ನಿಯೋಜನೆ ಮಾಡಲಾಗಿತ್ತು. ನಾದಸ್ವರ, ಡೋಲು, ತಮಟೆಯ ವಾದನಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿ ಮುಂದೆ ಸಾಗುವಾಗ ಮಲ್ಲಿಗೆ ಹೂವುಗಳನ್ನು ಕರಗಕ್ಕೆ ಅರ್ಪಿಸುವ ಮೂಲಕ ಜನರು ಭಕ್ತಿ,ಭಾವ ಮೆರೆದರು. ಸಹಸ್ರಾರು ಮಂದಿ ಭಕ್ತರು ವೈಭವದ ಕರಗ ಉತ್ಸವವನ್ನು ಕಣ್ತುಂಬಿಕೊಂಡಿದ್ದು, ಗ್ರಾಮ ದೇವತೆಗಳ 25ಕ್ಕೂ ಹೆಚ್ಚು ಪಲ್ಲಕ್ಕಿಗಳ ಉತ್ಸವ ಆಯೋಜಿಸಲಾಗಿತ್ತು.

ಇನ್ನು ಕರಗ ಮಹೋತ್ಸವದ ಅಂಗವಾಗಿ ವೀರ ವಸಂತರಾಯ(ಬಲಿರಾಮ) ಪ್ರತಿಷ್ಠಾಪನೆಯಾಗಿದ್ದು, ನಾಳೆ(ಮೇ.25) ಸಂಜೆ ಕೋಟೆ ಜಗಳ ನಡೆಯಲಿದೆ. 26 ನೇ ತಾರೀಖಿನಂದು ವಿಜೃಂಭನೆಯ ಒಣಕರಗ ಮಹೋತ್ಸವ ನಡೆಯಲಿದ್ದು, ಆನೇಕಲ್​ನಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್