AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊತ್ತನೂರಿನಲ್ಲಿ ಪತ್ತೆಯಾದ ಅಸ್ಥಿಪಂಜರ ರಹಸ್ಯ ಬಯಲು; 2 ವರ್ಷದ ಹಿಂದೆ ಕಾಣೆಯಾದ ವ್ಯಕ್ತಿಯದ್ದೇ ಅವಶೇಷ

ಅಕ್ಟೋಬರ್ 4 ರಂದು ಕೊತ್ತನೂರಿನ ಸಮೃದ್ಧಿ ಅಪಾರ್ಟ್ಮೆಂಟ್‌ ಹತ್ತಿರ ಹತ್ತು ವರ್ಷಗಳಿಂದ ಕಾಮಗಾರಿ ನಿಂತಿದ್ದ ಕಟ್ಟಡದಲ್ಲಿ ಕಾರ್ಮಿಕರು ಶವದ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದರು. ಸ್ಥಳದಲ್ಲಿ ಮೃತರು ಬಳಸುತ್ತಿದ್ದ ಹಲ್ಲು ಸೆಟ್ ಸಿಕ್ಕಿದ್ದು, ಇದೇ ಆಧಾರದ ಮೇಲೆ ಪೊಲೀಸರ ತನಿಖೆ ಮುಂದುವರಿದಿತ್ತು. ಈ ಅಸ್ಥಿಪಂಜರ ವು ಸೋಮಯ್ಯ(69) ಎಂಬ ವ್ಯಕ್ತಿಯದ್ದೆಂದು ದೃಢಪಟ್ಟಿದೆ.

ಕೊತ್ತನೂರಿನಲ್ಲಿ ಪತ್ತೆಯಾದ ಅಸ್ಥಿಪಂಜರ ರಹಸ್ಯ ಬಯಲು; 2 ವರ್ಷದ ಹಿಂದೆ ಕಾಣೆಯಾದ ವ್ಯಕ್ತಿಯದ್ದೇ ಅವಶೇಷ
ಕೊತ್ತನೂರಿನಲ್ಲಿ ಪತ್ತೆಯಾದ ಸೋಮಯ್ಯ ಅವರ ಅಸ್ಥಿಪಂಜರ ಮತ್ತು ಹಲ್ಲು ಸೆಟ್
ಭಾವನಾ ಹೆಗಡೆ
|

Updated on:Oct 12, 2025 | 3:14 PM

Share

ಬೆಂಗಳೂರು, ಅಕ್ಟೋಬರ್ 12: ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾದ ಅಸ್ಥಿಪಂಜರ (Skeleton) ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುಮಾರು ಒಂದು ವಾರದ ತನಿಖೆಯ ನಂತರ ಪೊಲೀಸರು ಮೃತನ ಗುರುತನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಸ್ಥಿಪಂಜರ ಸೋಮಯ್ಯ(69) ಎಂಬ ವ್ಯಕ್ತಿಯದ್ದೆಂದು ದೃಢಪಟ್ಟಿದೆ.

ಸ್ಥಳದಲ್ಲಿ ಸಿಕ್ಕ ಹಲ್ಲು ಸೆಟ್​ ಮೂಲಕ ಮೃತರ ಪತ್ತೆ

ಅಕ್ಟೋಬರ್ 4 ರಂದು ಕೊತ್ತನೂರಿನ ಸಮೃದ್ಧಿ ಅಪಾರ್ಟ್ಮೆಂಟ್‌ ಹತ್ತಿರ ಹತ್ತು ವರ್ಷಗಳಿಂದ ಕಾಮಗಾರಿ ನಿಂತಿದ್ದ ಕಟ್ಟಡದಲ್ಲಿ ಕಾರ್ಮಿಕರು ಶವದ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದರು. ಈ ಘಟನೆಯ ನಂತರ ಕೊತ್ತನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಸ್ಥಳದಲ್ಲಿ ಮೃತರು ಬಳಸುತ್ತಿದ್ದ ಹಲ್ಲು ಸೆಟ್ ಸಿಕ್ಕಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ 2020-21ರಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯದ್ದೆಂದು ವೈದ್ಯಕೀಯ ದಾಖಲೆಗಳಿಂದ ದೃಢಪಟ್ಟಿತ್ತು. ಇದೇ ಆಧಾರದ ಮೇಲೆ ಪೊಲೀಸರ ತನಿಖೆ ಮುಂದುವರಿದಿತ್ತು.

ಸೋಮಯ್ಯ ಎಂಬ ವ್ಯಕ್ತಿ 2023ರಲ್ಲಿ ಕಾಣೆಯಾಗಿದ್ದ ಕುರಿತು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪುತ್ರ ಕಿರಣ್ ಕುಮಾರ್ ದೂರು ದಾಖಲಿಸಿದ್ದರು. ಶವ ಪತ್ತೆಯಾದ ಸ್ಥಳದಿಂದ ಸಿಕ್ಕ ಸ್ಟೈಲ್ ಯೂನಿಯನ್ ಬ್ರಾಂಡ್ ಟೀ ಶರ್ಟ್ ಮತ್ತು ಪ್ಯಾರಾಗಾನ್ ಚಪ್ಪಲಿ ಮಿಸ್ಸಿಂಗ್ ವೇಳೆ ಸೋಮಯ್ಯ ಧರಿಸಿದ್ದಂತೆಯೇ ಇದ್ದವು. ಇದರಿಂದ ಇನ್ನಷ್ಟು ಶಂಕಿತರಾದ ಪೊಲೀಸರು ಕಿರಣ್ ಅವರನ್ನು ಕರೆಸಿ ವಸ್ತುಗಳನ್ನು ತೋರಿಸಿದರು.

 ಪಾರ್ಥೀವ ಶರೀರವನ್ನು ಅಧಿಕೃತವಾಗಿ ಕುಟುಂಬಕ್ಕೆ ಒಪ್ಪಿಸಿದ ಪೊಲೀಸರು

ಪರಿಶೀಲನೆಯ ನಂತರ ಕಿರಣ್ ಕುಮಾರ್ ಅವರು ಅಸ್ಥಿಪಂಜರ ಹಾಗೂ ಸಿಕ್ಕ ವಸ್ತುಗಳು ತಮ್ಮ ತಂದೆಯದ್ದೇ ಎಂದು ಖಚಿತಪಡಿಸಿದರು. ನಂತರ ಕೊತ್ತನೂರು ಪೊಲೀಸರು ಅಸ್ಥಿಪಂಜರ ವನ್ನು ಅವರ ಕುಟುಂಬಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದರು. ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಂದುವರೆಸುತ್ತಿದ್ದು, ಸೋಮಯ್ಯ ಸಾವಿನ ಹಿನ್ನೆಲೆ ಹಾಗೂ ಅವರು ಕಟ್ಟಡದೊಳಗೆ ಹೇಗೆ ಸಿಕ್ಕಿಹಾಕಿಕೊಂಡರು ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಥಳೀಯರು ಈ ಘಟನೆಯನ್ನು ಕೇಳಿ ಬೆಚ್ಚಿಬಿದ್ದಿದ್ದು, ಕೊತ್ತನೂರು ಪೊಲೀಸ್ ಠಾಣೆಯ ತನಿಖಾ ತಂಡದ ವೇಗದ ಕಾರ್ಯವನ್ನು ಮೆಚ್ಚಿದ್ದಾರೆ.

ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:13 pm, Sun, 12 October 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ