AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಮೀಜಿ ಮಾತು ನಂಬಿ ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ಕಾಣಿಕೆ! ಅಮಂಗಲ ಮಾಡಲು ಬಂದ ಯುವಕ ಅಂದರ್

ಸ್ವಾಮೀಜಿಯ ಮಾತು ನಂಬಿ ನಾನು ಈ ಕೃತ್ಯ ನಡೆಸಿರೋದಾಗಿ ಪೊಲೀಸ ಬಳಿ ಯುವಕ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಜತೆಗೆ ಕೆಲ ಕಿಡಿಗೇಡಿಗಳು ದೇವಾಲಯದ ಪಾವಿತ್ರ್ಯತೆ ಹಾಳು ಮಾಡಲು ಹಣ ಕೊಟ್ಟು ಕಳಿಸಿದ್ರು ಅಂತಲು ಎರಡೆರಡು ಹೇಳಿಕೆ ನೀಡಿದ್ದು ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಸ್ವಾಮೀಜಿ ಮಾತು ನಂಬಿ ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ಕಾಣಿಕೆ! ಅಮಂಗಲ ಮಾಡಲು ಬಂದ ಯುವಕ ಅಂದರ್
ಅಮಂಗಲ ಮಾಡಲು ಬಂದ ಯುವಕ ಅಂದರ್
TV9 Web
| Updated By: ಸಾಧು ಶ್ರೀನಾಥ್​|

Updated on: Mar 13, 2023 | 6:20 AM

Share

ಅದು ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯ. ಶನಿಮಹಾತ್ಮಸ್ವಾಮಿ (Shani, Shani Dev) ಹೆಗಲೇರಿದ್ರೇ ಅಷ್ಟಕಷ್ಟಗಳು ಉಂಟಾಗುತ್ತವೆ. ಶನಿ ವಕ್ಕರಿಸಿದ್ರೇ ದಿನನಿತ್ಯ ಏನೋ ಒಂದು ಸಮಸ್ಯೆ, ಹೀಗಾಗಿ ಶನಿಮಹಾತ್ಮಸ್ವಾಮಿ ನಿನಗೆ ಹೆಗಲೇರಿದ್ದಾನೆ. ನೀನು ಸ್ವಾಮಿಗೆ ಮಾಂಸದ (Non vegetarian) ನೈವೈದ್ಯ ಮಾಡು ಹೂವಿನ ಹಾರದ ಜೊತೆಯಾದ್ರೂ ಸ್ವಾಮಿಗೆ ಮಾಂಸ ಸಮರ್ಪಣೆ ಮಾಡು ಅಂತ ಸ್ವಾಮೀಜಿಯ ಮಾತು ಕೇಳಿದ ಯುವಕ ಈಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ಅದು ಎಲ್ಲಿ‌ ಅಂತೀರಾ ಈ ಸ್ಟೋರಿ ನೋಡಿ… ದೇವಸ್ಥಾನವನ್ನು ಅಮಂಗಲ ಮಾಡಲು ಬಂದ ಆರೋಪಿ ಯುವಕನನ್ನು (Youth) ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಆತನ ಹೆಸರು ಮುನಿರಾಜು ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳೀಪುರ ನಿವಾಸಿ.

ಈ ಮುನಿರಾಜು ಈಗ ಸ್ವಾಮೀಜಿಯೊಬ್ಬನ ಮಾತು ನಂಬಿ ಶನಿಮಹಾತ್ಮಸ್ವಾಮಿಗೆ ಗುಲಾಬಿ ಹಾರದ ಜೊತೆ ಮಾಂಸದ ತುಂಡುಗಳನ್ನ ಇಟ್ಟು ಹಾರ ಸಮರ್ಪಣೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಚಿಕ್ಕ ಮಧುರೆ ಗ್ರಾಮದ ಪುರಾತನ ಪ್ರಸಿದ್ದ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯಕ್ಕೆ ಕಳೆದ ಎರಡು ತಿಂಗಳ ಹಿಂದೆಯೂ ಸಹ ಇಬ್ಬರು ಯುವಕರು ಆಗಮಿಸಿ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರಗಳನ್ನ ಕೊಟ್ಟು ಹೋಗಿದ್ರು.

ಆಗ ಅರ್ಚಕರು ಹಾರ ತೆಗೆದು ನೋಡಿದಾಗ ಗುಲಾಬಿ ಹೂವಿನ ಹಾರದ ಮಧ್ಯೆ ಮಾಂಸದ ತುಂಡುಗಳು ಇರೋದನ್ನ ಕಂಡು ಹಾರವನ್ನ ಹೊರಗೆ ಬಿಸಾಡಿದ್ರು. ಇಡೀ ದೇವಾಲಯವನ್ನ ಶುಚಿಗೊಳಿಸಿ ಪುನಃ ಪೂಜೆ ಪುನಸ್ಕಾರ ಮಾಡಿದ್ರು. ಅಂದಿನಿಂದ ಎಚ್ಚೆತ್ತ ದೇವಾಲಯದ ಆಡಳಿತ ಮಂಡಳಿ ದೇವಾಲಯಕ್ಕೆ ಬರೋ ಭಕ್ತರ ಹಾರವನ್ನ ಪರಿಶೀಲನೆ ಮಾಡಿ ಒಳಗೆ ಬಿಡೋದು ಸೇರಿದಂತೆ ಪ್ಲಾಸ್ಟಿಕ್ ಕವರ್ ಇರುವ ಹಾಗೂ ಥರ್ಮಾಕೋಲ್ ದಿಂಡು ಇರುವ ಹಾರವನ್ನ ಸಂಪೂರ್ಣ ನಿಷೇಧ ಮಾಡಿತ್ತು.

ಯಾರಾದ್ರೂ ಹಾರ ತಂದ್ರೂ ಪರಿಶೀಲನೆ ಮಾಡೋದಕ್ಕೆ ಸಿಬ್ಬಂದಿಯನ್ನ ಸಹ ನೇಮಕ ಮಾಡಲಾಗಿತ್ತು. ಈ ಬಗ್ಗೆ ಹಿಂದೆಯೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಲಾಗಿತ್ತು. ಆದ್ರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಆದ್ರೆ‌ ನಿನ್ನೆ ಸಂಜೆ ಸಹ ಇದೇ ಯುವಕರು ಸೇಮ್ ಟು ಸೇಮ್ ಲಾಸ್ಟ್ ಟೈಂ ಮಾಡಿದ ಹಾಗೆ ಅದೇ ಹೂವಿನ ಹಾರ ತಂದಿದ್ದು, ದೇವಾಲಯದ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಸದ್ಯ ಹೊಸಕೋಟೆ ತಾಲೂಕಿನ ಕಂಬಳೀಪುರ ಗ್ರಾಮದ ಮುನಿರಾಜು ಹಾಗೂ ಈತನ ಜೊತೆ ಆಟೋ ಚಾಲಕ ಸೋಮಶೇಖರ್ ಎಂಬಾತನನ್ನ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮುನಿರಾಜು ವಾಹನ ಅಪಘಾತಕ್ಕೀಡಾಗಿದ್ದು, ನನಗೆ ಶನಿ ಹೆಗಲೇರಿದೆ, ಹೀಗಾಗಿ ನೀನು ಶನಿಮಹಾತ್ಮಸ್ವಾಮಿಗೆ ಮಾಂಸದ ಸಮೇತ ಹೂವಿನ ಹಾರ ಸಮರ್ಪಣೆ ಮಾಡಿದ್ರೇ ಶನಿ ದೋಷ ನಿವಾರಣೆ ಆಗುತ್ತೆ ಅಂತ ಸ್ವಾಮೀಜಿ ಹೇಳಿದ್ದರು.

ಸ್ವಾಮೀಜಿಯ ಮಾತು ನಂಬಿ ನಾನು ಈ ಕೃತ್ಯ ನಡೆಸಿರೋದಾಗಿ ಪೊಲೀಸ ಬಳಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಜತೆಗೆ ಕೆಲ ಕಿಡಿಗೇಡಿಗಳು ದೇವಾಲಯದ ಪಾವಿತ್ರ್ಯತೆ ಹಾಳು ಮಾಡಲು ಮೂರು ಸಾವಿರ ಹಣ ಕೊಟ್ಟು ಕಳಿಸಿದ್ರು ಅಂತಲು ಎರಡೆರಡು ಹೇಳಿಕೆ ನೀಡಿದ್ದು ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸದ್ಯ ಮುನಿರಾಜು ವಿಚಾರಣೆ ನಂತರ ಸ್ವಾಮೀಜಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅದೇನೇ ಆದ್ರೂ ಶನಿ ಹೆಗಲೇರಿದೆ ಸ್ವಾಮೀಜಿಯ ಮಾತು ನಂಬಿದ ಯುವಕ ಈಗ ಮಾಡಬಾರದ್ದನ್ನ ಮಾಡಿ ನಿಜವಾಗಲೂ ಶನಿ ಹೆಗಲೇರಿಸಿಕೊಂಡಿದ್ದಾನೆ ಅಂತ ಭಕ್ತರು ಗುಸು ಗುಸು ಮಾತಾಡುವಂತಾಗಿದೆ.

ವರದಿ: ನವೀನ್, ಟಿವಿ 9, ದೇವನಹಳ್ಳಿ 

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ