AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗನ್ ತೋರಿಸಿ ಧಮ್ಕಿ ಆರೋಪ; ಎಂಎಲ್​ಸಿ ರಮೇಶ್ ಗೌಡ ವಿರುದ್ಧ ದೂರು ದಾಖಲು

ಪ್ರಾಪರ್ಟಿ ವಿಚಾರದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿ ಹೆಸರು ಹೇಳಿಕೊಂಡು ಜಯಂತ್ ಕುಮಾರ್ ಎಂಬಾತ ಧಮ್ಕಿ ಹಾಕಿದ್ದ ಎಂದು ಆರೋಪಿಸಲಾಗಿದೆ. ಸುನೀಲ್ ಕುಟುಂಬಸ್ಥರು ಜೀವ ಬೆದರಿಕೆ ಹಾಗೂ ಟ್ರೆಸ್ ಪಾಸ್ ದೂರು ನೀಡಿದ್ದರು.

ಗನ್ ತೋರಿಸಿ ಧಮ್ಕಿ ಆರೋಪ; ಎಂಎಲ್​ಸಿ ರಮೇಶ್ ಗೌಡ ವಿರುದ್ಧ ದೂರು ದಾಖಲು
ಎಂಎಲ್​ಸಿ ರಮೇಶ್ ಗೌಡ
TV9 Web
| Updated By: sandhya thejappa|

Updated on: Dec 06, 2021 | 11:12 AM

Share

ಬೆಂಗಳೂರು: ಪ್ರಾಪರ್ಟಿ ವಿಚಾರಕ್ಕೆ ಗನ್ ಪಾಯಿಂಟ್ ಇಟ್ಟು ಧಮ್ಕಿ ಹಾಕಿಸಿದ ಆರೋಪದ ಮೇಲೆ ಎಂಎಲ್ಸಿ ರಮೇಶ್ ಗೌಡ ವಿರುದ್ಧ ಹೆಣ್ಣೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೇಲ್ಮನೆ ಸದಸ್ಯ ರಮೇಶ್ ಗೌಡ ವಿರುದ್ಧ ಹೆಣ್ಣೂರು ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪೊಲೀಸ್ ಠಾಣೆಯ ಮುಂದೆ ಸಂತ್ರಸ್ತ ಸುನೀಲ್ ಕುಟುಂಬಸ್ಥರು ಧರಣಿ ನಡೆಸಿದ್ದರು. ಬಳಿಕ, ಸುನೀಲ್ ಕುಟುಂಬಸ್ಥರು ನೀಡಿದ ದೂರಿನ ಮೇರಗೆ ಇದೀಗ ಹೆಣ್ಣೂರು ಪೊಲೀಸರು ರಮೇಶ್ ಗೌಡ ವಿರುದ್ಧ ಎನ್​ಸಿಆರ್ ದಾಖಲಿಸಿಕೊಂಡಿದ್ದಾರೆ.

ಪ್ರಾಪರ್ಟಿ ವಿಚಾರದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿ ಹೆಸರು ಹೇಳಿಕೊಂಡು ಜಯಂತ್ ಕುಮಾರ್ ಎಂಬಾತ ಧಮ್ಕಿ ಹಾಕಿದ್ದ ಎಂದು ಆರೋಪಿಸಲಾಗಿದೆ. ಸುನೀಲ್ ಕುಟುಂಬಸ್ಥರು ಜೀವ ಬೆದರಿಕೆ ಹಾಗೂ ಟ್ರೆಸ್ ಪಾಸ್ ದೂರು ನೀಡಿದ್ದರು. ಬಳಿಕ, ಸುನೀಲ್ ಕುಟುಂಬಸ್ಥರು ಎಫ್ಐಆರ್ ದಾಖಲಿಸುವಂತೆ ಪಟ್ಟು ಹಿಡಿದಿದ್ದರು. ಇದೀಗ ಹೆಣ್ಣೂರು ಠಾಣೆ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಹಣೆಗೆ ಗನ ಇಟ್ಟು ಜೆಡಿಎಸ್ ಎಂಎಲ್ಸಿ ರಮೇಶ್ ಗೌಡ ಹೆದರಿಸಿದ್ದಾರಂತೆ. ಅಲ್ಲದೆ ಜಯಂತ್ ಎಂಬುವವರ ಹೆಸರಲ್ಲಿ ದೂರದಾರರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣ ಸಂಬಂಧ ಡಿಸಿಪಿ ಸುಜೀತಾ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ; ಈಶ್ವರಪ್ಪ ಪ್ರಶ್ನೆಗೆ ಡಿಕೆ ಶಿವಕುಮಾರ್ ತಿರುಗೇಟು

ಪಾರ್ವತಮ್ಮ ರಾಜ್​ಕುಮಾರ್​ ಹುಟ್ಟುಹಬ್ಬ: ವಿಶೇಷ ದಿನವೇ ಅಪ್ಪು ಕನಸಿನ ಪ್ರಾಜೆಕ್ಟ್​ ಶೀರ್ಷಿಕೆ ಟೀಸರ್​ ಬಿಡುಗಡೆ