ನೆಲಮಂಗಲ: ಹಣ ಕೇಳಿದ್ದಕ್ಕೆ ಪಾನಿಪುರಿ ಅಂಗಡಿ ಧ್ವಂಸ ಪ್ರಕರಣ; ಆರೋಪಿ ವಿರುದ್ದ ರೌಡಿಶೀಟ್‌ ಓಪನ್‌ ಮಾಡಲು ಸೂಚಿಸಿದ ಎಸ್ಪಿ

ನೆಲಮಂಗಲದ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದಿದ್ದ ಆರೋಪಿ ರಂಜಿತ್‌, ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ದರ್ಪ ತೋರಿ, ಪುಡಿರೌಡಿ ರಂಜಿತ್‌ ಪಾನಿಪುರಿ ಅಂಗಡಿ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದ. ಈ ಹಿನ್ನಲೆ ಇದೀಗ ಆತನ ವಿರುದ್ಧ ರೌಡಿಶೀಟ್‌ ಓಪನ್‌ ಮಾಡಲು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ.

ನೆಲಮಂಗಲ: ಹಣ ಕೇಳಿದ್ದಕ್ಕೆ ಪಾನಿಪುರಿ ಅಂಗಡಿ ಧ್ವಂಸ ಪ್ರಕರಣ; ಆರೋಪಿ ವಿರುದ್ದ ರೌಡಿಶೀಟ್‌ ಓಪನ್‌ ಮಾಡಲು ಸೂಚಿಸಿದ ಎಸ್ಪಿ
ಆರೋಪಿ ಅರೆಸ್ಟ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 29, 2023 | 5:26 PM

ಬೆಂಗಳೂರು ಗ್ರಾಮಾಂತರ, ಆ.29: ಹಣ ಕೇಳಿದ್ದಕ್ಕೆ ಪಾನಿಪೂರಿ(panipuri) ಅಂಗಡಿ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಂಜಿತ್‌ ವಿರುದ್ಧ ರೌಡಿಶೀಟ್‌ ಓಪನ್‌ ಮಾಡಲು ಬೆಂಗಳೂರು ಗ್ರಾಮಾಂತರ (Bengaluru Rural) ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ. 2 ಕೊಲೆ ಯತ್ನ, ಸುಲಿಗೆ ಕೇಸ್‌ನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಎಸ್‌ಪಿ ಸೂಚಿಸಿದ್ದಾರೆ. ನೆಲಮಂಗಲದ (Nelamangala) ಅಂಗಡಿಯೊಂದರಲ್ಲಿ ಪಾನಿಪುರಿ ತಿಂದಿದ್ದ ಆರೋಪಿ ರಂಜಿತ್‌, ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ದರ್ಪ ತೋರಿ, ಪುಡಿರೌಡಿ ರಂಜಿತ್‌ ಪಾನಿಪುರಿ ಅಂಗಡಿ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದ.

ಘಟನೆ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಜೈಲಿನಿಂದ ಆಚೆ ಬಂದಿದ್ದ ದುಷ್ಕರ್ಮಿಯೊಬ್ಬ ಅವಾಜ್ ಹಾಕಿ, ಏಯ್ ನಾನ್ಯಾರು ಗೊತ್ತಾ? ನನ್ನ ಬಳಿಯೇ ಹಣ ಕೇಳುತ್ತೀಯಾ ಎಂದು ಪುಡಿ ರೌಡಿ ಅವಾಜ್ ಹಾಕಿದ್ದ. ಪ್ರಶ್ನೆ ಮಾಡಿದ ಜನರ ಎದುರು ಷರ್ಟ್ ಬಿಚ್ಚಿ ದರ್ಪ ತೋರಿಸಿದ್ದ ರಂಜಿತ್ ಎಂಬಾತ ಪುನೀತ್ ಅವರ ಪಾನಿಪೂರಿ ಅಂಗಡಿಯನ್ನೇ ಧ್ವಂಸ ಮಾಡಿದ್ದ.

ಇದನ್ನೂ ಓದಿ:ಪಾನಿಪುರಿ ತಿಂದು ಹಣ ಕೇಳಿದ್ದಕ್ಕೆ ನೆಲಮಂಗಲದಲ್ಲಿ ಪುಡಿ ರೌಡಿಯ ಆವಾಜ್, ಜನರ ಎದುರು ಷರ್ಟ್ ಬಿಚ್ಚಿ ದರ್ಪ!

ಹೌದು, ವಾಜರಹಳ್ಳಿಯ ರಂಜಿತ್ ಇತ್ತೀಚೆಗೆ ರಾಬರಿ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಅದ್ರೂ ಬುದ್ಧಿ ಕಲಿಯದೆ ಪುಂಡಾಟಿಕೆ ಮೆ್ರೆದಿದ್ದ. ಅರೋಪಿಯ ಈ ಕೃತ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಬಳಿಕ ನೆಲಮಂಗಲ ಪೊಲೀಸರು ಅರೋಪಿ ಪತ್ತೆಗಾಗಿ ಶೋಧ ನಡೆಸಿದ್ದರು. ಇದೀಗ ಆರೋಪಿ ವಿರುದ್ಧ ರೌಡಿಶೀಟ್​ ಓಪನ್​ ಮಾಡಲು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:26 pm, Tue, 29 August 23

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us