AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ರಿಮೆಂಟ್​ ಆಗಿದ್ದ ಜಮೀನಿನಲ್ಲಿ ಬೋರ್​ವೆಲ್​ ಕೊರೆಸಿದಕ್ಕೆ ಹಲ್ಲೆ; 9 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಶ್ರೀನಿವಾಸ್ ಎಂಬಾತ ನಾರಾಯಣಸ್ವಾಮಿ ಬಳಿ ಜಮೀನು ಅಗ್ರಿಮೆಂಟ್​ ಹಾಕಿಸಿಕೊಂಡಿದ್ದ.​ ಅಗ್ರಿಮೆಂಟ್ ಹಾಕಿಕೊಂಡ ಮೇಲೆ ಜಮೀನಿನಲ್ಲಿ ಬೋರ್​ವೆಲ್​ ಹಾಕ್ತಿದ್ದೀರಾ ಅಂತ ಕಿರಿಕ್ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಗಲಾಟೆಯಲ್ಲಿ 9 ಜನರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾ.ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ‌ ಬಳಿ ನಡೆದಿದೆ.

ಅಗ್ರಿಮೆಂಟ್​ ಆಗಿದ್ದ ಜಮೀನಿನಲ್ಲಿ ಬೋರ್​ವೆಲ್​ ಕೊರೆಸಿದಕ್ಕೆ ಹಲ್ಲೆ; 9 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ
ದೊಣ್ಣೆ, ಮಚ್ಚುಗಳಿಂದ ಹಲ್ಲೆ
ನವೀನ್ ಕುಮಾರ್ ಟಿ
| Edited By: |

Updated on: Feb 01, 2024 | 7:55 AM

Share

ದೇವನಹಳ್ಳಿ, ಫೆ.01: ಜಮೀನು ಮಾರಾಟದ ಅಗ್ರಿಮೆಂಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ. ಜಮೀನಿನಲ್ಲಿ ಬೋರ್​ವೆಲ್​ ಕೊರೆಸುವಾಗ ಒಂದು ಗುಂಪು ದೊಣ್ಣೆ, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು 9 ಜನರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾ.ಜಿಲ್ಲೆ ದೇವನಹಳ್ಳಿ (Devanahalli) ತಾಲೂಕಿನ ಚನ್ನಹಳ್ಳಿ‌ ಬಳಿ ನಡೆದಿದೆ. ಘಟನೆ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ (Channarayapatna Police Station) ಪ್ರಕರಣ ದಾಖಲಾಗಿದೆ.

ವೆಂಕಟೇಶಪ್ಪ ಮತ್ತು ನಾರಾಯಸ್ವಾಮಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದ್ದು ಶ್ರೀನಿವಾಸ್ ಮತ್ತು ಆತನ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ 9 ಜನರಿಗೆ ಗಾಯಗಳಾಗಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಶ್ರೀನಿವಾಸ್ ಎಂಬಾತ ನಾರಾಯಣಸ್ವಾಮಿ ಬಳಿ ಜಮೀನು ಅಗ್ರಿಮೆಂಟ್​ ಹಾಕಿಸಿಕೊಂಡಿದ್ದ.​ ಅಗ್ರಿಮೆಂಟ್ ಹಾಕಿಕೊಂಡ ಮೇಲೆ ಜಮೀನಿನಲ್ಲಿ ಬೋರ್​ವೆಲ್​ ಹಾಕ್ತಿದ್ದೀರಾ ಅಂತ ಕಿರಿಕ್ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಗ್ರಿಮೆಂಟ್ ಬಳಿಕ ಹರಳೂರು ಗೇಟ್ ಸರ್ವೆ ನಂಬರ್ 77/1ರ 2 ಎಕರೆ ಜಮೀನಿನಲ್ಲಿ ಬೋರ್​​ವೆಲ್ ಹಾಕುವ ವಿಚಾರಕ್ಕೆ ಗಲಾಟೆಯಾಗಿದೆ. ದೊಣ್ಣೆ, ಮಚ್ಚುಗಳಿಂದ ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್​​​​ನಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಪಿಇಎಸ್ ಕಾಲೇಜ್​ ಕಟ್ಟಡದಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ

ಹೊತ್ತಿ ಉರಿದ ಕಾರು, ದಂಪತಿ ಪಾರು

ಚಲಿಸುತ್ತಿದ್ದ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲೇ ಹೊತ್ತಿ ಉರಿದಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಘಟನೆ ನಡೆದಿದ್ದು, ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೊರಟಿದ್ದ ದೆಹಲಿ ಮೂಲದ ಫೋರ್ಡ್ ಕಂಪನಿಯ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಕಾರಿನಲ್ಲಿದ್ದ ದಂಪತಿ ಪಾರಾಗಿದ್ದಾರೆ. ಸದ್ಯ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟವಾಡ್ತಿದ್ದ ಮಗು ಬಲಿ ಪಡೆದ ಶಾಲಾ ವಾಹನ

ಶಾಲಾ ವಾಹನ ಹರಿದು ಮನೆ ಮುಂದೆ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದೆ. ಕಲಬುರಗಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿಸಿದ ವಾಹನ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ತೆರಳುವಾಗ ದುರ್ಘಟನೆ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ 2 ವರ್ಷದ ಮನೋಜ್ ಬಲಿಯಾಗಿದ್ದಾನೆ. ಘಟನೆ ನಂತರ ಸ್ಥಳದಲ್ಲೇ ಶಾಲಾ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ರೊಚ್ಚಿಗೆದ್ದ ಸ್ಥಳೀಯರು ವಾಹನದ ಗಾಜು ಪುಡಿ ಪುಡಿ ಮಾಡಿದ್ರು. ಸದ್ಯ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ