AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ

ನೀವು ಹೊಸ ಸಿಮ್​ ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಿರುವ ಘಟನೆ ನಡೆದಿದೆ.

Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ
ಹಣ ಕಳೆದುಕೊಂಡವರು
ಬಿ ಮೂರ್ತಿ, ನೆಲಮಂಗಲ
| Edited By: |

Updated on:Jul 09, 2023 | 10:55 AM

Share

ಬೆಂಗಳೂರು: ನೀವು ಹೊಸ ಸಿಮ್(​New Sim)ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 2.5 ಲಕ್ಷ ಹಣ ವಂಚನೆ ಮಾಡಿದ ಘಟನೆ ನಗರದ ಚಿಕ್ಕಸಂದ್ರದಲ್ಲಿ ನಡೆದಿದೆ. ಉದ್ಯಮಿ ಶಿವಕುಮಾರ್​ಗೆ ವಂಚನೆಗೊಳಗಾದವರು. ಬ್ಯಾಂಕ್​ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್​ ಡೆಡ್ ಆದ ಹಿನ್ನೆಲೆ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಬಳಿಕ ಸಿಮ್ ಅಕ್ಟಿವೇಶನ್ ವೇಳೆ ಓಟಿಪಿಯನ್ನ ಪಡೆದು, ಬ್ಯಾಂಕ್​ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಗೆ ಕನ್ನ ಹಾಕಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫುಡ್ ಡೆಲಿವರಿಗೆಂದು ತೆಗೆದುಕೊಂಡ ಸ್ಕೂಟರ್ ಅಕ್ರಮವಾಗಿ ಮಾರಾಟ; ಕೇಸ್​ ದಾಖಲು

ಬೆಂಗಳೂರು: ಫುಡ್ ಡೆಲಿವರಿಗೆಂದು ಗೋಪಾಲ್ ನಾಯ್ಡು ಅಲಿಯಾಸ್ ಲಲಿತ್ ಕುಮಾರ್ ಎಂಬಾತ ಸ್ಕೂಟರ್​ನ್ನು ಬಾಡಿಗೆಗೆ ಪಡೆದಿದ್ದ. ಬಳಿಕ ಇದೇ ಸ್ಕೂಟರ್​ನ್ನ ನಕಲಿ ದಾಖಲೆ ಸೃಷ್ಟಿಸಿ ಹಿಂದೂಪುರ ಮೂಲದ ಅಶೋಕ್ ಮಾನೆ ಎಂಬುವವರಿಗೆ ಮಾರಾಟ ಮಾಡಿದ್ದ. ಹೌದು ಆನ್ ಟ್ರ್ಯಾಕ್ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್ ಕಂಪನಿ ಹೆಸರಿನಲ್ಲಿದ್ದ ಬೈಕ್​ನ್ನು ತನ್ನ ಹೆಸರಿನಲ್ಲಿ ನಕಲಿ ಆರ್​ಸಿ, ಇನ್ಷ್ಯೂರೆನ್ಸ್ ಸೇರಿದಂತೆ ಹಲವು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ.

ಇದನ್ನೂ ಓದಿ:ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಸಾಲು ಸಾಲು ದರೋಡೆ, ವಂಚನೆಗಳು; ಜನರಲ್ಲಿ ಆತಂಕ

ಜಿಪಿಎಸ್ ಟ್ರ್ಯಾಕರ್​ನಿಂದ ಹೊರಬಿತ್ತು ವಂಚನೆ ಪ್ರಕರಣ

ಸ್ಕೂಟರ್​ಗೆ ಅಳವಡಿಸಿದ್ದ ಜಿಪಿಎಸ್​ನಿಂದ ಟ್ರ್ಯಾಕ್​ ಮಾಡಿದ್ದ ಕಂಪನಿಯ ಸಿಬ್ಬಂದಿಗಳು, ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅಶೋಕ್ ಮಾನೆ ಕೊಂಡಿದ್ದ ಬೈಕ್​ನ್ನು ತಡೆದಿದ್ದಾರೆ. ಇದು ನಮ್ಮ ಕಂಪನಿಯ ವಾಹನ ಬಾಡಿಗೆ ಕೊಟ್ಟಿದೇವೆ. ನೀವ್ಯಾಕೆ ಅಕ್ರಮವಾಗಿ ತೆಗೆದುಕೊಂಡಿದ್ದಿರಾ? ಎಂದು ಪ್ರಶ್ನಿಸಿದಾಗ, ವಂಚನೆ ಪ್ರಕರಣ ಬಯಲಿಗೆ ಬಂದಿದೆ. ರಿಜಿಸ್ಟ್ರೇಷನ್ ಆ್ಯಪ್​ ನಲ್ಲಿ ಗಾಡಿ ನಂಬರ್​ ಹೊಡೆದು ನೋಡಿದಾಗ on track ಕಂಪನಿಯ ಹೆಸರಿನಲ್ಲಿತ್ತು.

50 ಸಾವಿರ ಹಣಕ್ಕೆ ಗಾಡಿ ಮಾರಿದ್ದ ಆಸಾಮಿ

ಇನ್ನು ಇತ ಸ್ಕೂಟರ್​ನ್ನು ಬರೊಬ್ಬರಿ 50 ಸಾವಿರ ರೂಪಾಯಿಗೆ ಸೇಲ್​ ಮಾಡಿದ್ದನಂತೆ. ಈ ಕುರಿತು ಕಂಪನಿ ಸಿಬ್ಬಂದಿಗಳು ಗೋಪಾಲ್ ನಾಯ್ಡು ಎಂಬಾತ ಸ್ವಿಗ್ಗಿ ಡೆಲಿವರಿಗೆಂದು ಬಾಡಿಗೆ ಪಡೆದುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sun, 9 July 23

Follow Us
ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ!
ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ!
ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವಿಡಿಯೋ
ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವಿಡಿಯೋ
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ