ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತರೆ ಖೈದಿಗಳ ಜತೆ ಉಗ್ರ ನಸೀರ್ ಸಂಪರ್ಕ, ಆಂತರಿಕ ತನಿಖೆಗೆ ಆದೇಶ

| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2023 | 3:19 PM

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್​ಇಟಿ ಉಗ್ರ ನಜೀರ್ ಇತರೆ ಖೈದಿಗಳ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಆತಂರಿಕ ತನಿಖೆಗೆ ಆದೇಶಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತರೆ ಖೈದಿಗಳ ಜತೆ ಉಗ್ರ ನಸೀರ್ ಸಂಪರ್ಕ, ಆಂತರಿಕ ತನಿಖೆಗೆ ಆದೇಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಜುಲೈ 21): ಬೆಂಗಳೂರಿನಲ್ಲಿ(Bengaluru( ಐವರು ಶಂಕಿತ ಭಯೋತ್ಪಾದಕರ(suspected terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಲ್​ಇಟಿ ಉಗ್ರ ಟಿ ನಸೀರ್ ಇತರ ಖೈದಿಗಳ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ  ಆಂತರಿಕ ತನಿಖೆಗೆ ಆದೇಶಿಸಲಾಗಿದೆ.  ಆಂತರಿಕ ತನಿಖೆಗೆ ಆದೇಶಿಸಿ ಇಂದು(ಜುಲೈ 21) ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ನಸೀರ್​ನನ್ನ ಕೇರಳ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದ್ರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಇತರೆ ಖೈದಿಗಳ ಜೊತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾದಗಿದೆ. ಹೀಗಾಗಿ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: 2008ರ ಬೆಂಗಳೂರು ಸರಣಿ ಸ್ಪೋಟದ ರುವಾರಿ ನಾಸೀರ್​ನ ಮತ್ತೊಂದು ಸಂಚು ಬಯಲು

ಉಗ್ರ ನಸೀರ್​ಗೂ ಈಗ ಬಂಧಿತ ಐವರು ಶಂಕಿತ ಉಗ್ರರಿಗೂ ಯಾವುದೇ ಸಂಪರ್ಕವಿರಲಿಲ್ಲ. ಆದ್ರೆ, ಜೈಲಿನಲ್ಲಿರುವ ನಜೀರ್ ನನ್ನ ಭೇಟಿ ಮಾಡಬೇಕು ಅಂದಾಗಲೆಲ್ಲ ಜುನೈದ್ ಜೈಲು ಸೇರುತ್ತಿದ್ದ. ಬರೋಬ್ಬರಿ 4 ಬಾರಿ ಪರಪ್ಪನ ಅಗ್ರಹಾರದಲ್ಲಿ ಉಗ್ರ ನಜೀರ್ ನನ್ನು ಜುನೈದ್ ಭೇಟಿ ಮಾಡಿದ್ದ. ಟಿ ನಸೀರ್ ಕೊಡುತ್ತಿದ್ದ ಮಾರ್ಗದರ್ಶನದಂತೆ ಜುನೈದ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಜೈಲಿಗೆ ಹೋಗಬೇಕು ಅನಿಸಿದಾಗಲೆಲ್ಲಾ ಬೇರೆ ಬೇರೆ ಕೇಸ್ ನಲ್ಲಿ ಭಾಗಿಯಾಗಿ ಜೈಲು ಸೇರುತ್ತಿದ್ದ. 2 ಬಾರಿ ವಿದೇಶಕ್ಕೆ ಹೋಗಿ ಬಂದಿರುವ ಶಂಕಿತ ಉಗ್ರ ಜುನೈದ್, ಸದ್ಯ ಅರೆಸ್ಟ್ ಆಗಿರುವ ಶಂಕಿತ ಉಗ್ರರನ್ನು ಈ ಜುನೈದ್​ ಹ್ಯಾಂಡಲ್ ಮಾಡುತ್ತಿದ್ದ. ಜುನೈದ್ ಹೇಳಿದ್ದಂತೆ ಈ ಐವರು ಶಂಕಿತ ಉಗ್ರರು ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಮೂಲತ ಕೇರಳ ನಿವಾಸಿಯಾಗಿರುವ ಉಗ್ರ ನಸೀರ್ ನನ್ನು  ನಾನಾ ಕಾರಣಗಳಿಂದ 3 ತಿಂಗಳ ಹಿಂದೆ ಕೇರಳ ಜೈಲ್​ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ, ಅದರಕ್ಕೂ ಮೊದಲು ಬೆಂಗಳೂರಿನ ಪರಪ್ಪನ ಅಗ್ರಾಹರ ಜೈಲಿನಲ್ಲಿ ಇತರೆ ಖೈದಿಗಳನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಇದರಿಂದ ಈ ಬಗ್ಗೆ ತನಿಖೆಗೆ ಆದೇಶಿಸಿಸಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:39 pm, Fri, 21 July 23