AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Adugodi police: ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
TV9 Web
| Edited By: |

Updated on:Mar 30, 2022 | 8:06 PM

Share

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಸಾವಿಗೆ ಕಾರಣವಾಗಿದ್ದ (murder) ಒಬ್ಬ ವ್ಯಕ್ತಿಗೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಆಡುಗೋಡಿಯ ಬಳಿ (Adugodi police) ಲಕ್ಷ್ಮಣ ರಾವ್ ನಗರದ ನಿವಾಸಿ ಅಬ್ದುಲ್ ವಾಸಿಂ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಮೇಲಿನ ಆರೋಪ ಋಜುವಾದ ಹಿನ್ನೆಲೆಯಲ್ಲಿ ನಗರದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್​ ಶಿರಹಟ್ಟಿ ಅಪರಾಧಿಗೆ ಜೀವಾವಧಿ ಶಿಕ್ಷೆ (life imprisonment) ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ: ಬೆಂಗಳೂರು ಆಡುಗೋಡಿಯ ನಿವಾಸಿಗಳಾದ ಪರಮೇಶ್ (39) ಹಾಗೂ ಆರೋಪಿ ಅಬ್ದುಲ್ ವಾಸೀಂ ಮಧ್ಯೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. 2020ರ ಜುಲೈ 20ರಂದು ಮಧ್ಯಾಹ್ನ ಪರಮೇಶ್ ಬಳಿ ಅಬ್ದುಲ್ ವಾಸಿಂ ಬೀಡಿ ಕೇಳಿದ್ದ. ಅದಕ್ಕೆ ತನ್ನ ಬಳಿ ಬೀಡಿ ಇಲ್ಲ ಎಂದು ಹೇಳಿದ್ದ. ಅದಕ್ಕೆ ವಾಸಿಂ ಜಗಳ ಮಾಡಿ ಹೋಗಿದ್ದ. ಅದಾದ ಮೇಲೆ ಅರ್ಧ ಗಂಟೆಗೆಲ್ಲಾ ವಾಪಸಾಗಿ ಪರಮೇಶ್ ಮನೆಗೆ ನುಗ್ಗಿ, ಹಲ್ಲೆಗೆ ಮುಂದಾಗಿದ್ದ. ಆತನನ್ನು ರಸ್ತೆಗೆ ಎಳೆದು ಸ್ಕ್ರೂ ಡ್ರೈವರ್​​ನಿಂದ ಕಿವಿ ಮತ್ತು ಕುತ್ತಿಗೆ ಭಾಗದಲ್ಲಿ ಇರಿದಿದ್ದ ವಾಸಿಂ. ಘಟನೆಯಲ್ಲಿ ಪರಮೇಶ್ ಮೃತಪಟ್ಟಿದ್ದರು.

ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

ಗೋಡೌನ್ ಮೆಟಿರಿಯಲ್ ತುಂಬಿದ್ದ ವಾಹನ ಹೈಜಾಕ್ ಮಾಡಿದ ಮಾಜಿ ಶಾಸಕನ ಪತ್ನಿ, ಮುಂದೇನಾಯ್ತ? ಬೆಂಗಳೂರು: ಮಾಜಿ ಶಾಸಕನ ಪತ್ನಿ, ವೇರ್ ಹೌಸ್ ಮೆಟಿರಿಯಲ್ಸ್ ತುಂಬಿದ್ದ ವಾಹನ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಯಲಹಂಕಕ್ಕೆ ಬರಬೇಕಿದ್ದ ವೇರ್ ಹೌಸ್ ಮೆಟಿರಿಯಲ್ಸ್, ಮೆಷಿನ್ಗಳನ್ನು ಕೃಷ್ಣಗಿರಿಯಲ್ಲಿ ಹೈಜಾಕ್ ಮಾಡಲಾಗಿದೆ.

ಕೃಷ್ಣಗಿರಿ ಮಾಜಿ ಶಾಸಕ ಸುಗೋಟಿಯನ್ ಪತ್ನಿ ಪಾರ್ವತಿ ಮೇಲೆ ದಾಂದಲೆ ಆರೋಪ ಕೇಳಿ ಬಂದಿದೆ. ಎಸ್ ಕೆ ಕಸ್ಟ್ರಕ್ಷನ್ ಮಾಲೀಕ ಎಸ್. ಕಾರ್ತೀಕ್ 30 ಲಕ್ಷ ಮೌಲ್ಯದ ಮೆಟಿರಿಯಲ್ಸ್ ಬುಕ್ ಮಾಡಿದ್ದರು. ವೇರ್ ಹೌಸ್ನ ಅಭಿ ಇಂಡಸ್ಟ್ರೀಸ್ ಮಾಲೀಕ ಅಭಿಷೇಕ್ ಹಣ ನೀಡಬೇಕೆಂದು ದಾಂದಲೆ ಮಾಡಿದ್ದಾರೆ. ಸದ್ಯ ಈ ಸಂಬಂಧ ಕೃಷ್ಣಗಿರಿಗೆ ಎಸ್.ಪಿಗೆ ದೂರು ನೀಡಲು ಯಲಹಂಕ ಎಸ್.ಕೆ.ಕಸ್ಟ್ರಕ್ಷನ್ ಕಾರ್ತೀಕ್ ಮುಂದಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ

ಇದನ್ನೂ ಓದಿ: 800 ರೂ ಆದ ಮಟನ್ ಬೆಲೆ; ಬನ್ನೇರುಘಟ್ಟ ಪಂಚಾಯಿತಿ‌ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಬೆಲೆ ಮಾರಿದ್ರೆ ಕಠಿಣ‌ ಕ್ರಮ ಎಂದು ನೋಟಿಸ್

Published On - 8:02 pm, Wed, 30 March 22

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?