ವರದಕ್ಷಿಣೆ ಕಾಟ; ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪತಿ ಪಟ್ಟು

SSLC ಓದಿ, MBA ಓದಿದ್ದೇನೆ, ನನಗೆ MG ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸವಿದೆ ಎಂದು ನಂಬಿಸಿ ನೆಲಮಂಗಲದ ಯುವತಿಯನ್ನು ಕಳೆದ 2023 ಡಿಸೆಂಬರ್​ 14 ರಂದು ವರ್ತೂರಿನ ಕಿರಣ್ ಎಂಬಾತ ವಿವಾಹವಾಗಿದ್ದನು. ಆದರೆ, ಮದುವೆಯಾಗಿ ಒಂದು ವರ್ಷದೊಳಗೆ ಈ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತಿರಾಯ ವರದಕ್ಷಿಣೆ ಕಿರುಕುಳ ಕೊಡಲು ಶುರುಮಾಡಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ವರದಕ್ಷಿಣೆ ಕಾಟ; ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪತಿ ಪಟ್ಟು
ವರದಕ್ಷಿಣೆ ಕಿರುಕುಳ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 04, 2024 | 9:06 PM

ಬೆಂಗಳೂರು, ಆ.04: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಚಿನ್ನಾಭರಣ, ನಗದು ಕೊಟ್ಟು ಅದ್ದೂರಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇದೀಗ ಮದುವೆಯಾದ ಕೇವಲ ಒಂದು ವರ್ಷದೊಳಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮತ್ತೆ ಪತಿರಾಯ ವರದಕ್ಷಿಣೆ ಕಾಟ ಕೊಡಲು ಶುರುಮಾಡಿದ್ದಾನೆ. ಈ ಹಿನ್ನಲೆ ನೊಂದ ನೆಲಮಂಗಲದ 24 ವರ್ಷದ ವಧು ಬೆಂಗಳೂರಿನ ವರ್ತೂರಿನ ಪತಿ ಕಿರಣ್ ಸೇರಿದಂತೆ ಮನೆಯವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ.

ಕಾರು, ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು

ಕಳೆದ 2023 ಡಿಸೆಂಬರ್​ 14 ರಂದು ವರ್ತೂರಿನ ಕಿರಣ್ ಜೊತೆ ಹಸೆಮಣೆ ಏರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ವರದಕ್ಷಿಣೆ ಆಸೆ ಅತಿಯಾಗಿದೆ. ಈ ಹಿನ್ನಲೆ ಕೈ ಹಿಡಿದ ಪತ್ನಿಗೆ ಕಾರು, ಮತ್ತಷ್ಟು ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು ರೂಂನಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ.

ಇದನ್ನೂ ಓದಿ:19ನೇ ವಯಸ್ಸಿಗೆ ಮದುವೆ 23ಕ್ಕೆ ಗರ್ಭಿಣಿ; ವರದಕ್ಷಿಣೆಗಾಗಿ ಕೈ ಕಾಲು ಕತ್ತರಿಸಿ ಗರ್ಭಿಣಿಯ ಬರ್ಬರ ಹತ್ಯೆ

MBA ಓದಿ, MG ರೋಡ್​ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಎಂದು ನಂಬಿಸಿದ್ದ ಆಸಾಮಿ

ವರದಕ್ಷಿಣೆ ತಂದುಕೊಟ್ಟರೆ ನಾನು ಪ್ರಸ್ಥ ಕಾರ್ಯವನ್ನು ಮಾಡಿಕೊಳ್ಳುತ್ತೇನೆ, ಇಲ್ಲವಾದಲ್ಲಿ ನಾನು ಮತ್ತೊಂದು ಮದುವೆಯನ್ನು ಮಾಡಿಕೊಳ್ಳುತ್ತೆನೆ ಎಂದು ಪತಿ ಕಿರಣ್ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ತವರು ಮನೆಗೆ ಹೊರಟು ಹೋಗುವಂತೆ ಬೈದು ದೈಹಿಕವಾಗಿ ಹಿಂಸೆ ನೀಡಿದ್ದ. ಇನ್ನು ಇತ SSLC ಓದಿ, MBA ಓದಿದ್ದೇನೆ, ನನಗೆ MG ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸವಿದೆ ಎಂದು ನಂಬಿಸಿದ್ದರಂತೆ.

ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ದಾಖಲು

ಇನ್ನು ನನಗೆ ಆಗಿರುವ ಅನ್ಯಾಯಕ್ಕೆ ಮಹಿಳಾ ಆಯೋಗದಲ್ಲಿ ದೂರು ಕೊಟ್ಟರೂ ಕೌನ್ಸಿಲ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಪತಿ ಕಿರಣ್, ಮಾವ ಸೀನಾಪ್ಪ, ಅತ್ತೆ ಶಶಿಕಲಾ, ಸಂಬಂಧಿ ಮನೋಜೆ ವಿರುದ್ಧ ನವ ವಿವಾಹಿತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೆಲಮಂಗಲ ಟೌನ್ ಠಾಣೆಯಲ್ಲಿ ಕಲಂ 342.498(ಎ),506 ಐಪಿಸಿ,ಜೊತೆಗೆ 3 ಮತ್ತು 4 ಡಿಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sun, 4 August 24

ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ