AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Adugodi police: ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 30, 2022 | 8:06 PM

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಸಾವಿಗೆ ಕಾರಣವಾಗಿದ್ದ (murder) ಒಬ್ಬ ವ್ಯಕ್ತಿಗೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಆಡುಗೋಡಿಯ ಬಳಿ (Adugodi police) ಲಕ್ಷ್ಮಣ ರಾವ್ ನಗರದ ನಿವಾಸಿ ಅಬ್ದುಲ್ ವಾಸಿಂ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಮೇಲಿನ ಆರೋಪ ಋಜುವಾದ ಹಿನ್ನೆಲೆಯಲ್ಲಿ ನಗರದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್​ ಶಿರಹಟ್ಟಿ ಅಪರಾಧಿಗೆ ಜೀವಾವಧಿ ಶಿಕ್ಷೆ (life imprisonment) ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ: ಬೆಂಗಳೂರು ಆಡುಗೋಡಿಯ ನಿವಾಸಿಗಳಾದ ಪರಮೇಶ್ (39) ಹಾಗೂ ಆರೋಪಿ ಅಬ್ದುಲ್ ವಾಸೀಂ ಮಧ್ಯೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. 2020ರ ಜುಲೈ 20ರಂದು ಮಧ್ಯಾಹ್ನ ಪರಮೇಶ್ ಬಳಿ ಅಬ್ದುಲ್ ವಾಸಿಂ ಬೀಡಿ ಕೇಳಿದ್ದ. ಅದಕ್ಕೆ ತನ್ನ ಬಳಿ ಬೀಡಿ ಇಲ್ಲ ಎಂದು ಹೇಳಿದ್ದ. ಅದಕ್ಕೆ ವಾಸಿಂ ಜಗಳ ಮಾಡಿ ಹೋಗಿದ್ದ. ಅದಾದ ಮೇಲೆ ಅರ್ಧ ಗಂಟೆಗೆಲ್ಲಾ ವಾಪಸಾಗಿ ಪರಮೇಶ್ ಮನೆಗೆ ನುಗ್ಗಿ, ಹಲ್ಲೆಗೆ ಮುಂದಾಗಿದ್ದ. ಆತನನ್ನು ರಸ್ತೆಗೆ ಎಳೆದು ಸ್ಕ್ರೂ ಡ್ರೈವರ್​​ನಿಂದ ಕಿವಿ ಮತ್ತು ಕುತ್ತಿಗೆ ಭಾಗದಲ್ಲಿ ಇರಿದಿದ್ದ ವಾಸಿಂ. ಘಟನೆಯಲ್ಲಿ ಪರಮೇಶ್ ಮೃತಪಟ್ಟಿದ್ದರು.

ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

ಗೋಡೌನ್ ಮೆಟಿರಿಯಲ್ ತುಂಬಿದ್ದ ವಾಹನ ಹೈಜಾಕ್ ಮಾಡಿದ ಮಾಜಿ ಶಾಸಕನ ಪತ್ನಿ, ಮುಂದೇನಾಯ್ತ? ಬೆಂಗಳೂರು: ಮಾಜಿ ಶಾಸಕನ ಪತ್ನಿ, ವೇರ್ ಹೌಸ್ ಮೆಟಿರಿಯಲ್ಸ್ ತುಂಬಿದ್ದ ವಾಹನ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಯಲಹಂಕಕ್ಕೆ ಬರಬೇಕಿದ್ದ ವೇರ್ ಹೌಸ್ ಮೆಟಿರಿಯಲ್ಸ್, ಮೆಷಿನ್ಗಳನ್ನು ಕೃಷ್ಣಗಿರಿಯಲ್ಲಿ ಹೈಜಾಕ್ ಮಾಡಲಾಗಿದೆ.

ಕೃಷ್ಣಗಿರಿ ಮಾಜಿ ಶಾಸಕ ಸುಗೋಟಿಯನ್ ಪತ್ನಿ ಪಾರ್ವತಿ ಮೇಲೆ ದಾಂದಲೆ ಆರೋಪ ಕೇಳಿ ಬಂದಿದೆ. ಎಸ್ ಕೆ ಕಸ್ಟ್ರಕ್ಷನ್ ಮಾಲೀಕ ಎಸ್. ಕಾರ್ತೀಕ್ 30 ಲಕ್ಷ ಮೌಲ್ಯದ ಮೆಟಿರಿಯಲ್ಸ್ ಬುಕ್ ಮಾಡಿದ್ದರು. ವೇರ್ ಹೌಸ್ನ ಅಭಿ ಇಂಡಸ್ಟ್ರೀಸ್ ಮಾಲೀಕ ಅಭಿಷೇಕ್ ಹಣ ನೀಡಬೇಕೆಂದು ದಾಂದಲೆ ಮಾಡಿದ್ದಾರೆ. ಸದ್ಯ ಈ ಸಂಬಂಧ ಕೃಷ್ಣಗಿರಿಗೆ ಎಸ್.ಪಿಗೆ ದೂರು ನೀಡಲು ಯಲಹಂಕ ಎಸ್.ಕೆ.ಕಸ್ಟ್ರಕ್ಷನ್ ಕಾರ್ತೀಕ್ ಮುಂದಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ

ಇದನ್ನೂ ಓದಿ: 800 ರೂ ಆದ ಮಟನ್ ಬೆಲೆ; ಬನ್ನೇರುಘಟ್ಟ ಪಂಚಾಯಿತಿ‌ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಬೆಲೆ ಮಾರಿದ್ರೆ ಕಠಿಣ‌ ಕ್ರಮ ಎಂದು ನೋಟಿಸ್

Published On - 8:02 pm, Wed, 30 March 22

ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!